tag:blogger.com,1999:blog-66340913880193977952024-03-05T14:31:06.521-08:00ವಶಿದಾಸನ ರಗಳೆಗಳು ಮನದಾಳದ ಮಾತು.......Anonymoushttp://www.blogger.com/profile/07026221826810784770noreply@blogger.comBlogger46125tag:blogger.com,1999:blog-6634091388019397795.post-74654663203786843362018-04-20T02:45:00.001-07:002018-04-20T02:47:58.550-07:00ರುತ್ ಪ್ರೀತಿಕಾ ತೆರೆದಿಟ್ಟ ’ಕ್ರಿಸ್ತಪಥ’<div dir="ltr" style="text-align: left;" trbidi="on">
<b style="background-color: white;"><span style="color: blue;"> ಏಪ್ರಿಲ್ ೧ರಂದು ಮಂಗಳೂರು ಪುರಭವನದಲ್ಲಿ ಪ್ರದರ್ಶಿತವಾದ ಕ್ರಿಸ್ತಪಥದ ಬಗ್ಗೆ ನಾನು ಬರೆದ ವಿಶ್ಲೇಷಣೆ ಇಂದಿನ (೨೦.೦೪. ೨೦೧೮) ಪ್ರಜಾವಾಣಿಯಲ್ಲಿ.... ಲೇಖನದ ಪೂರ್ಣ ಪಾಠ ಇಲ್ಲಿದೆ </span></b><br />
<br />
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEiRyz5P7vq0hUFu0ttODhBPEZWT-LcrNnNcib4MORuqF1xU7mm6EB8Fq8-H0GKZ7QhUtxqO0v00PzVU4ZnRzp6Y9bJWZqz-31vONEl1HCJceVXzCTpc9zZ_KZQa1cfP_lW5GJHfpwG5dSan/s1600/Ruth+1.jpg" imageanchor="1" style="clear: right; float: right; margin-bottom: 1em; margin-left: 1em;"><img border="0" data-original-height="1280" data-original-width="854" height="320" src="https://blogger.googleusercontent.com/img/b/R29vZ2xl/AVvXsEiRyz5P7vq0hUFu0ttODhBPEZWT-LcrNnNcib4MORuqF1xU7mm6EB8Fq8-H0GKZ7QhUtxqO0v00PzVU4ZnRzp6Y9bJWZqz-31vONEl1HCJceVXzCTpc9zZ_KZQa1cfP_lW5GJHfpwG5dSan/s320/Ruth+1.jpg" width="213" /></a><a href="https://blogger.googleusercontent.com/img/b/R29vZ2xl/AVvXsEi740ndHWfeqiHGAYwSbq10dlbypGtuvFhUU6PIKSHQjWNFFXHKHKJ3FwiLnjW53eMVX_FUmUGbxBNKOiW3397O_lsyAvJG18_2u_RnrdN8d77QgiTv2kFmITTviClU4ZJr5lor5eS_AqwM/s1600/Ruth.jpg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="960" data-original-width="443" height="320" src="https://blogger.googleusercontent.com/img/b/R29vZ2xl/AVvXsEi740ndHWfeqiHGAYwSbq10dlbypGtuvFhUU6PIKSHQjWNFFXHKHKJ3FwiLnjW53eMVX_FUmUGbxBNKOiW3397O_lsyAvJG18_2u_RnrdN8d77QgiTv2kFmITTviClU4ZJr5lor5eS_AqwM/s320/Ruth.jpg" width="147" /></a><span style="font-size: x-large;">ಕೃ</span>ಷ್ಣನಲ್ಲಿ ನಾವು ಎಲ್ಲಾ ದೇವರನ್ನು ಕಾಣ ಬಲ್ಲೆವಾದರೆ ಕ್ರಿಸ್ತನಲ್ಲೂ ನಾವೇಕೆ ಕೃಷ್ಣನನ್ನು ನೋಡಬಾರದು ಎಂಬುದು ಯೋಚನಾರ್ಹ ಜಿಜ್ಞಾಸೆ. ರಾಮ , ರಹೀಮ ಕ್ರಿಸ್ತರನ್ನು ಪರಸ್ಪರರಲ್ಲಿ ಕಾಣಬಹುದಾದರೆ ಸಮಾಜದ ಬಹುದೊಡ್ಡ ಪಿಡುಗೊಂದು ತಂತಾನೇ ಸಾಮರಸ್ಯವಾಗಿ ಬದಲಾಗಬಹುದೇನೋ!!. ಆದರೆ ಇದು ಅಷ್ಟು ಸುಲಭದ ಮಾತಲ್ಲ. ಹೀಗೇನಾದರೂ ಆಗಬಹುದಾದರೆ ಅದನ್ನು ಮಾಡುವ ತಾಕತ್ತು ಕಲೆಗೆ ಇದೆ ಎಂಬುದನ್ನಿ ನಿರೂಪಿಸಿದ ವಿಭಿನ್ನ ಆಲೋಚನೆಯ ಆಯೋಜನೆಗೆ ಮಂಗಳೂರು ಪುರಭವನದಲ್ಲಿ ವಿದುಷಿ ರು<span style="text-align: left;">ತ್ ಪ್ರೀತಿಕಾ ಪ್ರಸ್ತುತ ಪಡಿಸಿದ ಕ್ರಿಸ್ತ ಪಥ ಕಾರಣವಾಯಿತು. </span></div>
<div style="text-align: justify;">
<br /></div>
<div style="text-align: justify;">
ನೃತ್ಯ ಗುರು ವಿದ್ಯಾಶ್ರೀ ರಾಧಾಕೃಷ್ಣ ಸದಾ ಹೊಸತನದ ಹುಡುಕಾಟದಲ್ಲಿರುವವರು. ಸವಾಲು, ವಿರೋಧ, ಬೆಂಬಲ ಇಂತಹ ಹುಡುಕಾಟದಲ್ಲಿ ಸಹಜವೆಂದು ನಂಬಿ, ಅದಕ್ಕೆ ಪೂರ್ವತಯಾರಿಯೊಂದಿಗೇ ತಮಗನಿಸಿದ ಧನಾತ್ಮಕ ಯೋಜನೆಯನ್ನು ಕಾರ್ಯರೂಪಕ್ಕೆ ತರುವವರು. ಇಂತಾದ್ದೇ ಸಾಹಸವನ್ನು ಅವರು ಕೈಗೊಂಡಿದ್ದು, ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರವಾದ ಭರತ ನಾಟ್ಯಕ್ಕೆ ಏಸು ಕ್ರಿಸ್ತನ ಚರಿತ್ರೆಯನ್ನು ಅಳವಡಿಸಿಕೊಂಡು ಕ್ರಿಸ್ತ ಪಥದ ಮೂಲಕ ರಂಗಕ್ಕೇರಿಸಿದ್ದು-ಗೆದ್ದದ್ದು!</div>
<div style="text-align: justify;">
<br /></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEg2GY0z84DRRoH_W3NmmzIe_83zViAtQ7Qz-k_Z0uF0lMJ5UmbCLy3Olii26IGMfEWjzKIAX0XV39xaJo3cGZKYUk2pBMzgXh_AaCzznviDTnA28aQldgsv-u54KKyMUKtAIHeQFRSLJ6Js/s1600/Ruth+4.jpg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="1280" data-original-width="854" height="320" src="https://blogger.googleusercontent.com/img/b/R29vZ2xl/AVvXsEg2GY0z84DRRoH_W3NmmzIe_83zViAtQ7Qz-k_Z0uF0lMJ5UmbCLy3Olii26IGMfEWjzKIAX0XV39xaJo3cGZKYUk2pBMzgXh_AaCzznviDTnA28aQldgsv-u54KKyMUKtAIHeQFRSLJ6Js/s320/Ruth+4.jpg" width="213" /></a></div>
<div style="text-align: justify;">
ಇವರ ಗರಡಿಯಲ್ಲಿ ಪಳಗಿದ ಶಿಷ್ಯೆ ರುತ್ ಪ್ರೀತಿಕಾ ಈ ಯೋಜನೆಯ ಕ್ರಿಸ್ತ ಪಥದಲ್ಲಿ ಹೆಜ್ಜೆ ಹಾಕಿದ್ದಾರೆ. ಈಕೆಯ ತಂದೆ ತಾಯಿ ವೈದ್ಯರು. ತಮ್ಮ ಬಿಡುವಿರದ ವೃತ್ತಿಯಲ್ಲೂ ಕಲೆಗೆ ಪ್ರೋತ್ಸಾಹ ನೀಡುತ್ತಲೇ ಬಂದವರು. ಇದಕ್ಕೂ ಮಿಗಿಲಾಗಿ ಮಗಳ ಮೂಲಕ ಕ್ರಿಸ್ತ ಪಥವನ್ನು ಏಸು ಕ್ರಿಸ್ತನ ಪುನರುತ್ಥಾನದ ದಿನವೇ ವೇದಿಕೆಗೆ ಏರಿಸುವ ಪರಿಕಲ್ಪನೆ ಮಾಡಿದವರು. ವೃತ್ತಿ. ಮತ, ಪಂಥಗಳ್ಯಾವುದೂ ಕಲೆಯ ಅಭಿವ್ಯಕ್ತಿಗೆ ಅಡ್ಡಿಯಾಗದು ಎಂಬುದನ್ನು ತೋರಿದವರು-ಮೆಚ್ಚುಗೆಗೆ ಪಾತ್ರರಾದವರು. </div>
<div style="text-align: justify;">
<br /></div>
<div style="text-align: justify;">
ಕ್ರಿಸ್ತ ಪಥದ ನಿರ್ಮಾಣಕ್ಕೆ ವಿದ್ಯಾಶ್ರೀ ರಾಧಾ ಕೃಷ್ಣ ತಮ್ಮನ್ನು ತೊಡಗಿಸಿಕೊಂಡ ರೀತಿ, ತಪಸ್ಸಿನಂತೆ! ಅನೇಕ ಗ್ರಂಥಗಳನ್ನು ಹೊಕ್ಕು ತಲ್ಲೀನರಾದ ತಾದಾತ್ಮ್ಯತೆ, ಸಾಹಿತ್ಯ ರಚನೆಯೂ ಸವಾಲೆಂಬುದನ್ನು ಮನಗಂಡು ಸ್ವತಃ ತಾವೇ ಸಾಹಿತ್ಯ ರಚಿಸಿದ್ದು, ಅದಕ್ಕನುಗುಣವಾಗಿ ತನ್ನ ಶಿಷ್ಯೆಯನ್ನು ಪ್ರತೀ ಹೆಜ್ಜೆಯಲ್ಲೂ ನಾವೀನ್ಯತೆಯ ಎರಕ ಹೊಯ್ದು ಅಣಿಗೊಳಿಸಿದ್ದು, ಕ್ರಿಸ್ತ ಪಥದ ಯಶಸ್ಸಿನ ಬಹುಪಾಲು ಶ್ರೇಯಕ್ಕೆ ಕಾರಣವೆನ್ನುವುದು ನಿರೂಪಿತವಾದ ಸತ್ಯ.</div>
<div style="text-align: justify;">
<br /></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEgjgXeuWpOFNdVmG5pesuU753cGCPXrrcRIbtqi24axA_BYFb396swjTC3hnvosDCf4QMTCX7_TdxAdcLMVbsBzxNWkcp75eO9BqHM1W6FEhdVAp0ew9_YtXG_U28SG_yomfsHgCc1Rhzte/s1600/Ruth+2.jpg" imageanchor="1" style="clear: right; float: right; margin-bottom: 1em; margin-left: 1em;"><img border="0" data-original-height="1280" data-original-width="854" height="320" src="https://blogger.googleusercontent.com/img/b/R29vZ2xl/AVvXsEgjgXeuWpOFNdVmG5pesuU753cGCPXrrcRIbtqi24axA_BYFb396swjTC3hnvosDCf4QMTCX7_TdxAdcLMVbsBzxNWkcp75eO9BqHM1W6FEhdVAp0ew9_YtXG_U28SG_yomfsHgCc1Rhzte/s320/Ruth+2.jpg" width="213" /></a>ಭರತನಾಟ್ಯ ಪೃಸ್ತುತಿಯ ಆರಂಭದ ಭಾಗ ಪುಷ್ಪಾಂಜಲಿ. ಕ್ರಿಸ್ತಪಥದಲ್ಲಿ ಇದನ್ನು ಹೇಗೆ ಅಳವಡಿಸಿಕೊಳ್ಳಲಾಗುವುದೋ ಎಂಬ ಸಹಜ ಕುತೂಹಲ ಪ್ರೇಕ್ಷಕನದ್ದು. ಸತ್ಯವೇದದ ’ಆದಿಕಂಡ’ ಪುಸ್ತಕದ ಪ್ರಥಮ ಅಧ್ಯಾಯದ ಪ್ರಕಾರ ಈ ವಿಶ್ವದ ಸೃಷ್ಟಿ ಆರುದಿನಗಳಲ್ಲಿ ಆಗುತ್ತದೆ. ಇಂತಹ ವಿಶಿಷ್ಟ ಸೃಷ್ಟಿಯ ಕಾರಣೀಕರ್ತ ಭಗವಂತನಿಗೆ ಪ್ರತೀ ದಿನಕ್ಕೂ ಸಲ್ಲಿಸುವ ಪುಷ್ಪಾಂಜಲಿಯ ಕಲ್ಪನೆಯೇ ತಲೆದೂಗುವಂತೆ ಮಾಡಿತ್ತು. ಬೆಳಕು ಕತ್ತಲೆ, ಆಕಾಶ, ಭೂಜಲಸಸ್ಯರಾಶಿ, ಸೂರ್ಯನಕ್ಷತ್ರಾದಿಗಳು, ಪಕ್ಷಿ, ಜಲ-ಭೂಚರ ಪ್ರಾಣಿ ಸಂಕುಲ ಹಾಗೂ ಕೊನೆಗೆ ಮಣ್ಣಿನಿಂದ ಮಾನವನ ಉದ್ಭವ-ಓಹ್! ದೈವ ಸೃಷ್ಟಿ ಅದ್ಭುತವೆನ್ನುತ್ತೇವೆ-ಈ ಅದ್ಭುತವನ್ನು ನೃತ್ಯ ಬಂಧದಲ್ಲಿ ಕಟ್ಟಿ ಹಾಕಿ, ಹೆಜ್ಜೆ-ತಾಳ-ಲಯಗತಿಗಳ ಮೂಲಕ ಪುಷ್ಪಾಂಜಲಿ ಸೃಷ್ಟಿಯ ಆರೂ ದಿನಗಳಿಗೆ ಪುಷ್ಪಾಂಜಲಿ ಸಲ್ಲಿಸುತ್ತಾ ಸಾಗಿದಾಗ ಕ್ರಿಸ್ತ ಪಥದಲ್ಲಿ ಪ್ರೇಕ್ಷಕರೂ ಹೆಜ್ಜೆ ಆರಂಭಿಸಿಯಾಗಿತ್ತು!. ಈ ಲೋಕದ ವೈಚಿತ್ರ್ಯವೆಂಬಂತೆ ಸುಂದರ ಸೃಷ್ಟಿಯಲ್ಲಿ ಮಾನವ ಕಾಲ ಸರಿದಂತೆ ಸೈತಾನನಾಗುತ್ತಾ ಸಾಗುವುದು, ಅವನನ್ನು ತಿದ್ದಲು ಪ್ರವಾದಿಯ ರೂಪದಲ್ಲಿ ದೇವರು ಮತ್ತೆ ಸೃಷ್ಟಿಕಾರ್ಯ ಮಾಡುವುದು....ನಡೆದೇ ಇದೆ. ಇದನ್ನು ರಾಗಮಾಲಿಕೆ ಆದಿತಾಳದಲ್ಲಿ ನೃತ್ಯಗಾತಿ ಪ್ರಸ್ತುತಪಡಿಸಿದರು.</div>
<div style="text-align: justify;">
<br /></div>
<div style="text-align: justify;">
ಗುರು ಶಿಷ್ಯರ ನಡುವಿನ ಸಂಯೋಜನಾ ಸಾಮರ್ಥ್ಯಕ್ಕೆ ಸಾಕ್ಷಿಯೆನ್ನುವಂತೆ ಪ್ರಸ್ತುತವಾಗುವುದು ವರ್ಣ. ಇದು ನೃತ್ಯ ಪ್ರಸ್ತುತಿಯಲ್ಲಿ ಬಹುಮುಖ್ಯ ಮತ್ತು ಅಷ್ಟೇ ದೀರ್ಘ, ಕ್ಲಿಷ್ಟಕರ ಭಾಗ. ವರ್ಣವನ್ನು ಇಲ್ಲಿ ವಿಶೇಷ ಆಸ್ತೆಯಿಂದ, ಸಿಂಹೇಂದ್ರ ಮಧ್ಯಮ ಆದಿತಾಳದಲ್ಲಿ ಸಮಗ್ರ ಸಾಹಿತ್ಯದೊಂದಿಗೆ ಸಂಯೋಜಿಸಲಾಗಿತ್ತು. ತಾಪತ್ರಯಗಳಿಂದ ಬಳಲುವ ನಮ್ಮಂತವರನ್ನು ಕರುಣೆಯಿಂದ ಕಾಯಲಾರೆಯಾ ಎಂದು ಕೇಳಿಕೊಳ್ಳುವ ದೃಶ್ಯದೊಂದಿಗೆ, ಕುರಿಗಳ ಮಧ್ಯೆ ಕ್ರಿಸ್ತಜನನ ವಾಗುವ ಸನ್ನಿವೇಶವನ್ನು ತನ್ನ ನೃತ್ಯದ ಮೂಲಕ ಪ್ರಸ್ತುತ ಪಡಿಸಿದಾಗ ರುತ್ ಅಭಿನಯ ಸಾಮರ್ಥ್ಯಕ್ಕೆ ತಲೆದೂಗದವರೇ ಇಲ್ಲ. ಚರಣದಲ್ಲಿ ಬಾಲ ಯೇಸು ಧರ್ಮಬೋಧಕರ ಜೊತೆ ಉಪದೇಶ ಕೇಳುವಾಗ ಅಚ್ಚರಿಯಿಂದ ಗಮನಿಸುವ ಮರಿಯಾಳನ್ನು ಸಮೀಕರಿಸುವ ನರ್ತಕಿ ಆ ವಿಚಾರಧಾರೆಯನ್ನು ನನಗೂ ಹರಿಸು ಎನ್ನುತ್ತಾಳೆ. ಎತ್ತುಗಡೆ ಸಾಹಿತ್ಯದಲ್ಲಿ ನಿರಾಭರಣ ಸುಂದರ ದೇವರನ್ನು ಸ್ತುತಿಸುವ ಮೂಲಕ, ವರ್ಣ ನಿಜಾರ್ಥದಲ್ಲಿ ಗುರು-ಶಿಷ್ಯರ ನಡುವಿನ ಸಂವಹನ ಸಾಮರ್ಥ್ಯ ಒರೆಗೆ ಹಚ್ಚಿ, ಇಬ್ಬರನ್ನೂ ಗೆಲ್ಲಿಸಿದ ಕೃತಿಯಾಗಿ ಮೂಡಿಬಂದುದು ಗಮನಾರ್ಹ.</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEhFBvqWwtyobd-46YHHWrOhtdS4C5VU5lLFD8-PPqgbYtv4ucd6x3ypWxnp_LHA9xXk4Ei7hIVgMhsHVlGNNk55qOj4sonpl1oqiRRPtY2tDQaMXwpInNmog1Vj_KsnVUTQhM6IigSqsB1K/s1600/Ruth+3.jpg" imageanchor="1" style="clear: right; float: right; margin-bottom: 1em; margin-left: 1em;"><img border="0" data-original-height="1280" data-original-width="854" height="320" src="https://blogger.googleusercontent.com/img/b/R29vZ2xl/AVvXsEhFBvqWwtyobd-46YHHWrOhtdS4C5VU5lLFD8-PPqgbYtv4ucd6x3ypWxnp_LHA9xXk4Ei7hIVgMhsHVlGNNk55qOj4sonpl1oqiRRPtY2tDQaMXwpInNmog1Vj_KsnVUTQhM6IigSqsB1K/s320/Ruth+3.jpg" width="213" /></a></div>
<div style="text-align: justify;">
ಏಳು ಶತಮಾನಗಳ ಇತಿಹಾಸವಿರುವ, ವಿಶೇಷ ಸಂಚಾರಿ ಭಾವವುಳ್ಳ ಶುದ್ಧ ನಾಟ್ಯ ಭಾಗವಾಗಿರುವುದು ಪದಂ ಪ್ರಸ್ತುತಿ. ಸತ್ಯವೇದದಲ್ಲಿ ಯೋಹಾನ ರಚಿಸಿದ ಸುವಾರ್ತೆಯ ನಾಲ್ಕನೇ ಅಧ್ಯಾಯದ ಮೇಲೆ ರಚಿತವಾದ ಪದಂ ರುತ್ ಹೆಜ್ಜೆಗಳಲ್ಲಿ ಮತ್ತು ಭಾವಾಭಿವ್ಯಕ್ತಿಯಲ್ಲಿ ಮೂಡಿ ಬಂತು. ಸರಿ ಸರಿ ಆತ ಗುರುವೇ ಸರಿ ಎನ್ನುವ ಉದ್ಘಾರಾಧಾರಿತ ಸಾಹಿತ್ಯ ಅದ್ಭುತವೆನ್ನುವಂತೆ ಮೂಡಿ ಬಂತು. ಅಸ್ಪ್ರಶ್ಯ, ಕುಲಹೀನ ಮಹಿಳೆ ಎಂದು ಹೀಗಳೆತಕ್ಕೊಳಗಾದ ಮಹಿಳೆಯೋರ್ವಳನ್ನು ಅಮ್ಮಾ ಎಂದು ಸಂಭೋಧಿಸುವ ಮೂಲಕ ಕ್ರಸ್ತ ಸಮಾನತೆ ಸಾರುವ ಮತ್ತು ಇಂತಹ ವಾತ್ಸಲ್ಯದ ಕರೆಗೆ ಕರಗಿದ ಆ ಮಹಿಳೆ ಉದ್ಘರಿಸುವ ನೀನು ಗುರುವೇ ಸರಿ ಸರಿ ಎನ್ನುವ ಭಾವವನ್ನು ಅಭಿವ್ಯಕ್ತಗೊಳಿಸಿದ ರೀತಿ ಅನನ್ಯ-ಅತಿಸುಂದರವಾಗಿತ್ತು. ಲಘು ಶಾಸ್ರೀಯ ಶೈಲಿಯಲ್ಲಿ ಮೂಡಿಬಂದ ಕೀರ್ತನೆಯಲ್ಲಿ ಕ್ರಿಸ್ತ ಪುನರುತ್ಥಾನದ ನಂತರ ಸಾಂಕೇತಿಕವಾಗಿ ಆತನಿಂದ ಶಿಲುಬೆಯನ್ನು ಪಡೆದು ಹೊತ್ತು ಸಾಗುವ ಅಭಿನಯ ಕಣ್ಣೆದುರು ಕಟ್ಟಿದಂತಿತ್ತು.</div>
<div style="text-align: justify;">
<br /></div>
<div style="text-align: justify;">
ಭರತನಾಟ್ಯ ಪ್ರದರ್ಶನದ ಕೊನೆಯ ಭಾಗ ತಿಲ್ಲಾನ. ಕ್ರಿಸ್ತನ ಸಮಾಧಿಯ ಕಲ್ಲುರುಳಲ್ಲಪಟ್ಟದ್ದನ್ನು ಕಂಡ ಮರಿಯ, ಸಲೋಮೆಯರು ಯೇಸು ಜೀವಿತವಾಗಿ ಎದ್ದುಹೋದ ಸನ್ನಿವೇಶವನ್ನು ದೇವದೂತನಿಂದ ಕೇಳಿ ಅಚ್ಚರಿ, ಭಾವಾವೇಶಕ್ಕೊಳಗಾಗುವ ಸನ್ನಿವೇಶ, ಮೃತ್ಯಂಜಯ ಕ್ರಿಸ್ತ ನಮ್ಮನ್ನೆಲ್ಲಾ ಯುಗ ಸಮಾಪ್ತಿಯವರೆಗೂ ಮುನ್ನಡೆಸುವ ಪಥವಾಗಿರುತ್ತಾನೆ ಎಂಬ ಸಂದೇಶದ ಸಾರ ಪ್ರಸ್ತುತಗೊಂಡಿತು. </div>
<div style="text-align: justify;">
<br /></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEhxcFyekX327-eraHYArJfAqP4DvrFlW1E4EPmans5awsIEoW2NKeJCHwYHeKgFhQw9fp41NUL6hLTUpPlFiPiTyB9f3G2bZJuxOK3ASSfbOgA6z-kjft0vpDqbhWHZgmHJTUWgt2m0t1Eu/s1600/Ruth+5.jpg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="1280" data-original-width="854" height="320" src="https://blogger.googleusercontent.com/img/b/R29vZ2xl/AVvXsEhxcFyekX327-eraHYArJfAqP4DvrFlW1E4EPmans5awsIEoW2NKeJCHwYHeKgFhQw9fp41NUL6hLTUpPlFiPiTyB9f3G2bZJuxOK3ASSfbOgA6z-kjft0vpDqbhWHZgmHJTUWgt2m0t1Eu/s320/Ruth+5.jpg" width="213" /></a>ಒಟ್ಟೂ ಕ್ರಿಸ್ತ ಪಥದಲ್ಲಿ ಅನೇಕವನ್ನು ಏಕವಾಗಿ ಹೊರತಂದದ್ದು ವಿಶೇಷ. ಶಾಸ್ತ್ರೀಯ ಕಲೆಯ ಯಾವ ಭಾಗಕ್ಕೂ ಚ್ಯುತಿ ತರದಂತೆ, ಯಾವುದೇ ಮತ-ಧರ್ಮಕ್ಕೆ ಕಲೆ ಸೀಮಿತವಲ್ಲವೆಂಬುದನ್ನು ನಿರೂಪಿಸುವಂತೆ, ಭರತನಾಟ್ಯ ಪ್ರಸ್ತುತಿಯ ಮೂಲಕ ದೇವನೊಬ್ಬನೇ, ನಾಮ ಹಲವು ಎಂಬ ತತ್ವಾಧಾರವನ್ನು ಪ್ರೇಕ್ಷಕನ ಯಾವ ಭಾವನೆಗೂ ನೋವುಂಟಾಗದಂತೆ ಪ್ರಸ್ತುತ ಪಡಿಸಿದ್ದು ವಿಶೇಷ. ಸ್ವತ ನೃತ್ಯ-ಸಂಗೀತ ಕಲಾವಿದೆಯಾಗಿ ಗುರುತಿಸಿಕೊಂಡಿರುವ ವಿದ್ಯಾಶ್ರೀ ಇಲ್ಲಿ ಸಾಹಿತ್ಯ ರಚನೆಯ ಮೂಲಕ ತಮ್ಮ ಗಟ್ಟಿ ತನ ತೋರಿದ್ದಾರೆ. ಹೆಚ್ಚಿನ ಎಲ್ಲಾ ಹಾಡುಗಳೂ ಅವರವೇ ರಚನೆಯಾಗಿದ್ದು, ರುತ್ ತಂದೆ ಡಾ.ಸುರಂಜನ್ ಮಾಬೆನ್ ಮತ್ತು ಶ್ರೀ ಸಾಮ್ಯುವೆಲ್ ಸಾಧು ಒಂದೊಂದು ರಚನೆ ಮಾಡಿದ್ದಾರೆ. ಜಿ ಗುರುಮೂರ್ತಿಯವರ ಸಂಗೀತ ಸಂಯೋಜನೆ, ನೃತ್ಯ ಸಂಯೋಜನೆ ಗುರುವಿನದ್ದಾಗಿತ್ತು. </div>
<div style="text-align: justify;">
</div>
<div style="text-align: justify;">
ರುತ್ ಪ್ರೀತಿಕಾ ಈ ಹಿಂದೆ ಭರತ ನಾಟ್ಯದ ಮೂಲ ಪ್ರಕಾರವಾದ ಹಿಂದೂ ದೇವತೆಗಳನ್ನು ಸಂಕೇತಿಸುವ ನೃತ್ಯಗಳಿಗೂ ಸೈ ಎನ್ನುವಂತೆ ಹೆಜ್ಜೆ ಹಾಕಿದ್ದು, ಕ್ರಿಸ್ತ ಪಥದ ಮೂಲಕ ಹೊಸ ಸಾಧ್ಯತೆಯೊಂದನ್ನು ಪರಿಚಯಿಸುವ ಯಶಸ್ವೀ ಪ್ರಯತ್ನ ಮಾಡಿದ್ದಾರೆ. ಈ ಮೂಲಕ, ಭರತನಾಟ್ಯ ಎಂಬ ಶಾಸ್ತ್ರೀಯ ನೃತ್ಯ ಚರ್ಚ್ಗಳ ಅಂಗಣದಲ್ಲೂ ಪ್ರದರ್ಶಿತವಾದರೆ ನಿಜಕ್ಕೂ ಇದೊಂದು ಸ್ವಾಗತಾರ್ಹ ಕ್ರಾಂತೀಕಾರಿ ಹೆಜ್ಜೆ ಎಂಬುದು ನಿಸ್ಸಂದೇಹ ಮತ್ತು ಅದು ಆಗುವ ಎಲ್ಲಾ ವಿಶ್ವಾಸ ಈ ಪ್ರದರ್ಶನದ ನಂತರ ಗಟ್ಟಿಯಾಗಿದೆ. ಒಟ್ಟಾರೆಯಾಗಿ ಒಂದು ರೀತಿಯ ಹಿತವಾದ ಸಂಚಲನಕ್ಕೆ ಈ ಪ್ರಸ್ತುತಿ ಕಾರಣವಾಗಿದೆ. ಪ್ರತೀ ನೃತ್ಯದ ವಿವರಣೆಯನ್ನು ಇನ್ನೋರ್ವ ಕಲಾವಿದೆ ದೀಕ್ಷಾ ಸದಾನಂದ ಮತ್ತು ರುತ್ ಕನ್ನಡ, ಇಂಗ್ಲಿಷ್ ನಲ್ಲಿ ವಿವರಿಸಿ ಹೇಳಿ ಪ್ರಸ್ತುತಗೊಳಿಸಿದ್ದು, ಪ್ರೇಕ್ಷಕನ ಮನ ಪಟಲದಲ್ಲಿ ಇಡೀ ಸಾಹಿತ್ಯ ಅರ್ಥಪೂರ್ಣವಾಗಿ ಮೂಡುವಂತೆ ಮಾಡಿದ್ದೂ, ಕ್ರಿಸ್ತಪಥದ ಮತ್ತೊಂದು ಹೆಗ್ಗಳಿಕೆ.</div>
<div>
<br /></div>
</div>
Anonymoushttp://www.blogger.com/profile/07026221826810784770noreply@blogger.com0tag:blogger.com,1999:blog-6634091388019397795.post-65119314772206863482018-03-31T04:13:00.000-07:002018-03-31T04:13:41.463-07:00 ಸುಮಸಾದ ರಂಗ ಹಬ್ಬ ಆರರಲ್ಲಿ ’ಮೇರು’ವಾದ ನಾಟಕಗಳು<div dir="ltr" style="text-align: left;" trbidi="on">
<div style="text-align: justify;">
<span style="color: blue; font-family: "arial" , "helvetica" , sans-serif; font-size: x-small;">ಫೆಬ್ರವರಿ 11,2018 ರಿಂದ ಫೆಬ್ರವರಿ 17,2018 ರವರೆಗೆ ಉಡುಪಿಯಲ್ಲಿ ನಡೆದ ಸುಮನಸಾ ರಂಗಹಬ್ಬ-೬ರ ನಾಟಕಗಳ ಕಿರು ಅವಲೋಕನ- 30.03.2018 ರ </span><span style="color: #cc0000; font-family: "arial" , "helvetica" , sans-serif; font-size: x-small;">ಪ್ರಜಾವಾಣಿ</span><span style="color: blue; font-family: "arial" , "helvetica" , sans-serif; font-size: x-small;">ಯಲ್ಲಿ ಪ್ರಕಟವಾದ ಬರಹದ ಪೂರ್ಣ ರೂಪ </span></div>
<div style="text-align: justify;">
<br /></div>
<table cellpadding="0" cellspacing="0" class="tr-caption-container" style="float: left; text-align: left;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEhQtbSDShyPU90yggK2ozp6KTIgMgAPZaE8tET1yDSaC89EMZmsiqCe2ScsiXA4LP_vx5Uhlb_KrUoNJvUIOHxdSak7iMwJabIBip5cruUPs-qWAMCRzz2L0QVHu70g3lbWLFwHqfEydtlT/s1600/Pv.jpg" imageanchor="1" style="margin-left: auto; margin-right: auto;"><img border="0" data-original-height="1232" data-original-width="1080" height="200" src="https://blogger.googleusercontent.com/img/b/R29vZ2xl/AVvXsEhQtbSDShyPU90yggK2ozp6KTIgMgAPZaE8tET1yDSaC89EMZmsiqCe2ScsiXA4LP_vx5Uhlb_KrUoNJvUIOHxdSak7iMwJabIBip5cruUPs-qWAMCRzz2L0QVHu70g3lbWLFwHqfEydtlT/s200/Pv.jpg" width="175" /></a></td></tr>
<tr><td class="tr-caption" style="text-align: center;">ಪ್ರಜಾವಾಣಿ ೩೦.೦೩.೨೦೧೮</td></tr>
</tbody></table>
<div style="text-align: justify;">
ಸಾಂಸ್ಕೃತಿಕವಾಗಿ ಶ್ರೀಮಂತ ನಗರ ಎಂದೇ ಪರಿಗಣಿಸಲ್ಪಡುವ ಪೊಡವಿಗೊಡೆಯನ ನಾಡು ಉಡುಪಿಯ ರಂಗಭೂಮಿಗೆ ಹದಿನಾರರ ಹರೆಯದ ಸುಮನಸಾ ಕೊಡವೂರು-ಉಡುಪಿಯ ಕೊಡುಗೆ ಮಹತ್ವದ್ದು. ಸಾಂಸ್ಕೃತಿಕ, ಸೇವಾ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಸಂಸ್ಥೆಗೆ, ತನ್ನ ಹತ್ತನೆಯ ವರ್ಷದಲ್ಲಿ ರಂಗ ಹಬ್ಬಕ್ಕಿದು ಆರರ ಹರ್ಷ. ಏಳು ದಿನಗಳ ಈ ರಂಗ ಹಬ್ಬದಲ್ಲಿ ಸುಮನಸಾದ ಒಂದು ನಾಟಕ, ಯಕ್ಷಗಾನ ಹಾಗೂ ಏಕವ್ಯಕ್ತಿ ಅಭಿನಯಗಳನ್ನೂ ಒಳಗೊಂಡು ಒಂದಕ್ಕಿಂತ ಒಂದು ಭಿನ್ನವಾದ ಎಂಟು ಪ್ರಸ್ತುತಿಯನ್ನು ನೀಡಿದ್ದು, ಕಲಾಸಕ್ತರ ಗಮ<span style="text-align: left;">ನ ಸೆಳೆದುವು. </span></div>
<div style="text-align: justify;">
<b style="text-align: left;"><br /></b></div>
<div style="text-align: justify;">
<b style="text-align: left;"><br /></b></div>
<div style="text-align: justify;">
<b style="text-align: left;">ಥ್ರೀ ರೋಸಸ್ (ತಕ್ಷ ಥಯೇಟ್ರಿಕ್ಸ್, ಬೆಂಗಳೂರು ಪೃಸ್ತುತಿ)</b></div>
<div style="text-align: justify;">
<br /></div>
<div style="text-align: justify;">
ಉದ್ಘಾಟನಾ ದಿನ ಪ್ರದರ್ಶಿತವಾದ ನಾಟಕ ಥ್ರೀ ರೋಸಸ್. ತೀರಾ ಸಾಮಾನ್ಯವಾದ ಕಥೆಯೊಂದಕ್ಕೆ ರಂಗದ ಮೇಲೆ ಅಸಾಧಾರಣತೆಯ ರೂಪು ಕೊಟ್ಟು ರಂಗಾಸಕ್ತರನ್ನು ಸೆಳೆದ ಈ ನಾಟಕ, ಮೂವರು ಹೆಣ್ಣುಗಳ ನಡುವಿನ ತಾಕಲಾಟದಿಂದ ತಿಣುಕಾಡುವ ಪ್ರೇಮಿಯೊಬ್ಬನ ಪರಿಸ್ಥಿತಿಯನ್ನು ಪ್ರತಿಬಿಂಬಿಸಿತ್ತು.</div>
<div style="text-align: justify;">
<br /></div>
<div style="text-align: justify;">
ಸ್ನೇಹಿತನೋರ್ವನನ್ನು ಅವನ ಕೋರಿಕೆಯ ಮೇಲೆ ಪ್ರೇಯಸಿಯಿಂದ ಬಿಡುಗಡೆ ಮಾಡಿಸಲು ಹೋಗುವ ಕಥಾ ನಾಯಕ, ತಾನೇ ಆಕೆಯೊಂದಿಗೆ ಏಕಮುಖ ಪ್ರೀತಿಗೆ ಸಿಲುಕುವುದು, ಅವನಿಷ್ಟದ ವಿರುದ್ಧವಾಗಿ ಅವನ ಕಛೇರಿಯ ಮತ್ತೋರ್ವ ಯುವತಿ ತನ್ನ ಪ್ರೀತಿಯಲ್ಲಿ ನಾಯಕನನ್ನು ಬೀಳಿಸಿಕೊಳ್ಳಲು ಯತ್ನಿಸುವುದು, ಹೊಸದಾಗಿ ಕಛೇರಿಗೆ ಬಂದ ಮತ್ತೋರ್ವ ಮುಗ್ಧೆಯನ್ನು ಕಥಾನಾಯಕ ಪ್ರೀತಿಸುವುದು.....ಈ ಎಲ್ಲಾ ಗೊಂದಲಗಳ ನಡುವೆ ಕಥಾ ನಾಯಕ ತನ್ನ ಮನದಿಂಗಿತವನ್ನು ತಿಳಿಸುವಲ್ಲಿ ಮೂವರೊಂದಿಗೂ ವಿಳಂಬ ಮಾಡುವ ಪರಿಣಾಮ, ಕೊನೆಗೆ ಯಾರೂ ಇವನ ಪ್ರೀತಿಯನ್ನು ಅರಿತುಕೊಳ್ಳದೇ ಹೋಗುವುದು ಇದು ಕಥೆಯ ತಿರುಳಾದರೆ, ಹಾಸ್ಯಮಯ ಸನ್ನಿವೇಶಗಳು, ನಟರ ಪ್ರಬುದ್ಧ ಅಭಿನಯ ಉತ್ತಮ ಪೃಸ್ತುತಿಯ ಸಾಲಿನಲ್ಲಿ ನಾಟಕವನ್ನು ನಿಲ್ಲಿಸಿದರೂ, ಧ್ವನಿಮುದ್ರಿತ ಸಂಗೀತದ ಅನಿಯಂತ್ರಿತ ನಿರ್ವಹಣೆ ಪ್ರೇಕ್ಷಕರಿಗೆ ಕಿರಿ ಕಿರಿ ಉಂಟು ಮಾಡಿ ನಾಟಕದ ನೈಜ ಪ್ರದರ್ಶನ ಕಳೆಗುಂದಿತು</div>
<div style="text-align: justify;">
<br /></div>
<div style="text-align: justify;">
<b>ಶಿಕಾರಿ (ರಂಗಾಯಣ, ಮೈಸೂರು ಪೃಸ್ತುತಿ)</b></div>
<div style="text-align: justify;">
ಯಶವಂತ ಚಿತ್ತಾಲರ ಜನಪ್ರಿಯ ಕಾದಂಬರಿಗಳಲ್ಲೊಂದಾದ ’ಶಿಕಾರಿ’ಯನ್ನು, ರಂಗಕ್ಕಳವಡಿಸುವ ಸಾಹಸದಲ್ಲಿ ನಿರ್ದೇಶಕ ಪ್ರಕಾಶ್ ಬೆಳವಾಡಿಯವರು ಗೆದ್ದಿದ್ದಾರೆ. ಉಡುಪಿಯ ರಂಗಭೂಮಿಯಲ್ಲಿ ಈ ಪ್ರದರ್ಶನವೇ ಒಂದು ದಾಖಲೆಯಾಗಿ ಜನ ಮಾನಸದಲ್ಲಿ ಉಳಿಯುವ ಮಟ್ಟದ ಪ್ರದರ್ಶನವಾಗಿ ಶಿಕಾರಿ ಮೂಡಿಬಂತು. </div>
<div style="text-align: justify;">
<br /></div>
<table cellpadding="0" cellspacing="0" class="tr-caption-container" style="float: right; text-align: right;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEhwWE_8dmu4d8jx6f0FsTpMOlZAYMx3DZW4Myy1-7jmO-nfpUIXOtlisRHxgQfiQN-8XLya2JZN4gB_KOAlM8AJkZd_ANjI-Ncmx7VWc8ont97Ksh24m-ok6vx9cQbYwSgcmRPPjdiVH37Z/s1600/blg-3.jpg" imageanchor="1" style="clear: right; margin-bottom: 1em; margin-left: auto; margin-right: auto;"><img border="0" data-original-height="800" data-original-width="1600" height="100" src="https://blogger.googleusercontent.com/img/b/R29vZ2xl/AVvXsEhwWE_8dmu4d8jx6f0FsTpMOlZAYMx3DZW4Myy1-7jmO-nfpUIXOtlisRHxgQfiQN-8XLya2JZN4gB_KOAlM8AJkZd_ANjI-Ncmx7VWc8ont97Ksh24m-ok6vx9cQbYwSgcmRPPjdiVH37Z/s200/blg-3.jpg" width="200" /></a></td></tr>
<tr><td class="tr-caption" style="text-align: center;">ಶಿಕಾರಿ </td></tr>
</tbody></table>
<div style="text-align: justify;">
ಕಾರ್ಪೊರೇಟ್ ಜಗತ್ತಿನ ಅನೇಕ ಒಳ ತಿರುಳುಗಳನ್ನು ಮತ್ತು ಅದರಲ್ಲಿರುವ ಸಮರ್ಥ ಉದ್ಯೋಗಿಯೊಬ್ಬ ತನ್ನ ಸಾಮರ್ಥ್ಯದಿಂದ ಹಂತ ಹಂತವಾಗಿ ವೃತ್ತಿಯಲ್ಲಿ ಔನ್ನತ್ಯ ಸಾಧಿಸುತ್ತಾ, ವ್ಯಾವಹಾರಿಕವಾದ ಅವನ ಕನಿಷ್ಠ ಜ್ಞಾನ ಎಂತ ಬೆಲೆ ತೆರುವಂತೆ ಮಾಡಬಲ್ಲುದು ಎಂಬುದನ್ನು ಕತೆ ಎಳೆ ಎಳೆಯಾಗಿ ತೆರೆದಿಡುತ್ತಾ ಸಾಗುತ್ತದೆ. </div>
<div style="text-align: justify;">
<br /></div>
<div style="text-align: justify;">
ಮೂರುಘಂಟೆಗಳ ಅವಧಿಯ ನಾಟಕದ ಮೂಲಕ ಇಡೀ ಕಾರ್ಪೊರೇಟ್ ವಲಯವನ್ನೇ ಸುತ್ತಿಸಿದ್ದು ಅಚ್ಚರಿ. ಓರ್ವ ಸಾಮಾನ್ಯ ನೌಕರ, ತನ್ನ ಸ್ವ ಸ್ವಾಮರ್ಥ್ಯದಿಂದ ಕಂಪೆನಿಯೊಂದರಲ್ಲೆ ಉನ್ನತ ಪದವಿ ಪಡೆಯುತ್ತಲೇ ಸಾಗುತ್ತಾನೆ. ಅವನ ಬಾಲ್ಯ ಕರಾಳ ನೆನಪುಗಳ ಆಗರ. ಆ ನೆನಪನ್ನು ಆತ ಮರೆಯಲೆತ್ನಿಸಿದರೂ, ಅವನ ಉನ್ನತಿ ಸಹಿಸದ ಒಂದು ವರ್ಗ, ಅವನದ್ದೇ ಕಂಪೆನಿಯೊಳಗೆ ಹುಟ್ಟಿಕೊಳ್ಳುತ್ತದೆ. ವ್ಯವಸ್ಥಿತವಾಗಿ ಅವರು ಹೆಣೆದ ಪರಿಸ್ಥಿತಿಯ ಕೈಗೊಂಬೆಯಾಗುವಂತೆ ವ್ಯೂಹದೊಳಗೆ ಆತ ಬಂಧಿಯಾಗುತ್ತಲೇ ಸಾಗುತ್ತಾನೆ. </div>
<div style="text-align: justify;">
<br /></div>
<div style="text-align: justify;">
ಕಾರ್ಪೊರೇಟ್ ಜಗತ್ತು ಹಲವಾರು ವಿಸ್ಮಯಗಳ ಸಾಗರದಂತೆ. ಇಲ್ಲಿ ಜಾಣ್ಮೆ ಮತ್ತು ವ್ಯವಾಹಾರಿಕ ಜಾಣ್ಮೆಗಳೆರಡೂ ಸಮಾನವಾಗಿದ್ದರಷ್ಟೇ ಬದುಕಲು ಸಾಧ್ಯ. ’ಶಿಕಾರಿ’ ಯ ವಿಶೇಷತೆ ಎಂದರೆ, ಅದರಲ್ಲಿನ ಪ್ರಬುದ್ಧ ನಟರು ಕಾಲಕ್ಕೆ ತಕ್ಕಂತೆ, ಕಾಲ-ಲಿಂಗ-ಸ್ಥಿತ್ಯಂತರ ಬೇಧವಿಲ್ಲದೇ ಪಾತ್ರಗಳಲ್ಲಿ ಲೀನರಾಗುವ ಪರಿ.’ಈ ದಿನವನ್ನು ಎಲ್ಲಾ ಪ್ರಾಮಾಣಿಕ ಅರ್ಥಗಳಲ್ಲೂ ಸಾರ್ಥಕವಾಗಿ, ಸದ್ಭಳಕೆ ಮಾಡಿಕೊಳ್ಳದಿದ್ದರೆ ಎಷ್ಟೊಂದು ನಾಳೆಗಳಿದ್ದು ಏನು ಪ್ರಯೋಜನ?’ ಎನ್ನುವ ನಿರಂತರವಾಗಿ ಮನುಷ್ಯನನ್ನು ಕಾಡುವ ಪ್ರಶ್ನೆಯೇ ಮತ್ತೆ ಮತ್ತೆ ಎದುರಾಗುವಂತೆ ಹೆಣೆದ ಕಾದಂಬರಿ ’ಶಿಕಾರಿ’-ರಂಗದ ಮೇಲೂ ಇದೇ ಪ್ರಶ್ನೆ ಹುಟ್ಟಿಸುವಲ್ಲಿ ಯಶಸ್ವಿಯಾಗಿದೆ.</div>
<div style="text-align: justify;">
<br /></div>
<div style="text-align: justify;">
<b>ಕತ್ತಲೆ ಬೆಳಕು(ರಂಗಾಯಣ, ಮೈಸೂರು ಪೃಸ್ತುತಿ)</b></div>
<div style="text-align: justify;">
<br /></div>
<div style="text-align: justify;">
ಶ್ರೀ ರಂಗರ ವಿಶಿಷ್ಠ ಕೃತಿಗಳಲ್ಲಿ ಕತ್ತಲೆ-ಬೆಳಕು ಒಂದು. ಇದನ್ನು ಮೂರನೆಯ ದಿನ ರಂಗಾಯಣದ ಕಲಾವಿದರು ಪ್ರಸ್ತುತ ಪಡಿಸುವ ಮೂಲಕ, ’ಶಿಕಾರಿ’ಗಿಂತ ಸಂಪೂರ್ಣ ಭಿನ್ನವಾಗಿದ್ದ (ಕತ್ತಲೆ-ಬೆಳಕಿನ ಹಾಗೇ!) ನಾಟಕದ ಆಸ್ವಾದನೆಗೆ ನೆರೆದ ಪ್ರೇಕ್ಷಕರನ್ನು ಕೊಂಡೊಯ್ದರು.</div>
<div style="text-align: justify;">
<br /></div>
<div style="text-align: justify;">
ನಾಟಕ-ಜೀವನ-ವಸ್ತು-ಶೈಲಿ ಇವುಗಳ ನಡುವೆ ನಮ್ಮ ಪ್ರೇಕ್ಷಕ- ನಿರ್ದೇಶಕಇವರ ಪರಸ್ಪರ ಸಂವಹನ ಈ ನಾಟಕದ ವಿಶೇಷತೆ. ಕೆಲವೊಂದು ಸಾರ್ವಕಾಲಿಕ ಪ್ರಶ್ನೆಗಳಿಗೆ ಉತ್ತರ ಸಿಗದೆ ಕತ್ತಲಲ್ಲಿ ತೊಳಲಾಡುವ, ಮೆದುಳನ್ನು ಚಿಂತನೆಗೆ ಹಚ್ಚಿ ಅವುಗಳಿಗೆ ಸಮಾಧಾನ ಹುಡುಕುತ್ತಾ ಬೆಳಕನ್ನು ಅರಸುವ ಪ್ರಯತ್ನದ ನಡುವೆ ನವಿರಾದ ಹಾಸ್ಯ ಹಾಗೂ ಮೊನಚಾದ ಮಾತುಗಳು ನಾಟಕದ ಮೆರುಗನ್ನು ಹೆಚ್ಚಿಸುತ್ತವೆ. ರಂಗದ ಮೇಲೆ ಬಂದ ಪಾತ್ರಗಳೆಲ್ಲವೂ ಲವಲವಿಕೆಯಿಂದತಮ್ಮಕಾರ್ಯ ನಿರ್ವಹಿಸಿ ಪ್ರಖ್ಯಾತರಂಗನಿರ್ದೇಶಕ- ನಾಟಕಕಾರ-ಸಂಗೀತಜ್ಞ ಬಿ.ವಿಕಾರಂತರ ನೆನಪನ್ನು ಮಾಡುತ್ತವೆ. ಅಂದಿನ ಕಾಲಕ್ಕೆ ಅನ್ವಯವಾಗುವ ಶ್ರೀರಂಗರ ಟೀಕೆ-ಟಿಪ್ಪಣಿಗಳು ಇಂದಿಗೂ ಪ್ರಸ್ತುತವಾಗಿಕತ್ತಲೆ-ಬೆಳಕು ಪ್ರೇಕ್ಷಕರ ಮನದಂಗಳದಲ್ಲಿ ಚಿರಕಾಲ ಇರುವಂತೆ ಮಾಡುತ್ತವೆ. ಬೆಳಕು ಹಾಗೂ ಸಂಗೀತ ನಾಟಕದಧನಾತ್ಮಕ ಅಂಶಗಳು.</div>
<div style="text-align: justify;">
<br /></div>
<div style="text-align: justify;">
<b>ನೆರಳು (ಸುಮನಸಾ ಕೊಡವೂರು ಪೃಸ್ತುತಿ)</b></div>
<div style="text-align: justify;">
<br /></div>
<table cellpadding="0" cellspacing="0" class="tr-caption-container" style="float: left; text-align: left;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEiM-ufNqb07ontpaIJ7250COKNBDfpRU6VdXvxB7nKiS0aurbV8pTAI80ZRnqFXLw27Ok3YGAa_23k73LveFeOPH592AXkfZ3ExaavwczTZtaGgQkh2fzbqn_TMtu5-nX5KUqD7x6IiExPt/s1600/blg-2.jpg" imageanchor="1" style="clear: left; margin-bottom: 1em; margin-left: auto; margin-right: auto;"><img border="0" data-original-height="1067" data-original-width="1600" height="133" src="https://blogger.googleusercontent.com/img/b/R29vZ2xl/AVvXsEiM-ufNqb07ontpaIJ7250COKNBDfpRU6VdXvxB7nKiS0aurbV8pTAI80ZRnqFXLw27Ok3YGAa_23k73LveFeOPH592AXkfZ3ExaavwczTZtaGgQkh2fzbqn_TMtu5-nX5KUqD7x6IiExPt/s200/blg-2.jpg" width="200" /></a></td></tr>
<tr><td class="tr-caption" style="text-align: center;">ನೆರಳು </td></tr>
</tbody></table>
<div style="text-align: justify;">
ಮಂಗಳೂರಿನ ಯುವ ನಿರ್ದೇಶಕ ವಿದ್ದು ಉಚ್ಚಿಲ್ ನಿರ್ದೇಶನದಲ್ಲಿ ರಾಷ್ಟ್ರೀಯ ರಂಗ ಶಾಲೆಯ ಪದವೀಧರ, ಸುಮನಸಾ ಕೊಡವೂರಿನ ಕಲಾವಿದೆ ಅಕ್ಷತ್ ಪೃಸ್ತುತ ಪಡಿಸಿದ ಏಕವ್ಯಕ್ತಿ ನಾಟಕ ನೆರಳು. ಇಂದಿನ ನಮ್ಮ ಸಮಾಜದಲ್ಲಿ ನಮ್ಮ ನಮ್ಮ ನಡುವೆ ಇರುವ ಜನ ಸಾಮಾನ್ಯರಿಂದ ಹಿಡಿದು, ಅತ್ಯುನ್ನತ ಪಟ್ಟದ ರಾಜಕಾರಣಿ, ಪೋಲೀಸ್ ವ್ಯವಸ್ಥೆ, ಮಾಧ್ಯಮಗಳ ತನಕವೂ ಹರಡಿಕೊಂಡಿರುವ ’ತಮ್ಮ ತಮ್ಮ ಮೂಗಿನ ನೇರದ’ ಜೀವನ ಶೈಲಿಯನ್ನು ಈ ನಾಟಕದ ಮೂಲಕ ವಿಡಂಬಿಸಿದ ರೀತಿ, ಸಾಮಾನ್ಯರಿಂದ ಅಸಾಮಾನ್ಯರ ತನಕವೂ ತಲುಪಬೇಕಾದ ಸ್ತರದಲ್ಲಿ ತಲುಪಿದೆ!. ಕಾಣೆಯಾದ ತಂಗಿಯನ್ನು ಅರಸುವ ಅಣ್ಣನಾಗಿ, ಸಮಾಜದ ಎಲ್ಲಾ ವರ್ಗಗಳನ್ನು, ಎಲ್ಲಾ ವ್ಯವಸ್ಥೆಗಳನ್ನೂ ಎಡತಾಕುವ ಅಣ್ಣ, ಅಲ್ಲೆಲ್ಲವೂ ತನ್ನ ನೋವಿಗೆ ಸ್ಪಂದಿಸುವ ಕನಸುಗಳ ಹೊರತಾಗಿ, ಸ್ವಾರ್ಥವನ್ನೇ ಕಾಣುತ್ತಾ, ಕೊನೆಗೂ ಈ ಸಮಾಜ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆಯನ್ನು ಪ್ರೇಕ್ಷಕರೊಳಗೆ ಬಿಡುತ್ತಾನೆ. ಒಂದು ವಿಶಿಷ್ಠ ಪೃಸ್ತುತಿ ಎನ್ನಲಡ್ಡಿ ಇಲ್ಲದಿದ್ದರೂ. ನಾಟಕದ ಕೊನೆಯಲ್ಲಿ ಅನಿರೀಕ್ಷಿತ ತಿರುವಿನ ನಿರೀಕ್ಷೆಯಲ್ಲಿದ್ದವರಿಗೆ, ಇಂದಿನ ಸಾಮಾನ್ಯ ಕೊನೆಯೇ ಕಂಡಾಗ, ಒಂದು ಅಚ್ಚರಿ, ಒಂದು ವಾಸ್ತವ...ಹೀಗೆ ಭಿನ್ನ ಭಾವಕ್ಕೆ ಕಾರಣವಾದ ಪೃಸ್ತುತಿ. ಒಬ್ಬ ಸಮರ್ಥ ನಿರ್ದೇಶಕ ಮತ್ತು ಪ್ರಬುತ್ವಮುಖೀ ನಟನನ್ನು ’ನೆರಳು’ ಪರಿಚಯಿಸಿದ್ದು ಗೆಲುವೇ ಹೌದು!.</div>
<div style="text-align: justify;">
<br /></div>
<div style="text-align: justify;">
<b>ಬಲಿದಾನ (ಚಂದ್ರಶೇಖರ ಪ್ರತಿಷ್ಠಾನ, ಬೆಂಗಳೂರು ಪೃಸ್ತುತಿ)</b></div>
<div style="text-align: justify;">
<br /></div>
<div style="text-align: justify;">
ಭಾರತ ಮಾತೆಯ ಸ್ವಾತಂತ್ರ್ಯ ಹೋರಾಟದ ಕಥಾ ಹಂದರದ ನಾಟಕ ’ಬಲಿದಾನ’. ಕುವೆಂಪು ಅವರ ರಚನೆ ಎಂದಾಗ ಇದ್ದ ಸಹಜ ನಿರೀಕ್ಷೆಯ ಮಟ್ಟವನ್ನು ತಲುಪಿಸುವಲ್ಲಿ ಕಲಾವಿದರು ನಿರೀಕ್ಷಿತ ಯಶ ಕಾಣದಿದ್ದರೂ, ಭಾರತಮಾತೆಯದಾಸ್ಯಸಂಕೋಲೆಯ ಬಿಡುಗಡೆಗಾಗಿ ಬಲಿದಾನಗೈದ ಸ್ವಾತಂತ್ರ್ಯ ಹೋರಾಟದ ನೈಜಚಿತ್ರಣ ವನ್ನು ಪ್ರೇಕ್ಷಕರಿಗೆ ತಲುಪಿಸಿದ ಸಮಾಧಾನ ಪ್ರಧಾನವಾಗಿತ್ತು. ಸುಧಾರಿಸ ಬಹುದಾದ ಅನೇಕ ಅಂಶಗಳು ಡಾಳಾಗಿ ಕಾಣುತ್ತಿದ್ದ ಈ ನಾಟಕ, ಅತ್ಯಂತ ಚುಟುಕು ನಾಟಕವಾಗಿಯೂ ರಂಗ ಹಬ್ಬದಲ್ಲಿ ದಾಖಲಾಯ್ತು.</div>
<div style="text-align: justify;">
<br /></div>
<div style="text-align: justify;">
<b>ಚಿತ್ರಪಟ ರಾಮಾಯಣ(ಸುಮನಸಾ ಕೊಡವೂರು ಪೃಸ್ತುತಿ)</b></div>
<div style="text-align: justify;">
<br /></div>
<table cellpadding="0" cellspacing="0" class="tr-caption-container" style="float: right; text-align: right;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEgOyruch_JDI3qZtB5gDhiS7MVts7aPw7U35FTNYQp20c9smhV8WoNjp5xCgVJ3vE9Pa4t2nru-taeJctCl65sUEHH8_doIDi5vihOPUih1VmCXGj3AXPZwcqPuTf-wJilPL9VuN3HRtRzw/s1600/Blg-1.jpg" imageanchor="1" style="clear: right; margin-bottom: 1em; margin-left: auto; margin-right: auto;"><img border="0" data-original-height="1200" data-original-width="1500" height="160" src="https://blogger.googleusercontent.com/img/b/R29vZ2xl/AVvXsEgOyruch_JDI3qZtB5gDhiS7MVts7aPw7U35FTNYQp20c9smhV8WoNjp5xCgVJ3vE9Pa4t2nru-taeJctCl65sUEHH8_doIDi5vihOPUih1VmCXGj3AXPZwcqPuTf-wJilPL9VuN3HRtRzw/s200/Blg-1.jpg" width="200" /></a></td></tr>
<tr><td class="tr-caption" style="text-align: center;">ಚಿತ್ರಪಟ ರಾಮಾಯಣ </td></tr>
</tbody></table>
<div style="text-align: justify;">
ಐದನೆಯ ದಿನ ನಡೆದದ್ದು ಮಾತ್ರ ಸುಮನಸಾ ಕಲಾವಿದರ ಬಹುಮುಖೀ ಪ್ರತಿಭಾ ದರ್ಶನ!!. ಪ್ರತೀ ವರ್ಷದ ರಂಗ ಹಬ್ಬದಲ್ಲಿ ಒಂದು ಯಕ್ಷಗಾನ ಪ್ರದರ್ಶನವನ್ನೂ ನೀಡುವ ನಾಟಕ ಕಲಾವಿದರು, ಇಲ್ಲಿ ವಿಶೇಷವಾಗಿ ಯಕ್ಷಗಾನಕ್ಕೆ ನಾಟಕದ ಸ್ಪರ್ಶ ಒದಗಿಸಿ ರಂಜಿಸಿದರು! ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದಲ್ಲಿ ಚಿತ್ರಪಟ ರಾಮಾಯಣವನ್ನು ವಿಶೇಷವಾಗಿ ಹೆಣೆದು ಪ್ರದರ್ಶಿಸಿದರು. ಪುಟ್ಟ ಬಾಲಕನಿಂದ ಹಿಡಿದು ಸುಮನಸಾದ ಹಿರಿಯ ಸ್ತ್ರೀ ಪುರುಷ ಕಲಾವಿದರು ಅಭಿನಯಿಸುವ ಮೂಲಕ, ಚಿತ್ರ ಪಟ ರಾಮಾಯಣ ವಿಶಿಷ್ಠ ರಂಗು ಪಡೆದು ರಂಗದ ಮೇಲಿಳಿದಾಗ, ಸುಮನಸಾದ ಕಲಾ ಬದ್ಧತೆಗೆ ಮೂಗಿನ ಮೇಲೆ ಬೆರಳಿಡದೇ ದಾರಿ ಇರಲಿಲ್ಲ. ರಂಗ ಹಬ್ಬಕ್ಕೆ ರಂಗು ತುಂಬಿದ ಒಂದು ವಿಶಿಷ್ಠ ಪೃಸ್ತುತಿಯಾಗಿ ದಾಖಲಾದದ್ದು ಚಿತ್ರಪಟ ರಾಮಾಯಣದ ಹೆಗ್ಗಳಿಕೆ. </div>
<div style="text-align: justify;">
<br /></div>
<div style="text-align: justify;">
ಶೂರ್ಪನಖಿಯ ಮಾಯಾ ವಿದ್ಯೆಗೆ ಮೋಸ ಹೋಗಿ ರಾವಣನಚಿತ್ರಪಟ ರಚಿಸಿ ಅದಕ್ಕೆಜೀವತುಂಬಿ ಶ್ರೀ ರಾಮನ ಸಂದಿಗ್ಧತೆಗೆ ಕಾರಣವಾಗಿ ಕಾಡನ್ನು ಸೇರುವ ಸೀತೆಯ ವ್ಯಥೆಯ ಕಥೆಯಿದು. ಸಮರ್ಥ ಹಿಮ್ಮೇಳ, ಬೆಳಕು, ಅಭಿನಯ ಎಲ್ಲವೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. </div>
<div style="text-align: justify;">
<br /></div>
<div style="text-align: justify;">
<b>ಗೋಕುಲ ನಿರ್ಗಮನ (ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದೆಯರು-ಮಂಗಳೂರು)</b></div>
<table cellpadding="0" cellspacing="0" class="tr-caption-container" style="float: left; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEh_Az9ay7pngGIWHs7IZgOWXmBMTcobD0Pw-gF-8k-PoSPgwZZ_zD1_homvcwnpn-0a6dCJ1NyRMyCpc_whcYayNUNh_KSoR4OCrsHLGhei-BFUcMIhuhcS2HMKt8JG4SXzyakD9vpJaWHU/s1600/Photo-4.jpg" imageanchor="1" style="margin-left: auto; margin-right: auto;"><img border="0" data-original-height="1067" data-original-width="1600" height="213" src="https://blogger.googleusercontent.com/img/b/R29vZ2xl/AVvXsEh_Az9ay7pngGIWHs7IZgOWXmBMTcobD0Pw-gF-8k-PoSPgwZZ_zD1_homvcwnpn-0a6dCJ1NyRMyCpc_whcYayNUNh_KSoR4OCrsHLGhei-BFUcMIhuhcS2HMKt8JG4SXzyakD9vpJaWHU/s320/Photo-4.jpg" width="320" /></a></td></tr>
<tr><td class="tr-caption" style="text-align: center;">ಗೋಕುಲ ನಿರ್ಗಮನ </td></tr>
</tbody></table>
<div style="text-align: justify;">
<br /></div>
<div style="text-align: justify;">
ಕನ್ನಡದ ಕವಿ ಶ್ರೇಷ್ಠ ಪುತಿನ ಅವರ ಕೃತಿ ಗೋಕುಲ ನಿರ್ಗಮನವನ್ನು ಮಂಗಳೂರಿನ ಕಲಾ ತಂಡ ನಂದಗೋಕುಲದ ’ಮಹಿಳಾ’ ಕಲಾವಿದೆಯರೇ ಪೃಸ್ತುತ ಪಡಿಸಿದ್ದು ವಿಶೇಷ. ವಿದ್ದು ಉಚಿಲ್ ಅವರ ನಿರ್ದೇಶನದ ಈ ನೃತ್ಯ ನಾಟಕದಲ್ಲಿ, ಪುತಿನ ಅವರದ್ದೇ ಭಾಷಾ ಶೈಲಿ ಬಳಸಿಕೊಂಡಿದ್ದು, ಹಾಡುಗಳನ್ನು ವಿಶಿಷ್ಠವಾಗಿ ಸಂಯೋಜಿಸಲಾಗಿತ್ತು. ಪ್ರದರ್ಶನದ ಅವಧಿಯಲ್ಲಿ ಪ್ರೇಕ್ಷಕರನ್ನು ಎಲ್ಲಿಯೂ ರಸಭಂಗವಾಗದ ರೀತಿಯಲ್ಲಿ ಸೆಳೆಯುವಲ್ಲಿ ನಾಲ್ಕನೇ ತರಗತಿಯಿಂದ ಗೃಹಿಣಿಯರ ವರೆಗಿನ ಕಲಾವಿದೆಯರು ಯಶಸ್ವಿಯಾದರು. ಕೃಷ್ಣ ಒಂದು ಹುಣ್ಣಿಮೆಯ ರಾತ್ರಿಯಲ್ಲಿ ಗೋಕುಲ, ರಾಧೆ ಹಾಗೂ ಕೊಳಲನ್ನು ತೊರೆದು ಮಧುರೆಗೆ ಹೊರಡುವ ಸನ್ನಿವೇಶದ ಈ ಕೃತಿಯನ್ನು ರಂಗದ ಮೇಲೆ ತರುವುದೇ ಒಂದು ಸವಾಲಾಗಿದ್ದರೂ, ಆ ಸವಾಲಿನಲ್ಲಿ ನಿರ್ದೇಶಕರು, ನಟಿಯರು ಗೆದ್ದಿದ್ದಾರೆಂಬುದೂ ಒಂದು ಗಮನಾರ್ಹ ದಾಖಲೆ.</div>
<div style="text-align: justify;">
<br /></div>
<div style="text-align: justify;">
<b>ರಥಯಾತ್ರೆ(ಸುಮನಸಾ ಕೊಡವೂರು)</b></div>
<div style="text-align: justify;">
<br /></div>
<div style="text-align: justify;">
ರವೀಂದ್ರನಾಥ ಟಾಗೋರರ ಪುಟ್ಟ ಕತೆ ರಥಯಾತ್ರೆ. ಗುರುರಾಜ ಮಾರ್ಪಳ್ಳಿಯವರು ಇದಕ್ಕೆ ರಂಗ ರೂಪ ನೀಡುವಾಗ, ಕಾಲಾತೀತವಾಗಿ ಎಂದೆಂದಿಗೂ ಸಲ್ಲುವ ವಚನಗಳನ್ನು ಸಂಯೋಜಿಸುವ ಮೂಲಕ ರಂಗ ಹಬ್ಬದ ಸಮಾರೋಪದಂದು ಸುಮನಸಾ ಕಲಾವಿದರ ಮೂಲಕ ’ರಥಯಾತ್ರೆ’ ಮಾಡಿಸುವಲ್ಲಿ ಸಫಲರಾದರು. ಎಂದಿಗೂ ಅಳಿಯದ ಮೇಲು, ಕೀಳು, ಸಮಾಜದ ವರ್ಗ ತಾರತಮ್ಯವನ್ನು ವಿಡಂಬನಾತ್ಮಕವಾಗಿ ಹೆಣೆದ ಕಥೆ ’ರಥಯಾತ್ರೆ’. ಸುಮನಸಾ ಕಲಾವಿದರೆಲ್ಲರ ಪ್ರಬುದ್ಧ ಅಭಿನಯದೊಂದಿಗೆ ಮೂಡಿ ಬಂದ ನಾಟಕದಲ್ಲಿ ಬೆಳಕಿನ ಚಲನೆ, ಸಂಗೀತ ಸಂಯೋಜನೆ ಧನಾತ್ಮಕ ಅಂಶಗಳಾದರೆ, ಎಲ್ಲೂ ಸೋಲದ ಕಲಾವಿದರು ನಾಟಕಕ್ಕೆ ನವಚೈತನ್ಯ ತುಂಬಿದ್ದರು. ಸಮಾರೋಪಕ್ಕೆ ಒಂದು ಚೆಂದದ ಚುಕ್ಕೆ ಇಡುವಲ್ಲಿ ರಥಯಾತ್ರೆ ಯಶಸ್ವಿಯಾಗಿ ಸುಮನಸಾ ರಂಗ ಹಬ್ಬ -೬ ಮುಗಿದಾಗ ಮುಂದಿನ ಅವಧಿರಂಗ ಹಬ್ಬ ಬಹುನಿರೀಕ್ಷೆಯ ಬೆಟ್ಟವನ್ನು ರಂಗಾಸಕ್ತಲ್ಲಿ ಸೃಷ್ಟಿಸಿದೆ. ಈ ಮೂಲಕ ಸುಮನಸಾದ ಜವಾಬ್ದಾರಿಯನ್ನೂ ಹೆಚ್ಚಿಸಿದೆ.</div>
<div style="text-align: justify;">
<br /></div>
</div>
Anonymoushttp://www.blogger.com/profile/07026221826810784770noreply@blogger.com0tag:blogger.com,1999:blog-6634091388019397795.post-77483362450632557492018-03-23T23:35:00.001-07:002018-03-23T23:35:19.355-07:00ಗಾರ್ಗಿ ಎನ್ ಶಬರಾಯ ಎಂಬ ಬಹುಮುಖ ಪ್ರತಿಭೆ...<div dir="ltr" style="text-align: left;" trbidi="on">
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEj9BBlseDCdQ2laV6ERU9wCUyCETkAMQeeht4dMndDGXTjlSrYxrTFHib86134v4hZ8aPlgf7bvRv2tOwioTptds6M4LHg043wqsroD6vAyJC25QUgVepItehNjmD-fIm9xyBX4QjnHJcne/s1600/Gargi+3.jpg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="813" data-original-width="540" height="200" src="https://blogger.googleusercontent.com/img/b/R29vZ2xl/AVvXsEj9BBlseDCdQ2laV6ERU9wCUyCETkAMQeeht4dMndDGXTjlSrYxrTFHib86134v4hZ8aPlgf7bvRv2tOwioTptds6M4LHg043wqsroD6vAyJC25QUgVepItehNjmD-fIm9xyBX4QjnHJcne/s200/Gargi+3.jpg" width="132" /></a><span style="color: blue;"><span style="background-color: white;"><b>ಗಾರ್ಗಿ ಶಬರಾಯ ಇಂದು ಸಂಗೀತ ಲೋಕದಲ್ಲಿ ಚಿರ ಪರಿಚಿತ ಹೆಸರು. ಇತ್ತೀಚಿಗೆ ಶಿವಮೊಗ್ಗದಲ್ಲಿ ನಡೆದ 'ನನ್ನ ಹಾಡು ದಾಸರ ಹಾಡು ' ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ಈ ಪ್ರತಿಭೆಯನ್ನು ಎರಡು ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ನಾನು ಪರಿಚಯಿಸಿದ್ದ ಲೇಖನವನ್ನು ಇಂದು ಇಲ್ಲಿ ಪೋಸ್ಟ್ ಮಾಡುತ್ತಿದ್ದೇನೆ. ಇಂದು ಈ ಪ್ರತಿಭೆಗೆ ಉಡುಪಿಎಯಲ್ಲಿ ರಾಗಾಧಾನ ಉಡುಪಿ ಸನ್ಮಾನಿಸುತ್ತಿರುವ ಹಿನ್ನೆಲೆಯಲ್ಲಿ ಅಭಿನಂದನಾ ಪೂರ್ವಕವಾಗಿ ಈ ಲೇಖನ ಮರು ಪ್ರಕಟಣೆ </b></span></span></div>
<div style="display: inline !important;">
<br /></div>
<div style="text-align: justify;">
<b style="color: blue;"></b><span style="color: blue;"><span style="background-color: white;"><b></b></span></span></div>
<span style="color: blue;"><b><b></b></b></span><br />
<br />
<div style="text-align: justify;">
ತಂದೆ-ಯಕ್ಷಲೋಕ ಕಂಡ ತೆಂಕು-ಬಡಗು ಶೈಲಿಯ ಖ್ಯಾತ ಭಾಗವತ. ಮಗಳು ಕರ್ನಾಟಕ ಸಂಗೀತ ಮತ್ತು ಚಿತ್ರಕಲೆಯಲ್ಲಿ ಅದ್ಭುತವಾಗಿ ಬೆಳೆಯುತ್ತಿರುವ ಅಸಾಮಾನ್ಯ ಪ್ರತಿಭೆ. ಈಕೆ ಖ್ಯಾತ ಯಕ್ಷಗಾನ ಭಾಗವತ ನಾರಾಯಣ ಶಬರಾಯ ಮತ್ತು ರಾಜಶ್ರೀ ದಂಪತಿಗಳ ಪುತ್ರಿ, ಕರ್ನಾಟಕ ಸಂಗೀತದಲ್ಲಿ ಅನೇಕ ಸಾಧನೆ ಹಾಗೂ ಪ್ರಶಸ್ತಿಗಳಿಗೆ ಭಾಜನರಾದ ಗಾರ್ಗಿ ಶಬರಾಯ.</div>
<div style="text-align: justify;">
<br /></div>
<div style="text-align: justify;">
ಬಾಲ್ಯದಿಂದಲೇ ಈಕೆಗೆ ಸಂಗೀತದ ಸೆಳೆತ. ಅಪ್ಪನ ಎದೆಯ ಮೇಲೆ ಮಲಗಿ, ದೂರದ ಪ್ರಯಾಣ ಅಥವಾ ಮನೆಯ ಹಜಾರ...ಎಲ್ಲಿದ್ದರೂ ನಾರಾಯಣ ಶಬರಾಯರ ಸಂಗೀತವೇ ಜೋಗುಳ. ಇದೇ ಬಹುಶ: ಗಾರ್ಗಿಯ ಮನ ಮನದಲ್ಲಿ ಸಂಗೀತದ ಆಸಕ್ತಿ ಹೆಮ್ಮರವಾಗಿ ಬೆಳೆಯಲು ಪ್ರೇರಣೆ.</div>
<div style="text-align: justify;">
<br /></div>
<div style="text-align: justify;">
ಐದನೆಯ ವಯಸ್ಸಿನಲ್ಲಿ ಸಂಗೀತ ಅಭ್ಯಾಸ ಆರಂಭಿಸಿದವಳು ಗಾರ್ಗಿ. ಉಡುಪಿಯ ವಿದುಷಿ ಶ್ರೀಮತಿ ವಸಂತಲಕ್ಷ್ಮಿ ಎ ಹೆಬ್ಬಾರ್ ಅವರಲ್ಲಿ ಸರಿಗಮಪದ ತೊದಲ್ನುಡಿಗಳನ್ನಾರಂಭಿಸಿ, ಪ್ರೊ.ಅರವಿಂದ ಹೆಬ್ಬಾರ್ ಹಾಗೂ ವಿದುಷಿ ರಂಜನಿ ಹೆಬ್ಬಾರ್ ಅವರಲ್ಲಿ ಅಭ್ಯಾಸವನ್ನು ಮುಂದುವರಿಸುತ್ತಾ, ಪರಿಪಕ್ವತೆಯ ಹಾದಿಯಲ್ಲಿ ಬೆಳೆಯುತ್ತಾ ಸಾಗಿದವಳು. ಇವಳ ಸಂಗೀತಾಸಕ್ತಿ ಮತ್ತು ಇವರೊಳಗಿನ ಪ್ರತಿಭೆ ಬೆಳೆಯಲು ಈ ಗುರುಗಳ ಮಾರ್ಗದರ್ಶನ ಪ್ರಮುಖವ ಕಾರಣವಾದರೆ, ಸಂಗೀತಾಭ್ಯಾಸಕ್ಕೆ ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆಯ ಕಲಾ ಅಧ್ಯಯನ ಮತ್ತು ತರಬೇತಿ ಕೇಂದ್ರ ಮತ್ತು ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳಿಂದ ವಿದ್ಯಾರ್ಥಿವೇತನದ ಪ್ರೋತ್ಸಾಹ. ಸಂಗೀತದಲ್ಲಿ ಸೀನಿಯರ್ ಗ್ರೇಡ್ ಪರೀಕ್ಷೆಯನ್ನು ಉನ್ನತ ದರ್ಜೆಯೊಂದಿಗೆ ಮುಗಿಸಿದ್ದಾಳೆ. ಕಳೆದ ಮೂರು ವರ್ಷಗಳಿಂದ ತನ್ನ ಗುರುಗಳ ಮನೆಯಲ್ಲೇ ಉಳಿದುಕೊಂಡು, ಗುರುಕುಲದ ಮಾದರಿಯಲ್ಲಿ ಜೀವನ ಪಾಠವನ್ನು ಕಲಿತ ನಮೃತೆ ಈಕೆಯದ್ದಾದರೆ, ಸಂಗೀತ, ವಿಜ್ಞಾನ, ಆಧ್ಯಾತ್ಮ, ಧರ್ಮ, ಯೋಗ, ಜೀವನ ಕ್ರಮ ಮತ್ತು ಶಿಸ್ತು ಎಲ್ಲವನ್ನೂ ಗುರು ಅರವಿಂದ ಹೆಬ್ಬಾರರಲ್ಲಿ ಕಲಿತೆನೆನ್ನುವ ವಿಧೇಯತೆ. ತನ್ನೆಲ್ಲಾ ಸಾಧನೆಯ ಹಿಂದಿನ ಶಕ್ತಿ ತಾಯಿ ಮತ್ತು ತಂದೆ ಎನ್ನುವುದನ್ನು ಮರೆಯುವುದಿಲ್ಲ. ಅಕಾಲಿಕವಾಗಿ ನಿಧನರಾದ ಗುರು ರಂಜನಿ ಹೆಬ್ಬಾರ್ ಭೌತಿಕವಾಗಿ ಇನ್ನಿಲ್ಲ ಎಂಬ ಕೊರಗಿದ್ದರೂ, ಇಲ್ಲೇ ಎಲ್ಲೋ ಜೊತೆಗಿದ್ದು ನನಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಭಾವುಕಳಾಗುವ ಗಾರ್ಗಿ ಓರ್ವ ನಿಜಾರ್ಥದ ಶಿಷ್ಯೆಯಾಗಿಯೇ ಕಾಣುತ್ತಾಳೆ.</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEjJHNmQ0zYXDaZhBVppEkOW6eb3mHf2IvCKOo9HpRLyg59QTjSpPwy7LwXh02q7LqCHRSnkei_q1ojcx_bxavWv84Ph2NVfoGegWbX6f5gb_WhXDBsnBIyjF1DWijWZz1zJZQ7YPqTzvAP8/s1600/Gargi+2.jpg" imageanchor="1" style="clear: right; float: right; margin-bottom: 1em; margin-left: 1em;"><img border="0" data-original-height="780" data-original-width="780" height="400" src="https://blogger.googleusercontent.com/img/b/R29vZ2xl/AVvXsEjJHNmQ0zYXDaZhBVppEkOW6eb3mHf2IvCKOo9HpRLyg59QTjSpPwy7LwXh02q7LqCHRSnkei_q1ojcx_bxavWv84Ph2NVfoGegWbX6f5gb_WhXDBsnBIyjF1DWijWZz1zJZQ7YPqTzvAP8/s400/Gargi+2.jpg" width="400" /></a></div>
<div style="text-align: justify;">
ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಅನೇಕ ಪ್ರಶಸ್ತಿಗಳನ್ನೂ ಈ ಸಂಗೀತ ಪ್ರತಿಭೆಯನ್ನರಸಿ ಬಂದಿವೆ. ಗದಗದ ’ಗಂಗೂಬಾಯಿ ಹಾನಗಲ್ ಕನ್ನಡ ಮಕ್ಕಳ ಮನೆ’ಯಿಂದ ಕೊಡ ಮಾಡುವ ’ಕಲಾ ಕಣ್ಮಣಿ-೨೦೦೭’ ಮತ್ತು ಮಂಗಳೂರು ವಿಶ್ವ ವಿದ್ಯಾನಿಲಯ ಮತ್ತು ಭಾರತೀಯ ವಿದ್ಯಾಭವನದಿಂದ ನೀಡಿರುವ ೨೦೧೧ರ ಸಾಲಿನ ಯುವ ಕಲಾವಿದ ಪ್ರಶಸ್ತಿ ಮುಖ್ಯವಾಶದುವುಗಳು </div>
<div style="text-align: justify;">
<br /></div>
<div style="text-align: justify;">
ಶ್ರೀ ಶಂಕರ ಟಿವಿಯವರು ಆಯೋಜಿಸಿದ್ದ ಶಾಸ್ತ್ರೀಯ ಸಂಗೀತದಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಿಯಾಗಿ ಹೊಮ್ಮಿದ ಈ ಸಹಜ ಪ್ರತಿಭೆಯನ್ನು ಸಂಗೀತ ಜಗತ್ತು ಒಮ್ಮೆ ಕಣ್ಣರಳಿಸಿ ನೋಡಿದ್ದು ಮತ್ತು ರಾಜ್ಯದ ಕರ್ನಾಟಕ ಸಂಗೀತ ಕ್ಷೇತ್ರದ ಉದಯೋನ್ಮುಖ ಪ್ರತಿಭೆಯ ಸಾಲಿನಲ್ಲಿ ಗಾರ್ಗಿಯ ಹೆಸರು ಮಿಂಚಿದ್ದು ವಿಶೇಷ ಸಾಧನೆ. ಮಂಗಳೂರಿನ ಸಂಗೀತ ಪರಿಷತ್, ಶಿವಮೊಗ್ಗದ ಹೊಸ ಹಳ್ಳಿಯ ಸಂಕೇತಿ ಸಭಾಗಳಲ್ಲಿ ಹಾಗೂ ಇನ್ನಿತರೆಡೆಗಳಲ್ಲಿ ನಡೆದ ರಾಷ್ಟ್ರ-ರಾಜ್ಯ ಮಟ್ಟದ ಶಾಸ್ತ್ರೀಯ ಸಂಗೀತದ ಅನೇಕ ಪ್ರಶಸ್ತಿ ಬಹುಮಾನಗಳನ್ನು ಗಿಟ್ಟಿಸಿಕೊಂಡ ಪ್ರತಿಭಾವಂತೆ ಗಾರ್ಗಿ. ರಾಜ್ಯಾದ್ಯಂತ ಈಗಾಗಲೇ ಅನೇಕ ಸಂಗೀತ ಕಛೇರಿಗಳಲ್ಲಿಯೂ ಕಾರ್ಯಕ್ರಮ ನೀಡುವ ಮೂಲಕ, ಸಂಗೀತ ಪ್ರಿಯರಲ್ಲಿ ಈ ಬೆಳೆಯುವ ಪ್ರತಿಭೆ ಭರವಸೆಗಳನ್ನು ಹುಟ್ಟಿಸಿದ್ದೇ ಅಲ್ಲದೇ, ನಾಡಿನ ಖ್ಯಾತ ಕಲಾವಿದೆಯರ ಸಾಲಿನಲ್ಲಿ ತನ್ನ ಇರವನ್ನು ಖಚಿತಪಡಿಸಿಕೊಂಡಿದ್ದಾರೆ. </div>
<div style="text-align: justify;">
<br /></div>
<div style="text-align: justify;">
ಸಂಗೀತ ನಿರಂತರ ಅಭ್ಯಾಸ ಹಾಗೂ ಕಲಿಕೆಯನ್ನು ಬಯಸುತ್ತದೆ ಮತ್ತು ಅದು ಮಾತ್ರವೇ ತನ್ನೊಳಗಿನ ಕಲಾವಿದೆಯನ್ನು ಪಕ್ವತೆಯೊಂದಿಗೆ ಬೆಳೆಸುತ್ತದೆ ಎಂದು ಭಾವಿಸಿರುವಾಕೆ ಗಾರ್ಗಿ. ಈ ಹಿನ್ನೆಲೆಯಲ್ಲಿ ಸಂಗೀತಕ್ಕೆ ಸಂಬಂಧಿಸಿದ ಅನೇಕ ರಾಷ್ಟ್ರೀಯ ಹಾಗೂ ಸ್ಥಳೀಯ ಮಟ್ಟದ ಕಾರ್ಯಾಗಾರಗಳಲ್ಲಿ ನಿರಂತರ ಭಾಗವಹಿಸುತ್ತಿರುವಾಕೆ. </div>
<div style="text-align: justify;">
<br /></div>
<div style="text-align: justify;">
ಗಾರ್ಗಿಯ ಮತ್ತೊಂದು ವಿಶೇಷತೆ ಎಂದರೆ ಈಕೆ ಓರ್ವ ಅಪ್ರತಿಮ ಚಿತ್ರಕಲಾವಿದೆಯಾಗಿಯೂ ಬೆಳೆಯುತ್ತಿದ್ದಾಳೆ. ಸ್ವ ಪರಿಶ್ರಮದೊಂದಿಗೆ ’ಏಕಲವ್ಯ’ನಂತೆ ತಾನೇ ತನ್ನನ್ನು ಈ ಕಲೆಯಲ್ಲಿ ಪರಿಣತಿಗೊಳಿಸಿಕೊಳ್ಳುತ್ತಿರುವ ಈಕೆ, ಯಾವುದೇ ಚಿತ್ರಕಲಾ ತರಗತಿಗಳಿಗೆ ಹೋಗದೇ, ಅತ್ಯುತ್ತಮ ಚಿತ್ರಗಳನ್ನು ಬಿಡಿಸುವ ಪ್ರತಿಭಾನ್ವಿತೆ. ಆಕೆಯ ಚಿತ್ರಗಳಲ್ಲಿ ವಿಶೇಷವಾಗಿ ಡೂಡಲ್ ಕಲೆ, ಕಲಾಂಕಾರಿ, ಮಧುಬನಿ ಮತ್ತು ಮೆಹಂದಿ ಕಲೆಗಳ ಮಿಶ್ರಣವಿದೆ. ಈ ಕಲೆ ಯಾವ ಪ್ರಕಾರದ್ದು ಎಂದರೆ, ನಿರ್ದಿಷ್ಟವಾಗಿ ಇದೇ ಪ್ರಕಾರವೆನ್ನಲು ತುಸು ಅಸಾಧ್ಯವೆನಿಸಿದ ಕಾರಣ, ಎಲ್ಲಾ ಕಲೆಗಳ ಸಂಕಲನದೊಂದಿಗೆ ಇವರ ಕೈಯಲ್ಲಿ ಅರಳುವ ಕಲೆಗೆ ಸದ್ಯಕ್ಕೆ ’ಗಾರ್ಗಿಕಲೆ’ ಎನ್ನುವುದೇ ಸೂಕ್ತವೇನೋ ಎಂಬಂತಿವೆ ಅವಳ ರಚನೆಗಳು!. ವಿಶೇಷವೆಂದರೆ ಕುಳಿತಲ್ಲಿ, ನಿಂತಲ್ಲಿ ಮತ್ತು ಯಾವುದೇ ತಿದ್ದುವಿಕೆಯ ಅವಶ್ಯಕತೆ ಇಲ್ಲದ ಕಲಾ ರಚನೆ ಇವಳೀಗೆ ಸಿದ್ದಿಸಿದೆ. </div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEiN4CXGozpi2Im8VnLwq1oeaFT2a6kSKRJpgN1jm84v4UxLht4zwCUo996BMfmJ8bAihv0x4cYtuJsQqNCX62Uc2vx_LONmxcnUayCqF6vr621q7oIrcIFOYpEHfqT8XasXpLU5t45PcW-v/s1600/garg.jpg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="959" data-original-width="960" height="199" src="https://blogger.googleusercontent.com/img/b/R29vZ2xl/AVvXsEiN4CXGozpi2Im8VnLwq1oeaFT2a6kSKRJpgN1jm84v4UxLht4zwCUo996BMfmJ8bAihv0x4cYtuJsQqNCX62Uc2vx_LONmxcnUayCqF6vr621q7oIrcIFOYpEHfqT8XasXpLU5t45PcW-v/s200/garg.jpg" width="200" /></a></div>
<div style="text-align: justify;">
ಕಲಾ ಸಾಧನೆಗೆ ಹೊರತಾಗಿ, ಗಾರ್ಗಿಯ ಶೈಕ್ಷಣಿಕ ಯಾತ್ರೆಯೂ ಹಲವು ದಾಖಲೆಗಳಿಗೆ ಕಾರಣವಾಗಿದೆ. ಪ್ರಸ್ತುತ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಸಸ್ಯಶಾಸ್ತ್ರದಲ್ಲಿ ಪ್ರಥಮ ವರ್ಷದ ಎಂಎಸ್ಸಿಯನ್ನು ಮುಗಿಸಿ ದ್ವಿತೀಯ ವರ್ಷದ ವ್ಯಾಸಂಗ ಮುಂದುವರಿಸಿರುವ ಗಾರ್ಗಿ, ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿಎಸ್ಸಿಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದಲ್ಲಿ ಅಗ್ರಳಾಗಿ ಡಾ.ಟಿಎಂಎ ಪೈ ಚಿನ್ನದ ಪದಕ ಗಳಿಸಿದ್ದಾಳೆ. ನಾಡಿನಾದ್ಯಂತ ಅನೇಕ ಸಂಘ ಸಂಸ್ಥೆಗಳು ಈಕೆಯನ್ನು ಈಗಾಗಲೇ ಸನ್ಮಾನಿಸಿವೆ. ತಂದೆ ನಾರಾಯಣ ಶಬರಾಯರ ’ಯಕ್ಷಗಾಯನ’ದ ಪ್ರಭಾವ, ತಾಯಿ ರಾಜಶ್ರೀಯವರ ಸದಾ ಕಾಲದ ಬೆಂಬಲ ಮತ್ತು ಉತ್ತೇಜನ, ಗುರುಗಳ ಸಮರ್ಥ ಮಾರ್ಗದರ್ಶನ ತನ್ನನ್ನು ಈ ಎತ್ತರಕ್ಕೇರಿಸಿದೆ ಎನ್ನುವ ಗಾರ್ಗಿಯ ಕಣ್ಣುಗಳಲ್ಲಿ ಸಾಧಿಸಿದ್ದು ಅತ್ಯಲ್ಪ ಮತ್ತು ಸಾಧಿಸಬೇಕಾದ್ದು ಬೆಟ್ಟದಷ್ಟಿದೆ ಎಂಬ ವಿನಯವಿದೆ. ಎಂಎಸ್ಸಿ ವ್ಯಾಸಂಗದ ಬಳಿಕ ಮತ್ತೆ ತನ್ನ ಸಂಗೀತ-ಚಿತ್ರಕಲೆಯಲ್ಲಿ ಅಭ್ಯಾಸ-ಸಾಧನೆಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಸದಾ ಚಟುವಟಿಕೆಯಿಂದಿರುವ ಗಾರ್ಗಿ, ಎರಡೂ ಕ್ಷೇತ್ರಗಳ ಮಟ್ಟಿಗೆ ಒಂದು ವಿಶಿಷ್ಠ ಪ್ರತಿಭೆ ಎಂಬುದರಲ್ಲಿ ಎರಡು ಮಾತಿಲ್ಲ. </div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
</div>
Anonymoushttp://www.blogger.com/profile/07026221826810784770noreply@blogger.com1tag:blogger.com,1999:blog-6634091388019397795.post-4963107994483076252018-03-17T02:48:00.003-07:002018-03-17T02:48:43.322-07:00ಬಹುಮುಖಿ ನೃತ್ಯ ಗುರು-ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ<div dir="ltr" style="text-align: left;" trbidi="on">
<div style="text-align: justify;">
<b><span style="color: blue;">ಮೂರು ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ನನ್ನ ಬರಹ- ವಿದುಷಿ ವಿದ್ಯಾಶ್ರೀ ರಾಧಾಕೃಷ್ಣರ ಬಗೆಗಿನ ಪರಿಚಯ ಲೇಖನ.... ಇಂದು ಅವರ ಹುಟ್ಟು ಹಬ್ಬದ ಸಂಭ್ರಮದಲ್ಲಿ, ನನ್ನ ಬ್ಲಾಗ್ ಮೂಲಕ ಮತ್ತೊಮ್ಮೆ.... ತಮ್ಮ ಮುಂದೆ </span></b></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEjT2hDGyjtJLkcDUFxQ-R_oJN0zpBWmDcKDq0hr7HJlSImZPD9Mp2Z7KyH8CmwzeEkyg3OoYqC7KrVl8GZXIFJekagoaH4cp6H1ANbBP1WoGwkH2jltsq9WoPyVokqoO9ucVDptOCwo4tjW/s1600/V-1.jpg" imageanchor="1" style="clear: right; float: right; margin-bottom: 1em; margin-left: 1em;"><img border="0" data-original-height="774" data-original-width="514" height="320" src="https://blogger.googleusercontent.com/img/b/R29vZ2xl/AVvXsEjT2hDGyjtJLkcDUFxQ-R_oJN0zpBWmDcKDq0hr7HJlSImZPD9Mp2Z7KyH8CmwzeEkyg3OoYqC7KrVl8GZXIFJekagoaH4cp6H1ANbBP1WoGwkH2jltsq9WoPyVokqoO9ucVDptOCwo4tjW/s320/V-1.jpg" width="212" /></a></div>
<div style="text-align: justify;">
<br /></div>
<div style="text-align: justify;">
ನೃತ್ಯ ಅಥವಾ ಸಂಗೀತ ಕಲಾವಿದರಿಗೆ ಯಾವುದಾದರೂ ಒಂದು ಕಲೆಯಲ್ಲಿ ಮಾತ್ರ ಪರಿಣತಿ ಇರುತ್ತದೆ ಎಂಬ ಮಾತಿಗೆ ಅಪವಾದವಾಗಿ ನಮ್ಮ ಜಿಲ್ಲೆಯಲ್ಲಿ ಹಲವಾರು ಕಲಾವಿದರು ಮಹತ್ಸಾಧನೆ ಮಾಡಿದ್ದಾರೆ. ಅದರಲ್ಲೂ ಕಲಿಕೆ ನಿರಂತರ ಎಂಬಂತೆ ಪ್ರತೀ ಕ್ಷಣವೂ ಹೊಸತನದ ಅನ್ವೇಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸದಾ ಪ್ರಯೋಗ ಶೀಲರಾಗಿರುವ ಕಲಾವಿದರು ವಿರಳ ಎಂದೇ ಹೇಳಬಹುದು. ಇಂತಹ ವಿರಳರಲ್ಲಿ ಸರಳರಾಗಿ, ನಾಟ್ಯ-ಸಂಗೀತ-ಭಾಷಣ-ಸಾಹಿತ್ಯ...ಹೀಗೆ ಅನೇಕ ಕ್ಷೇತ್ರಗಳಲ್ಲಿ ಪರಿಪೂರ್ಣತೆ ಸಾಧಿಸಿ, ರಾಜ್ಯದ ಅಗ್ರಗಣ್ಯ ಕಲಾವಿದೆಯರಲ್ಲಿ ಗುರುತಿಸಿಕೊಳ್ಳುತ್ತಿರುವವರು ಗಾನ ನೃತ್ಯ ಅಕಾಡೆಮಿಯ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಅವರು ಶ್ರೀಮತಿ ಜಯಲಕ್ಷ್ಮೀ ಹಾಗೂ ಶ್ರೀ ಪದ್ಮನಾಭ ಭಟ್ ಪುತ್ರಿಯಾಗಿ ಪುತ್ತೂರಿನಲ್ಲಿ ಜನಿಸಿ, ಸುಳ್ಯದಲ್ಲಿ ವಿದ್ಯಾಭ್ಯಾಸ ಮುಗಿಸಿ, ಪ್ರಸ್ತುತ ಮಂಗಳೂರನ್ನು ಕಾರ್ಯಕ್ಷೇತ್ರವಾಗಿಸಿಕೊಂಡು ನಾಡಿನಾದ್ಯಂತ ತಮ್ಮ ಕಲಾ ಸೇವೆ ಮುಂದುವರಿಸಿದ್ದಾರೆ.</div>
<div style="text-align: justify;">
<br /></div>
<div style="text-align: justify;">
ನೃತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿ ಎರಡು ದಶಕಗಳನ್ನು ಪೂರೈಸಿರುವ, ’ಗಾನ ನೃತ್ಯ ಅಕಾಡೆಮಿ’ಯ ನಿರ್ದೇಶಕಿಯಾಗಿ, ಸುಳ್ಯ ಹಾಗೂ ಮಂಗಳೂರಿನ ಒಟ್ಟೂ ನಾಲ್ಕು ಶಾಖೆಗಳ ಮೂಲಕ ಹಲವಾರು ವಿದ್ಯಾರ್ಥಿಗಳನ್ನು ಈ ಕ್ಷೇತ್ರಕ್ಕೆ ಪರಿಚಯಿಸಿದ ಹೆಗ್ಗಳಿಕೆ ಇವರದ್ದು. ತಾಯಿಯೇ ಮೊದಲ ಗುರು ಎಂಬಂತೆ ತಾಯಿ ಜಯಲಕ್ಷ್ಮಿಯವರಲ್ಲಿ ತನ್ನ ಐದನೆಯ ವಯಸ್ಸಿನಲ್ಲಿಯೇ ನೃತ್ಯಾಭ್ಯಾಸ ಆರಂಭಿಸಿದ ಇವರು ಹದಿನಾರನೆಯ ವಯಸ್ಸಿನಲ್ಲಿಯೇ ನೃತ್ಯ ತರಬೇತಿ ಕೇಂದ್ರ ಸ್ಥಾಪಿಸಿದವರು. ಶ್ರೀಮತಿ ನಳಿನಿ ಬೈಪಡಿತ್ತಾಯ, ಡಾ.ಸೀತಾ ಕೋಟೆ ಹಾಗೂ ಶ್ರೀ ಮುರಳೀಧರ ರಾವ್ ಅವರಲ್ಲಿ ನೃತ್ಯಾಭ್ಯಾಸ ಮಾಡಿ, ಕಲಾ ಕ್ಷೇತ್ರ ಶೈಲಿಯ ಉನ್ನತ ವ್ಯಾಸಂಗವನ್ನು ಚೆನ್ನೈಯ ಪದ್ಮಶ್ರೀ ಕಲೈಮಾಮಣಿ ಅಡಯಾರ್ ಕೆ ಲಕ್ಷ್ಮಣ್ ಅವರಲ್ಲಿ ನಡೆಸಿದವರು. ನೃತ್ಯದೊಂದಿಗೆ ಸಂಗೀತವನ್ನೂ ದಿವಂಗತ ಶ್ರೀ ಗೋಪಾಲ ಕೃಷ್ಣ ಮಜಿಗುಂಡಿಯವರಲ್ಲಿ ಆರಂಭಿಸಿ, ಶ್ರೀಮತಿ ಸತ್ಯಭಾಮಾ ಬಾಳಿಲ, ಶ್ರೀ ಶ್ಯಾಂ ಭಟ್ ಉಪ್ಪಂಗಳ, ದಿ. ಶ್ರೀನಾಥ್ ಮರಾಠೆಯವರಲ್ಲಿ ಅಭ್ಯಾಸ ಮಾಡಿದ್ದಾರೆ. ನಿರಂತರ ಕಲಿಕೆಯ ತುಡಿತ ಹೊಂದಿರುವ ಇವರ ಪ್ರತಿಭೆಯನ್ನು ಕಲಾ ಜಗತ್ತು ಪ್ರೌಢಿಮೆಯ ಶ್ರೇಯಸ್ಸಿನೊಂದಿಗೆ ಗುರುತಿಸುತ್ತಿದ್ದರೂ, ತಾನಿನ್ನೂ ವಿದ್ಯಾರ್ಥಿನಿಯೇ ಎಂಬ ವಿನಮೃತೆಯೊಡನೆ, ಗುರು ಶ್ರೀಮತಿ ಬ್ರಘಾ ಬೆಸೆಲ್ ಇವರಲ್ಲಿ ಅಭಿನಯ ತರಬೇತಿಯನ್ನೂ ಪಡೆದು ಪ್ರಸ್ತುತ ದೆಹಲಿಯ ಶ್ರೀಮತಿ ರಮಾವೈದ್ಯನಾಥನ್ ಅವರಲ್ಲಿ ನೃತ್ಯ ಹಾಗೂ ಉಡುಪಿಯ ಗುರುಶ್ರೀ ಮಧೂರು ಬಾಲಸುಬ್ರಹ್ಮಣ್ಯ ಅವರಲ್ಲಿ ಸಂಗೀತವನ್ನು ಮುಂದುವರಿಸಿದ್ದಾರೆ. </div>
<div style="text-align: justify;">
<br /></div>
<div style="text-align: justify;">
ಸಾಹಿತ್ಯದಲ್ಲಿ ಎಂಎ ಪದವೀಧರೆಯಾಗಿರುವ ಇವರು ಪ್ರಸ್ತುತ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಎಂಮ್ಯೂಸಿಕ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇವರ ಮೇರು ಶೈಕ್ಷಣಿಕ ಆರ್ಹತೆಗಳಿಗನುಗುಣವಾಗಿ ಇವರನ್ನರಸಿ ಬಂದ ಅನೇಕ ಉದ್ಯೋಗಗಳನ್ನು ನಿರಾಕರಿಸಿ, ಕಲೆಯ ಮೇಲಿನ ತಮ್ಮ ಅಪರಿಮಿತ ಪ್ರೀತಿಯಿಂದಾಗಿ, ಕಲಾ ಜಗತ್ತಿಗೇ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುವ ಮೂಲಕ, ನಮ್ಮ ನಾಡಿನ ಸಾಂಸ್ಕೃತಿಕ ರಂಗ ಶ್ರೀಮಂತಿಕೆಗೆ ಕಾರಣರಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. </div>
<div style="text-align: justify;">
<br /></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEghyN6wvWhqGKEbTN8dvN3YCfblJxceU-EiM-vYgNALSKMT181DccM5ho8UzAqie8NLqX6Dye6MH0ITOZGip2kM5ZHXlZ-BAVRtn11fw_Chpjn4dYGbtRUF1SOHkX1t6CPU1Nzx9rGJwcp4/s1600/Nrityarpana-1.jpg" imageanchor="1" style="clear: right; float: right; margin-bottom: 1em; margin-left: 1em;"><img border="0" data-original-height="498" data-original-width="790" height="201" src="https://blogger.googleusercontent.com/img/b/R29vZ2xl/AVvXsEghyN6wvWhqGKEbTN8dvN3YCfblJxceU-EiM-vYgNALSKMT181DccM5ho8UzAqie8NLqX6Dye6MH0ITOZGip2kM5ZHXlZ-BAVRtn11fw_Chpjn4dYGbtRUF1SOHkX1t6CPU1Nzx9rGJwcp4/s320/Nrityarpana-1.jpg" width="320" /></a>ವಿದ್ಯಾಶ್ರೀ ಅವರು ಮಿತಭಾಷಿ. ಆದರೆ ಸದಾ ಕಾಲ ಏನಾದರೂ ಒಂದು ಹೊಸತನದ ಹುಡುಕಾಟದ ತುಡಿತದಲ್ಲಿ ಸದಾ ಸಕ್ರಿಯರಾಗಿರುವವರು. ಪ್ರತೀ ವರ್ಷ ಸುಳ್ಯ ಹಾಗೂ ಮಂಗಳೂರಿನಲ್ಲಿ ತನ್ನ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳ ಕಲೆಯ ಅನಾವರಣವನ್ನು ’ಆರೋಹಣ’ ಎಂಬ ಹೆಸರಿನಲ್ಲಿ ಆಯೋಜಿಸುವ ಇವರು, ಪ್ರತೀ ಬಾರಿಯೂ ಕಲಾಸಕ್ತರನ್ನು ನಿರೀಕ್ಷೆಯಲ್ಲಿರುವಂತೆ ಆಕರ್ಷಿಸುತ್ತಾರೆ!. ಭರತನಾಟ್ಯ ಅಥವಾ ತಾವು ಅಳವಡಿಸಿಕೊಳ್ಳುವ ಯಾವುದೇ ನೃತ್ಯ ಪ್ರಕಾರದಲ್ಲಿ, ಯಾವುದೇ ಹೆಜ್ಜೆ, ನಡೆ, ಭಂಗಿ, ಎಲ್ಲಿಯೂ ಪುನರಾವರ್ತನೆ ಆಗದಂತೆ, ವಿಶಿಷ್ಠ ಹಾಗೂ ಆಕರ್ಷಕವಾಗಿರುವಂತೆ ನೃತ್ಯ ಸಂಯೋಜನೆ ಮಾಡುವ ಕಲೆ ಇವರಿಗೆ ಸಿದ್ದಿಸಿದೆ.</div>
<div style="text-align: justify;">
<br /></div>
<div style="text-align: justify;">
ಭರತನಾಟ್ಯ ಕಲೆ ಮಂಗಳೂರಿಗೆ ಹೊಸತೇನೂ ಅಲ್ಲ. ಆದರೆ ಭುವನೇಶ್ವರದ ಗೀತಾಂಜಲಿ ಆಚಾರ್ಯ ಮತ್ತು ಮಧುಲಿತಾ ಮೊಹಾಪಾತ್ರ ಅವರಲ್ಲಿ, ಒಡಿಸ್ಸಿ ಕಲೆಯನ್ನು ಸ್ವತ: ಅಭ್ಯಸಿಸಿ, ಮಂಗಳೂರಿನಲ್ಲಿ ಒಡಿಸ್ಸಿ ನೃತ್ಯ ತಂಡ ನಿರ್ಮಿಸಿದ ಮೊದಲ ಕಲಾವಿದೆ. ಕಥಕ್ ನೃತ್ಯವನ್ನೂ ಬಹುವಾಗಿ ಮೆಚ್ಚಿಕೊಳ್ಳುವ ಇವರು, ಮಂಗಳೂರಿನ ನೃತ್ಯಾಸಕ್ತ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಕಥಕ್ ನೃತ್ಯ ಪಟು ಗುರು ಸ್ವೀಕೃತ್ ಇವರಿಂದ ನಿರಂತರವಾಗಿ ಕಥಕ್ ಕಾರ್ಯಾಗಾರ ನಡೆಸುತ್ತಾ, ತಮ್ಮದೇ ಸಂಸ್ಥೆಯಲ್ಲಿ ಅನೇಕ ಕಥಕ್ ನೃತ್ಯಗಳನ್ನೂ ಪ್ರದರ್ಶಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. </div>
<div style="text-align: justify;">
<br /></div>
<div style="text-align: justify;">
ನಿರಂತರ ಕಲಿಕೆಯ ಆಸಕ್ತಿ ಇವರನ್ನು ಪರಿಪೂರ್ಣ ಕಲಾವಿದೆಯನ್ನಾಗಿ ರೂಪಿಸುತ್ತಾ ಬಂದಿದೆ. ದೇಶದ ಯಾವುದೇ ಭಾಗಗಳಲ್ಲಿ, ಇಂದಿಗೂ ಯಾವುದೇ ರೀತಿಯ ನೃತ್ಯ-ಸಂಗೀತ ಕಾರ್ಯಾಗಾರಗಳಾದಲ್ಲಿ ನಿಯಮಿತವಾಗಿ ಭಾಗವಹಿಸುತ್ತಾ, ತಮ್ಮೊಳಗಿನ ಕಲಾ ಹಸಿವಿನ ನೀಗುವಿಕೆಯಲ್ಲಿ ನಿರಂತರ ನಿರತರಾಗಿರುತ್ತಾರೆ.ಪದ್ಮಭೂಷಣ ಡಾ.ಪದ್ಮಾಸುಬ್ರಮಣ್ಯಮ್ ಅವರ ನಾಟ್ಯಶಾಸ್ತ್ರ ಕರಣ ಕಾರ್ಯಾಗಾರದಲ್ಲಿ ಸತತ ಎರಡು ಬಾರಿ ಹಾಗೂ ಚೆನ್ನೈನ ಕಲಾಕ್ಷೇತ್ರ ನಡೆಸಿದ ಹತ್ತುದಿನ ವಿಂಟರ್ ವರ್ಕ್ಶಾಪ್ ನಲ್ಲಿ ಕರ್ನಾಟಕದಿಂದ ಆಯ್ಕೆಯಾಗಿ ಭಾಗವಹಿಸಿದ ಅಧ್ಯಯನ ಶೀಲತೆ ಇವರದ್ದು. </div>
<div style="text-align: justify;">
<br /></div>
<div style="text-align: justify;">
ಇದರೊಂದಿಗೆ ಹಲವು ಪ್ರಥಮಗಳ ದಾಖಲೆಯುನ್ನು ಬರೆದ ಕೀರ್ತಿಯೂ ವಿದ್ಯಾಶ್ರೀ ಅವರಿಗೆ ಸಲ್ಲುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಭರತನಾಟ್ಯದ ಮೂಲ ಅಡವುಗಳನ್ನು ಹೊಂದಿರುವ ಡಿವಿಡಿ ’ನೃತ್ಯಾಕ್ಷರಂ’ ನ್ನು ತಾವೇ ನಿರ್ದೇಶಿಸಿ, ತಯಾರಿಸುವುದರ ಮೂಲಕ ಭರತನಾಟ್ಯ ಕ್ಷೇತ್ರಕ್ಕೆ ಅಮೂಲ್ಯ ಕಾಣಿಕೆ ನೀಡಿದ್ದಾರೆ. ಇನ್ನೂ ಅಂತರಜಾಲ ತನ್ನ ವಿಸ್ತರಣೆಯ ಆರಂಭದಲ್ಲಿರುವಾಗಲೇ, ತಮ್ಮ ನೃತ್ಯ ಸಂಸ್ಥೆಯ ವೆಬ್ ಸೈಟ್ ನ್ನು ಆರಂಭಿಸಿದ್ದು, ಅದು ಈ ಕ್ಷೇತ್ರದ ಸಂಸ್ಥೆಯೊಂದು ಜಿಲ್ಲೆಯಲ್ಲಿ ಆರಂಭಿಸಿದ ಮೊದಲ ಹೆಜ್ಜೆಯಾಗಿ ಗುರುತಿಸಲ್ಪಟ್ಟಿದೆ. </div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEhb083277U6Ahz_5WQzTTRDrLS099zdHEN-vtf0hb7XjdwoeXrEYTwFonCuJAlZ5Mk1eReGzyukB5_Z7rbfoVaO0pCp9if2OpbkIkSNrYgGnH56OBwqSyw48nxmZqhC4bh_J7QOMH9GIxkK/s1600/V-3.jpg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="1072" data-original-width="1600" height="214" src="https://blogger.googleusercontent.com/img/b/R29vZ2xl/AVvXsEhb083277U6Ahz_5WQzTTRDrLS099zdHEN-vtf0hb7XjdwoeXrEYTwFonCuJAlZ5Mk1eReGzyukB5_Z7rbfoVaO0pCp9if2OpbkIkSNrYgGnH56OBwqSyw48nxmZqhC4bh_J7QOMH9GIxkK/s320/V-3.jpg" width="320" /></a></div>
<div style="text-align: justify;">
ತನ್ನ ಶಿಷ್ಯ ವೃಂದದ ಯಾವುದೇ ವಿದ್ಯಾರ್ಥಿ ಪರಿಪೂರ್ಣ ಕಲಾವಿದೆಯಾಗದ ಹೊರತು, ಆಡಂಬರಕ್ಕಾಗಿ ರಂಗಪ್ರವೇಶದ ತರಾತುರಿಯನ್ನು ಬಯಸದ ಕಲಾವಿದೆಯರಲ್ಲಿ ಇವರು ಪೋಷಕರ ಮನ ಗೆಲ್ಲುತ್ತಾರೆ. ತಾಳ್ಮೆ, ಶಿಸ್ತು, ಸಂಯಮ, ಸಮಯ ಪ್ರಜ್ಞೆ ಹಾಗೂ ಪಾಲನೆ, ಅಕ್ಕರೆಯಿಂದ ಶಿಷ್ಯರೊಂದಿಗೆ ಬೆರೆವ ಇವರ ಸ್ನೇಹ ಶೀಲ ಸ್ವಭಾವ ಇವರ ವಿದ್ಯಾಸಂಸ್ಥೆಯ ಶ್ರೇಯಸ್ಸಿಗೆ ಕಾರಣವಾಗಿದ್ದರೆ, ಈಗಾಗಲೇ ಇವರ ಸಂಸ್ಥೆ ಇಪ್ಪತ್ತು ಸಂವತ್ಸರಗಳನ್ನು ಮುಗಿಸಿ, ಸಾವಿರಾರು ಕಲಾವಿದರನ್ನು ಕಲಾ ಜಗತ್ತಿಗೆ ನೀಡಿದೆ. ಜಿಲ್ಲೆಯ ಅತೀ ಕಿರಿಯ ನೃತ್ಯ ನಿರ್ದೇಶಕಿ ಎಂಬ ಹಿರಿಮೆಯಲ್ಲಿಯೇ ಇದುವರೆಗೆ ಒಂಭತ್ತು ವಿದ್ಯಾರ್ಥಿನಿಯರ ಯಶಸ್ವೀ ರಂಗ ಪ್ರವೇಶ ಮಾಡಿಸಿದ್ದಾರೆ. ಏಳು ವಿದ್ಯಾರ್ಥಿನಿಯರು ದೂರದರ್ಶನದ ಗ್ರೇಡೆಡ್ ಕಲಾವಿದೆಯರಾಗಿ, ಹತ್ತು ವಿದ್ಯಾರ್ಥಿನಿಯರು ವಿದ್ವತ್ ಮುಗಿಸಿ ವಿದುಷಿಯರಾಗಿದ್ದೇ ಅಲ್ಲದೇ, ನಾಲ್ಕು ಜನ ಪೂರ್ಣಾವಧಿಯ ನೃತ್ಯ ಶಿಕ್ಷಕಿಯರಾಗಿ ಕಲಾ ಕ್ಷೇತ್ರದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪರಿಪೂರ್ಣ ಕಲಾವಿದೆಯರ ಹೊಸ ತಂಡ, ’ಯಜ್ಞ’ವನ್ನು ನೃತ್ಯ ಲೋಕಕ್ಕೆ ಪರಿಚಯಿಸುವ ಪ್ರಯೋಗ ಶೀಲತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.</div>
<div style="text-align: justify;">
<br /></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEgNiwHLHMCSBdGaizKzGl_3a9NjCeLyh2Nc1olI3EB4cjfk_rY_d-S7uq-xG9L9ttBTwAyrQor1ClmTO5TgXeg7zEj-rbmVNrWl8pzpgepC4v9pSGRQddVUWNnlprD5rxZH8qfKpqEhLQg0/s1600/V-2.jpg" imageanchor="1" style="clear: right; float: right; margin-bottom: 1em; margin-left: 1em;"><img border="0" data-original-height="1063" data-original-width="1600" height="212" src="https://blogger.googleusercontent.com/img/b/R29vZ2xl/AVvXsEgNiwHLHMCSBdGaizKzGl_3a9NjCeLyh2Nc1olI3EB4cjfk_rY_d-S7uq-xG9L9ttBTwAyrQor1ClmTO5TgXeg7zEj-rbmVNrWl8pzpgepC4v9pSGRQddVUWNnlprD5rxZH8qfKpqEhLQg0/s320/V-2.jpg" width="320" /></a>ರಂಗ ನಿರ್ವಹಣೆ ಮತ್ತು ಪ್ರದರ್ಶನಗಳಲ್ಲೂ ಇವರು ಹೊಸತನದ ಹರಿಕಾರ. ಈವರೆಗೆ ೭೦೦ಕ್ಕೂ ಮಿಕ್ಕಿ ಏಕ ವ್ಯಕ್ತಿ ಹಾಗೂ ಸಮೂಹ ನೃತ್ಯಗಳ ಪ್ರಸ್ತುತಿಯನ್ನು ಮಾಡಿದ್ದಾರೆ. ’ಸತ್ಯಮೇವ ಜಯತೇ’, ’ಕನ್ನಡ ಸಾಹಿತ್ಯ-ನೃತ್ಯ ವೈಭವ’, ’ಕೃಷ್ಣ ಲೀಲೆ’, ’ಋತು ಶ್ರಂಗಾರ’, ’ವಿರಾಟಪರ್ವ’ ’ಜ್ವಾಲಾಮುಖಿ ಅಂಬೆ’, ’ದಶಾವತಾರಂ’, ’ನವರಸ ರಾಮಾಯಣ’, ’ಸಮನ್ವಯ’.... ಹೀಗೆ ಅನೇಕ ವಿನೂತನ ಹಾಗೂ ಅಪರೂಪದ ಪ್ರಸ್ತುತಿಗಳು ಇವರ ನಿರ್ದೇಶನದಲ್ಲಿ ಪ್ರಸ್ತುತಿಗೊಂಡು ಅಪಾರ ಪ್ರೇಕ್ಷಕರ ಮನಸೂರೆಗೊಂಡಿದ್ದು, ಈಗಾಗಲೇ ನೂರಾರು ಪ್ರದರ್ಶನಗಳನ್ನು ಕಂಡಿವೆ. ಮಂಗಳೂರಿಗೆ ಮೊದಲ ಬಾರಿಗೆ ಮತ್ತು ಏಕೈಕ ತಂಡವಾಗಿ ಒಡಿಸ್ಸಿ ಹಾಗೂ ಕಥಕ್ ನೃತ್ಯಪ್ರದರ್ಶನಗಳನ್ನು ನೀಡುತ್ತಿರುವ ಏಕೈಕ ಕಲಾವಿದೆ ಯೂ ಆಗಿ ಲಘು ಸಂಗೀತ ಹಾಗೂ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಗಳನ್ನೂ ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. </div>
<div style="text-align: justify;">
<br /></div>
</div>
Anonymoushttp://www.blogger.com/profile/07026221826810784770noreply@blogger.com1tag:blogger.com,1999:blog-6634091388019397795.post-19016063018879071112018-03-16T03:00:00.004-07:002018-03-16T03:01:20.821-07:00ನಮ್ಮದೇ ನೆರಳಾದ 'ನೆರಳು’<div dir="ltr" style="text-align: left;" trbidi="on">
<br />
<b><span style="color: magenta;">'ವಿಜಯ ಕರ್ನಾಟಕ'ದ ರಂಗ್ ಪುಟದಲ್ಲಿ ಮಾರ್ಚ್ ೧೩, ೨೦೧೮ರಂದು ಪ್ರಕಟಗೊಂಡ ಬರಹ </span></b><br />
<br />
<div style="text-align: justify;">
ಸುತ್ತಲೂ ತುಂಬಿಕೊಂಡಿರುವ ಸಮಾಜಘಾತುಕ ಶಕ್ತಿಗಳು ಎಷ್ಟೊಂದು ವ್ಯವಸ್ಥಿತವಾಗಿ ಅಸಹಾಯಕತೆಯನ್ನು ತಮ್ಮ ತಮ್ಮ ಮೂಗಿನ ನೇರಕ್ಕೆ ಉಪಯೋಗಿಸಿಕೊಂಡು ಬೇಳೆ ಬೇಯಿಸಿಕೊಳ್ಳಲೆತ್ನಿಸುತ್ತವೆ ಎಂಬುದನ್ನು ವಿವರಿಸಿದ ಏಕವ್ಯಕ್ತಿ ನಾಟಕ ’ನೆರಳು’ ಸುಮನಸಾ ಕೊಡವೂರು-ಉಡುಪಿ ಸಂಸ್ಥೆ ಆಯೋಜಿಸಿದ್ದ ರಂಗಹಬ್ಬದಲ್ಲಿ ಪ್ರಸ್ತುತಗೊಂಡು ನೆರೆದಿದ್ದವರ ಮನದಲ್ಲೊಂದು ಆರ್ದ್ರ ಭಾವಕ್ಕೆ ಕಾರಣವಾಯಿತು.</div>
<div style="text-align: justify;">
<br /></div>
<a href="https://blogger.googleusercontent.com/img/b/R29vZ2xl/AVvXsEgmYLNovlCJQBEPMiCzlWm5g3g_prGn-_FYjXqTWuq3vig_kcRta436dhx51mWr_Gunc3cbLj12K2IblA9dks8F7pnUt0AaFYpOAPpklruqSfNBM_fvrRvacRkbFPrfZsMRGgYSjReOXZd_/s1600/Neralu-1.jpg" imageanchor="1" style="clear: right; float: right; margin-bottom: 1em; margin-left: 1em; text-align: justify;"><img border="0" data-original-height="1067" data-original-width="1600" height="213" src="https://blogger.googleusercontent.com/img/b/R29vZ2xl/AVvXsEgmYLNovlCJQBEPMiCzlWm5g3g_prGn-_FYjXqTWuq3vig_kcRta436dhx51mWr_Gunc3cbLj12K2IblA9dks8F7pnUt0AaFYpOAPpklruqSfNBM_fvrRvacRkbFPrfZsMRGgYSjReOXZd_/s320/Neralu-1.jpg" width="320" /></a><br />
<div style="text-align: justify;">
ರಾಷ್ಟ್ರೀಯ ನಾಟಕಶಾಲೆ(ಬೆಂಗಳೂರು) ಪದವೀಧರ ಅಕ್ಷತ್ ಈ ಏಕವ್ಯಕ್ತಿ ನಾಟಕದಲ್ಲಿ ಹಾದು ಹೋಗುವ ಪಾತ್ರಗಳಿಗೆ ಜೀವ ತುಂಬಿದ್ದರು. ತಂಗಿಯನ್ನು ಜೀವವೇ ಎಂಬಂತೆ ಪ್ರೀತಿಸುವ ಅಣ್ಣ ವಿಶ್ವಾಸ್ ತನ್ನ ತಂಗಿ ಜೀವಿತಾಳ ಭವ್ಯ ಭವಿಷ್ಯದ ಬದುಕು ಕಟ್ಟುವ ದಾವಂತದಲ್ಲಿದ್ದಾಗ, ಅಕಸ್ಮಾತ್ ಆಗಿ ತಂಗಿ ಕಾಣೆಯಾಗುತ್ತಾಳೆ. ಪ್ರೀತಿಯ ತಂಗಿಯನ್ನು ಕಳೆದುಕೊಂಡು ಅಕ್ಷರಶ: ಅನಾಥನಂತಾದ ಅಣ್ಣ, ಆಕೆಯನ್ನು ಹುಡುಕುತ್ತಾ ಸಾಗುತ್ತಾನೆ. ಈ ಹುಡುಕಾಟದಲ್ಲಿ ಎದುರಾಗುವ ಘಟನೆಗಳೇ ಈ ಕಥೆಯ ಮುಖ್ಯ ವಸ್ತು.</div>
<br />
<div style="text-align: justify;">
<br /></div>
<div style="text-align: justify;">
ಇಂದಿನ ಸಮಾಜದಲ್ಲಿ ಎಲ್ಲಾ ವ್ಯವಸ್ಥೆಗಳು ಅಸಹಾಯಕರ ಪರವಾಗಿ ನಿಂತು ಸಹಾಯ ಹಸ್ತ ನೀಡಲೆಂದೇ ಇದ್ದರೂ, ಸಮಾಜದಲ್ಲಿ ಶೋಷಿತ ವರ್ಗ ಸದಾ ನಿರ್ಲಕ್ಷ್ಯ ಮತ್ತು ಅಪಮಾನಕ್ಕೊಳಗಾಗುತ್ತಲೇ ಇರುತ್ತದೆ. ತಂಗಿಯನ್ನು ಹುಡುಕ ಹೊರಡುವ ಅಣ್ಣನಿಗೆ ಎಲ್ಲಾ ಮುಖ ದರ್ಶನವಾಗುತ್ತದೆ. ಕಂಡ ಕಂಡ ಜನರನ್ನು ತಂಗಿಯ ಕಂಡಿರಾ ಎಂದು ಪ್ರಶ್ನಿಸುತ್ತಾನೆ. ಯಾರೋ ಕೊಟ್ಟ ಸಲಹೆಯ ಮೇರೆಗೆ ಪೋಲೀಸ್ ಸ್ಟೇಶನ್ ಮೆಟ್ಟಿಲು ಹತ್ತುತ್ತಾನೆ. ದೂರು ಕೊಡ ಹೋದ ಇವನನ್ನೇ ಕಳ್ಳನಂತೆ ನೋಡುವ ಅವರೂ, ತಂಗಿಯ ಶೀಲದ ಬಗ್ಗೆಯೇ ಶಂಕಿಸಿ ಚುಚ್ಚಿ ಮಾತಾಡುವುದು ಇವನಿಗೆ ಕಾದ ಸೀಸ ಕಿವಿಗೆರದ ಭಾವ!. ಮತ್ತಾರೋ ಹೇಳಿದರೆಂದು ರಾಜಕಾರಣಿಯೊಬ್ಬನ ಮನೆ ಬಾಗಿಲು ತಟ್ಟುತ್ತಾನೆ. ಇವನ ಜಾತಿಯಲ್ಲಿ ಮತಗಳು ಹೆಚ್ಚಿಲ್ಲ ಎಂಬುದನ್ನು ತಿಳಿಯುತ್ತಲೇ ರಾಜಕಾರಣಿಯೂ ಮುಖ ತಿರುಗಿಸುತ್ತಾನೆ. ಮತ್ತೊಂದು ಪಕ್ಷ ಸಿಕ್ಕಿದ್ದೇ ಸೀರುಂಡೆ ಎಂಬಂತೆ ಇವನನ್ನು ಬೆಂಬಲಿಸುವ ನಾಟಕವಾಡುತ್ತದೆ. ಬಣ್ಣ ಬಣ್ಣ್ನದ ಬಾವುಟದ ಯಾವ್ಯಾವುದೋ ಸಂಘಟನೆ ಗಳ, ತಮ್ಮೆಲ್ಲಾ ಸಿದ್ದಾಂತಗಳನ್ನು ಗಾಳಿಗೆ ತೂರಿ, ಸಿಗಬಹುದಾದ ಲಾಭಕ್ಕೆ ಇದನ್ನೇ ವಿಷಯವನ್ನಾಗಿಸಿ ಮುಷ್ಕರ, ಗಲಾಟೆಗಿಳಿಯುತ್ತಾರೆ. ದೃಶ್ಯ-ಮುದ್ರಣ ಮಾಧ್ಯಮಗಳೂ ಈ ವಿಷಯವನ್ನು ’ಬ್ರೇಕಿಂಗ್ ನ್ಯೂಸ್’ ಭರಾಟೆಯಲ್ಲಿ ನಡೆದಿರುವ ’ಸಾಧ್ಯತೆಗಳನ್ನು’ ತಾವೇ ನಿರ್ಧರಿಸುತ್ತಾ ಘಂಟೆಗಟ್ಟಲೇ, ದಿನಗಟ್ಟಲೇ ಸುದ್ದಿ ಮಾಡುತ್ತವೆ. ಕಾಣೆಯಾದವಳ ಇದ್ದ, ಇಲ್ಲದ ಇತಿಹಾಸ ಜಾಲಾಡುತ್ತಾರೆ, ತಮ್ಮ ತಮ್ಮದೇ ವಿರ್ಶಲೇಷಣೆಯಡಿಯಲ್ಲಿ ’ಆಕೆಗೂ, ಅಣ್ಣನಿಗೂ’ತಿಳಿಯದ ಅನೇಕ ಸಂಗತಿಗಳನ್ನು ಸೃಷ್ಟಿಸುತ್ತಾರೆ!!. ಅಯ್ಯಾ, ನನ್ನ ತಂಗಿಯನ್ನು ಹುಡುಕಿಕೊಡಿರೆಂಬ ಅಣ್ಣನ ಮಾತು ಯಾರಿಗೂ ಕೇಳುವುದೇ ಇಲ್ಲ. </div>
<div style="text-align: justify;">
<br /></div>
<a href="https://blogger.googleusercontent.com/img/b/R29vZ2xl/AVvXsEgxC_1oKwte-x39aGzBd5g7GIllypiQKDaPWBHqF1yeGiGvAImGr8-HaEzBP5A9nqRJCyP8mm5LoQp9fMd2sA3fdJXKZIVHn2zAdW5Fw8CKTlbNJ3gsafeAW4MC99c6oNmV8751j7YrSq69/s1600/neralu+-+2.jpg" imageanchor="1" style="clear: left; float: left; margin-bottom: 1em; margin-right: 1em; text-align: justify;"><img border="0" data-original-height="1600" data-original-width="1067" height="320" src="https://blogger.googleusercontent.com/img/b/R29vZ2xl/AVvXsEgxC_1oKwte-x39aGzBd5g7GIllypiQKDaPWBHqF1yeGiGvAImGr8-HaEzBP5A9nqRJCyP8mm5LoQp9fMd2sA3fdJXKZIVHn2zAdW5Fw8CKTlbNJ3gsafeAW4MC99c6oNmV8751j7YrSq69/s320/neralu+-+2.jpg" width="213" /></a><br />
<div style="text-align: justify;">
ಇಂತಹ ಪರಿಸ್ಥಿತಿಯನ್ನು ವ್ಯವಸ್ಥೆಗಳು ಹೇಗೆಲ್ಲಾ ಬಳಸಿಕೊಳ್ಳುತ್ತವೆ ಎಂಬುದನ್ನು ನಟ ಅಕ್ಷತ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಹಾಡಿಯಲ್ಲಿ ಕಂಡ ಶವ ತಂಗಿಯದೇ ಎಂಬ ಭಾವದಿಂದ ಹತಾಶೆ, ದು:ಖ, ಅಸಹಾಯಕತೆಯಿಂದ ಪಡುವ ವೇದನೆ, ದುಗುಡ ನಟನ ಸಾಮರ್ಥ್ಯವನ್ನು ಒರೆಗೆ ಹಚ್ಚಿ, ಅವನೊಳಗಿನ ಯಶಸ್ವೀ ನಟನನ್ನು ಹೊರ ತಂದಿದೆ. ರಾಜಕಾರಣಿಯಾಗಿ, ಪೋಲೀಸ್ ಆಗಿ, ಜನಸಾಮಾನ್ಯನಾಗಿ,ನಾಗರೀಕರಾಗಿ...ಹೀಗೆ ಇವನ ಹುಡುಕಾಟದಲ್ಲಿ ಬರುವ ಪ್ರತೀ ಪಾತ್ರಗಳಿಗೂ ಜೀವ ತುಂಬಿ, ತನ್ನ ಅಭಿನಯದ ಮೂಲಕ ಅಕ್ಷತ್ ಪರಿಣಾಮಕಾರಿಯಾಗಿ ತೋರಿಸಿದ್ದಾರೆ. ಇದು ಅಕ್ಷತ್ ರ ಮೊದಲ ಪ್ರಸ್ತುತಿಯಾದರೂ, ರಾಷ್ಟ್ರೀಯ ನಾಟಕ ಶಾಲೆಯ ತರಬೇತಿ ಮತ್ತು ಸಮರ್ಥ ಯುವ ನಿರ್ದೇಶಕ ವಿದ್ದು ಉಚ್ಚಿಲ್ ಅವರ ನಿರ್ದೇಶನದ ಪರಿಣಾಮ, ಓರ್ವ ಗಟ್ಟಿ ನಟನನ್ನು ಹೊರತರುವಲ್ಲಿ ಯಶಸ್ವಿಯಾಗಿದೆ. </div>
<br />
<div style="text-align: justify;">
<br /></div>
<a href="https://blogger.googleusercontent.com/img/b/R29vZ2xl/AVvXsEgqSYZEgbu84JepwbNhe0UH-C1hoqO_EsI3VX6gVVJJ6cGP5unh84G-wZKRFcK76K-9HqJVjSP4SL9bT5OCw79ogm_DjyebfAdc4EJOkGyMLWXqaePyjr9AIbGshW-UP0XmecJzAvZR-va1/s1600/Neralu+-+3.jpg" imageanchor="1" style="clear: right; float: right; margin-bottom: 1em; margin-left: 1em; text-align: justify;"><img border="0" data-original-height="428" data-original-width="316" height="200" src="https://blogger.googleusercontent.com/img/b/R29vZ2xl/AVvXsEgqSYZEgbu84JepwbNhe0UH-C1hoqO_EsI3VX6gVVJJ6cGP5unh84G-wZKRFcK76K-9HqJVjSP4SL9bT5OCw79ogm_DjyebfAdc4EJOkGyMLWXqaePyjr9AIbGshW-UP0XmecJzAvZR-va1/s200/Neralu+-+3.jpg" width="147" /></a><br />
<div style="text-align: justify;">
ಕೊನೆಗೂ ತಂಗಿ ಹೆಣವಾಗಿ ಸಿಗುತ್ತಾಳೆ. ಇಡೀ ಸಮಾಜ ತನ್ನ ತಂಗಿಯ ಹುಡುಕುವಿಕೆಗಿಂತ ಅದನ್ನೊಂದು ಸ್ವಲಾಭದ ವಿಷಯವಾಗಿ ಹೇಗೆ ಬಳಸಿಕೊಳ್ಳುವಲ್ಲಿ ಉತ್ಸುಕವಾಗಿತ್ತು ಎಂಬುದನ್ನು ತೋರಿಸುವ ಮೂಲಕ, ವರ್ತಮಾನದ ಸಮಾಜದ ತಲ್ಲಣಗಳನ್ನು ಸೂಕ್ಷ್ಮವಾಗಿ ಬಿಡಿಸಿಟ್ಟ ’ನೆರಳು’ವಿನಲ್ಲಿ ಕಂಡ ಒಂದೇ ಋಣಾತ್ಮಕ ಅಂಶವೆಂದರೆ, ಮೊದಲು ಹಾಡಿಯಲ್ಲಿ ಕಂಡ ಶವ ತಂಗಿಯದಲ್ಲವೆಂದ ನಂತರವೂ ಕೊನೆಯಲ್ಲಿ ಆಕೆಯ ಅಂತ್ಯವೇ ಎದುರಾಗುವುದು ನಿರಾಶೆಯ ಮೇಲೆ ಮತ್ತೆ ’ಕಾರ್ಮೋಡ ಕವಿದಂತೆ’ ಭಾಸವಾಯ್ತು. ಕೊನೆಗೂ ನಮ್ಮೊಂದಿಗೆ ಇರುವುದು ನಮ್ಮದೇ ’ನೆರಳು’ ಮಾತ್ರ ಎಂಬಂತೆ, ಇಂದಿನ ಸಮಾಜದಲ್ಲಿ ಇಂತಹ ಪ್ರಕರಣಗಳಲ್ಲಿ ಸಾಮಾನ್ಯ ಪ್ರಜೆ ಕೇವಲ ಸಮಯಸಾಧಕರ ಪಾಲಿಗೆ ’ವರ’ವಾಗುತ್ತಾ, ತಾನು ಮಾತ್ರ ಬಲಿಪಶುವಾಗುತ್ತಾನೆ ಎಂಬುದನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. </div>
<br />
<div style="text-align: justify;">
<br /></div>
<div style="text-align: justify;">
ನಟನಾಗಿ ಅಕ್ಷತ್ ಹೊಸ ಭರವಸೆ ಮೂಡಿಸದ್ದಾರೆ. ಎಂದಿನಂತೆ ಯುವ ನಿರ್ದೇಶಕ ವಿದ್ದು ಉಚಿಲ್ ಮತ್ತೊಂದು ’ನೆರಳು’ವಿನ ನಿರ್ದೇಶನದೊಂದಿಗೆ ವಿನೂತನ ಪರಿಕಲ್ಪನೆಯನ್ನೂ ಮಾಡಿ ಹೊಸ ಸಾಧ್ಯತೆಯ ನಿರಂತರ ಪ್ರಯೋಗದ ಮೂಲಕ ಮೆಚ್ಚುಗೆಯ ಕೆಲಸ ಮಾಡಿದ್ದರೆ, ವಿನೂತನ ಸಾಧ್ಯತೆಯೊಂದನ್ನು ಇಲ್ಲಿಗೂ ವಿಸ್ತರಿಸಿದ ಹೆಗ್ಗಳಿಕೆ ಅವರದ್ದು. ಸುಮನಸಾ ಕೊಡವೂರು ಪೃಸ್ತುತಿಯ ಈ ಏಕವ್ಯಕ್ತಿ ನಾಟಕಕ್ಕೆ, ಪ್ರವೀಣ್ ಕೊಡವೂರು ಬೆಳಕು ಹಾಗೂ ದಿವಾಕರ್ ಕಟೀಲ್ ಸಾಂಗತ್ಯ ದೊಂದಿಗೆ ಎಲ್ಲರೂ ಯಶಸ್ಸಿನ ಪಾಲುದಾರರು.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
</div>
Anonymoushttp://www.blogger.com/profile/07026221826810784770noreply@blogger.com1tag:blogger.com,1999:blog-6634091388019397795.post-35155981260716896672018-03-16T02:49:00.000-07:002018-03-16T03:07:36.602-07:00ರಂಗಭೂಮಿಯಲ್ಲಿ ರಂಗಾಯಣದ ‘ಶಿಕಾರಿ’<div dir="ltr" style="text-align: left;" trbidi="on">
<div dir="auto" style="background-color: white; color: #222222; font-family: arial, sans-serif; font-size: 12.8px;">
<br /></div>
<div dir="auto" style="background-color: white; color: #222222; font-family: arial, sans-serif; font-size: 12.8px;">
<div style="text-align: justify;">
<b>Prajavani..16.03.18 ರ ಕರಾವಳಿ ವಿಭಾಗದ ರಂಗಲಹರಿಯಲ್ಲ್ಲಿ ಪ್ರಕಟವಾದ ನನ್ನ ಬರಹ..... </b></div>
</div>
<div dir="auto" style="background-color: white;">
<div style="text-align: justify;">
<span style="color: #222222; font-family: arial, sans-serif;"><span style="font-size: 12.8px;">‘ಏನಿಲ್ಲವೆಂದರೂ ಬದುಕಬಹುದೇನೋ... ಆದರೆ ಪ್ರೀತಿ, ಗೆಳೆತನ, ಮಾನವೀಯ ಅಂತಃಕರಣ, ಸಹಾನುಭೂತಿ ಇಲ್ಲದ ಬದುಕು ಸಾಧ್ಯವೇ? ಇವಿಲ್ಲವಾದರೆ ಬದುಕಬೇಕಾದರೂ ಯಾಕೆ?’ </span></span></div>
<div style="text-align: justify;">
<span style="color: #222222; font-family: arial, sans-serif;"><span style="font-size: 12.8px;"><br /></span></span></div>
<div style="text-align: justify;">
<span style="color: #222222; font-family: arial, sans-serif;"><span style="font-size: 12.8px;">–ಇದು ಯಶವಂತ ಚಿತ್ತಾಲರು ತಮ್ಮ ಕಾದಂಬರಿ ‘ಶಿಕಾರಿ’ಯ ಮೂಲಕ ಪದೇಪದೇ ಎತ್ತುವ ಪ್ರಶ್ನೆ.</span></span></div>
<div style="text-align: justify;">
<br /></div>
<div style="text-align: justify;">
<span style="color: #222222; font-family: arial, sans-serif;"><span style="font-size: 12.8px;">ತನ್ನ ಸ್ವಸಾಮರ್ಥ್ಯದಿಂದ ವೃತ್ತಿ ಜೀವನದ ಔನ್ನತ್ಯದ ನಾಗಾಲೋಟದಲ್ಲಿರುವ ವ್ಯಕ್ತಿಯೊಬ್ಬ ತನ್ನ ಸುತ್ತಲಿನ ವಾತಾವರಣದ ಮೇಲೊಂದು ಕಣ್ಣಿಟ್ಟಿರದೇ ಅಜಾಗೃತನಾದಾಗ ಸಂಭವಿಸಬಹುದಾದ ಅವನತಿಯ ಸುತ್ತ ಹೆಣೆದ ವಿಶಿಷ್ಟ ಕಾದಂಬರಿ ‘ಶಿಕಾರಿ’. ಇದನ್ನು ರಂಗದ ಮೇಲೆ ತರುವ ಕಠಿಣ ಸವಾಲನ್ನು ಸ್ವೀಕರಿಸಿ, ಯಶಸ್ವಿಯಾದವರು ಹಿರಿಯ ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿಯವರಾದರೆ, ನಿರ್ದೇಶಕರ ಪರಿಶ್ರಮಕ್ಕೆ ತಕ್ಕ ಫಲಿತಾಂಶ ನೀಡುವ ಮೂಲಕ ಮೂರು ಗಂಟೆಗಳ ಸುದೀರ್ಘ ನಾಟಕಕ್ಕೆ ಜೀವ ತುಂಬಿದವರು ಮೈಸೂರು ರಂಗಾಯಣದ ಹಿರಿಯ ಕಲಾವಿದರು.</span></span></div>
<div style="text-align: justify;">
<br /></div>
<a href="https://blogger.googleusercontent.com/img/b/R29vZ2xl/AVvXsEhotXt7tDcu2PDjUp73NrknFE8AABz55ZFGHuR31tTgo-s8hZyjSBdBH2tvZkfiPOm2BlYPugMjg7sEctoTokU-iA-naBz6j1ZGY8MSGAuZJDDYPzkuokDGlVVU8uhc94QtE4sVp2EpSmsz/s1600/Shikari+-+1.jpg" imageanchor="1" style="clear: right; float: right; margin-bottom: 1em; margin-left: 1em; text-align: justify;"><img border="0" data-original-height="1067" data-original-width="1600" height="213" src="https://blogger.googleusercontent.com/img/b/R29vZ2xl/AVvXsEhotXt7tDcu2PDjUp73NrknFE8AABz55ZFGHuR31tTgo-s8hZyjSBdBH2tvZkfiPOm2BlYPugMjg7sEctoTokU-iA-naBz6j1ZGY8MSGAuZJDDYPzkuokDGlVVU8uhc94QtE4sVp2EpSmsz/s320/Shikari+-+1.jpg" width="320" /></a><span style="color: #222222; font-family: arial, sans-serif;"></span><br />
<div style="text-align: justify;">
<span style="color: #222222; font-family: arial, sans-serif;"><span style="font-size: 12.8px;">ಕರಾವಳಿ ಭಾಗಕ್ಕೆ ರಂಗಾಯಣದ ನಾಟಕಗಳು ಬರುವುದೇ ಅಪರೂಪ. ಆರು ವರ್ಷಗಳಿಂದ ಉಡುಪಿಯಲ್ಲಿ ರಂಗಹಬ್ಬವನ್ನು ಆಚರಿಸುತ್ತಿರುವ ಉಡುಪಿಯ ಸುಮನಸಾ ಕೊಡವೂರು ಸಂಸ್ಥೆ ಈ ಬಾರಿ ಆಯೋಜಿಸಿದ್ದ ನಾಟಕೋತ್ಸವದಲ್ಲಿ ಮೈಸೂರು ರಂಗಾಯಣ ಕಲಾವಿದರು ಅಭಿನಯಿಸಿದ ‘ಶಿಕಾರಿ’ ಪ್ರದರ್ಶನಕಂಡು, ರಂಗಾಸಕ್ತರಿಗೆ ರಸದೌತಣ ನೀಡಿತು.</span></span></div>
<br />
<div style="text-align: justify;">
<span style="color: #222222; font-family: arial, sans-serif; font-size: 12.8px;">ಕಾರ್ಪೋರೆಟ್ ಜಗತ್ತಿನ ಅನೇಕ ಒಳ ತಿರುಳುಗಳನ್ನು ಅರಿತ ಉದ್ಯೋಗಿಯೊಬ್ಬ ತನ್ನ ಸಾಮರ್ಥ್ಯದಿಂದ ಹಂತ ಹಂತವಾಗಿ ವೃತ್ತಿಯಲ್ಲಿ ಔನ್ನತ್ಯ ಸಾಧಿಸುತ್ತಾ, ತನ್ನ ಸಾಮರ್ಥ್ಯವೇ ತನ್ನ ಶಕ್ತಿ ಎಂದುಕೊಂಡಿರುತ್ತಾನೆ. ಆದರೆ, ವ್ಯಾವಹಾರಿಕವಾದ ಅವನ ಕನಿಷ್ಠ ಜ್ಞಾನ ಎಂತ ಬೆಲೆ ತೆರುವಂತೆ ಮಾಡಬಲ್ಲುದು ಎಂಬುದನ್ನು ಕತೆ ಎಳೆಎಳೆಯಾಗಿ ತೆರೆದಿಡುತ್ತಾ ಸಾಗುತ್ತದೆ.</span></div>
<div style="text-align: justify;">
<span style="color: #222222; font-family: arial, sans-serif; font-size: 12.8px;">ಮೂರು ಗಂಟೆಗಳ ‘ಶಿಕಾರಿ’ ನಾಟಕ ಪ್ರೇಕ್ಷಕರಿಗೆ ಇಡೀ ಕಾರ್ಪೋರೆಟ್ ಜಗತ್ತನ್ನೇ ಪರಿಚಯಿಸಿದ್ದು ಅಚ್ಚರಿ. ನಾಗಪ್ಪ ಎಂಬ ಒಬ್ಬ ಸಾಮಾನ್ಯ ನೌಕರ, ಸ್ವ–ಸ್ವಾಮರ್ಥ್ಯದಿಂದ ಕಂಪನಿಯೊಂದರಲ್ಲೆ ಉನ್ನತ ಪದವಿ ಪಡೆಯುತ್ತಲೇ ಸಾಗುತ್ತಾನೆ. ನಾಗಪ್ಪನ ಬಾಲ್ಯ ಕರಾಳ ನೆನಪುಗಳ ಆಗರ. ಆ ನೆನಪನ್ನು ಆತ ಮರೆಯಲೆತ್ನಿಸಿದರೂ, ಅವನ ಉನ್ನತಿ ಸಹಿಸದ ಒಂದು ವರ್ಗ, ಅವನದ್ದೇ ಕಂಪನಿಯೊಳಗೆ ಹುಟ್ಟಿಕೊಳ್ಳುತ್ತದೆ. ವ್ಯವಸ್ಥಿತವಾಗಿ ಅವರು ಹೆಣೆದ ಪರಿಸ್ಥಿತಿಯ ಕೈಗೊಂಬೆಯಾಗುವಂತೆ ವ್ಯೂಹದೊಳಗೆ ನಾಗಪ್ಪ ಬಂಧಿಯಾಗುತ್ತಲೇ ಸಾಗುತ್ತಾನೆ.</span></div>
<div style="text-align: justify;">
<br /></div>
<div style="text-align: justify;">
<span style="color: #222222; font-family: arial, sans-serif;"><span style="font-size: 12.8px;">ನಾಗಪ್ಪ ಬೆಳೆಯುತ್ತಾನೆ ನಿಜ. ಆದರೆ, ಆ ಅವಸರದಲ್ಲಿ ಆತ ವ್ಯಾವಹಾರಿಕವಾಗಿ ಸಂಪೂರ್ಣ ಸೋತಿರುತ್ತಾನೆ. ತನ್ನದೇ ಸಾಮರ್ಥ್ಯದ ಅನೇಕ ರಹಸ್ಯಗಳನ್ನೂ ತನ್ನ ಆಪ್ತರೆಂದು ನಂಬಿದವರಲ್ಲೆಲ್ಲಾ ಬಿಟ್ಟು ಕೊಡುತ್ತಾನೆ. ಅವನೊಳಗೆ ಅವನ ಅರಿವಿಗೆ ಬಾರದೆಯೂ ಮಾನವ ಸಹಜ ದೌರ್ಬಲ್ಯಗಳು, ಅದಕ್ಕಿಂಬು ನೀಡುವಂತೆ ಒದಗುವ ಕೆಲ ದುರ್ಬಲ ಕ್ಷಣಗಳು ಉರುಳಾಗುತ್ತವೆ. ಇನ್ನೇನು, ಔನ್ನತ್ಯದ ಶಿಖರದಲ್ಲಿ ನಾಗಪ್ಪನ ಪ್ರತಿಷ್ಠೆ ಆಗಬೇಕು ಎಂಬಷ್ಟರಲ್ಲಿ ಅವನೊಳಗಿದ್ದ ಎಲ್ಲಾ ಸಾಮರ್ಥ್ಯಗಳೂ ವಿರೋಧಿಗಳು ಉರುಳಿಸಿದ ದಾಳಕ್ಕೆ ಧೂಳೀಪಟವಾಗುತ್ತಾ, ಅವನ ಜನ್ಮ ಜಾಲಾಡುವಷ್ಟೂ ಕಠೋರವಾಗುತ್ತವೆ.</span></span></div>
<div style="text-align: justify;">
<br /></div>
<div style="text-align: justify;">
<span style="color: #222222; font-family: arial, sans-serif;"><span style="font-size: 12.8px;">ನಾಗಪ್ಪನ ಜನನದ ಮೂಲ, ಸಮಾಜ ಒಪ್ಪಿರದ ಅವನ ಬಾಲ್ಯ, ನಿರ್ದಿಷ್ಟ ಜಾತಿಯ ಆವರಣ ಇಲ್ಲದ ಅವನ ಬದುಕು, ದುರ್ಬಲ ಕ್ಷಣದಲ್ಲಿನ ಅವನದೇ ಆದ ದಾಖಲಾಗಬಾರದೆಯೂ ದಾಖಲಾಗದ ಹೇಳಿಕೆಗಳು, ವಯೋಸಹಜ ಆಕರ್ಷಣೆಯಿಂದಾದ ಪ್ರೇಮ, ಪರಿಸ್ಥಿತಿ ವಿರೋಧವಾದಾಗ ಅದೂ ಮುಳ್ಳಾಗುವ ರೀತಿ... ಎಲ್ಲವೂ ಅವನನ್ನು ಬಂಧಿಸುತ್ತಲೇ ಸಾಗುತ್ತವೆ. ಎಲ್ಲವನ್ನೂ ಸತ್ಯವೇ ಎಂದು ಭಾವಿಸುವ ನಾಗಪ್ಪ, ಎಲ್ಲರಲ್ಲೂ ವಿಶ್ವಾಸವಿಡುತ್ತಾನೆ. ಆದರೆ, ಒಂದೊಂದಾಗಿ ವಿಶ್ವಾಸದ ಪರದೆ ಕಳಚಿದಾಗ ವಿಹ್ವಲನಾಗುತ್ತಾನೆ.</span></span></div>
<div style="text-align: justify;">
<br /></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgI9ICskbOPg2E5CBO0hUEPPBXWZjayZCbVhIb-WihlFi3myyhfFz9nj38Zgi5qHLF29qBfGtKtOHvxZlbbh7ulV7PA-P8uSwPgSz4rEYz2dTS0lI0IOuijVtq8pkbCzokHO8Dbk3ZctJMq/s1600/Shikari+-+2.jpg" imageanchor="1" style="clear: left; float: left; margin-bottom: 1em; margin-right: 1em; text-align: justify;"><img border="0" data-original-height="1067" data-original-width="1600" height="213" src="https://blogger.googleusercontent.com/img/b/R29vZ2xl/AVvXsEgI9ICskbOPg2E5CBO0hUEPPBXWZjayZCbVhIb-WihlFi3myyhfFz9nj38Zgi5qHLF29qBfGtKtOHvxZlbbh7ulV7PA-P8uSwPgSz4rEYz2dTS0lI0IOuijVtq8pkbCzokHO8Dbk3ZctJMq/s320/Shikari+-+2.jpg" width="320" /></a></div>
<div style="text-align: justify;">
<span style="color: #222222; font-family: arial, sans-serif;"><span style="font-size: 12.8px;">ನಮ್ಮ ಎಲ್ಲಾ ವ್ಯವಹಾರಗಳ ಅಡಿಗೆ, ಸಾಮಾಜಿಕ ನಡವಳಿಕೆಯ ಕೆಳಗೆ ಕೆಲಸ ಮಾಡುವ ಶಕ್ತಿ ಎಂಬುದಿದ್ದರೆ ಅದು ಕೇವಲ ‘ಸ್ವಾರ್ಥ’ ಎಂಬ ಸತ್ಯ ದರ್ಶನ ನಾಗಪ್ಪನಿಗೆ ಆಗುವಾಗ ಪರಿಸ್ಥಿತಿ ಕೈ ಮೀರಿರುತ್ತದೆ. ಕೊನೆಗೂ ಸತ್ಯ ಗೆಲ್ಲುತ್ತದಾ? ಎಂಬ ಆಶಾದಾಯಕ ವಾತಾವರಣ ನಿರ್ಮಾಣವಾಗುವಾಗ ನಾಗಪ್ಪನಿಗೆ ಆ ಗೆಲುವೂ ಬೇಡವಾಗಿರುತ್ತದೆ!</span></span></div>
<div style="text-align: justify;">
<br /></div>
<div style="text-align: justify;">
<span style="color: #222222; font-family: arial, sans-serif;"><span style="font-size: 12.8px;">ಆಧುನಿಕ ಜಗತ್ತು ಸೃಷ್ಟಿಸುವ ಸಂಕೀರ್ಣ ಜಗತ್ತು ತಲ್ಲಣ ಹುಟ್ಟಿಸುವ ಗೊಂಡಾರಣ್ಯವಾದರೆ ಏನಾದೀತು ಎಂಬುದನ್ನು ಚಿತ್ರಿಸುವ ಕಾದಂಬರಿ ರಂಗರೂಪಕ್ಕೆ ಬರುವಾಗ ಗಟ್ಟಿತನ ಕಳೆದುಕೊಳ್ಳುವ ಅಪಾಯವಿದೆ. ಆದರೆ, ಇಲ್ಲಿ ಪ್ರತಿಯೊಂದೂ ಸಮರ್ಥವಾಗಿ ಪ್ರತಿಪಾದಿತವಾಗಿದೆ. ನಾಗಪ್ಪನ ಪಾತ್ರದ ಮೂಲಕ ಮನುಷ್ಯತ್ವದ ಅಂತಿಮ ಲಕ್ಷಣವೊಂದೇ ಅನ್ಯಾಯಕ್ಕೆ ಬಗ್ಗದೇ ಇರುವುದು. ಅದರ ವಿರುದ್ಧ ಹೋರಾಡುವುದು. ಸತ್ತರೂ ಅಡ್ಡಿ ಇಲ್ಲ, ಸೋಲೊಪ್ಪಲಾರೆ ಎಂಬ ಸ್ವಾಭಿಮಾನವೇ ಸ್ಥಾಯಿಯಾಗುವುದು ಮುಖ್ಯವೆನಿಸುತ್ತದೆ.</span></span></div>
<div style="text-align: justify;">
<br /></div>
<div style="text-align: justify;">
<span style="color: #222222; font-family: arial, sans-serif;"><span style="font-size: 12.8px;">ರಂಗಾಯಣದ ಪ್ರತಿ ನಟನರು ಪ್ರಬುದ್ಧತೆ ಮೂಲಕ ಗೆಲ್ಲುತ್ತಾರೆ. ಕಾರ್ಪೋರೆಟ್ ಜಗತ್ತು ಇಂದು (ಹಿಂದಿನಿಂದಲೂ) ಹಲವಾರು ವಿಸ್ಮಯಗಳ ಸಾಗರದಂತಾಗಿದೆ. ಇಲ್ಲಿ ಜಾಣ್ಮೆ ಮತ್ತು ವ್ಯಾವಹಾರಿಕ ಜಾಣ್ಮೆಗಳೆರಡೂ ಸಮಾನವಾಗಿದ್ದರಷ್ಟೇ ಬದುಕಲು ಸಾಧ್ಯ. ರಂಗಭೂಮಿಯ ವಿಶೇಷತೆ ಎಂದರೆ, ಅದರಲ್ಲಿನ ಪ್ರಬುದ್ಧ ನಟರು ಕಾಲಕ್ಕೆ ತಕ್ಕಂತೆ, ಕಾಲ-ಲಿಂಗ-ಸ್ಥಿತ್ಯಂತರ ಬೇಧವಿಲ್ಲದೇ ಪಾತ್ರಗಳಲ್ಲಿ ಲೀನರಾಗುವ ಪರಿ. ಇತಿಹಾಸ, ಪೌರಾಣಿಕ, ಸಾಮಾಜಿಕ ಅಥವಾ ಇತ್ತೀಚೆಗೆ ಹೆಚ್ಚು ಜನಾಕರ್ಷಿಸುವ ನಗೆನಾಟಕಗಳು ಹೀಗೆ ಎಲ್ಲಾ ರೀತಿಯ ಕತೆಗಳಲ್ಲೂ ಪಾತ್ರವಾಗುವ ನಟರು, ‘ಶಿಕಾರಿ’ಯಂತಹ ನಾಟಕದ ಬೇರೆಯದೇ ಆದ ಲೋಕದಲ್ಲೂ ಎಲ್ಲೂ ಸೋಲದಿದ್ದುದು ಅಚ್ಚರಿ.</span></span></div>
<a href="https://blogger.googleusercontent.com/img/b/R29vZ2xl/AVvXsEjWxTQ8PGzEa0APDQ8jKpraSkKAB_oviTHzQBXdf4g_i_gpYlgAmx8O5UKQVqASHZAdm_cJDGZGmMP6twv4z0y4TFWkylGwqrkpukTPVGrCopdaBbyt9d49p3EPVGjClr-17ipNqxoz7sEh/s1600/Shikari+-+3.jpe" imageanchor="1" style="clear: left; float: left; margin-bottom: 1em; margin-right: 1em; text-align: justify;"><img border="0" data-original-height="481" data-original-width="719" height="213" src="https://blogger.googleusercontent.com/img/b/R29vZ2xl/AVvXsEjWxTQ8PGzEa0APDQ8jKpraSkKAB_oviTHzQBXdf4g_i_gpYlgAmx8O5UKQVqASHZAdm_cJDGZGmMP6twv4z0y4TFWkylGwqrkpukTPVGrCopdaBbyt9d49p3EPVGjClr-17ipNqxoz7sEh/s320/Shikari+-+3.jpe" width="320" /></a><span style="color: #222222; font-family: arial, sans-serif; font-size: 12.8px;"></span><br />
<div style="text-align: justify;">
<span style="font-size: 12.8px;">‘ಈ ದಿನವನ್ನು ಎಲ್ಲಾ ಪ್ರಾಮಾಣಿಕ ಅರ್ಥಗಳಲ್ಲೂ ಸಾರ್ಥಕವಾಗಿ, ಸದ್ಭಳಕೆ ಮಾಡಿಕೊಳ್ಳದಿದ್ದರೆ ಎಷ್ಟೊಂದು ನಾಳೆಗಳಿದ್ದು ಏನು ಪ್ರಯೋಜನ?’ ಎನ್ನುವ ನಿರಂತರವಾಗಿ ಮನುಷ್ಯನನ್ನು ಕಾಡುವ ಪ್ರಶ್ನೆಯೇ ಮತ್ತೆ ಮತ್ತೆ ಎದುರಾಗುವಂತೆ ಹೆಣೆದ ಕಾದಂಬರಿ ‘ಶಿಕಾರಿ’ ರಂಗದ ಮೇಲೂ ಇದೇ ಪ್ರಶ್ನೆ ಹುಟ್ಟಿಸುವಲ್ಲಿ ಯಶಸ್ವಿಯಾಯಿತು.</span></div>
<br />
<div style="text-align: justify;">
<br /></div>
<div style="text-align: justify;">
<span style="color: #222222; font-family: arial, sans-serif;"><span style="font-size: 12.8px;">ಇಡೀ ನಾಟಕವನ್ನು ವ್ಯಾಪಿಸಿಕೊಂಡಿರುವ ‘ಸಾಕ್ಷಿ’ಯಾದ ನಂದಿನಿ ಕೆ.ಆರ್. ಮತ್ತು ನಾಗಪ್ಪನಾಗಿ ಹುಲುಗಪ್ಪ ಕಟ್ಟೀಮನಿ, ವಿಶಿಷ್ಟ ಪಾತ್ರವಾಗಿ ನಗೆಯ ಬುಗ್ಗೆ ಚಿಮ್ಮಿಸುತ್ತಲೇ ಕಾಣದ ಮುಖದ ಹಿಂದಿನ ಸತ್ಯದ ಶ್ರೀನಿವಾಸ ರಾವ್ ಪಾತ್ರದಲ್ಲಿ ಕೃಷ್ಣಕುಮಾರ್ ನಾರ್ಣಕಜೆ, ಕಾರ್ಪೋರೆಟ್ ಕಂಪನಿಯ ಗತ್ತು ಗೈರತ್ತನ್ನೇ ಮೈವೆತ್ತಂತೆ ನಟಿಸಿದ ಜಗದೀಶ್ ಮನವಾರ್ತೆ, ಫಿರೋಜ್ ಬಂದೂಕ್ ವಾಲಾನಾಗಿ, ಇಡೀ ನಾಟಕದ ಸೂತ್ರಧಾರನಾಗಿ ನಾಟಕ ಗೆಲ್ಲಿಸುವಲ್ಲಿ ಮಹತ್ವದ ಪಾತ್ರವಹಿಸಿದ ಪ್ರಶಾಂತ್ ಹಿರೇಮಠ್... ಹೀಗೆ ನಾಟಕಕ್ಕೆ ಜೀವಾಳವಾದ ಎಲ್ಲಾ ನಟರೂ ಅಭಿನಂದನಾರ್ಹರು.</span></span></div>
<div style="text-align: justify;">
<br /></div>
<a href="https://blogger.googleusercontent.com/img/b/R29vZ2xl/AVvXsEgDwugvJu7WTvwIhKgPI8pQk4Mt1POkMlDRz3eRhYgewvZMYMLF2p5u9EQ2iv9P0HsdmcUf8mp86LqAMjZqmGt3GAaSMuip8tH_93O0q5rgcCDCtCj1NI8rtnzQh9kPDa0yBbug7ZaKzbpK/s1600/Shikari+-+4.jpg" imageanchor="1" style="clear: right; float: right; margin-bottom: 1em; margin-left: 1em; text-align: justify;"><img border="0" data-original-height="675" data-original-width="1200" height="179" src="https://blogger.googleusercontent.com/img/b/R29vZ2xl/AVvXsEgDwugvJu7WTvwIhKgPI8pQk4Mt1POkMlDRz3eRhYgewvZMYMLF2p5u9EQ2iv9P0HsdmcUf8mp86LqAMjZqmGt3GAaSMuip8tH_93O0q5rgcCDCtCj1NI8rtnzQh9kPDa0yBbug7ZaKzbpK/s320/Shikari+-+4.jpg" width="320" /></a><span style="color: #222222; font-family: arial, sans-serif;"></span><br />
<div style="text-align: justify;">
<span style="color: #222222; font-family: arial, sans-serif;"><span style="font-size: 12.8px;">ಹಿರಿಯ ನಟ ರಾಮು, ಕೃಷ್ಣ ಪ್ರಸಾದ್ ಎಂ.ಸಿ., ವಿನಾಯಕ ಭಟ್ ಹಾಸಣಗಿ, ಮಹಾದೇವ್, ಗೀತಾ ಮೊಂಟಡ್ಕ, ಶಶಿಕಲಾ ಎನ್., ಪ್ರಮೀಳಾ ಬೆಂಗ್ರೆ, ನೂರ್ ಅಹಮದ್ ಶೇಖ್, ವನಿತಾ ಎಸ್.ಎಸ್., ಲಕ್ಷ್ಮೀ ವಿ., ಹೊಯ್ಸಳ, ಪ್ರದೀಪ್ ಬಿ.ಎಂ., ಬೋಪಣ್ಣ ಹೀಗೆ ಎಲ್ಲ ಕಲಾವಿದರೂ ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದರು. ನಾಟಕಕ್ಕೆ ಎಚ್.ಕೆ.ದ್ವಾರಕಾನಾಥ್ ರಂಗವಿನ್ಯಾಸವಿದ್ದು, ಪವನ್ ಕೆ.ಜೆ. ಅವರ ಸಂಗೀತ ಮತ್ತು ಮಹೇಶ್ ಕಲ್ಲತ್ತಿ ಅವರ ಬೆಳಕು ‘ಶಿಕಾರಿ’ಯ ಯಶಸ್ಸಿನ ಹಿಂದಿನ ಶಕ್ತಿಗಳು. ಸಂಕೀರ್ತಿ ಐಪಂಜಗುಳಿ ಅವರ ವಸ್ತ್ರ ವಿನ್ಯಾಸ ಗಮನ ಸೆಳೆಯಿತು</span></span></div>
</div>
</div>
Anonymoushttp://www.blogger.com/profile/07026221826810784770noreply@blogger.com0tag:blogger.com,1999:blog-6634091388019397795.post-18360353847616158662015-08-13T01:11:00.003-07:002015-08-13T01:11:31.402-07:00 ಸಮಾಧಿಯೊಳಗಿನ ಪ್ರಶ್ನೆ ...!!!<div dir="ltr" style="text-align: left;" trbidi="on">
<b><span style="color: blue;">ಇತ್ತೀಚೆಗೆ ಬರೆದ ಕವನ..... ಸತ್ಯವಿರಬಹುದೇನೋ....</span></b><br />
<div class="separator" style="clear: both; text-align: center;">
</div>
<br />
<br />
<br />
ಅಲ್ಲಿ...<br />
ಯಾರದ್ದೋ ಸಮಾಧಿ ಮೇಲೆ<br />
ಎದ್ದು ನಿಂತಿದೆ ಬಂಗಲೆ-<br />
ಇಂದದರ ಪ್ರವೇಶವಂತೆ!!<br />
ಸಂಭ್ರಮವೋ ಸಂಭ್ರಮ!<br />
ಒಳಗಿನ ಆತ್ಮ ಕಣ್ಣುಜ್ಜಿ<br />
ಕಣ್ತೆರೆದು ಹೊರ ನೋಡುತಿತ್ತು<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEjDPLO18DkIH9GT97sFC8F3GjKQatDIdu4Xqg3N-V6CKSUgqPmpiJdF3PCnxKf7xWCnAvfSMQ3W1sq-RcfD-tVmd25YeRnLQPxoP6RrC8I_Ynybyzqz_wsfLBnJWZr56VCrOVtZe4pTZU7H/s1600/crying-eye-3724145.jpg" imageanchor="1" style="clear: right; float: right; margin-bottom: 1em; margin-left: 1em;"><img border="0" height="190" src="https://blogger.googleusercontent.com/img/b/R29vZ2xl/AVvXsEjDPLO18DkIH9GT97sFC8F3GjKQatDIdu4Xqg3N-V6CKSUgqPmpiJdF3PCnxKf7xWCnAvfSMQ3W1sq-RcfD-tVmd25YeRnLQPxoP6RrC8I_Ynybyzqz_wsfLBnJWZr56VCrOVtZe4pTZU7H/s200/crying-eye-3724145.jpg" width="200" /></a></div>
ಇವರಲ್ಲವೇ ಮಣ್ಣು ಮಾಡುವಾಗ<br />
ಅತ್ತವರು-ಜಗ ಬಿರಿಯುವಂತೆ!!<br />
ಅಲ್ಲಿ...<br />
ಬಂಗಲೆಯ ತುತ್ತ ತುದಿಯಲ್ಲಿ<br />
ಕುಳಿತಿದ್ದ ಕಾಗೆಯನು ಕಂಡರಾರೋ!<br />
ಎಸೆದು ಬಿಡಿ ಒಂದು ತುತ್ತು<br />
ಸಮಾಧಾನವಾಗಲಿ ಆತ್ಮ...!<br />
ಮತ್ತೆ ಬಡಿಸೋಣ ಭೂರಿ<br />
ಭೋಜನವ ನಮ್ಮೆಲೆಗೆ!!<br />
ಅಲ್ಲಿ...<br />
ಆತ್ಮ ನಕ್ಕಿತು, ತನ್ನವರ ಕುಟಿಲತೆಗೆ<br />
ಅಲುಗಾಡಲಾರದೇ ಬಂಗಲೆಯ<br />
ಗಟ್ಟಿ ತಳಪಾಯದೊಳಗೆ!!<br />
ಕಣ್ಮುಚ್ಚಿತು ಮತ್ತೆಂದೂ<br />
ತಪ್ಪಿಯೂ ತೆರೆಯದ ಹಾಗೆ!<br />
<br />
<br /></div>
Anonymoushttp://www.blogger.com/profile/07026221826810784770noreply@blogger.com0tag:blogger.com,1999:blog-6634091388019397795.post-92211178342067876282015-06-15T22:17:00.003-07:002015-06-15T22:17:29.715-07:00ವ್ಯತ್ಯಾಸಗಳು---ಹೀಗೇ ಟೈಂ ಪಾಸ್ <div dir="ltr" style="text-align: left;" trbidi="on">
<div style="text-align: justify;">
<b><span style="color: blue;">ಕಡತದಲ್ಲಿ ಹುಡುಕಿದಾಗ ಎಂದೋ ಬರೆದಿದ್ದ ಒಂದು ಚಿಕ್ಕ ಬರಹ ಕಾಣಿಸಿತು... ಬ್ಲಾಗ್ ಸಂಗ್ರಹಕ್ಕಿಳಿಸಿದ್ದೇನೆ... ಓದಿ ಬಿಡಿ.. </span></b></div>
<div style="text-align: justify;">
ನೈಜತೆ:-</div>
<div style="text-align: justify;">
ಬೆಂಗಳೂರಿನ ಮಹಿಳೆಯ ಹ್ರದಯವೊಂದು ಚೆನ್ನೈನಯುವಕನೋರ್ವನ ಬದುಕನ್ನು ಹಸನುಗೊಳಿಸಿದ ಘಟನೆ ನಾವು ಓದಿದ್ದೇವೆ. ಇನ್ನೂ ವಿಶೇಷ ಎಂದರೆ ಹ್ರದಯ, ಕಿಡ್ನಿ, ಕಣ್ಣು ಮತ್ತು ಲಿವರ್ ಗಳ ಮೂಲಕ ಆ ಮಹಿಳೆ ಆರುಜನರಿಗೆ ಹೊಸ ಜೀವನ ಕೊಟ್ಟಿದ್ದಾಳೆ.ಒಂದುತ್ಯಾಗಕ್ಕಿರುವ ಶಕ್ತಿ ಮತ್ತು ಮಹತ್ವವನ್ನು ಈ ಘಟನೆ ಹೇಳುತ್ತದೆ.ಅದರಲ್ಲೂ ಓರ್ವ ಮಹಿಳೆ ಈ ರೀತಿಯ ಉದಾತ್ತತೆ ಮೆರೆದಿದ್ದಾಳೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ.</div>
<div style="text-align: justify;">
<br /></div>
<div style="text-align: justify;">
ಕಣ್ಣುತೆರೆಸಿದ ಈ ಘಟನೆಯ ಜೊತೆಗೆ ಒಂದು ದೃಷ್ಟಾಂತ ಮತ್ತು ಕೊನೆಯಲ್ಲಿ ನಾನೇ ಹೆಣೆದ ಬರಹ ನಿಮಗಾಗಿ...!!</div>
<div style="text-align: justify;">
***</div>
<div style="text-align: justify;">
<b><span style="color: #cc0000;">ದ್ರಷ್ಠಾಂತ-೧ (ಹಳೆ ಕಥೆ)</span></b></div>
<div style="text-align: justify;">
(ಸಂಗ್ರಹಿಸಿದ್ದು)</div>
<div style="text-align: justify;">
<br /></div>
<a href="https://blogger.googleusercontent.com/img/b/R29vZ2xl/AVvXsEh4jK5aXAfJjBYa2OX_dJBcKFDjj4I0gQjXvxU4jAvKF-FdyP9g1MNJ-0bh_G2eUAr_u_CWwvdd3R2G2GDmML2tms9Z-LNirVg3YNv93noOKFrJt8Ig6bRH6jExIx3qvT7VEMxsTxntjeBS/s1600/ist+image.jpg" imageanchor="1" style="clear: right; float: right; margin-bottom: 1em; margin-left: 1em; text-align: justify;"><img border="0" height="195" src="https://blogger.googleusercontent.com/img/b/R29vZ2xl/AVvXsEh4jK5aXAfJjBYa2OX_dJBcKFDjj4I0gQjXvxU4jAvKF-FdyP9g1MNJ-0bh_G2eUAr_u_CWwvdd3R2G2GDmML2tms9Z-LNirVg3YNv93noOKFrJt8Ig6bRH6jExIx3qvT7VEMxsTxntjeBS/s200/ist+image.jpg" width="200" /></a><br />
<div style="text-align: justify;">
ಆಕೆಗೆ ತೀರಾ ವಯಸ್ಸಾಗಿದೆ.ಮಗ ನೋಡಿದ.ಇನ್ನು ಈಕೆಯನ್ನು ವೃದ್ಧಾಶ್ರಮಕ್ಕೆ ಸೇರಿಸುವುದೇ ಸೂಕ್ತ ಎಂದುಕೊಂಡು, ಒಂದು ದಿನ ಸೇರಿಸಿ ಬಂದೂ ಬಿಟ್ಟ.ಒಂದೆರಡು ವರ್ಷಗಳುರುಳಿದುವು. ಆಕೆಗೆ ಅನಾರೋಗ್ಯ...ಕೊನೆಯಕ್ಷಣ. ಕೊನೆಯ ಆಸೆ ಕೇಳಲಾಯಿತು.ಒಮ್ಮೆ ಮಗನನ್ನು ನೋಡುವ ಬಯಕೆ ಇದೆ ಎಂದಿತು ಆ ಮುದಿ ಜೀವ. ಮಗ ಓಡೋಡಿ ಬಂದ.’ಮಗನೇ, ಆಸೆಯೊಂದಿದೆ, ನಡೆಸಿಕೊಡುವೆಯಾ’ ಎಂದಳು ತಾಯಿ. ’ಹೇಳಮ್ಮ, ಎಷ್ಟು ಲಕ್ಷಖರ್ಚಾದರೂ ಪರವಾಗಿಲ್ಲ, ಮಾಡುವೆ’ಎಂದ ಮಗ. ನಗುತ್ತಾಅವನನ್ನು ಬಳಿಕರೆದ ತಾಯಿ ಎಂದಳು, ’ಏನೂ ಬೇಡ ಮಗುವೇ. ಇಲ್ಲಿ ವಿಪರೀತ ಸೆಖೆ. ಒಂದಷ್ಟು ಫ್ಯಾನ್ಗಳನ್ನು ಹಾಕಿಸು.ಚಳಿಗಾಲದಲ್ಲಿ ಸ್ನಾನವೇ ಕಷ್ಟ.ಗೀಸರ್ಇಲ್ಲ, ಒಂದೆರಡು ಗೀಸರ್ ಕೊಡಿಸಿದರೆ ಉತ್ತಮ. ಹೊದ್ದುಕೊಳ್ಳಲು ಬಟ್ಟೆಯೂ ಇಲ್ಲ. ಒಂದಷ್ಟು ಹೊದಿಕೆ ಕೊಡು.....’ ತಾಯಿ ಹೇಳುತ್ತಿದ್ದರೆ ಮಗನಿಗೆ ಅಚ್ಚರಿ.’ಎಲ್ಲಾ ಸರಿಅಮ್ಮಾ, ನಿನಗೂ ಗೊತ್ತು, ನಿನ್ನದಿದು ಕೊನೆಗಾಲ...ಇದೆಲ್ಲಾ ಯಾರಿಗೆ?’.ತಾಯಿಯ ಹ್ರದಯ ಭಾರವಾಗುತ್ತದೆ, ಕಣ್ಣಲ್ಲಿ ಕಣ್ಣೀರು, ನಿಧಾನವಾಗಿ ನಡುಗುವ ಧ್ವನಿಯಲ್ಲಿ ಹೇಳುತ್ತಾಳೆ, ’ಮುಂದೆ ನಿನ್ನ ಮಕ್ಕಳು ನಿನ್ನನ್ನು ಇಲ್ಲಿ ಬಿಟ್ಟಾಗ ಈ ಕಷ್ಟಗಳು ನಿನಗೆ ಬರಬಾರದಲ್ಲ ಮಗುವೇ, ಅದಕ್ಕೆ!!’</div>
<br />
<div style="text-align: justify;">
***</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<b><span style="color: #cc0000;">ದ್ರಷ್ಠಾಂತ-೨ (ಮತ್ತೂ ಹಳೆ ಕಥೆ)</span></b></div>
<div style="text-align: justify;">
<b><span style="color: #cc0000;">(ಇದನ್ನೂ ಸಂಗ್ರಹಿಸಿದ್ದು)</span></b></div>
<div style="text-align: justify;">
<br /></div>
<div style="text-align: justify;">
’ನಿನ್ನನ್ನೇ ಪ್ರೀತಿಸುತ್ತೇನೆ.....ಜೀವಕ್ಕಿಂತಲೂ ಮಿಗಿಲಾಗಿ’-ಆತ ಹೇಳಿದ</div>
<div style="text-align: justify;">
’ಹೌದಾ..ನಿಜವಾಗ್ಲೂ??’ಕುತೂಹಲ ಮತ್ತುಅಚ್ಚರಿ ಆಕೆಗೆ</div>
<div style="text-align: justify;">
’ಹೇಗೆ ತೋರಿಸಲಿ ಹೇಳು- ಆತನ ಸವಾಲು</div>
<div style="text-align: justify;">
’ನಿನ್ನಅಮ್ಮನ ಹ್ರದಯವನ್ನು ನನಗೆ ತಂದುಕೊಡು, ನಂಬುತ್ತೇನೆ' ಆಕೆಯಮರುಸವಾಲು</div>
<a href="https://blogger.googleusercontent.com/img/b/R29vZ2xl/AVvXsEhFIGY_kIhXlF3VFLULZOBbMQQew5GnMkyq-FAmum1xgg69dS5gRN7PhM-Y3iZQqz1g996Er0_Gw-JyuSHVbKfR9kNPZHCslqzshKQelixh0M2wopkzixf7YLLQ4jMeaogYaPnM9Vf6Lu3J/s1600/image+2.jpg" imageanchor="1" style="clear: right; float: right; margin-bottom: 1em; margin-left: 1em; text-align: justify;"><img border="0" height="131" src="https://blogger.googleusercontent.com/img/b/R29vZ2xl/AVvXsEhFIGY_kIhXlF3VFLULZOBbMQQew5GnMkyq-FAmum1xgg69dS5gRN7PhM-Y3iZQqz1g996Er0_Gw-JyuSHVbKfR9kNPZHCslqzshKQelixh0M2wopkzixf7YLLQ4jMeaogYaPnM9Vf6Lu3J/s200/image+2.jpg" width="200" /></a><br />
<div style="text-align: justify;">
ಮಗ ಹೊರಟ.ಅಮ್ಮನ ಬಳಿ ಹೋದ.’ಮಗನೇ ಬಾ, ನಿನಗಾಗಿಯೇ ಕಾಯುತ್ತಿದ್ದೆ, ಊಟ ಮಾಡು’ತಾಯಿಯ ಮಾತು ಮುಗಿಯುವ ಮುನ್ನವೇ ಆತ ಅವಳ ಎದೆ ಬಗೆದ. ಹಸಿ ಹಸಿಯಾಗಿ ಆ ಹ್ರದಯವನ್ನು ಕೈಯಲ್ಲಿ ಹಿಡಿದು ಪ್ರಿಯತಮೆಗೆ ತೋರಿಸಲೆಂದು ಅವಸರದಓಟ ಅವನದ್ದು.</div>
<br />
<div style="text-align: justify;">
ದಾರಿಯಲ್ಲಿಕಲ್ಲೊಂದಕ್ಕೆಎಡವಿದ. ಬಿದ್ದು ಬಿಟ್ಟ.ಆಗ ಕೈಯಲ್ಲಿದ್ದ ಹ್ರದಯ ಅಷ್ಟು ದೂರ ಬಿತ್ತು.ಬಿದ್ದವ ಎದ್ದು ಸಾವರಿಸಿಕೊಂಡು ಮತ್ತೆ ಹ್ರದಯ ಹೆಕ್ಕಿದಾಗ ಅದು ಹೇಳಿತು 'ಅಯ್ಯೋ ಮಗನೇ, ನಿಧಾನ...ಬಿದ್ದು ಬಿಟ್ಟೆಯಾ, ನೋವಾಯ್ತಾ!!...'</div>
<div style="text-align: justify;">
***</div>
<div style="text-align: justify;">
<b>ದ್ರಷ್ಟಾಂತ-೩(ಹೊಚ್ಚ ಹೊಸ ಕಥೆ)</b></div>
<br />
<div style="text-align: justify;">
<span style="color: #cc0000;"><b>(ನಾನೇ ಬರೆದದ್ದು!!)</b></span></div>
<br />
<div style="text-align: justify;">
<br /></div>
<div style="text-align: justify;">
ಆತ ಆಕೆಯನ್ನು ಬಹುವಾಗಿ ಪ್ರೀತಿಸುತ್ತಿದ್ದ.ಆಕೆಯೂ ಆತನನ್ನು...ಜೀವದಂತೆ!</div>
<div style="text-align: justify;">
ಊರಿಡೀ ಸುತ್ತಿದರು, ಮಾಲ್ಎಲ್ಲಾ ಮುಗಿಯಿತು.ಯಾವುದೋ ನೆಪದಲ್ಲಿ ಒಂದೆರಡು ತಿರುಗಾಟ, ರೆಸಾರ್ಟ್, ಲಾಡ್ಜ ಎಲ್ಲಾ ವಾಸ.</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEhhhFOCJfRVuqNzweiMteH2Cd0KYUamw7YoLSOBFKD5Ggxbvqre0ypnTQgT535P8dFosvsW0AdULPe2MweOEEhNO-Noq_gqc3STEJhnUIt6xdGt3Cs9BK2jwchFdZAtXgy8FzMMoBqk2jxn/s1600/jail.jpeg" imageanchor="1" style="clear: left; float: left; margin-bottom: 1em; margin-right: 1em; text-align: justify;"><img border="0" height="141" src="https://blogger.googleusercontent.com/img/b/R29vZ2xl/AVvXsEhhhFOCJfRVuqNzweiMteH2Cd0KYUamw7YoLSOBFKD5Ggxbvqre0ypnTQgT535P8dFosvsW0AdULPe2MweOEEhNO-Noq_gqc3STEJhnUIt6xdGt3Cs9BK2jwchFdZAtXgy8FzMMoBqk2jxn/s200/jail.jpeg" width="200" /></a>ಆತ ಪ್ರೀತಿಯ ಹೊಳೆ ಹರಿಸಿದ.ಆಕೆ ಅದರಲ್ಲಿ ಮಿಂದೆದ್ದಳು.</div>
<div style="text-align: justify;">
ಒಂದು ಸಂಜೆ, ತಾಯಿ ಹೇಳಿದಳು, ’ಮಗಳೇ, ನಿನ್ನನ್ನು ನೋಡಲು ನಾಳೆ ಹುಡುಗ ಬರುತ್ತಿದ್ದಾನೆ. ಅಗರ್ಭ ಶ್ರೀಮಂತ.ಅವನನ್ನು ಒಪ್ಪು'</div>
<div style="text-align: justify;">
ಅತ್ತಳು, ಗೋಗರೆದಳು...ಮಗಳ ಮಾತುಯಾರೂ ಕೇಳಲಿಲ್ಲ.</div>
<div style="text-align: justify;">
’ಅರೆ, ಹುಡುಗ ಬಹು ಸುಂದರ, ಸಂಭಾವಿತನೂ ಇರಬಹುದು. ಹಣ..ಕೊಳೆವಷ್ಟಿದೆ!.ಅವನೋ, ನನ್ನ ಹಾಗೆ ಬೇರೆಯವರ ಜೊತೆಗೂ ಇರಬಹುದು...ಇವನೇ ವಾಸಿ ' ಹುಡುಗಿ ಎಂದುಕೊಂಡಳು.</div>
<div style="text-align: justify;">
ಬೈ ಬೈ ಹೇಳಿದ ಹುಡುಗಿಯ ನೆನಪಲ್ಲಿ ಆತ ಈಗ ವಿರಹಿ.ಆದರೂ ಹಠ-ಛಲವಾದಿ. ಬಹು ಕಷ್ಟ ಪಟ್ಟು ಕೆಲವೇ ದಿನದಲ್ಲಿಆತ ಶ್ರೀಮಂತ..ಅಗರ್ಭ ಶ್ರೀಮಂತ!</div>
<div style="text-align: justify;">
ಏನಾಯ್ತೋ, ಸುರ ಸುಂದರಾಂಗ ಕೈ ಕೊಟ್ಟ. ನಿಶ್ಚತಾರ್ಥ ಮುಗಿಸಿದ, ಮದುವೆಯು ಆಯಿತು... ಕೆಲವು ಕಾಲ ಅಕೆಯೊಂದಿಗೆ ಸುತ್ತಾಡಿ ಹುಡುಗಿ ಒಲ್ಲೆ ಎಂದ. ಡೈವೋರ್ಸ್ ಪತ್ರ ನೀಡಿದ... </div>
<div style="text-align: justify;">
ಹುಡುಗಿಗೆ ಆಕಾಶವೇ ತಲೆ ಮೇಲೆ. ಆದರೆ ಸಮಾಧಾನ....ನನ್ನ ಪ್ರಿಯಕರ ನನ್ನ ಕೈ ಬಿಡಲೊಲ್ಲ! ಆತನೂ ಈಗ ಶ್ರೀಮಂತ-ಹ್ರದಯದಲ್ಲೂ!!.ಓಡಿ ಬಂದಳು, ಕೈ ಹಿಡಿದು ಹೇಳಿದಳು.... ’ನಿನ್ನೇ ಪ್ರೀತಿಸುವೆ</div>
<div style="text-align: justify;">
ಹುಡುಗ ಕಕ್ಕಾವಿಕ್ಕಿ. ಕೈ ಕೊಡವಿದ. ’ಮನಸ್ಸು ಮುರಿದಿದೆ...ಅಜೀವ ಪರ್ಯಂತ ನಾನು ಬ್ರಹ್ಮಾಚಾರಿ..ಮದುವೆಒಲ್ಲೆ!!’</div>
<div style="text-align: justify;">
ಈಗ, ಹುಡುಗ ಅತ್ಯಾಚಾರದ ಆರೋಪದಲ್ಲಿ ಜೈಲಿನಲ್ಲಿದ್ದಾನೆ. ಆರೋಪಿಸಿದ ಆ ಹುಡುಗಿ ನ್ಯೂಸ್ಚ್ಯಾನೆಲ್ ನಿಂದ ಚ್ಯಾನೆಲ್ಗೆ ಅಲೆದು, ಅಲೆದು ಅವನ ಕಥೆ ಹೇಳುತ್ತಿದ್ದಾಳೆ.</div>
<div style="text-align: justify;">
ಇಲ್ಲಿಗೆಕಥೆ ಮುಗಿಯಿತು!!</div>
<div style="text-align: justify;">
***</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
</div>
Anonymoushttp://www.blogger.com/profile/07026221826810784770noreply@blogger.com0tag:blogger.com,1999:blog-6634091388019397795.post-26365284208725209512015-06-15T01:10:00.004-07:002015-06-15T01:10:35.832-07:00ಮರವಂತೆಯ ಸೂರ್ಯಾಸ್ತ.... <div dir="ltr" style="text-align: left;" trbidi="on">
<span style="color: blue;"><b>ಮರವಂತೆ.... ನಾನು ಬಹುವಾಗಿ ಪ್ರೀತಿಸುವ ಸ್ಥಳ... ನನ್ನೆಲ್ಲಾ ನೋವು, ನಲಿವಿಗೆ, ಸಂತಸ, ದು:ಖಕ್ಕೆ ಕಿವಿಯಾದದ್ದು ಈ ಸುಂದರಿ... ಎಂದೋ ಬರೆದಿಟ್ಟಿದ್ದ ಈ ಸಾಲುಗಳಿಗೆ ಈಗ ಇಲ್ಲಿ ಹೊರ ಹೊಮ್ಮುವ ಅವಸರ... </b></span><br />
<br />
<br />
ದಿವ್ಯತೆಯೇ ಮೈವೆತ್ತ ಓ ನನ್ನ ಮರವಂತೆ<br />
<br />
ಇರುವಂತೆ ನೀನು ಭೂಲೋಕಪ್ಸರೆಯೂ<br />
ನಿನ್ನ ತಡಿಯಲಿ ಕುಳಿತು ಹಿಡಿದಿಡಲು ಕನಸುಗಳ<br />
ಸೂರ್ಯಾಸ್ತದ ದೃಶ್ಯ ಕಾಣುವುದು ಹೀಗೆ<br />
ನಸು ನಾಚಿ ಕೆಂಪಾದ ಹದಿಹೆಣ್ಣ ಹಾಗೆ!<br />
<br />
ಆಚೆ ಸೌಪರ್ಣಿಕೆಯು ಕಲ್ಪ ಮುಕುಟವ ತೊಟ್ಟು<br />
ಹೆದ್ದಾರಿ ಸೆರಗನ್ನು ಹೊದ್ದು ಮಲಗಿರಲು<br />
ಬೆರಗಾದ ಅರಬಿಯೂ ತಲೆಬಾಗಿ ನರ್ತಿಸಲು<br />
ಅರುಣನೂ ನಸು ನಾಚಿ ಓಡಿರುವ ಹೀಗೆ<br />
<a href="https://blogger.googleusercontent.com/img/b/R29vZ2xl/AVvXsEia76rO3EsD94bz5z9p0BintFq2zIRaYMM6XZTR3pd44dS5tcCKBLSKvhl1al9gpb1sbK3VMxu30gxQfXP4u4M_M5auLINuk42rh4eqEokrpwpXvlxaqIb6zaBFaPtuVCGIvQyrJdWjKPDY/s1600/Maravanthe+2.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="111" src="https://blogger.googleusercontent.com/img/b/R29vZ2xl/AVvXsEia76rO3EsD94bz5z9p0BintFq2zIRaYMM6XZTR3pd44dS5tcCKBLSKvhl1al9gpb1sbK3VMxu30gxQfXP4u4M_M5auLINuk42rh4eqEokrpwpXvlxaqIb6zaBFaPtuVCGIvQyrJdWjKPDY/s200/Maravanthe+2.jpg" width="200" /></a><br />
<br />
ತುಂಟ ಮಗು ತೆರೆಸರಿಸಿ ಹಾಲ್ಕುಡಿದ ಹಾಗೆ!<br />
<br />
ಯಕ್ಷಗಾನದ ಚೆಂಡೆ ಮದ್ದಳೆಯ ಆರ್ಭಟಕೆ<br />
ಕುಳಿರ್ಗಾಳಿಗೂ ಒಮ್ಮೆ ಭೋರ್ಗರೆತದಾಸೆ<br />
ನಿನ್ನ ಈ ಆರ್ಭಟಕೆ ಮನಸೋತ ಭೂರಮೆಗೂ<br />
ಆ ರವಿಯ ತನ್ನೊಳಗೆ ಅಡಗಿಸಲು ಹೀಗೆ<br />
ಕುಂಕುಮರಶಿನವನ್ನು ಚಿಲ್ಲಿರುವ ಹಾಗೆ!<br />
<br />
<a href="https://blogger.googleusercontent.com/img/b/R29vZ2xl/AVvXsEjnM3A_LVFclWtA4qV9SfSkcjKU1Eb0znvbCLBGRG1slkULfov7eQbFjXPPICGqkMYUhyf5gobh68bWob3Zj0ZAPTlbK-J3MWXhzmmVIa1ubVzQ5CIbsLrnO4W-teKjuEgxNPmg89P0XYai/s1600/Maravanthe.jpg" imageanchor="1" style="clear: right; float: right; margin-bottom: 1em; margin-left: 1em;"><img border="0" height="226" src="https://blogger.googleusercontent.com/img/b/R29vZ2xl/AVvXsEjnM3A_LVFclWtA4qV9SfSkcjKU1Eb0znvbCLBGRG1slkULfov7eQbFjXPPICGqkMYUhyf5gobh68bWob3Zj0ZAPTlbK-J3MWXhzmmVIa1ubVzQ5CIbsLrnO4W-teKjuEgxNPmg89P0XYai/s400/Maravanthe.jpg" width="400" /></a>ಒಮ್ಮೆ ಭೋರ್ಗರೆತ ಶಾಂತತೆಯು ಮತ್ತೊಮ್ಮೆ<br />
ನಿನ್ನಾಟ ನಿನ್ನರಿವ ಪರಿಧಿ ಹೊರಗೇ<br />
ಮರಳು ಕಲ್ಲುಗಳೆಲ್ಲಾ ನಿನ್ನ ತಡೆಗವಸರಿಸಿ<br />
ನಿನ್ನೊಳಗೆ ಕರಗುವ ಆ ಆದಿಯೇ ಹೀಗೆ<br />
ಶಶಿಗೆ ಸ್ವಾಗತವೀವ ಮನದನ್ನೆಯ ಹಾಗೆ!<br />
<br />
ಓ ಭವ್ಯ ಮರವಂತೆ, ಓ ದಿವ್ಯ ಮರವಂತೆ<br />
ಶಾಂತನಾಗಿರು ವರಾಹ ಮಡಿಲಲ್ಲಿ ನೀನು<br />
ನಿನ್ನ ಏರಿಳಿತವೀ ಸೌಪರ್ಣಿಕೆಯ ಮಡಿಲೊಳಗೆ<br />
ಭಾಗವತ ಕಂಠದ ಹಾಡಾಗಿ ಹೀಗೆ<br />
ಈ ಬದುಕ ಬೆಳಗಲಿ ಸವಿಜೇನ ಹಾಗೆ!!<br />
<br /></div>
Anonymoushttp://www.blogger.com/profile/07026221826810784770noreply@blogger.com0tag:blogger.com,1999:blog-6634091388019397795.post-33299934331521481692015-06-10T04:06:00.004-07:002015-06-10T04:06:50.738-07:00ನಿವೇದನೆ..<div dir="ltr" style="text-align: left;" trbidi="on">
<b style="background-color: white;"><span style="color: blue;">ಕಳೆದ ಡಿಸೆಂಬರ್ ನಲ್ಲಿ ಮಂಗಳೂರು ಆಕಾಶವಾಣಿ ಯಲ್ಲಿ ಪ್ರಸಾರವಾದ ನನ್ನ ಕವನ.... </span><span style="color: #990000;">ನಿವೇದನೆ.</span><span style="color: blue;">... ನಿಮ್ಮ ಓದಿಗಾಗಿ ಮತ್ತು ನನ್ನ ಖುಷಿಗಾಗಿ... </span></b><br />
<br />
<br />
<br />
ಒಂದು ಹಿಡಿ ಪ್ರೀತಿಯನುಚೆಲ್ಲಿಬಿಡು ಎದೆಯೊಳಗೆ<br />
ಬೆಳೆದು ಹೆಮ್ಮರವಾಗಿ ಫಲ ನೀಡಲಿ|<br />
ಶತ ಶತಕ ಕಳೆದರೂ ಇದಕಿಲ್ಲ ವೃದ್ದಾಪ್ಯ<br />
ನಿತ್ಯತೆರೆ ಮೊರೆಯುವ ಹೊನ್ನಕಡಲು..|<br />
<br />
ಒಂದು ಹನಿ ಕಣ್ಣೀರುಜಾರಿದರೂ ನಿನ್ನೊಳಗೆ<br />
ಅದುವೆ ನೆತ್ತರಧಾರೆ ನನ್ನೆದೆಯಲಿ|<br />
ನಿನ್ನೆದೆಯಚೈತ್ರದಲಿ ಕೋಗಿಲೆಯದನಿ ಇರಲು<br />
<a href="https://blogger.googleusercontent.com/img/b/R29vZ2xl/AVvXsEj-29uYiyOYk-BbvaYI5-BNNtbK5mdzPadgtqRgrnpfbi_gBspZ4cgnhvaEvwAkxWpLYVfAagtHhiibD-Vz41pg8T-2Vg58E31WjRI18JGFPeRh-TK9uC-kw31_KEjVnBAMuX0DLefwGmdI/s1600/blog...jpeg" imageanchor="1" style="clear: left; float: left; margin-bottom: 1em; margin-right: 1em;"><img border="0" height="133" src="https://blogger.googleusercontent.com/img/b/R29vZ2xl/AVvXsEj-29uYiyOYk-BbvaYI5-BNNtbK5mdzPadgtqRgrnpfbi_gBspZ4cgnhvaEvwAkxWpLYVfAagtHhiibD-Vz41pg8T-2Vg58E31WjRI18JGFPeRh-TK9uC-kw31_KEjVnBAMuX0DLefwGmdI/s200/blog...jpeg" width="200" /></a>ಅದುವೇ ನಿತ್ಯೋತ್ಸವದಜಾತ್ರೆ ನನಗೆ|<br />
<br />
ಒಂದು ದಿನವೂ ಏನೂ ಕೇಳಲೊಲ್ಲದ ಮನವು<br />
ಬಯಸುವುದು ನಿನ್ನೆದೆಯತಾಣವನ್ನು|<br />
ಅಪ್ಪಿಬಿಡುಎದೆಗೊಮ್ಮೆ ನನ್ನ ಮೊಗವನು ನೀನು<br />
ಈ ಜಗವ ಮರೆತೇನುಆ ಬಿಗಿತದಲ್ಲಿ|<br />
<br />
ಒಂದಿನಿತು ಅಳುಕದೆಯೇ ಅಂಜದೆಯೇ ನಿನ್ನೊಡನೆ<br />
ಹೆಜ್ಜೆಯನು ಸವೆಸುವೆನು ಬದುಕಕಡಲಲ್ಲಿ|<br />
ಏರಿ ಬರುವಲೆಗೆ ಹುಚ್ಚು ಧೈರ್ಯವೇ ಹೇಗೆ<br />
<a href="https://blogger.googleusercontent.com/img/b/R29vZ2xl/AVvXsEhwAiDBg15jogd4r9dleWY4P1QFcMMU7c-UXpIOJo4U92Ncg4_9q25y2ReFHa1rd8mkJtjJkFZIv2fju8FJIeox4ez-i3FZc226Pd7deaM8T7hpU0HxZlxufScGXWtOpy3xzJYfsqyBLVhF/s1600/blog.jpeg" imageanchor="1" style="clear: right; float: right; margin-bottom: 1em; margin-left: 1em;"><img border="0" height="143" src="https://blogger.googleusercontent.com/img/b/R29vZ2xl/AVvXsEhwAiDBg15jogd4r9dleWY4P1QFcMMU7c-UXpIOJo4U92Ncg4_9q25y2ReFHa1rd8mkJtjJkFZIv2fju8FJIeox4ez-i3FZc226Pd7deaM8T7hpU0HxZlxufScGXWtOpy3xzJYfsqyBLVhF/s200/blog.jpeg" width="200" /></a>ನೀನಿರಲು ನನ್ನ ಬಳಿ ಕರವ ಹಿಡಿದು|<br />
<br />
ಒಂದಿನಿತುಕಣ್ಣೋಟ ನನ್ನೆಡೆಗೆಎಸೆದು ಬಿಡು<br />
ಬಂಧಿಯಾಗುವೆನಲ್ಲೇಎಂದೆಂದಿಗೂ|<br />
ಹೌದಿನಿಯಾ ಹರಿದು ಬಿಡು ನಿನ್ನ ಪ್ರೀತಿಯತೊರೆಯ<br />
ತೊರೆದು ಬರುವೆನು ನಾನು ಜಗದ ಬಂಧ|<br />
<br />
ಒಂದು ಹಿಡಿ ಪ್ರೀತಿಯನುಚೆಲ್ಲಿಬಿಡು ಎದೆಯೊಳಗೆ<br />
ಎದೆಗೂಡಿನಲಿ ನಿನ್ನ ಬಚ್ಚಿಡುವೆನು|<br />
ಎಂದಾದರೂ ಮುಂದೆ ಮರಳಿ ಬರದಾಗ ನೀ<br />
ಬರದ ಲೋಕದ ಪಯಣ ಬಲು ಸುಲಭವೆನಗೆ|<br />
<div>
<br /></div>
</div>
Anonymoushttp://www.blogger.com/profile/07026221826810784770noreply@blogger.com0tag:blogger.com,1999:blog-6634091388019397795.post-83939740838228241022015-06-09T05:15:00.001-07:002015-06-09T05:16:44.002-07:00ಸಮಾಧಾನ <div dir="ltr" style="text-align: left;" trbidi="on">
<b><span style="color: red;">ಅಪರೂಪಕ್ಕೆ ಹುಟ್ಟಿಕೊಂಡ ಕವನ..ಬಹಳ ದಿನಗಳ ನಂತರ ಬ್ಲಾಗ್ ಲೋಕಕ್ಕೆಳೆತಂತು... </span></b><br />
<b><span style="color: blue;"><br /></span></b>
<b><span style="color: blue;"><br /></span></b>
<b><span style="color: blue;">ಸಮಾಧಾನ </span></b><br />
<br />
<br />
<br />
ಬತ್ತಿ ಹೋಗಿದೆಯೇಕಣ್ಣೀರು?<br />
ಬಾ ನನ್ನ ಬಳಿಗೆ, ಕೊಡುವೆ ಒಂದಿಷ್ಟು ಕಡ<br />
<a href="https://blogger.googleusercontent.com/img/b/R29vZ2xl/AVvXsEh53-8nWUyLpTMg7oPyn7yvm7WgxKbKOOG5mEuw9RFMGPvHI3XqYA61hMc78EzlBpRPTu2HXQXLglj9i5SQcc09eIkB1-XOC4mVP3hHCB9vH0E2S_G6jOeFGigphYZLoL_JBWCfQY0pmwgJ/s1600/blog.jpg" imageanchor="1" style="clear: right; float: right; margin-bottom: 1em; margin-left: 1em;"><img border="0" src="https://blogger.googleusercontent.com/img/b/R29vZ2xl/AVvXsEh53-8nWUyLpTMg7oPyn7yvm7WgxKbKOOG5mEuw9RFMGPvHI3XqYA61hMc78EzlBpRPTu2HXQXLglj9i5SQcc09eIkB1-XOC4mVP3hHCB9vH0E2S_G6jOeFGigphYZLoL_JBWCfQY0pmwgJ/s1600/blog.jpg" /></a>ಉದುರಿಸಿ ಬಿಡು ಒಮ್ಮೆಆನಂದದಿಂದ!<br />
<br />
ಜಗದಚಿಂತೆ ಬಿಡು, ವ್ಯಂಗ್ಯವೇಅದರ ಬಗೆ<br />
ಇರದಿದ್ದರೆ ಹೇಗೆ ಒಬ್ಬನಾದರೂ ಹಗೆ?<br />
ನಿನ್ನ ನೀನರಿಯುವ ಬಗೆ ಎಂತು ಮತ್ತೆ?<br />
<br />
ಸಂಭ್ರಮಕೆ ಮುಖ ತೂರುವ ಮಂದಿ ನೂರೆಂಟು<br />
ಸಂಗ್ರಾಮಕೆ ಹಾತೊರೆಯುವ ಜಗಳಗಂಟರೇ ಎಲ್ಲ<br />
ಆದರೂ ಹರಿಸಿ ಬಿಡು..ಆನಂದ ಬಾಷ್ಪ|<br />
<br />
ಎಂದಾದರೊಂದು ದಿನ ಏಕಾಂಗಿ ಅನಿಸಿದರೆ<br />
ನೋಡಿ ಬಿಡು ಕಡಲಲೆಯ ಶ್ರೀಮಂತಿಕೆಯ<br />
ಅದು ನಿನ್ನ ಹಾಗೆಯೇ ಏಕಾಂಗಿ ತಾನೇ!!!<br />
<br />
ಬಯಸಿದ್ದೆಲ್ಲಾ ಬರದ ಈ ಬದುಕ ಬಗೆಗೇಕೆ<br />
ತಾತ್ಸಾರ ನಿನ್ನ ಮನದೊಳಗೆ ಗೆಳತೀ<br />
ಅತ್ತು ಹಗುರಾಗಿ ಬಿಡು ನೀನೇ ನಿನ್ನೊಡತಿ!!<br />
<br />
<br />
<br />
<br />
<br />
<br />
<br />
<br />
<br />
<br /></div>
Anonymoushttp://www.blogger.com/profile/07026221826810784770noreply@blogger.com2tag:blogger.com,1999:blog-6634091388019397795.post-75474010416457867492014-05-21T00:09:00.002-07:002014-05-21T00:09:17.459-07:00ಕಾಂಗ್ರೆಸ್ ಸೋಲಿಗೆ 'ಯಾರೋ'ಕಾರಣರಲ್ಲ..!!<div dir="ltr" style="text-align: left;" trbidi="on">
<div style="text-align: justify;">
<b><span style="color: blue;">ಚುನಾವಣೆ ಮತ್ತು ಫಲಿತಾಂಶದ ವಿಚಾರದಲ್ಲಿ ಮತ್ತೊಂದು ಘಟನೆಯನ್ನೂ ಗಮನಿಸಿ. ರಾಹುಲ್ ಮತ್ತು ಸೋನಿಯಾ ಇಬ್ಬರೂ ತಮ್ಮ ಪದವಿಗೆ ರಾಜೀನಾಮೆಗೆ ನೀಡಲ ಮುಂದಾದರು-ಸೋಲಿನ ಹೊಣೆ ಹೊತ್ತು!!. ಆದರೆ ಅಲ್ಲಿ ರಾಹುಲ್ಗಿಂತ ಎರಡು ಪಟ್ಟು ವಯಸ್ಸಾದವರನ್ನೂ ಹಿಡಿದು, ಪ್ರತಿಯೊಬ್ಬರೂ ಈ ಹೊಣೆಯನ್ನು ರಾಹುಲ್ ಹೊರಬೇಕಾಗಿಲ್ಲ ಎಂದರು. </span><span style="color: #990000;">ಜನಪ್ರತಿನಿಧಿಯ ಪ್ರದಕ್ಷಿಣೆಯಲ್ಲಿ ನನ್ನ ಈ ವಾರದ ಬರಹ.... </span></b></div>
<div style="text-align: justify;">
<br /></div>
<div style="text-align: justify;">
ಜನತೆಯ ಕಣ್ಣುಗಳಲ್ಲಿ ಕೇವಲ ನಿರೀಕ್ಷೆಗಳು ತುಂಬಿವೆ!.</div>
<div style="text-align: justify;">
<br /></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEgbiVzzteu2ckWg3YOvhMdmQxG-X4fRJCL-KtguBkwve7dE7FRBbkFoyXzMdUS04BhbbuWAVTmD69b8oIjCvya5bCyYJftCkS4xjTEy3t-tPcqMseelheJtB6MJWtUA0Wjk9UWZfE2rGADu/s1600/modi.jpg" imageanchor="1" style="clear: right; display: inline !important; float: right; margin-bottom: 1em; margin-left: 1em; text-align: center;"><img border="0" src="https://blogger.googleusercontent.com/img/b/R29vZ2xl/AVvXsEgbiVzzteu2ckWg3YOvhMdmQxG-X4fRJCL-KtguBkwve7dE7FRBbkFoyXzMdUS04BhbbuWAVTmD69b8oIjCvya5bCyYJftCkS4xjTEy3t-tPcqMseelheJtB6MJWtUA0Wjk9UWZfE2rGADu/s1600/modi.jpg" height="150" width="200" /></a>ನರೇಂದ್ರ ಮೋದಿ ಎಂಬ ಒಬ್ಬ ವ್ಯಕ್ತಿ ರಾಜಕಾರಣದ ದಿಕ್ಕನ್ನು ಈ ರೀತಿ ಬದಲಿಸಬಹುದು ಎಂಬ <span style="text-align: left;">ಕಲ್ಪನೆಯೇ ಇರದೇ, ಇಂದು ಕಾಂಗ್ರೆಸ್ ಧೂಳೀಪಟಕ್ಕೆ ಕಾರಣವಾದದ್ದು, ಓರ್ವ ನಾಯಕ ಸಮರ್ಥನಾಗಿದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ನಿದರ್ಶನವಾಗಿದೆ.ಹಾಗೆಂದು ಎಲ್ಲವನ್ನೂ ಹೀಗೇ ಎಂದು ತೀರ್ಮಾನಿಸಲು ಇದು ಸಮಯವಲ್ಲ. ಜನರ ಅಪಾರ ನಿರೀಕ್ಷೆಗಳಿಗೆ ಮೋದಿ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಲೇ ಬೇಕು.</span></div>
<div style="text-align: justify;">
<br /></div>
<div style="text-align: justify;">
ಈ ಸಲ ಮೋದಿಯವರ ಆಯ್ಕೆಯ ಹಿನ್ನೆಲೆಯಲ್ಲಿ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಬಹುದು. ಆದರೆ ಅಷ್ಟೇ ಹೊಸ ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಮೋದಿ ಅಲೆ ಒಪ್ಪಲೇ ಬೇಕಾದ ಸತ್ಯ. ಹಾಗೆಂದು ಸೋತು ಸುಣ್ಣವಾದ ನಾಯಕರ ಬಹು ದೊಡ್ಡ ಪಡೆಯೇ ಇದೆ.ಜಿಲ್ಲಿ ಮುಖ್ಯವಾಗಿ ಕಾಣುವ ಸೋಲು ಕಾಂಗ್ರೆಸ್ನದ್ದು. ಕೇಂದ್ರದಲ್ಲಿ ಯುಪಿಎ ಎಂಬ ಕಾಂಗ್ರೆಸ್ ನೇತ್ರತ್ವದ ಸರಕಾರವಿದ್ದೂ, ಅದರ ಮಂತ್ರಿಮಂಡಳದ ಸುಮಾರು ಅರ್ಧದಷ್ಟೂ ನಾಯಕರು ಗೆದ್ದಿಲ್ಲವೆಂದರೆ ಆಲೋಚಿಸಬೇಕು. ಉತ್ತರ ಪ್ರದೇಶದಂತಹ ಒಂದೇ ರಾಜ್ಯದಲ್ಲಿ ಗೆದ್ದಷ್ಟೂ ನಾಯಕರನ್ನು ಗೆಲ್ಲಿಸುವಲ್ಲಿ ಇಡೀ ದೇಶದ ಕಾಂಗ್ರೆಸ್ ಸೋತಿದೆ. ಬಹುಶ: ಇಷ್ಟು ಹೀನಾಯ ಸೋಲನ್ನು ಕಾಂಗ್ರೆಸ್ ನಿರೀಕ್ಷಿಸರಲೇ ಇಲ್ಲ. ಅಲ್ಲಿ ಕೊರತೆಯಾಗಿದ್ದು ಏನು ಎಂದುಕೊಂಡರೆ, ಅನೇಕ ಪ್ರಶ್ನೆಗಳು ಮತ್ತೆ ಹುಟ್ಟಿಕೊಳ್ಳುತ್ತವೆ.</div>
<div style="text-align: justify;">
<br /></div>
<div style="text-align: justify;">
ಒಂದು ಸಣ್ಣ ಉದಾಹರಣೆ. ಮಂಗಳೂರಿನಲ್ಲಿ ಮೋದಿ ಮತ್ತು ರಾಹುಲ್ ಇಬ್ಬರೂ ಚುನಾವಣಾ ಪ್ರಚಾರ ಭಾಷಣ ಮಾಡಿದ್ದರು. ರಾಹುಲ್ ಚುನಾವಣಾ ಭಾಷಣದ ಮರುದಿನ ಪತ್ರಿಕೆಗಳಲ್ಲಿ ಎರಡೂ ಸಭೆಗಳ ಛಾಯಾಚಿತ್ರಗಳನ್ನು ಪ್ರಕಟಿಸಿ, ಕೆಲವು ಮಾಧ್ಯಮಗಳು ಎರಡರಲ್ಲೂ ಸೇರಿದ್ದ ಜನರನ್ನು ಅಂದಾಜಿಸಿದ್ದುವು. ರಾಹುಲ್ ಸಭೆಗೆ ಜನರೇ ಇರಲಿಲ್ಲ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಮರುದಿನ ಕಾಂಗ್ರೆಸ್ ನಾಯಕರು, ಇದೆಲ್ಲವೂ ಮಾಧ್ಯಮ ಸೃಷ್ಟಿ, ಜನ ಸಾಗರವೇ ರಾಹುಲ್ ರ್ಯಾಲಿಯಲ್ಲಿತ್ತು ಎಂಬ ಸಮಜಾಯಿಷಿ ನೀಡಿದ್ದರು. ಇಲ್ಲಿ ವಾಸ್ತವದಲ್ಲಿ ರಾಹುಲ್ ರ್ಯಾಲಿ ಸಂಪೂರ್ಣ ವಿಫಲವಾಗಿತ್ತು. ಆದರೆ ಕಾಂಗ್ರೆಸ್ಸಿಗರು ಯಾವ ಮನ:ಸ್ಥಿತಿಯಲ್ಲಿದ್ದರು ಎಂದರೆ ಕಣ್ಣೆದುರಿಗಿರುವ ಸತ್ಯವನ್ನೂ ಒಪ್ಪಿಕೊಳ್ಳಲು ಅವರಿಗೆ ಆಗುತ್ತಿರಲ್ಲ.</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEirF-Ol3Skjt7BYPgADpB1aBUc1TDMS5tyqBy3uSEgYdjyCtQdKmtUoq5_n9LHW7dqU0WJx2gOn6Eu3Yo_lLgwB2cNJgnKLoo0A8FsHdBT3q8S5TEJLJfIRNzUy1lVbxUyO2mE_3Ve7UVyA/s1600/sonia.....jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEirF-Ol3Skjt7BYPgADpB1aBUc1TDMS5tyqBy3uSEgYdjyCtQdKmtUoq5_n9LHW7dqU0WJx2gOn6Eu3Yo_lLgwB2cNJgnKLoo0A8FsHdBT3q8S5TEJLJfIRNzUy1lVbxUyO2mE_3Ve7UVyA/s1600/sonia.....jpg" height="122" width="200" /></a></div>
<div style="text-align: justify;">
ಚುನಾವಣೆ ಮತ್ತು ಫಲಿತಾಂಶದ ವಿಚಾರದಲ್ಲಿ ಮತ್ತೊಂದು ಘಟನೆಯನ್ನೂ ಗಮನಿಸಿ. ರಾಹುಲ್ ಮತ್ತು ಸೋನಿಯಾ ಇಬ್ಬರೂ ತಮ್ಮ ಪದವಿಗೆ ರಾಜೀನಾಮೆಗೆ ನೀಡಲ ಮುಂದಾದರು-ಸೋಲಿನ ಹೊಣೆ ಹೊತ್ತು!!. ಆದರೆ ಅಲ್ಲಿ ರಾಹುಲ್ಗಿಂತ ಎರಡು ಪಟ್ಟು ವಯಸ್ಸಾದವರನ್ನೂ ಹಿಡಿದು, ಪ್ರತಿಯೊಬ್ಬರೂ ಈ ಹೊಣೆಯನ್ನು ರಾಹುಲ್ ಹೊರಬೇಕಾಗಿಲ್ಲ ಎಂದರು. ಬದಲಿಗೆ ಈ ಸೋಲಿಗೆ ಅವರು ಹೊಣೆ ಮಾಡಿದ್ದು ಪರೋಕ್ಷವಾಗಿ ಮನಮೋಹನ್ ಸಿಂಗ್ ಅವರನ್ನು!!. ಕಾಂಗ್ರೆಸ್ಮಟ್ಟಿನ ದುರಂತ ನೋಡಿ. ಈ ನೆಹರೂ ಕುಟುಂಬಕ್ಕೆ ನಿಷ್ಠರಾದಷ್ಟು ಅವರು ಎಂದಿಗೂ ದೇಶದ ಜನತೆಗೋ, ಪ್ರಜಾಪ್ರಭುತ್ವ ವ್ಯವಸ್ಥೆಗೋ ನಿಷ್ಠರಾಗಲೇ ಇಲ್ಲ. ಮನ ಮೋಹನ್ ಹೇಗೆ ಆಡಳಿತ ನಡೆಸಿದ್ದರು ಎಂಬುದು ಇಡೀ ದೇಶಕ್ಕೆ ಗೊತ್ತಿದೆ ಅವರು ಕೇವಲ ಸೋನಿಯಾ ಕ್ರಪಾಪೋಷಿತ ಪ್ರಧಾನಿಯಾಗಿದ್ದರು ಎಂಬುದು, ಎಲ್ಲಿಯ ತನಕ ಅವರ ಕೈಗಳನ್ನು ಕಟ್ಟಿಹಾಕಲಾಗಿತ್ತು ಎಂದರೆ ಅವರ ನಿರ್ಧಾರಗಳನ್ನು ರಾಹುಲ್ ಗಾಂಧಿ ಸಹಾ ಪ್ರಶ್ನಿಸುತ್ತಿದ್ದರು ಮತ್ತು ಇಡೀ ಸರಕಾರವೇ ಅವರ ಹಿಂದಿದ್ದರೂ, ರಾಹುಲ್ ಹೇಳಿ ಮನಮೋಹನರು ನಿರ್ಧಾರಗಳನ್ನು ಬದಲಿಸುತ್ತಿದ್ದರು ಎಂಬುದು ಇಡೀ ದೇಶಕ್ಕೇ ಗೊತ್ತಿರುವ ಸತ್ಯ!. ಹೀಗಿದ್ದೂ ಮನಮೋಹನರನ್ನು ಇಂದು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಲ್ಲಿ ಕಾಂಗ್ರಸಿಗರು ಮುಗಿಬೀಳುತ್ತಿದ್ದಾರೆ. ಕಾಂಗ್ರೆಸಿಗರು ತಿಳಿದಿರಲೇ ಬೇಕಾದ ಸತ್ಯ ಮತ್ತೊಂದಿದೆ. ಅದು ಮನ ಮೋಹನರಲ್ಲದೇ ಬೇರಾವೇ 'ಸ್ವಂತಿಕೆ' ಇದ್ದ ವ್ಯಕ್ತಿ ಪ್ರಧಾನಿ ಪಟ್ಟದಲ್ಲಿದ್ದಿದ್ದರೆ, ಎರಡು ಅವಧಿಗೆ ಪ್ರಧಾನಿಯಾಗುವುದು ಕಷ್ಟವಿತ್ತು! ಒಂದೊಮ್ಮೆ ಇದ್ದಿದ್ದರೂ, ಸೋನಿಯಾ-ರಾಹುಲ್ ಕೇವಲ ಪಕ್ಷಚಟುವಟಿಕೆಗೆ ಮಾತ್ರ ಸೀಮಿತವಾಗಿರುತ್ತಿದ್ದರು.!!. ಇಂತಹ ಪ್ರಾಥಮಿಕ ಹಂತದ ತಪ್ಪುಗಳೇ ಇಂದು ಕಾಂಗ್ರೆಸ್ಗೆ ಈ ಹೀನಾಯ ಸ್ಥಿತಿ ಒದಗಿಸಿದೆ.</div>
<div style="text-align: justify;">
ಕಾಂಗ್ರೆಸ್ನ ಇನ್ನೊಂದು ಸಂಸ್ಕೃತಿಯ ಬಗ್ಗೆ ಇಲ್ಲಿ ಹೇಳಲೇ ಬೇಕು. ಮೊನ್ನೆ ಫಲಿತಾಂಶ ಪ್ರಕಟವಾಗುತ್ತಲೇ ಮತ್ತೆ ಓರ್ವ ಕಾಂಗ್ರೆಸ್ ನಾಯಕ, ಶಾಸಕ ಅದೇ ಹಳೆಯ ಮಾತನ್ನು ಎಸೆದುಬಿಟ್ಟರು. ಈ ಸಲದ ಚುನಾವಣೆಯನ್ನು ನಾವು ಸತ್ಯದಿಂದ ಎದುರಿಸಿದರೆ, ಭಾಜಪ ಹಣ-ಹೆಂಡ ಹಂಚಿ ಚುನಾವಣೆ ಗೆದ್ದಿದೆ!!. ಈ ಶಾಸಕ ಮಹಾಶಯ ಇನ್ನೂ ಜನರನ್ನೇ ಜರೆಯುವುದನ್ನು ಬಿಟ್ಟಿಲ್ಲ!. ಅಂದರೆ ಮತದಾನ ಮಾಡಿದ, ಅಥವಾ ಕಾಂಗ್ರೆಸ್ ವಿರೋಧಿಗಳಿಗೆ ಮತದಾನ ಮಾಡಿದ ಮತದಾರರೆಲ್ಲರೂ ಹಣ ಪಡೆದು, ಹೆಂಡ ಕುಡಿದು ಮತದಾನ ಮಾಡಿದ್ದರು ಎಂಬುದು ಇವರ ಮಾತಿನ ಅರ್ಥ. ದೇಶದಲ್ಲಿ ಇಂದು ಯುಪಿಎ ಗೆದ್ದ ೫೯ಕ್ಷೇತ್ರದ ಮತದಾರರನ್ನು ಬಿಟ್ಟು, ಉಳಿದ ಕ್ಷೇತ್ರದಲ್ಲೆಲ್ಲಾ ಈ ಅವ್ಯವಾಹಾರ ನಡೆದಿದೆ ಎಂಬುದು ಅವರ ಮಾತಿನ ಮರ್ಮವಾದರೆ, ಮತ್ತು ಇಂದಿಗೂ ಪ್ರಜಾಪ್ರಭುತ್ವ ಭಾgತದಲ್ಲಿ ಹೆಂಡ-ಹಣದಿಂದಲೇ ನಾಯಕರು ಗೆಲ್ಲುತ್ತಿದ್ದಾರೆ ಎಂಬುದಾದರೆ, ಕಳೆದ ಚುನಾವಣೆಯಲ್ಲಿ ಇವರು ಗೆದ್ದದ್ದು...??? </div>
<div style="text-align: justify;">
<br /></div>
<div style="text-align: justify;">
ದುರಂತವೆಂದರೆ ಇಂತಹ ಮಾತುಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ!. ಆದರೆ ಜನ ಮಾತ್ರ ಇದರ ಗಂಭೀರತೆಯನ್ನು ಅಂತಹ ನಾಯಕರಿಗೆ ತೋರಿಸಲು, ಮತ್ತೊಂದು ಚುನಾವಣೆಯ ತನಕವೂ ಕಾದು ಕೂತಿರುತ್ತಾರೆ. ಈ ಸಲವೂ ಆಗಿದ್ದು ಅದೇ. ಮತ್ತು ಇದು ಪಕ್ಷಾತೀತವಾಗಿ ಎಲ್ಲರೂ ಒಪ್ಪಿಕೊಳ್ಳಲೇ ಬೇಕಾದ ಸತ್ಯ. ಮುಖ್ಯವಾಗಿ ರಾಜಕಾರಣಿಗಳು ಅರಿತುಕೊಳ್ಳಲೇ ಬೇಕಾದ ಮತ್ತೊಂದು ಸತ್ಯವೆಂದರೆ ಇಂದು ಸಾರ್ವಜನಿಕರ ನೆನಪಿನ ಶಕ್ತಿ 'ದೀರ್ಘ'ಕಾಲದ್ದು!</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEjadyt7S6W1xV5SHGC07Vx4ryMNNdwDsCDJKpMivIQp93Syy3RNN58OSJKZDENwUxYmTL4E8AbOyEk6iZa7_WD6R7m156vvAvS3OVUAnLBF5d8JlAerSYNLiHF0A2Dh85M6lSQQfj7mpSoy/s1600/sonia.........jpg" imageanchor="1" style="clear: right; float: right; margin-bottom: 1em; margin-left: 1em;"><img border="0" src="https://blogger.googleusercontent.com/img/b/R29vZ2xl/AVvXsEjadyt7S6W1xV5SHGC07Vx4ryMNNdwDsCDJKpMivIQp93Syy3RNN58OSJKZDENwUxYmTL4E8AbOyEk6iZa7_WD6R7m156vvAvS3OVUAnLBF5d8JlAerSYNLiHF0A2Dh85M6lSQQfj7mpSoy/s1600/sonia.........jpg" height="113" width="200" /></a></div>
<div style="text-align: justify;">
ಸೋನಿಯಾ-ರಾಹುಲ್ ಪರ್ವದ ಬಗ್ಗೆ ಯೋಚಿಲೇ ಬೇಕು. ಅವರ ರಾಜೀನಾಮೆ ಪ್ರಹಸನ ಮತ್ತು ಅವರೇ ಮುಂದೆಯೂ ಪಕ್ಷದ ಚುಕ್ಕಾಣಿ ಹಿಡಿಯುವಲ್ಲಿ ಯಾರಿಗೂ ಯಾವುದೇ ಅನುಮಾನಗಳಿರಲಿಲ್ಲ. ಅದೇ ಆಗಿದೆ. ಅಂದರೆ ಇಂದು ಕಾಂಗ್ರೆಸ್ ಪರಿಸ್ಥಿತಿ ಹೇಗಾಗಿದೆ ಎಂದರೆ, ಯಾರೇ ಪ್ರಧಾನಿಯಾಗಲಿ, ಯಾರೇ ಚುನಾವಣೆಗೆ ಗೆಲ್ಲಲಿ, ತಮ್ಮ ಸ್ವಂತಿಕೆಯನ್ನು ಈ ನೆಹರೂ ಕುಟುಂಬಕ್ಕೆ ಒಪ್ಪಿಸಿಯೇ ಇರಬೇಕಾಗುತ್ತದೆ ಎಂಬುದು. ಇದಕ್ಕೆ ತಾಜಾ ಉದಾಹರಣೆಯೂ ಮತ್ತೊಂದಿದೆ. ಲೋಕಸಭಾ ಚುನಾವಣೆಯ ಸೋಲಿನ ನಂತರ, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊದಲು ಮಾಡಿದ್ದು ತಮ್ಮ ಪಟ್ಟ ಗಟ್ಟಿಮಾಡಿಕೊಳ್ಳುವ ಪ್ರಯತ್ನ. ಎಲ್ಲರಿಗೂ ತಿಳಿದಿರುವ ಸತ್ಯ ಎಂದರೆ, ಕಾಂಗ್ರೆಸ್ ಏನಾದರೂ ದೇಶದಲ್ಲಿ ಈ ರೀತಿಯ ಹೀನಾಯ ಸೋಲನ್ನು ಅಪ್ಪಿಕೊಳ್ಳದೇ, ಸಾಧಾರಣ ಸಾಧನೆಯನ್ನಾದರೂ ಮಾಡಿ, ಕರ್ನಾಟಕದಲ್ಲಿ ಈ ಸಾಧನೆ ಆಗಿದ್ದಿದ್ದರೆ, ಸಿದ್ಧರಾಮಯ್ಯ ಈಗಾಗಲೇ ಪದತ್ಯಾಗ ಮಾಡಿಯಾಗಿರಬೇಕಿತ್ತು. ಅವರ ಅದ್ರಷ್ಟ, ಒಂಭತ್ತಾದರೂ ಸ್ಥಾನದಲ್ಲಿ ಕಾಂಗ್ರೆಸ್ ಗೆದ್ದತು. ದೆಹಲಿಗೆ ಓಡಿದ ಸಿದ್ದರಾಮಯ್ಯ ಮಾಡಿದ ಮೊದಲ ಕೆಲಸ, ತನ್ನ ಪಟ್ಟದ ಗಟ್ಟಿತನದ ಖಾತ್ರಿ. ಅದು ಸಿಕ್ಕ ನಂತರವೇ ಅವರು ಮರಳಿ ಬೆಂಗಳೂರಿಗೆ ಬಂದು ನಿರಾಳವಾದರು. ಹೈಕಮಾಂಡ್ ಇರಬೇಕು ನಿಜ. ಆದರೆ ಎಲ್ಲಿಯ ತನದ ಅದು ಸೋನಿಯಾ ಮಯವಾಗಿದೆ ಎಂದರೆ, ಕರ್ನಾಟಕ ಜನತೆ, ತನ್ನದೇ ಸರಕಾರದ ಶಾಸಕ-ಸಚಿವರು, ಬಹುಮತ...ಇತ್ಯಾದಿಗಳೆಲ್ಲವೂ ಸೋನಿಯಾ ತೀರ್ಮಾನದ ನಂತರ ಬರುತ್ತವೆ ಎಂಬುದನ್ನು ಕಾಂಗ್ರೆಸ್ ಇತ್ತೀಚೆಗೆ ಹೆಜ್ಜೆ ಹೆಜ್ಜೆಗೂ ಜನತೆಗೆ 'ಮನವರಿಕೆ'ಮಾಡಿಕೊಟ್ಟಿದೆ!.</div>
<div style="text-align: justify;">
<br /></div>
<div style="text-align: justify;">
ಇಲ್ಲಿ ಒಟ್ಟಾರೆಯಾಗಿ ಪರಿಸ್ಥಿತಿಯನ್ನು ಗಮನಿಸಿದರೆ, ಮೋದಿ ಅಲೆ ಎಷ್ಟು ಕೆಲಸ ಮಾಡಿದೆಯೋ, ಅಷ್ಟೇ ಪೂರಕ ವಾತಾವರಣವನ್ನು ಕಾಂಗ್ರೆಸ್ ಸೋಲಿಗೆ ಒದಗಿಸಿದ್ದು, ಕಾಂಗ್ರೆಸ್ ವಿರೋಧಿ ಅಲೆ!!. ಕಾಂಗ್ರೆಸ್ ಪ್ರತೀ ಹೆಜ್ಜೆಯಲ್ಲೂ ಹೈಕಮಾಂಡ್ ಜಪ ಮಾಡುತ್ತಲೇ ಕೆಲಸ ಮಾಡಿತೇ ಹೊರತು, ಒಮ್ಮೆಯೂ ಅದು ಜನರ ನಡುವೆ ಬೆರೆಯಲೇ ಇಲ್ಲ. ಏರುತ್ತಿರುವ ಬೆಲೆ ಏರಿಕೆಗೆ ಕಡಿವಾಣ ಹಾಕುವಲ್ಲಿ ಸೋಲು, ತನ್ನದೇ ಅಂಗಪಕ್ಷಗಳ ನಾಯಕರ ಭ್ರಷ್ಟಾವಾರವನ್ನೂ ಸಹಿಸಿಕೊಂಡಿದ್ದು, ಅಭ್ಯರ್ಥಿಗಳ ಆಯ್ಕೆಯಲ್ಲಿಯೂ ತನ್ನದೇ ತೀರ್ಮಾನಗಳಿಗೆ ಬದ್ಧವಾಗಿ, ಜನರ ನಾಡಿಮಿಡಿತಕ್ಕೆ ಕನಿಷ್ಠ ಆದ್ಯತೆಯನ್ನೂ ನೀಡದ್ದು...ಹೀಗೆ ಪಟ್ಟಿ ಉದ್ದವಾಗಿದೆ.</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEjMh0kByzJvi8Ni2WVmVvR9_YZkWxr3NMgekGD4J4QOV3fKO7wa3SITXBkjLv636mzOhm-aaLuzAADWbXjyKOpzE2wh_oOA00dv9tOn40wlBcw-_94KUu56mrdki1YrEWABXc3PNEViutg7/s1600/sonia.jpg" imageanchor="1" style="clear: right; float: right; margin-bottom: 1em; margin-left: 1em;"><img border="0" src="https://blogger.googleusercontent.com/img/b/R29vZ2xl/AVvXsEjMh0kByzJvi8Ni2WVmVvR9_YZkWxr3NMgekGD4J4QOV3fKO7wa3SITXBkjLv636mzOhm-aaLuzAADWbXjyKOpzE2wh_oOA00dv9tOn40wlBcw-_94KUu56mrdki1YrEWABXc3PNEViutg7/s1600/sonia.jpg" height="133" width="200" /></a></div>
<div style="text-align: justify;">
ಕಾಂಗ್ರೆಸ್ ಪಾಲಿಗೆ ಮತ್ತೊಂದು ಆಘಾತ ನೀಡಿದ್ದು, ಪಕ್ಷದೊಳಗಿನ ನಾಯಕರ ಭಿನ್ನಮತ. ಉಡುಪಿ ಮತ್ತು ಮಂಡ್ಯ ಕ್ಷೇತ್ರಗಳು ತಕ್ಷಣಕ್ಕೆ ಹೊಳೆಯುವ ಉದಾಹರಣೆಗಳು ಎನ್ನಲಾಗುತ್ತದೆ!. ಎರಡೂ ಕಡೆ ಪಕ್ಷದೊಳಗೇ ಒಂದು ಗೊಂದಲವಿತ್ತು. ಇದು ಒಳಗೊಳಗೇ ಗುಸು ಗುಸು ಆಗಿ, ಕೊನೆಯ ಕ್ಷಣದ ವರೆಗೂ ಗೊಂದಲವಿತ್ತು ಎಂಬ ಹೇಳಿಕೆಯೂ ಕೇಳಿಬರುತ್ತದೆ!. ಇದೆಲ್ಲವೂ ಮೋದಿ ಅಲೆಗೆ ಪೂರಕಾಗಿ ಮತ್ತೆ ಮತ್ತೆ ಶಕ್ತಿ ನೀಡಿದುವು.</div>
<div style="text-align: justify;">
<br /></div>
<div style="text-align: justify;">
ಈ ಎಲ್ಲಾ ಅಂಶಗಳೊಂದಿಗೆ ಕಾಂಗ್ರೆಸ್ ನಾಯಕರು ತಮ್ಮೊಳಗೆ ತಾವೇ ನಮ್ಮನ್ನು ಹಿಡಿದಿಡುವವರು ಯಾರೂ ಇಲ್ಲವೆಂಬಂತೆ ಉದ್ದಟತನವನ್ನು ತೋರಿದ್ದರು. ಉದಾಹರಣೆಗೆ ಮಂಗಳೂರಿನಲ್ಲಿ ಜನಾರ್ದನ ಪೂಜಾರಿಯವರು ಹೋದೆಡೆಯಲ್ಲೆಲ್ಲಾ ನನ್ನ ವಿರೋಧಿ ಮೋದಿ, ನಳಿನ್ ಕುಮಾರ್ ಕಟೀಲ್ ಅಲ್ಲ ಎಂದೇ ಹೇಳುತ್ತಿದ್ದರು. ಆ ಕ್ಷಣಕ್ಕೆ ಅವರ ಮನದಲ್ಲಿದ್ದುದು ಏನೇ ಯೋಜನೆಯಾಗಿದ್ದರೂ, ಬುದ್ದಿವಂತ ಮತದಾರ ಇವರ ಮಾತುಗಳನ್ನು ಕೇಳಿ ಒಳಗೊಳಗೇ ನಕ್ಕಿದ್ದ!. ಮತ್ತು ಮೋದಿ ವಿರೋಧಿ ಅಲೆಯ ಸೃಷ್ಟಿಗೂ ಕಾಂಗ್ರೆಸ್ ಹಿಡಿದ ಮಾರ್ಗ, ಸರ್ವ ಸಮ್ಮತವಾಗಿರಲಿಲ್ಲ. ಅದಕ್ಕೆ ಪೂರಕವೆಂಬಂತೆ ಇವರ ರಣತಂತ್ರ ಸಾಗಿದ್ದು. ರಾಜ್ಯದಲ್ಲಿಯೂ ಕಾಂಗ್ರೆಸ್ ನಾಯಕರು ತಮ್ಮ ಸಾಧನೆಯನ್ನು ಹೇಳಿಕೊಳ್ಳಲು ಎಂದೂ ಧೈರ್ಯ ತೋರಲಿಲ್ಲ. ಕೇವಲ ಮೋದಿ ವಿರೋಧಿ ಹೇಳಿಕೆಗಳಲ್ಲಿಯೇ ಕಾಲ ಕಳೆದರು. ಇದೇ ರೋಗ ಕಾಂಗ್ರೆಸ್ಸಿಗರಿಗೆ ದೇಶ ವ್ಯಾಪಿಯಾಗಿ ಆವರಿಸಕೊಂಡದ್ದು ಎದ್ದು ಕಾಣುತ್ತಿತ್ತು. ಉದಾಹರಣೆಗೆ ಮೋದಿಯವರನ್ನು ಹಳಿಯುವಲ್ಲಿ ನರಹಂತಕ ಎಂಬಂತ ಕೆಳದರ್ಜೆಯ ಪದಪ್ರಯೋಗವನ್ನು ಒಂದು ರಾಜ್ಯದ ಮುಖ್ಯಮಂತ್ರಿಯೇ ಮಾಡಿದ್ದನ್ನು ನಾವೂ ಕೇಳಿದ್ದೇವೆ.</div>
<div style="text-align: justify;">
<br /></div>
<div style="text-align: justify;">
ಹೀಗೆ ಎಲ್ಲಾ ಅಂಶಗಳೂ ಮೋದಿ ಪಡೆಗೆ ನೆರವಾಗುತ್ತಲೇ ಹೋದುವು. ಕಾಂಗ್ರೆಸ್ ಸಾಧನೆಯನ್ನೂ ಸೇರಿ ಎಲ್ಲಾ ರಂಗಗಳಲ್ಲಿಯೂ ಸೋಲೊಪ್ಪಿಕೊಳ್ಳುತ್ತಲೇ, ಅಧೀರತೆಯಿಂದಲೇ ಈ ಚುನಾವಣೆಯನ್ನು ಎದುರಿಸಿದ್ದು ಮೇಲ್ನೋಟಕ್ಕೇ ಕಂಡು ಬರುತ್ತಿತ್ತು. ಪರಿಣಾಮವಾಗಿ ಬುದ್ದಿವಂತ ಮತದಾರ ತನ್ನ ಚಾಣಾಕ್ಷತೆಯನ್ನು ತೋರಿಸಿದ್ದಾನೆ. ಮೋದಿ ಪ್ರಧಾನಿಯಾಗುತ್ತಿದ್ದಾರೆ.</div>
<div style="text-align: justify;">
<br /></div>
<div style="text-align: justify;">
ಇಲ್ಲಿ ಕರ್ನಾಟಕದ ಮಟ್ಟಿಗೆ ಹೇಳಲೇ ಬೇಕಾದ ಮತ್ತೂ ಒಂದು ಅಂಶವಿದೆ. ಕೇವಲ ಒಂದೇ ವರ್ಷದ ಕೆಳಗೆ ಇದ್ದ ಕಾಂಗ್ರಸ್ ಅಲೆಯಲ್ಲಿ ಹೆಚ್ಚೆಂದರೆ ಎಷ್ಟು ಬದಲಾವಣೆ ಬರಬಹುದು ಎಂಬ ಅತೀ ಆತ್ಮವಿಶ್ವಾಸ ಕಾಂಗ್ರೆಸಿಗರನ್ನು ಆಳುತ್ತಿತ್ತು. ಇಂದು ಮತದಾರ ಎಷ್ಟು ಪ್ರಬುದ್ಧನಾಗಿದ್ದಾನೆ ಎಂದರೆ ಕೇವಲ ಒಂದೇ ತಿಂಗಳಲ್ಲಿ ಆತ ತನ್ನ ಆಯ್ಕೆಯಲ್ಲಿ ಬದಲಾವಣೆ ಮಾಡಿಕೊಳ್ಳಬಲ್ಲ!!. ಇದೇ ಆತ್ಮವಿಶ್ವಾಸದಿಂದ ಆತ ಪ್ರತೀ ಬಾರಿಯೂ ಯೋಚಿಸಿ ಮತ ನೀಡುತ್ತಿರುವುದು ಇತ್ತೀಚಿನ ಚುನಾವಣೆಗಳಲ್ಲಿ ಕಂಡುಬರುತ್ತಿದೆ. ಇದಕ್ಕೂ ಉದಾಹರಣೆ ಎಂದರೆ, ಭಾಜಪಕ್ಕೆ ಹರಿವಾಣದಲ್ಲಿಟ್ಟು ಕೊಟ್ಟ ಅಧಿಕಾರಕ್ಕೆ, ಅವರು ಕರ್ನಾಟಕದ ಜನತೆಗೆ ನೀಡಿದ ದ್ರೋಹಕ್ಕೆ ಪಾಠ ನೀಡಲು ಅವನು ವರ್ಷದ ಕೆಳಗೆ ಕಾಂಗ್ರೆಸ್ ಆಯ್ಕೆ ಮಾಡಿದ್ದ!. ಇದರ ಒಳ ಮರ್ಮ ಅರಿಯದೇ ಕಾಂಗ್ರೆಸ್ ಇನ್ನೂ ಅದೇ ವಿಜಯ ಗುಂಗಿನಲ್ಲಿ ತೇಲಿದ್ದೇ, ಈ ಫಲಿತಾಂಶಕ್ಕೆ ಮತ್ತೂ ಒಂದು ಕಾರಣ.</div>
<div style="text-align: justify;">
<br /></div>
<div style="text-align: justify;">
ಒಟ್ಟಾರೆಯಾಗಿ ಕಾಂಗ್ರೆಸ್ ಹೀನಾಯವಾದ ಸೋಲು ಕಂಡಿದೆ. ತನ್ನ ಎಂದಿನ ಪರಂಪರೆಯನ್ನು ಕಾಯ್ದುಕೊಂಡಿರುವ ಅದು ಮತ್ತೆ ರಾಹುಲ್-ಸೋನಿಯಾ ರಕ್ಷಣೆಯೊಂದನ್ನೇ ಅಜೆಂಡಾವಾಗಿರಿಸಿಕೊಂಡು, ಅದೇ ತಪ್ಪನ್ನು ಪುನರಪಿ ಮಾಡುತ್ತಿದೆ. ಯಾಕೆ, ಶತಮಾನದ ಇತಿಹಾಸದ ಕಾಂಗ್ರೆಸ್ಗೆ ಈ ಇಬ್ಬರು ವಿಫಲ ನಾಯಕರನ್ನು ಬಿಟ್ಟರೆ ಬೇರೆ ಆಯ್ಕೆಯೇ ಇಲ್ಲವೇ???</div>
<div style="text-align: justify;">
<br /></div>
<div style="text-align: justify;">
<b>ಎಲ್ಲಕ್ಕೂ ಪೂರಕವೆಂಬಂತೆ ಮೊಬೈಲ್ನಲ್ಲಿ ಬಂದ ಎಸ್ಎಂಎಸ್ ಒಂದು ಹೀಗಿದೆ:- ಮನ ಮೋಹನ್ ಸಿಂಗ್ ಅವರ ಪತ್ನಿ, ಚುನಾವಣಾ ಪಲಿತಾಂಶ ಪ್ರಕಟವಾಗುತ್ತಲೇ ಸೋನಿಯಾ ಮನೆಗೆ ಹೋದರಂತೆ! ಯಾಕೆಗೊತ್ತೇ? ಅವರ ಬಳಿ ಇದ್ದ ತಮ್ಮ ರಿಮೋಟ್ ವಾಪಾಸು ಪಡೆಯಲು!!!.</b></div>
<div style="text-align: justify;">
<br /></div>
<div style="text-align: justify;">
<br /></div>
</div>
Anonymoushttp://www.blogger.com/profile/07026221826810784770noreply@blogger.com1tag:blogger.com,1999:blog-6634091388019397795.post-58936190951548573102014-05-14T04:36:00.003-07:002014-05-14T04:36:37.205-07:00ಪರೀಕ್ಷಾ ಫಲಿತಾಂಶದ ಸುತ್ತ...<div dir="ltr" style="text-align: left;" trbidi="on">
<div style="text-align: justify;">
<span style="color: blue;">ಒಂದು ದುರ್ಬಲ ಗಳಿಗೆಯಲ್ಲಿ ಮಗುವಿಗೆ ಬದುಕು ಎಂದರೆ ಶಿಕ್ಷಣ ಮತ್ತು ಅದರಲ್ಲಿ ಯಶಸ್ಸು ಮತ್ತು ಅದರಾಚೆಗೆ ಏನೂ ಇಲ್ಲ ಎಂಬ ಭಾವನೆ ಗಟ್ಟಿಯಾಗುತ್ತದೆ. ಪರಿಣಾಮವಾಗಿ ಫಲಿತಾಂಶದಲ್ಲಿ ಸ್ವಲ್ಪ ಏರು ಪೇರಾದರೂ ಅದು ಮೊದಲು ಯೋಚಿಸುವುದು ಸಾವಿಗೆ ಶರಣಾಗುವ ಬಗ್ಗೆ. </span><span style="color: purple;">ಜನಪ್ರತಿನಿಧಿಯಲ್ಲಿ ನನ್ನ ಈ ವಾರದ ಲೇಖನ </span></div>
<div style="text-align: justify;">
<br /></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEgKIbvn6oHaae-yDJZn8qhmMO8rAHEhKPFQGkHHTTEhFBAvpzTg9KIVtDlUnRWTqC0wM49NdB9rph5TCEvT37XCREBCb0CAV6H1F1JBTOaF9pV0LyKCH85kHiHIIopYN-_4v60b2howYQti/s1600/exam-stress.jpg" imageanchor="1" style="clear: right; float: right; margin-bottom: 1em; margin-left: 1em;"><img border="0" src="https://blogger.googleusercontent.com/img/b/R29vZ2xl/AVvXsEgKIbvn6oHaae-yDJZn8qhmMO8rAHEhKPFQGkHHTTEhFBAvpzTg9KIVtDlUnRWTqC0wM49NdB9rph5TCEvT37XCREBCb0CAV6H1F1JBTOaF9pV0LyKCH85kHiHIIopYN-_4v60b2howYQti/s1600/exam-stress.jpg" height="170" width="320" /></a>ಇದೀಗ ಎಲ್ಲೆಡೆಯಲ್ಲಿಯೂ ಪಲಿತಾಂಶದ ಕಾಲ. ನಾನು ಹೇಳುತ್ತಿರುವುದು ಶೈಕ್ಷಣಿಕ ಫಲಿತಾಂಶಗಳ ಬಗ್ಗೆ. ಮೊನ್ನೆ ಎಸ್ ಎಸ್ ಎಲ್ ಸಿ ಫಲಿತಾಂಶದ ದಿನ ನನ್ನ ತೀರಾ ಹತ್ತಿರದ ಸಂಬಂಧಿ ಹುಡುಗಿಯೋರ್ವಳ ಫಲಿತಾಂಶವನ್ನು ನಾನೇ ನೋಡುತ್ತಿದ್ದೆ. ಅವಳಿಗೆ ಒಟ್ಟೂ 66 ಶೇಕಡಾ ಅಂಕಗಳು ಬಂದಿದ್ದುವು. ಅದನ್ನು ನಾನು ಸಂತಸದಿಂದಲೇ ಆಕೆಗೆ ಹೇಳಿದರೆ, ಅವಳು ತಾನು ಅನುತ್ತೀರ್ಣಳೇ ಆಗಿರುವ ಹಾಗೆ ಗೋಳೋ ಎಂದು ಅಳಲಾರಂಭಿಸಿದಳು. ಇದೇನೂ ಅಚ್ಚರಿಯ ವಿಷಯವಾಗಿರಲಿಲ್ಲ. ಇದಕ್ಕೆ ಕಾರಣ, 'ಕನಿಷ್ಟ' 90 ಕ್ಕಿಂತ ಹೆಚ್ಚು ಅಂಕ ಪಡೆಯಲಾಗದ ಬಗ್ಗೆ ಅವಳಿಗೆ ದು:ಖವಾಗುತ್ತಿತ್ತು. ಅದಕ್ಕೆ ಸರಿಯಾಗಿ ಅಲ್ಲಿ ಸೇರಿದ್ದ ಕೆಲವರೂ, 66.....ಛೇ, ಕಡಿಮೆ ಆಯ್ತಲ್ಲ ಎಂಬ ಒಗ್ಗರಣೆ...</div>
<div style="text-align: justify;">
<br /></div>
<div style="text-align: justify;">
ನೀವೂ ಪತ್ರಿಕೆಗಳಲ್ಲಿ ಓದಿರಬಹುದು. ಓರ್ವ ಹುಡುಗಿ, ತನ್ನ ಸಂಬಂಧಿಯೋರ್ವ ವಿನೋದಕ್ಕಾಗಿ, 'ನೀನು ಫೇಲ್'ಎಂದದ್ದನ್ನು ಕೇಳಿ, ಹಿಂದೆ ಮುಂದೆ ಯೋಚಿಸದೇ, ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಾಸ್ತವವಾಗಿ ಆಕೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಳು. ಕೇವಲ ಒಂದು ಕ್ಷಣದ ದೌರ್ಬಲ್ಯಕ್ಕೆ ಬುದ್ದಿ ಕೊಟ್ಟ ಪರಿಣಾಮ ಇದು.</div>
<div style="text-align: justify;">
<br /></div>
<div style="text-align: justify;">
ಇದೆಲ್ಲಾ ಯಾಕೆ?? ಒತ್ತಡ! ವಿದ್ಯಾರ್ಥಿಯ ಮೇಲೆ ಬೀಳುವ ಬಹುಮುಖಿ ಒತ್ತಡ. ಶಿಕ್ಷಣವನ್ನು ಕೇವ<span style="text-align: left;">ಲ ಜೀವನದ ಒಂದು ಅವಿಭಾಜ್ಯ ಅಂಗವೇ ಹೊರತು, ಅದರಲ್ಲಿನ ಅಪಯಶದಿಂದ ಜೀವನವೇ ಮುಗಿದು ಹೋಗಲಿಲ್ಲ ಎಂಬುದನ್ನು ಮಕ್ಕಳ ಮನಸ್ಸಿಗೆ ದ್ರಢಪಡಿಸಲು ನಾವು ಇಂದು ಸೋಲುತ್ತಿದ್ದೇವೆ. ಬೇರಯವರೊಡನೆ ಹೋಲಿಕೆ, ಇಂತಿಷ್ಟೇ ಅಂಕ ತೆಗೆಯಬೇಕು ಎಂಬ ಒತ್ತಾಸೆ, ಇದಿಲ್ಲವಾದರೆ ಮತ್ತೆ ಬದುಕೇ ಶೂನ್ಯ ಎಂಬ ಹುಂಬತನ ಇದಕ್ಕೆಲ್ಲಾ ಕಾರಣ. ಒಂದು ರೀತಿಯಲ್ಲಿ ಇದನ್ನು ಕ್ರಿಕೆಟ್ ಆಟಕ್ಕೆ ಹೋಲಿಸಬಹುದು. ಮೊನ್ನೆ ಟಿ೨೦ ಪಂದ್ಯದ ಫೈನಲ್ನಲ್ಲಿ ಯುವರಾಜ್ ಸಿಂಗ್ರ ಒಂದು ಕೆಟ್ಟ ಆಟ, ಇಡೀ ಕ್ರಿಕೆಟ್ ಜಗತ್ತಿನ ಟೀಕೆಗೆ ಕಾರಣವಾಯಿತು. ಯುವರಾಜ್ ಈ ಹಿಂದೆ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟದ್ದನ್ನೂ, ಮುಂದೆಯೂ ಆ ಸಾಧನೆಯ ಸಾಧ್ಯತೆಯನ್ನು ಎಲ್ಲರೂ ಮರೆತರು. ಪರಿಣಾಮವಾಗಿ ಈ ಕ್ರಿಕೆಟಿಗನ ಮನೆಯ ಮೇಲೆ ದಾಳಿ ಆಯಿತು. ಎಲ್ಲಿ ನೋಡಿದರೂ ಯುವರಾಜನನ್ನು ಓರ್ವ ಖಳನಾಯಕನಂತೆ ಚಿತ್ರಿಸಲಾಯಿತು. ಹಿಂದಿನ ಮತ್ತು ಮುಂದಿನ ಅವರ ಎಲ್ಲಾ ಸಾಧನೆಗಳ ಬಗ್ಗೆ ಹೆಮ್ಮೆ ಬಿಡಿ, ಸಾಧಾರಣ ನೆನಪೂ ಇಲ್ಲವಾಯಿತು. ಯುವರಾಜ್ ಎಂಬ ಕ್ರಿಕೆಟಿಗನ ಕ್ರೆಕೆಟ್ ಜೀವನ ಕೇವಲ ಶೂನ್ಯ ಸಂಪಾದನೆ ಎಂಬಂತೆ ಚಿತ್ರಿಸಲಾಯಿತು.</span></div>
<div style="text-align: justify;">
<br /></div>
<div style="text-align: justify;">
ಈ ಶಿಕ್ಷಣದ ವಿಷಯದಲ್ಲಿಯೂ ಹಾಗೆಯೇ ಆಗುತ್ತಿದೆ. ಮಗು ಶಾಲೆಗೆ ಹೋದಾಗಿನಿಂದ ಅದರ ಮೇಲೆ ಎಲ್ಲಕ್ಕೂ ನಿಯಂತ್ರಣ ಆರಂಭವಾಗುತ್ತದೆ. ಎಲ್ಲಕ್ಕೂ ಬೇರೆ ಮಕ್ಕಳ ಜೊತೆ ಹೋಲಿಕೆ. ಪ್ರತೀ ಬಾರಿ ಈಗಿನ ಂ + ನಿರೀಕ್ಷೆ. ಪರೀಕ್ಷೆ ಬಂತೆಂದರೆ ಅದಕ್ಕೆ ಎಲ್ಲಿಲ್ಲದ ಒತ್ತಡ...ಪರಿಣಾಮ ಪರೀಕ್ಷೆಯ ಭಯ, ಶಿಕ್ಷಕರ ಭಯ, ಪೋಷಕರ ಭಯ, ಸ್ನೇಹಿತರ ಭಯ, ಸಂಬಂಧಿಗಳ ಭಯ, ಅಕ್ಕ ಪಕ್ಕದವರ ಭಯ ಮತ್ತು ಒಟ್ಟಾರೆಯಾಗಿ ಮಗುವಿನ ಬದುಕು ಕೇವಲ ಭಯಾನಕವಾಗಿರುತ್ತದೆ. ಇಂದು ಶಿಕ್ಷಣ ಒಂದು ಮುಗಿದರೆ ಸಾಕಪ್ಪಾ ಎಂದುಕೊಂಡು ಮಗು ನರ್ಸರಿಯಿಂದಲೇ ಭಯ-ಭಯ-ಭಯದಲ್ಲಿ ಬದುಕಲಾರಂಭಿಸುತ್ತದೆ.</div>
<div style="text-align: justify;">
<br /></div>
<div style="text-align: justify;">
ಒಂದು ದುರ್ಬಲ ಗಳಿಗೆಯಲ್ಲಿ ಮಗುವಿಗೆ ಬದುಕು ಎಂದರೆ ಶಿಕ್ಷಣ ಮತ್ತು ಅದರಲ್ಲಿ ಯಶಸ್ಸು ಮತ್ತು ಅದರಾಚೆಗೆ ಏನೂ ಇಲ್ಲ ಎಂಬ ಭಾವನೆ ಗಟ್ಟಿಯಾಗುತ್ತದೆ. ಪರಿಣಾಮವಾಗಿ ಫಲಿತಾಂಶದಲ್ಲಿ ಸ್ವಲ್ಪ ಏರು ಪೇರಾದರೂ ಅದು ಮೊದಲು ಯೋಚಿಸುವುದು ಸಾವಿಗೆ ಶರಣಾಗುವ ಬಗ್ಗೆ. </div>
<div style="text-align: justify;">
<br /></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEhmYgZ-tk-B-Dtp2pmu5eLGPp4PpVgco8t9AJLRSa1N67bYDjiP44Kuj2-6YE7eeO8XIaQDJlDgSrDJ4pH6mcgJ1DAM828QLYe9Jvu1ixT7J4SVEdQdFDw23_0AOydvx3DvtTRbe3mZ2hTP/s1600/exam+results.jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEhmYgZ-tk-B-Dtp2pmu5eLGPp4PpVgco8t9AJLRSa1N67bYDjiP44Kuj2-6YE7eeO8XIaQDJlDgSrDJ4pH6mcgJ1DAM828QLYe9Jvu1ixT7J4SVEdQdFDw23_0AOydvx3DvtTRbe3mZ2hTP/s1600/exam+results.jpg" /></a>ಇಲ್ಲಿ ಮುಖ್ಯವಾಗಿ ಕಾರಣರಾಗುವುದು ಖಂಡಿತಕೂ ಪೋಷಕರು ಎಂಬುದು ನನ್ನ ಭಾವನೆ. ಅವರಲ್ಲವಾದರೆ ಪರಿಸರವೂ!. ನಾನು ಮೇಲೆ ಹೇಳಿದ ೬೬ಶೇಕಡಾ ಪಡೆದು ಉತ್ತೀರ್ಣಳಾದ ಹುಡುಗಿಯನ್ನೇ ಉದಾಹರಣೆಯಾಗಿ ಕೊಡಬಹುದು. ಒಂದು ಸಮಾರಂಭದ ನಡುವೆ ಆಕೆಯ ಫಲಿತಾಂಶ ಬಹಿರಂಗವಾದಾಗ, ಎಲ್ಲರೂ ಕೇಳಿದವರು ಅನೇಕ ಪ್ರತಿಕ್ರಿಯೆಗಳನ್ನು ನೀಡಿದರು. ಆ ಹುಡುಗಿಯ ತಾಯಿ ಮತ್ತು ತಂದೆ, ತಮಗಂತೂ ಖೂಷಿಯಾಗಿದೆ, ನೀನು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು ಸಾಕು ಬಿಡು ಎಂದು ಅಳುತ್ತಿರುವ ಮಗಳನ್ನು ಅಪ್ಪಿ ಸಮಾಧಾನಿಸುತ್ತಿದ್ದರು. ಆಗ ನೆರೆದ ಕೆಲವರು, ತಾಯಿಯನ್ನುದ್ದೇಶಿಸಿ, ನೀನೇ ಆಕೆಯನ್ನು ಹಾಳು ಮಾಡಿದ್ದು. ಕೇವಲ ೬೬ಶೇಕಡಾ ಪಡೆದಿದ್ದಾಳೆ, ನಿನ್ನ ಈ ಪ್ರೀತಿ ಬೇರೆ ಎಂದು ಆಕೆಗೇ ಪ್ರತ್ಯಕ್ಷ-ಪರೋಕ್ಷವಾಗಿ ಗದರಿಸುತ್ತಿದ್ದರು!!. ಇಂದು ಮತ್ತೂ ಒಂದು ಗಮನಿಸಬೇಕಾದ ಯೋಚನೆ ಎಂದರೆ, ನಮ್ಮ ಮಕ್ಕಳ ಬಗ್ಗೆ ಬೇರೆಯವರ ಕಾಳಜಿ ಮಿತಿ ಮೀರಿರುತ್ತದೆ!!. ಇದು ದುರಂತದ ಮತ್ತೊಂದು ಹಾದಿ. </div>
<div style="text-align: justify;">
<br /></div>
<div style="text-align: justify;">
ಕೇವಲ ಶೇಕಡಾವಾರು ಅಂಕ, ಶಿಕ್ಷಣ ಎಂದರೆ ಪಿಯುಸಿಯಲ್ಲಿ ಸೈನ್ಸ್, ಅದು ಮುಗಿಯುತ್ತಲೇ ಸಿಇಟಿ, ಮುಂದುವರಿದು ಇಂಜಿನಿಯರ್ ಅಥವಾ ಮೆಡಿಕಲ್ ಎಂಬ ಹುಚ್ಚು ಪೋಷಕರನ್ನು ಆವರಿಸಿಕೊಂಡಿದೆ. ಅದನ್ನು ಬಿಟ್ಟು ಬೇರೇನೂ ಇಲ್ಲ ಎಂಬ ಒಂದು ರೀತಿಯ ಕುರುಡುತನ ಅವರಲ್ಲಿ ಮನೆ ಮಾಡಿದೆ. ಇದನ್ನೇ ಬಾಲ್ಯದಿಂದಲೂ ಮಗುವಿನ ಮೇಲೆ ಹೇರಿ, ಅದನ್ನು ಇನ್ನಿಲ್ಲದಂತೆ ಹೈರಾಣಾಗಿಸುವ ಯತ್ನ ಈ ಎಲ್ಲದಕ್ಕೂ ಮೂಲ ಕಾರಣ. ಒಂದು ರೀತಿಯಲ್ಲಿ ಈ ರೀತಿಯಲ್ಲಿ ಮಾನಸಿಕ ಆಘಾತಕ್ಕೆ ಒಳಗಾಗುವ ಮಕ್ಕಳ ಆತ್ಮಹತ್ಯೆ, ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನಮ್ಮದೇ ವ್ಯವಸ್ಥೆಯ ವ್ಯವಸ್ಥಿತ ಕೊಲೆ ಎಂಬುದು ನನ್ನ ಭಾವನೆ.</div>
<div style="text-align: justify;">
<br /></div>
<div style="text-align: justify;">
ಇದಲ್ಲದೇ ಉಜ್ವಲವಾದ ಭವಿಷ್ಯ ಬೇರೆಯದೇ ಇದೆ. ನಾವು ಇನ್ನೊಂದು ದ್ರಷ್ಠಿಕೋನದಿಂದಲೂ ನೋಡಬೇಕು. ಎಲ್ಲರೂ ಈ ಪ್ರಪಂಚದಲ್ಲಿ ಒಂದೇ ರಂಗದಲ್ಲಿ ನಿಷ್ಣಾತರಾಗಿರುವುದಿಲ್ಲ. ಪ್ರತಿಯೊಬ್ಬನಿಗೂ ಅವನದ್ದೇ ಆದ ಪ್ರತಿಭೇ ಇರುತ್ತದೆ. ಇಂದು ವೃತ್ತಿಪರ ಕೋರ್ಸ್ಗಳೇ ಅಲ್ಲದೇ, ಸಾಂಸ್ಕೃತಿಕವಾಗಿ ಅಥವಾ ಸಮಾಜದ ಇತರ ರಂಗಗಳಲ್ಲಿಯೂ ಬದುಕು ಕೊಡುವ ಅನೇಕ ದಾರಿಗಳಿವೆ. ಒಬ್ಬ ಇಂಜಿನಿಯರ್ ಆಗಿಯೋ, ವೈದ್ಯನಾಗಿಯೋ ದುಡಿದಷ್ಟೇ, ಬೇರೆ ರಂಗಗಳಲ್ಲಿಯೂ ದುಡಿಮೆಗೆ ಅವಕಾಶಗಳಿರುತ್ತವೆ. ಇದನ್ನು ಆರಂಭದಿಂದಲೇ ನಾವು ಮಕ್ಕಳಲ್ಲಿ ಮನನ ಮಾಡುತ್ತಾ ಹೋದರೆ ಅವರೂ ಮಾನಸಿಕವಾಗಿ ಗಟ್ಟಿಯಾಗುತ್ತಾರೆ. ಇಂದಿನ ತುರ್ತು ಅಗತ್ಯಗಳಲ್ಲಿ ಇದು ಮುಖ್ಯ.</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEiBIr7EZ-L_X5Xc2M0zBCummgt7Lhza3I1rKDegStiezB9slqyVzLolOTzohWr2ipY_nVSP0sSFz4SINk8f4FZFjs9MecO2yOgNG0bfhJk0wHAR8DEmwXDRecNdgURBCwwzBgvi3M_3mbUw/s1600/exam...jpg" imageanchor="1" style="clear: right; float: right; margin-bottom: 1em; margin-left: 1em;"><img border="0" src="https://blogger.googleusercontent.com/img/b/R29vZ2xl/AVvXsEiBIr7EZ-L_X5Xc2M0zBCummgt7Lhza3I1rKDegStiezB9slqyVzLolOTzohWr2ipY_nVSP0sSFz4SINk8f4FZFjs9MecO2yOgNG0bfhJk0wHAR8DEmwXDRecNdgURBCwwzBgvi3M_3mbUw/s1600/exam...jpg" /></a></div>
<div style="text-align: justify;">
ನಮ್ಮ ಶಿಕ್ಷಣ ಕಾಲದಲ್ಲಿ, ಕೇವಲ ಪಾಸಾಗಿದ್ದಕ್ಕೆ ಊರಿಡೀ ಸಿಹಿ ಹಂಚಿದ ಪ್ರಸಂಗ ನೆನಪಾಗುತ್ತದೆ. ಅಂದು ಶಿಕ್ಷಣವೇ ಕಷ್ಟದ ಪರಿಸ್ಥಿತಿ. ಅಂತಾದ್ದರಲ್ಲಿ ಪಾಸಾಗುವುದೂ ಒಂದು ಸಾಧನೆ. ಸೆಕೆಂಡ್ ಕ್ಲಾಸ್ ಬಂದರೆ ಪೋಷಕರಿಗೆ ಮಹದಾನಂದ. ಫಸ್ಟ್ ಕ್ಲಾಸ್ ಬಂದರೆ ಊರಿಡೀ ಹಬ್ಬ.</div>
<div style="text-align: justify;">
<br /></div>
<div style="text-align: justify;">
ಇನ್ನು ಇಲ್ಲಿ ಮಕ್ಕಳ ತಪ್ಪೂ ಇಲ್ಲವೆನ್ನಲಾಗದು. ಇಂದಿನ ಮುಂದುವರಿದ ತಾಂತ್ರಿಕತೆ ಮಕ್ಕಳಲ್ಲೂ ಆ ಪರಿಯ ಬದಲಾವಣೆ ತಂದಿದೆ. ಒಂದು ವಿದ್ಯಾರ್ಥಿ ಹೇಳುತ್ತಿದ್ದ, ಛೆ. ನನಗೆ ಕೇವಲ ೮೦ಶೇಕಡಾ ಅಂಕಗಳು ಮಾತ್ರ ಬಂದಿವೆ. ೯೦ಕ್ಕಿಂತ ಹೆಚ್ಚು ಬಂದಿದ್ದರೆ ಫೇಸ್ ಬುಕ್ ನಲ್ಲಿ ಹಾಕಿ ಎಷ್ಟು ಲೈಕ್ ಬರುತ್ತಿತ್ತು ನೋಡುತ್ತಿದ್ದೆ ಎಂದು!!. ಫೇಸ್ ಬುಕ್ ತೆರೆದು ನೋಡಿದರೆ, ಕೆಲವು ಮಕ್ಕಳು ತಮ್ಮ ಅಂಕ ಪಟ್ಟಿಯನ್ನೇ ಲಗತ್ತಿಸಿ ಹೆಮ್ಮೆ ಪಡುತ್ತಿದ್ದರು. ಓರ್ವ ಹುಡುಗಿಯ ಒಂದು ಪೋಸ್ಟಿಂಗ್ ಹೀಗಿದೆ:- 'ನನ್ನ ತಂದೆ ಹೇಳುತ್ತಿದ್ದರು, ಮಗಳೇ, ನೀನು ಎಸ್ಎಸ್ಎಲ್ಸಿಯಲ್ಲಿ ಕಡಿಮೆ ಅಂಕ ತೆಗೆದ ಬಗ್ಗೆ ನನಗೆ ಬೇಸರವಿಲ್ಲ. ನಿನ್ನ ಪರೀಕ್ಷೆಯ ಮೊದಲ ದಿನ ನಾನು ಖಾಯಿಲೆ ಬಿದ್ದಾಗ, ನೀನು ತಾಯಿಯಂತೆ ನನ್ನನ್ನು ನೋಡಿಕೊಂಡೆ. ಹಾಗಾಗಿ ಆ ಒಂದು ವಿಷಯದಲ್ಲಿ ನಿನಗೆ ಕಡಿಮೆ ಅಂಕ ಬರಲು ನಾನೂ ಒಂದು ಕಾರಣ. ಅದಕ್ಕೆ ಚಿಂತಿಸಬೇಡ ಎಂದು ತಂದೆ ಹೇಳುತ್ತಿದ್ದರು, ಅಪ್ಪಾ, ಐ ಲವ್ ಯೂ.....ಅಂದ ಹಾಗೆ ನನಗೆ ಕನ್ನಡದಲ್ಲಿ ೧೨೫ರಲದಲಿ ೧೨೪ಅಂಕಗಳು ಬಂದಿದ್ದುವು!....ಇದು ನಮ್ಮ ನಿರೀಕ್ಷೆಯ ಮಟ್ಟವನ್ನು ಸೂಚಿಸುತ್ತದೆ. ಬಹುಶ: ಆ ಮಗುವೇನಾದರೂ ೧೦೦ ಅಂಕಗಳನ್ನು ತೆಗೆದಿದ್ದರೆ ಪರಿಣಾಮ ಎಷ್ಟು ಭೀಕರವೆಂಬುದನ್ನು ನೀವೇ ಯೋಚಿಸಿ. </div>
<div style="text-align: justify;">
<br /></div>
<div style="text-align: justify;">
ಮತ್ತೊಬ್ಬ ತಂದೆ ಮಗಳ ಪೂರ್ತಿ ಅಂಕ ಪಟ್ಟಿಯನ್ನೇ ಲಗತ್ತಿಸಿ, ಫೇಸ್ ಬುಕ್ ನಲ್ಲಿ ಹಾಕಿದ್ದರು. ನಾನು ಒಂದು ಕೆಲಸದ ಪ್ರಯುಕ್ತ ಇಡೀ ವರ್ಷ ಬ್ಯುಸಿಯಾಗಿದ್ದೆ. ಆದರೂ ನನ್ನ ಮಗಳು ಪಿಯುಸಿಯಲ್ಲಿ 94ಶೇಕಡಾ ಅಂಕಗಳನ್ನು ಪಡೆದು ನನ್ನನ್ನು ಹೆಮ್ಮೆ ಪಡುವ ಹಾಗೆ ಮಾಡಿದ್ದಳು...ಇಂತಹ ನೂರಾರು ಪೋಸ್ಟಿಂಗ್ಗಳನ್ನು ನೀವು ನೋಡಬಹುದು. ಇಂದು ಫೇಸ್ ಬುಕ್ ಇಲ್ಲದ ಫೇಸ್ ಗಳೇ ಇಲ್ಲ. ಇಂತಾದ್ದರಲ್ಲಿ, ತನ್ನ ಅಂಕ ಕಡಿಮೆಯಾದರೆ ಫೇಸ್ ಬುಕ್ನಲ್ಲಿ ಹಾಕಲು ಆಗದಲ್ಲ ಎಂಬ ನೋವೂ ಮಕ್ಕಳನ್ನು ಇಂದು ದುರ್ಬಲರಾಗಿಸುತ್ತಿವೆ ಎಂದರೆ ನಿಮಗೆ ಅಚ್ಚರಿ ಆದೀತು. ಇದು ವಿಚಿತ್ರವಾದರೂ ಸತ್ಯ.</div>
<div style="text-align: justify;">
<br /></div>
<div style="text-align: justify;">
ಹೀಗೆ ಮಕ್ಕಳಲ್ಲಿ ಎಲ್ಲಾ ವಿಧದಲ್ಲಿಯೂ ನಾವು ನಾವು ಕೇವಲ ಒತ್ತಡ ಸೃಷ್ಟಿ ಮಾಡುತ್ತಿರುವುದರ ಪರಿಣಾಮ ಇಂದು ಭೀಕರ ವಾತಾವರಣ ಸೃಷ್ಟಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಪೋಷಕರಾದ ನಮ್ಮ ಜವಾಬ್ದಾರಿಯ ಬಗ್ಗೆ ಮೊದಲು ನಾವು ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಬಂದಿದೆ. ಇದನ್ನು ಅರಿತುಕೊಂಡು ಮಕ್ಕಳ ಮೇಲಿನ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ನಮ್ಮ ಕಾಣಿಕೆ ದೊಡ್ಡದಿದೆ ಎಂಬುದು, ಪ್ರಜ್ಞಾವಂತರಾದ ನಮಗೆ ತಿಳಿದಿರಬೇಕು. </div>
<div style="text-align: justify;">
<br /></div>
<div style="text-align: justify;">
<br /></div>
</div>
Anonymoushttp://www.blogger.com/profile/07026221826810784770noreply@blogger.com0tag:blogger.com,1999:blog-6634091388019397795.post-90389116286371828062014-05-08T03:47:00.000-07:002014-05-08T03:47:09.552-07:00ಶಬರಾಯರೆಂಬ ಸ್ನೇಹದ ಕಣಜ......<div dir="ltr" style="text-align: left;" trbidi="on">
<div style="text-align: justify;">
<b><span style="color: blue;">ಪ್ರಶಸ್ತಿ ಪ್ರದಾನದ ನಂತರ ಸಂಜೆ ನಾಲ್ಕರ ತನಕವೂ ನಮ್ಮೊಡನಿದ್ದ ಶಬರಾಯ ದಂಪತಿಗಳು ಅಲ್ಲಿ ಒಂದು ಆತ್ಮೀಯ ವಾತಾವರಣವನ್ನೇ ಸೃಷ್ಟಿಸಿದರು. ನನ್ನ ಪಾಲಿಗಂತೂ ಇದು ಒಂದು ಹೊಸ ಅನುಭವ. ಖಂಡಿತಕ್ಕೂ ಹೊಸ ಅನುಭವ....</span><span style="color: #990000;">ಜನ ಪ್ರತಿನಿಧಿಯ ಪ್ರದಕ್ಷಿಣೆಯ ನನ್ನ ಈ ವಾರದ ಬರಹ..... </span></b></div>
<div style="text-align: justify;">
<br /></div>
<br />
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEgL-2XW9SoiJrlKu3AXkXF4FUGSdADL5coJ2zEjEgN60Vx-lJihi1Ihk0uHBaooMAL5UtUSMgyZqKEYgoqGIdcgB7jR0Dy2kbeutTIiWLfJeGZjIYuQmCMl1n-SJS-vwA04lPo2kYHMWafx/s1600/DSC_7390.JPG" imageanchor="1" style="margin-left: auto; margin-right: auto;"><img border="0" src="https://blogger.googleusercontent.com/img/b/R29vZ2xl/AVvXsEgL-2XW9SoiJrlKu3AXkXF4FUGSdADL5coJ2zEjEgN60Vx-lJihi1Ihk0uHBaooMAL5UtUSMgyZqKEYgoqGIdcgB7jR0Dy2kbeutTIiWLfJeGZjIYuQmCMl1n-SJS-vwA04lPo2kYHMWafx/s1600/DSC_7390.JPG" height="211" width="320" /></a></td></tr>
<tr><td class="tr-caption" style="text-align: center;">ಸುಮ ಕೃಷ್ಣ ಪ್ರಶಸ್ತಿ ಪ್ರದಾನದ ಹೊತ್ತು.... </td></tr>
</tbody></table>
<span style="text-align: justify;">ಒಂದು ಮಾತಿದೆ. ಯಾವುದೇ ಒಂದು ಪ್ರಶಸ್ತಿ, ಮಾನ-ಸಂಮಾನಕ್ಕೆ ಯೋಗ್ಯ ಬೆಲೆ ಅಥವಾ ಗೌರವ ಸಿಗುವುದು, ಅದನ್ನು ಪಡೆದ ವ್ಯಕ್ತಿಯ ಆತ್ಮೀಯತೆ, ಆಪ್ತತೆ ಮತ್ತು ಸಾರ್ಥಕ್ಯ ಭಾವ ಆ ಪ್ರಶಸ್ತಿಯೆಡೆಗೆ ಇದ್ದಾಗ ಮಾತ್ರ.</span><br />
<div style="text-align: justify;">
<br /></div>
<table cellpadding="0" cellspacing="0" class="tr-caption-container" style="float: right; margin-left: 1em; text-align: right;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEi7xgeV-GDPUEwCOdgCm2DGTLVE-yNdzCz8sGR3yHsmDVMeY-ZbryynHCbtPiM9LxJ0REOEt6qFKsgXMlGaKAPnFNwNIsiULxlgkBCzxCKVXXjLEZyHp-iwzYTBPhOEOdtvO2SJzcKXnfR6/s1600/DSC_7469.JPG" imageanchor="1" style="clear: right; margin-bottom: 1em; margin-left: auto; margin-right: auto;"><img border="0" src="https://blogger.googleusercontent.com/img/b/R29vZ2xl/AVvXsEi7xgeV-GDPUEwCOdgCm2DGTLVE-yNdzCz8sGR3yHsmDVMeY-ZbryynHCbtPiM9LxJ0REOEt6qFKsgXMlGaKAPnFNwNIsiULxlgkBCzxCKVXXjLEZyHp-iwzYTBPhOEOdtvO2SJzcKXnfR6/s1600/DSC_7469.JPG" height="264" width="400" /></a></td></tr>
<tr><td class="tr-caption" style="text-align: center;">ಅಪರೂಪದ ಜೋಡಿ.... </td></tr>
</tbody></table>
<div style="text-align: justify;">
ಇಂದು ಅಂತಾದ್ದೊಂದು ಸಮಾಧಾನದಿಂದ ಈ ಬರಹ ಬರೆಯಲು ಕುಳಿತಿದ್ದೇನೆ. ಸಾರ್ವಜನಿಕ ರಂಗದಲ್ಲಿ, ಮುಖ್ಯವಾಗಿ ಸಾಹಿತ್ಯರಂಗದಲ್ಲಿ ನಮ್ಮ ಇತಿ ಮಿತಿಯಲ್ಲಿ ಅಷ್ಟಿಷ್ಟು ಕೆಲಸ ಮಾಡಲಾರಂಭಿಸದಾಗಿನಿಂದ, ಸಾಧಕರನ್ನು ಗುರುತಿಸಿ ಗೌರವಿಸುವ ಅಭ್ಯಾಸ ಮಾಡಿಕೊಂಡಿದ್ದೇವೆ. ಆ ಹಿನ್ನೆಲೆಯಲ್ಲಿ ಅನೇಕ ಅನುಭವಗಳೂ ಆಗಿವೆ. ಅನೇಕ ಸಂದರ್ಭಗಳಲ್ಲಿ ಇಂತಹ ಸಂಮಾನಕ್ಕೆ ವ್ಯಕ್ತಿಗಳನ್ನು 'ಸಾಧಕ'ರು ಎಂದು ಗುರುತಿಸಿ, ಆಯ್ಕೆ ಮಾಡಿಕೊಂಡ ನಂತರ, ನಮ್ಮ ಆಯ್ಕೆ ತಪ್ಪಲಿಲ್ಲವಷ್ಟೇ ಎಂದು ಕೊಂಡದ್ದೂ ಇದೆ. ಆಯ್ಕೆಯ ತನಕದ ಮನೋಭಾವ, ಅನೇಕರಿಗೆ ಆಯ್ಕೆಯ ನಂತರ ಇರುವುದೇ ಇಲ್ಲ ಎಂಬುದನ್ನೂ ಗಮನಿಸಿದ್ದೇನೆ. ಇದು ಎಲ್ಲರಿಗೂ ಅನ್ವಯವಾಗದಾದರೂ, ಕೆಲವು ಸಂದರ್ಭಗಳು ಈ ರೀತಿಯ ಅನಿಸಿಕೆಗೆ ಕಾರಣವಾಗಿದ್ದೂ ಇದೆ.</div>
<div style="text-align: justify;">
<br /></div>
<div style="text-align: justify;">
ಆದರೆ ಇತ್ತೀಚೆಗೆ ನಾವು ಕೊಡ ಮಾಡಿದ ಸುಮಕೃಷ್ಣ ಪ್ರಶಸ್ತಿಯ ಪ್ರದಾನದ ಬಗ್ಗೆ ಒಂದೆರಡು ಮಾತಾಡಲೇ ಬೇಕು. ಅದಕ್ಕೆ ನಾವು ಬಹಳ ಯೊಚಮತ್ತು ಅನೇಕ ಸುತ್ತಿನ ವಿಚಾರ ವಿನಿಮಯದ ನಂತರ ಆಯ್ಕೆ ಮಾಡಿದ ಹೆಸರು ನಾರಾಯಣ ಶಬರಾಯರು. ವಯಕ್ತಿಕವಾಗಿ ನನಗೂ, ಶಬರಾಯರಿಗೂ ಪರಿಚಯವೇ ಇರಲಿಲ್ಲ. ಸ್ನೇಹಿತ ಕರುಣಾಕರ ಬಳ್ಕೂರು ಅವರಿಂದ ಶಬರಾಯರ ಮೊಬೈಲ್ ನಂಬರ್ ತೆಗೆದುಕೊಂಡು ಅವರಿಗೆ ಫೋನಾಯಿಸಿದಾಗಲೇ, ಮೊದಲ ಮಾತಿನಿಂದಲೇ ಅವರ ನಡುವೆ ಯಾವುದೋ ಆತ್ಮೀಯತೆ ಬೆಳೆದಾಗಲೇ, ಈ ಪ್ರಶಸ್ತಿಗೆ ಗೌರವ ಸಂದ ಅನುಭವ</div>
<div style="text-align: justify;">
<br /></div>
<div style="text-align: justify;">
ಅದಿರಲಿ, ಪ್ರಶಸ್ತಿಯ ಬಗ್ಗೆ ಹೇಳಿದಾಗ, ಇನ್ನಿಲ್ಲವಾದ ಮಾವ-ಅತ್ತೆಯ ಬಗ್ಗೆ ಹೇಳಿದಾಗ, ಅವರ ನೆನಪಿನಾಳದ ಮಾತುಗಳನ್ನು ಕೇಳುವುದೇ ಒಂದು ವಿಶಿಷ್ಠ ಅನುಭವ. ಕೊನೆಗೂ ಪ್ರಶಸ್ತಿಯ ವಿಷಯ ಅವರಲ್ಲಿ ಹೇಳಿದಾಗ ಅವರು ಹೇಳಿದ ಮೊದಲ ಮಾತು, ಪ್ರಶಸ್ತಿ ಸ್ವೀಕಾರಕ್ಕೆ ತೊಂದರೆ ಇಲ್ಲ, ಆದರೆ ಪ್ರಶಸ್ತಿಯ ಮೊತ್ತ ಬೇಡ ಬಿಡಿ ಎಂಬ ನೈಜ ಕಾಳಜಿ.</div>
<div style="text-align: justify;">
<br /></div>
<table cellpadding="0" cellspacing="0" class="tr-caption-container" style="float: left; margin-right: 1em; text-align: left;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEhjpgVcemnx4ZPIUCGbRlXv8_DAzF7QLluJSXxLK0VmMsSlI3gtE58gh-SwJmvk6N2kfGmJQVisPpBdxpSp4tzeu9PoHZXCqdPKK55VA3FMJcaLhWYB5P-p6AJ2Nyp0CyfViuR06HkMFRg0/s1600/DSC_7441.JPG" imageanchor="1" style="clear: left; margin-bottom: 1em; margin-left: auto; margin-right: auto;"><img border="0" src="https://blogger.googleusercontent.com/img/b/R29vZ2xl/AVvXsEhjpgVcemnx4ZPIUCGbRlXv8_DAzF7QLluJSXxLK0VmMsSlI3gtE58gh-SwJmvk6N2kfGmJQVisPpBdxpSp4tzeu9PoHZXCqdPKK55VA3FMJcaLhWYB5P-p6AJ2Nyp0CyfViuR06HkMFRg0/s1600/DSC_7441.JPG" height="132" width="200" /></a></td></tr>
<tr><td class="tr-caption" style="text-align: center;">ಸುಮ-ಕೃಷ್ಣರಿಗೆ ನಮನ </td></tr>
</tbody></table>
<div style="text-align: justify;">
ಇದೆಲ್ಲವೂ ಒಂದು ಹಂತದ ಅನುಭವ. ಅವರಿಗೆ ಅವರ ಒಂದು ಬಯೋಡಾಟಾವನ್ನು ಕಳುಹಿಸಿ ಎಂಬ ವಿನಂತಿ ಮುಂದಿಟ್ಟೆ. ಆಯ್ತು ಬಿಡಿ ಎಂದವರು ನಾಪತ್ತೆ. ಫೇಸ್ ಬುಕ್ನಲ್ಲಿ ಅವರ ಮಗಳು ಗಾರ್ಗಿಯೊಂದಿಗಿನ ಚಾಟ್ನಲ್ಲಿ ಒಮ್ಮೆ ಇದೇ ವಿನಂತಿ ಮುಂದಿಟ್ಟೆ, ಆಕೆಯೂ ಅಪ್ಪನಿಗೆ ಹೇಳುತ್ತೇನೆ ಎಂದವಳು ಮತ್ತೆ ನಾಪತ್ತೆ. ಕೊನೆಗೆ ಅಭಿನಂದನಾ ಭಾಷಣವನ್ನು ಮಾಡಲು, ಉದಯಕುಮಾರ್ ಶೆಟ್ಟಿಯವರನ್ನು ಕೇಳಿಕೊಂಡಾಗ, ಅವರೂ ಶಬರಾಯರಿಗೆ ಅಭಿನಂದನಾ ಮಾತಾಡುವುದೇ ಒಂದು ವಿಶೆಷ ಅವಕಾಶ ಎಂಬಂತೆ ಒಪ್ಪಿಕೊಂಡ ಹಿನ್ನೆಯಲ್ಲಿ, ಅವರಲ್ಲಿಯೇ ಶಬರಾಯರ ಬಯೋಡಾಟಾ ಕೇಳಿದೆ. ಅವರು ಅದನ್ನು ಒದಗಿಸಿದರು. ಕೊನೆಗೆ ಆಮಂತ್ರಣವನ್ನು ನೀಡಲು ಶಬರಾಯರ ಮನೆಗೆ ಹೋದಾಗ, ಅವರಲ್ಲಿ ಈ ವಿಷಯ ಪ್ರಸ್ತಾಪಿಸಿದೆ. ನಿಜಕ್ಕೆಂದರೆ ಬಯೋಡಾಟವನ್ನು ಅವರು ನನಗೆ ಒದಗಿಸದ ಬಗ್ಗೆ ನನಗೆ ತುಸು ಅಸಮಾಧಾನವೇ ಇತ್ತು!!. ಬಯೋಡಾಟಾದ ವಿಷಯ ಹೇಳುತ್ತಲೇ ಶಬರಾಯರು ಹೇಳಿದ ಮಾತಿನಿಂದ ನಾನು ನಿಜಕ್ಕೂ ಸಮಾಧಾನಗೊಂಡದ್ದು ಮಾತ್ರವಲ್ಲ, ನಮ್ಮ ಪ್ರಶಸ್ತಿಯ ಆಯ್ಕೆಗೆ ಇದು ಸರಿಯಾದ ವ್ಯಕ್ತಿ ಎಂದುಕೊಂಡೆ!!. 'ಸ್ವಾಮೀ, ಅಷ್ಟುದ್ದ ಬರೆದು, ಹೇಳಿಸಿಕೊಂಡು ಸಂಮಾನ ಸ್ವೀಕರಿಸುವ ಬದಲು, ನಿಮಗೆ ಆತ್ಮೀಯವೆನ್ನಿಸುವ ನಿಮ್ಮದೇ ಮಾತಿನಲ್ಲಿ ಪ್ರಶಸ್ತಿ ನೀಡಿ. ಅದನ್ನು ನಿಮ್ಮತ್ತೆ ಹಾಗೂ ಮಾವ ಮತ್ತು ಯಕ್ಷಗಾನ ರಂಗದ ಮೇಲಿನ ಗೌರವದಿಂದ ನಮ್ರನಾಗಿ ಸ್ವೀಕರಿಸುತ್ತೇನೆ ಎಂಬುದು ಅವರ ಮನದಾಳದ ಮಾತಿನ ಸಾರವಾಗಿತ್ತು. ನಾನು ಸೋತು ಹೋದೆ.</div>
<div style="text-align: justify;">
<br /></div>
<div style="text-align: justify;">
ಇಂತಾದ್ದೇ ಅನೇಕ ಪ್ರಶಸ್ತಿಗಳನ್ನು ನಾವು ಘೋಷಣೆ ಮಾಡಿದ ಬಳಿಕ, ಸಾಮಾನ್ಯವಾಗಿ ಎದುರಿಸುತ್ತಿದ್ದ ಸಮಸ್ಯೆ ಎಂದರೆ ಪ್ರಶಸ್ತಿ ವಿಜೇತರಿಂದ ಅದನ್ನು ಪತ್ರಿಕೆಯಲ್ಲಿ ಬರುವಂತೆ ಮಾಡುವ ಒತ್ತಡ. ಅನೇಕ ಸಂದರ್ಭಗಳಲ್ಲಿ, ಪ್ರಶಸ್ತಿ ವಿಜೇತರು, ಅದನ್ನು ಪತ್ರಿಕೆಯಲ್ಲಿ ಬರದಿದ್ದರೆ ಅದಕ್ಕೆ ನಾವೇ ಹೊಣೆ ಮತ್ತು ಆ ಪ್ರಶಸ್ತಿ ಸ್ವೀಕಾರಾರ್ಹವೇ ಅಲ್ಲ ಎಂಬಂತೆ ವರ್ತಿಸುವುದನ್ನು ನೋಡಿದ್ದೇನೆ. ಅದಕ್ಕಾಗಿ ಪತ್ರಿಕಾ ಕಾಯಾಲಯಕ್ಕೆ ನಾನು ಎಡತಾಕ ಬೇಕಾದ ಪ್ರಮೇಯವೂ ಇತ್ತು. ಆದರೆ ಇಲ್ಲಿ ನನಗೆ ಹೊಸ ಅನುಭವ. ಶಬರಾಯರ ಪ್ರಶಸ್ತಿಯ ವಿಷಯವನ್ನು ಪ್ರದಾನ ಸಮಾರಂಭಕ್ಕೆ ಎರಡು ದಿನ ಮೊದಲು, ಎಲ್ಲಾ ಪತ್ರಿಕೆಗಳಿಗೆ ಮೈಲ್ ಮಾಡಿದ್ದೆ. ಆದರೆ ಶಬರಾಯರು ಒಂದು ದಿನವೂ ಆ ಬಗ್ಗೆ ನನ್ನಲ್ಲಿ ಒತ್ತಾಯವನ್ನೋ, 'ತನಿಖೆ'ಯನ್ನೋ ಮಾಡಿದವರಲ್ಲ!!. ಕನಿಷ್ಟ ಕೇಳಿದವರೂ ಅಲ್ಲ. ವಿಶೇಷವೆಂದರೆ ಎಲ್ಲಾ ಪತ್ರಿಕೆಗಳೂ ಈ ವರದಿಯನ್ನು ವಿಶೇಷವಾಗಿ ಪ್ರಕಟಿಸಿದುವು. ಅದು ನನ್ನ ಪಾಲಿಗೆ ನಿಜಕ್ಕೂ ಅಚ್ಚರಿಯೇ!!. ಯಾಕೆಂದರೆ ಪ್ರಚಾರಕ್ಕಾಗಿ ಹಾತೊರೆಯುವವರ ಮಧ್ಯೆ, ಯಾವುದೇ ಒತ್ತಾಯ. ವಿನಂತಿಗೆ ಹೊರತಾಗಿ, ಕೇವಲ ಈ ಮೈಲ್ ನೋಡಿ, ಈ ವರದಿಯನ್ನು ಪತ್ರಿಕೆಗಳು ಪ್ರಕಟಿಸಿದ್ದವೆಂದರೆ, ಅದೂ ಶಬರಾಯರು ಕಾಯ್ದುಕೊಂಡು ಬಂದ ನಿಷ್ಠೆಯ ಫಲವೆಂದೇ ನಾನು ಅಂದುಕೊಂಡಿದ್ದೇನೆ.</div>
<div style="text-align: justify;">
<br /></div>
<div style="text-align: justify;">
ಇನ್ನು ಅವರ ಮನೆಯಲ್ಲಿನ ಆತ್ಮೀಯತೆ. ಕುಳಿತಾಗ ಯಕ್ಷಗಾನ ರಂಗದ ಒಳ-ಹೊರಗನ್ನು ಸಮಗ್ರವಾಗಿ ತೆರೆದಿಟ್ಟ ಶಬರಾಯರು, ಎಲ್ಲಿಯೂ ತಾನೊಬ್ಬನೇ ಶ್ರೇಷ್ಠ ಎಂಬ ಭಾವ ತೋರಲಿಲ್ಲ. ಸಾಧಿಸಿದ್ದು ಅತ್ಯಲ್ಪ, ಸಾಧಿಸಲು ಬಹಳಷ್ಟಿದೆ ಎಂದೇ ಮಾತು ಆರಂಭಿಸಿದ ಅವರು, ತಾನೊಬ್ಬ ಸಾಮಾನ್ಯ ಕಲಾವಿದ ಎಂಬ ವಿನೀತ ಭಾವವನ್ನು ಎಲ್ಲಿಯೂ ಮರೆಯಲಿಲ್ಲ.</div>
<div style="text-align: justify;">
<br /></div>
<div style="text-align: justify;">
ಓರ್ವ ವಿಜ್ಞಾನ ಪದವೀಧರನಾಗಿ, ಕಾಳಿಂಗ ನಾವುಡರ ಗಾನ ಪಾಂಡಿತ್ಯಕ್ಕೆ ಮನಸೋತು, ಉಪ್ಪೂರರ ಶಿಷ್ಯತ್ವ ಸ್ವೀಕರಿಸಿ, ಯಕ್ಷಗಾನ ರಂಗದಲ್ಲಿ ತನ್ನದೇ ಒಂದು ವಿಶಿಷ್ಠ ಶಕೆಗೆ ಕಾರಣರಾದ ಶಬರಾಯರು ಹೊಸ ತನದ ಅನ್ವೇಷಕ ಮತ್ತು ವಿನೂತನ ಪ್ರಯೋಗಗಳ ಪ್ರತಿಭಾವಂತ. ಖ್ಯಾತ ಯಕ್ಷಗಾನ ವಿಮರ್ಶಕ ಉದಯ ಕುಮಾರ ಶೆಟ್ಟಿಯವರ ಮಾತಿನಂತೆ ಇವರು ಯಕ್ಷಗಾನ-ಶಾಸ್ತ್ರೀಯ ಸಂಗೀತಗಳ ಸಮನ್ವಯ ಭಾಗವತ ಎಂದೇ ಗುರುತಿಸಬಹುದು. ಬಡಗು-ತೆಂಕುಗಳೆರಡರಲ್ಲೂ ಸೈ ಅನಿಸಿಕೊಂಡು, ಎರಡೂ ಕಡೆಗಳಲ್ಲಿ ಅಪಾರ ಜನಪ್ರೀತಿಯನ್ನು ಗಳಿಸಿರುವ ಓರ್ವ ವಿಶಿಷ್ಠ ಭಾಗವತನಿದ್ದರೆ ಅದು ಶಬರಾಯರು. ಎಲ್ಲಕ್ಕಿಂತಲೂ ಮುಖ್ಯವಾಗಿ ದೂರದರ್ಶನದ ಮೂಲಕ ಯಕ್ಷಗಾನವನ್ನು ದಶ ದಿಕ್ಕುಗಳಿಗೂ ಪರಿಚಯಿಸುವಲ್ಲಿ ವಿಶೇಷ ಶ್ರಮ ವಹಿಸಿ, ಯಶಸ್ವೀ ಕಲಾರಾಧಕರಾಗಿ ಗುರುತಿಸಿಕೊಂಡ ಶಬರಾಯರು ಎಲ್ಲೂ ಅಹಂ ತೋರದ ಓರ್ವ ನಿಗರ್ವಿ ಮತ್ತು ನೈಜ ಕಲಾವಿದ. ಕಲಾವಿದ ಎಂಬುದಕ್ಕಿಂತಲೂ, ಕಲಾರಾಧಕ ಎಂದೇ ತನ್ನನ್ನು ಪರಿಚಯಿಸಿಕೊಳ್ಳುವಲ್ಲಿ ಅವರಿಗೆ ಹೆಮ್ಮೆಯಂತೆ!!</div>
<div style="text-align: justify;">
<br /></div>
<table cellpadding="0" cellspacing="0" class="tr-caption-container" style="float: right; margin-left: 1em; text-align: right;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEjjEL4dR7zoRTxuAJAPnAQdXu_UA-zKEE1-0jfQeJo_HYJZgMcjnbpRR1bu0OqB3cT4a-z1RAg5GR2coBRwd-7f9kTch6Q-gDORVV7fxgDbK_lgySeDOJTwfzNXxyoFEHQfj3seCitgzwRz/s1600/DSC_7466.JPG" imageanchor="1" style="clear: right; margin-bottom: 1em; margin-left: auto; margin-right: auto;"><img border="0" src="https://blogger.googleusercontent.com/img/b/R29vZ2xl/AVvXsEjjEL4dR7zoRTxuAJAPnAQdXu_UA-zKEE1-0jfQeJo_HYJZgMcjnbpRR1bu0OqB3cT4a-z1RAg5GR2coBRwd-7f9kTch6Q-gDORVV7fxgDbK_lgySeDOJTwfzNXxyoFEHQfj3seCitgzwRz/s1600/DSC_7466.JPG" height="132" width="200" /></a></td></tr>
<tr><td class="tr-caption" style="text-align: center;">ನಮ್ಮ ಸಂಸಾರದ ಜೊತೆಗೊಂದು ಆತ್ಮೀಯ ಕ್ಷಣ </td></tr>
</tbody></table>
<div style="text-align: justify;">
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉದಯ ಕುಮಾರ ಶೆಟ್ಟಿಯವರು ಹೇಳಿದಂತೆ, ಶಬರಾಯರು ಓರ್ವ ಕಲಾವಿದರಾಗಿಯಷ್ಟೇ ಅಲ್ಲದೇ ಆತ್ಮೀಯ ಸ್ನೇಹಿತನೂ ಆಗಿ, ಜನರೊಂದಿಗೆ ಬೆರೆಯುತ್ತಾರೆ. ನಮ್ಮೊಳಗೆ ಅವರು ಎಷ್ಟು ಆತ್ಮೀಯತೆಯಿಂದ ಬೆರೆತರು ಎಂದರೆ, ಕಳೆದ ನಾಲ್ಕು ದಶಕಗಳಿಂದಲೂ ಅವರನ್ನು ತಿಳಿಯದಿದ್ದ ನಾನು ಮತ್ತು ನನ್ನ ಕುಟುಂಬ ಇಂದು ಅವರ ಜೀವನ ಪರ್ಯಂತ ಬಂಧುಗಳೋ ಎಂಬಂತೆ ಸನಿಹಕ್ಕೆ ಬಂದಿದ್ದೇವೆ. ಅದಕ್ಕೆ ಕಾರಣ ಅವರ ಸರಳತೆ. ಇನ್ನು ಈ ರೀತಿಯ ಸರಳತೆ ಯಾವತ್ತೂ ಒಂದು ಇಡೀ ಕುಟುಂಬದಲ್ಲಿದ್ದರೆ ಅದು ಸುಖೀ ಸಂಸಾರ. ಇದಕ್ಕೆ ನಿದರ್ಶನವೂ ಶಬರಾಯ ಕುಟುಂಬ. ಮೊದಲ ದಿನ ಅವರ ಮನೆಗೆ ಹೋಗಿ, ಕಾಲಿಂಗ್ ಬೆಲ್ ಒತ್ತಿದಾಕ್ಷಣ ಹೊರ ಬಂದವರು ಶಬರಾಯರ ಶ್ರೀಮತಿ ರಾಜಶ್ರೀ ಅವರು. ಕಂಡಾಕ್ಷಣವೇ ಅದೆಷ್ಟೋ ವರ್ಷಗಳ ಆತ್ಮೀಯತೆ ನಗುವಿನೊಂದಿಗೆ ಸ್ವಾಗತಿಸಿದಾಗ ಅಚ್ಚರಿ, ನಾನಾರು ತಿಳಿಯಿತೇ ಎಂದಾಗ, ಓಹೋ ಗೊತ್ತು ಎಂಬ ಉತ್ತರ...ಇದು ಫೇಸ್ ಬುಕ್ ಪ್ರಭಾವ. ಕೇವಲ ಫೇಸ್ ಬುಕ್ ಪರಿಚಯದಿಂದಲೇ ನನ್ನ ಮುಖ ಪರಿಚಯ ಮಾಡಿಕೊಂಡವರು. ಮತ್ತೆ ಅಲ್ಲಿ ನಮ್ಮನ್ನೆಲ್ಲಾ ಆಳಿದ್ದು ಆತ್ಮೀಯತೆ ಮಾತ್ರ! ರಾಜಶ್ರೀ ಮೇಡಂ ರಾಜಶ್ರೀ ಅಕ್ಕ ಆಗಿದ್ದು ಹೀಗೆ. ಅವರ ಕೈ ರುಚಿಯ ಬಿಸಿ ಬಿಸಿ ಚಹಾ ಸೇವಿಸಿ, ಅವರೂ ನಮ್ಮ ಜೊತೆ ಕುಳಿತು, ಯಕ್ಷಗಾನ ರಂಗದ ಬಗ್ಗೆ, ಮನೆಯ ಕುಟುಂಬದ ಬಗ್ಗೆ ಹರಟಿದ್ದು ಬರೋಬ್ಬರಿ ಒಂದು ಘಂಟೆ. ಅಷ್ಟರಲ್ಲಿ ಅವರ ಮಗಳು ಗಾರ್ಗಿಯನ್ನು ಕರೆದ ಶಬರಾಯರು ನಮ್ಮನ್ನು ತೋರಿಸಿ ಇವರಾರು ಗೊತ್ತೇ ಎಂದಾಗ,ಆಗಲೂ ಅಚ್ಚರಿ. ಓಹೋ, ಅರೆಹೊಳೆ ಅಂಕಲ್ ಅಲ್ವಾ ಎಂಬ ಗಾರ್ಗಿಯ ನಗು...ಇದು ಒಂದು ಸಂಸಾರದ ಸುಸಂಸ್ಕಾರವನ್ನು ತೋರಿಸುತ್ತದೆ. ನಿಜಕ್ಕೂ ನಮ್ಮ ಪ್ರಶಸ್ತಿಗೆ ಹೆಮ್ಮೆ ಬಂದುದೇ ಆಗ.</div>
<div style="text-align: justify;">
<br /></div>
<div style="text-align: justify;">
ಇನ್ನೊಂದು ವಿಷಯವನ್ನಿಲ್ಲಿ ಹೇಳಲೇ ಬೇಕು. ನಾನಿಲ್ಲಿಯ ತನಕ ಯಾವುದೇ ಪ್ರಶಸ್ತಿ ಪ್ರದಾನ ಮಾಡಿದ್ದರೂ, ಮಾಡಿಸಿದ್ದರೂ, ಕೇವಲ ಪ್ರಶಸ್ತಿಗೆ ಆಯ್ಕೆಯಾದವರನ್ನು ಗೌರವಿಸಿದ್ದೇನೆ. ಇಲ್ಲಿ ಆ ಪರಂಪರೆಗೆ ನಾನು ತಿಲಾಂಜಲಿ ಇತ್ತೆ. ಪ್ರಶಸ್ತಿ ಪ್ರದಾನಕ್ಕೆ ವೇದಿಕೆಗೆ ರಾಜಶ್ರೀ ಅಕ್ಕ ಹಾಗೂ ಗಾರ್ಗಿಗೂ ಕರೆವ ಯೋಚನೆ ಮಾಡಿದೆ. ಗಾರ್ಗಿ ಬರದೇ ತಪ್ಪಿಸಕೊಂಡಳು!. ರಾಜಶ್ರೀಯವರಿಗೆ ತಪ್ಪಿಸಿಕೊಳ್ಳುವ ಸಂಭವ ಸಿಗಲಿಲ್ಲ. ಇಬ್ಬರನ್ನೂ ಕುರಿಸಿ, 'ಸುಮಕೃಷ್ಣ'ಪ್ರಶಸ್ತಿ ಪ್ರದಾನಿಸಿದಾಗ, ನನಗೆ, ನನ್ನ ಕುಟುಂಬಕ್ಕೆ ಮತ್ತು ನನ್ನ ಅತ್ತೆ ಮಾವ, ಸುಮತಿ-ಕೃಷ್ಣಮೂರ್ತಿಯವರ ಎಲ್ಲಾ ಮಕ್ಕಳಿಗೆ ಹಾಗೂ ಬಹುಶ: ಅತ್ತೆ ಮಾವನವರಿಗೂ ಸಂತೃಪ್ತಿಯ ಭಾವ</div>
<div style="text-align: justify;">
<br /></div>
<table cellpadding="0" cellspacing="0" class="tr-caption-container" style="float: left; margin-right: 1em; text-align: left;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEjzhc5w_9brB57Tuk-A7r4IaWrq0go6yciYHOH1Wyg2JA-3T1rzFW7skjxbEqyYRbmNe1du5Gmd9BhY73YcfojUxBGkks54umJbWZ3i-kSBQ5YXCAnQiW3GiJpEPcTrGv6HSCLgCAbRhhsn/s1600/DSC_7473.JPG" imageanchor="1" style="clear: left; margin-bottom: 1em; margin-left: auto; margin-right: auto;"><img border="0" src="https://blogger.googleusercontent.com/img/b/R29vZ2xl/AVvXsEjzhc5w_9brB57Tuk-A7r4IaWrq0go6yciYHOH1Wyg2JA-3T1rzFW7skjxbEqyYRbmNe1du5Gmd9BhY73YcfojUxBGkks54umJbWZ3i-kSBQ5YXCAnQiW3GiJpEPcTrGv6HSCLgCAbRhhsn/s1600/DSC_7473.JPG" height="132" width="200" /></a></td></tr>
<tr><td class="tr-caption" style="text-align: center;">ಅತ್ತೆ-ಮಾವರ ಮಕ್ಕಳೊಂದಿಗೆ </td></tr>
</tbody></table>
<div style="text-align: justify;">
ಪ್ರಶಸ್ತಿ ಪ್ರದಾನದ ನಂತರ ಸಂಜೆ ನಾಲ್ಕರ ತನಕವೂ ನಮ್ಮೊಡನಿದ್ದ ಶಬರಾಯ ದಂಪತಿಗಳು ಅಲ್ಲಿ ಒಂದು ಆತ್ಮೀಯ ವಾತಾವರಣವನ್ನೇ ಸೃಷ್ಟಿಸಿದರು. ನನ್ನ ಪಾಲಿಗಂತೂ ಇದು ಒಂದು ಹೊಸ ಅನುಭವ. ಖಂಡಿತಕ್ಕೂ ಹೊಸ ಅನಭವ. ಬೆಂಗಳೂರಿನ ಓರ್ವ ವ್ಯಕ್ತಿಗೆ ನಾನೂ ಒಂದು ಸಂಸ್ಥೆಯ ಮುಖಾಂತರ ಪ್ರಶಸ್ತಿಯನ್ನು ಕೊಡಿಸಿದ್ದೆ. ಅವರು ಇಲ್ಲಿಗೆ ಬಂದಾಗ ಅವರ ವಸತಿಯಿಂದ ಹಿಡಿದು ಪ್ರತಿಯೊಂದನ್ನೂ ನಾನೇ ನೋಡಿಕೊಂಡಿದ್ದೆ. ಕೊನೆಗೆ ಪ್ರಶಸ್ತಿ ಪ್ರದಾನದ ನಂತರ ಅವರನ್ನು ಬೆಂಗಳೂರಿನ ಬಸ್ಸು ಹತ್ತಿಸಿ ಬಂದಿದ್ದೆ. ಅದರ ನಂತರ ಇಂದಿನ ತನಕವೂ ನನ್ನ ಒಂದು ಫೋನ್ ಕರೆಗೂ ಆ ವ್ಯಕ್ತಿ ಉತ್ತರಿಸಲಿಲ್ಲ!!. ಬದಲಿಗೆ ಪ್ರಶಸ್ತಿ ಸ್ವೀಕರಿಸಿದಾಗ, ಅದು ತನ್ನ ಆರ್ಹತೆಗೆ ಸಂದ ಗೌರವವೇ ಹೊರತು, ಅದರಲ್ಲಿ ಅಂತಹ ವಿಶೇಷವೇನೇನೂ ಇಲ್ಲ ಎಂಬ ಅನಿಸಿಕೆಯನ್ನು ಅವರು ಹೊರ ಹಾಕಿದಾಗ, ಎಲ್ಲರೂ ಮುಖ ಮುಖ ನೋಡಿಕೊಂಡದ್ದನ್ನು ನಾನಿನ್ನೂ ಮರೆತಿಲ್ಲ. ಅಂತಹ ಕಹಿ ಅನುಭವಗಳ ಮಧ್ಯೆ, ಇಂತಹ ಅನುಭವಗಳು ನಿಜಕ್ಕೂ ಮನಸ್ಸಿಗೆ ಮುದ ನೀಡುತ್ತದೆ.</div>
<div style="text-align: justify;">
ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಶಬರಾಯ ಕುಟುಂಬವೇ ಇಂತಾದ್ದೊಂದು ಸಾರ್ಥಕ ಭಾವನೆಯನ್ನು ನನಗೆ ಮತ್ತು ಕುಟುಂಬಕ್ಕೆ ತಂದು ಕೊಟ್ಟಿದೆ. ಯಕ್ಷಗಾನ ರಂಗಕ್ಕೂ ಈ ಅನುಭವವಾಗಿದ್ದರೆ ಅಚ್ಚರಿ ಇಲ್ಲ.</div>
<div style="text-align: justify;">
<br /></div>
<div style="text-align: justify;">
ಮುಖ್ಯವಾಗಿ ನನ್ನತ್ತೆ-ಮಾವನ ಹೆಸರಿನ ಸುಮಕೃಷ್ಣ ಯಕ್ಷಗಾನ ಪ್ರಶಸ್ತಿಗೆ ಇದರಿಂದ ಮೌಲ್ಯ ಹೆಚ್ಚಿದೆ ಎಂಬುದು ನನ್ನ ತೃಪ್ತಿ.</div>
<div style="text-align: justify;">
<br /></div>
<div style="text-align: justify;">
<br /></div>
</div>
Anonymoushttp://www.blogger.com/profile/07026221826810784770noreply@blogger.com0tag:blogger.com,1999:blog-6634091388019397795.post-10757053085650928442014-05-01T21:39:00.003-07:002014-05-01T21:39:32.972-07:00ಪಾಠ...<div dir="ltr" style="text-align: left;" trbidi="on">
<b><span style="color: blue;">ನಾನೇನೂ ಕವಿಯಲ್ಲ.... ಆ ಕ್ಷಣಕ್ಕೆ ಹೊಳೆದದ್ದನ್ನು ಗೀಚಿ ಬಿಡುವುದು ನನ್ನ ಅಭ್ಯಾಸ... ಅಂತಹ ಒಂದು ಕವನ ಇಂದು ಹುಟ್ಟಿ ಕೊಂಡಿತು.... ಸಂಗ್ರಹಕ್ಕೂ, ತಮ್ಮ ಗಮನಕ್ಕೂ ಇರಲಿ ಎಂದು ಈ ಬ್ಲಾಗ್ ನಲ್ಲಿ ಅಡಗಿಸಿ ಬಿಟ್ಟೆ.... ಪ್ರತಿಕ್ರಿಯೆಗೆ ಕಾಯುವುದು ಸಹಜ...ಬರೆಯುತ್ತೀರಾ????</span></b><br />
<br />
<br />
ನಾನೂ ಸೋತಿದ್ದೇನೆ ಅನೇಕ ಬಾರಿ<br />
ಅದಕೆ ಒಂದಲ್ಲ, ಹತ್ತು ಹಲವು ದಾರಿ<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgwzLXq2JpgfZfGoMtAZ_3CAk3PEZnnxPVFaczNArbMfP6jmKyAPHcX6-ijWf9gpDieBhI4Rv41vJe2X8F9Pj6mr85s8YHnok92dV-SZVlr6vgt7DyCIGQrMIaI5NzUod_wwJGitevU2dWf/s1600/lesson+plan+image.jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEgwzLXq2JpgfZfGoMtAZ_3CAk3PEZnnxPVFaczNArbMfP6jmKyAPHcX6-ijWf9gpDieBhI4Rv41vJe2X8F9Pj6mr85s8YHnok92dV-SZVlr6vgt7DyCIGQrMIaI5NzUod_wwJGitevU2dWf/s1600/lesson+plan+image.jpg" height="162" width="200" /></a></div>
ಪ್ರತಿಬಾರಿಯೂ ಅದರ ಪ್ರತಿಫಲನ ಒಂದೇ<br />
ಸಾಗುತಿರು ನೀ ಮತ್ತೆ ಮತ್ತೆ ಮುಂದೆ!! <br />
<br />
<br />
ಅಷ್ಟಕ್ಕೂ ಏನಿದೆ ಇಲ್ಲಿ ಬಿಟ್ಟರೆ ಮಣ್ಣು..?<br />
ಎಂಬವರ ಮನಸೊಳಗೆ ತೆರೆಯದೇ ಕಣ್ಣು??<br />
ಮಣ್ಣಲ್ಲವೇ ಹೊನ್ನ ಮೊಗೆದು ಕೊಡುವ ಜೀವ<br />
ಸೇರುವುದು ಬಿಟ್ಟು ಎಲ್ಲರೊಳಗಣ ಭಾವ??<br />
<br />
<a href="https://blogger.googleusercontent.com/img/b/R29vZ2xl/AVvXsEg6vqRaEpIhfKHNCyH1vZNjlyqF3cLuQHJLhl5hbCAb8bziiZnbPDTxcU3lKiw_LVMupkVs9JdgqVZ1iH4AnC1Y1VRWW5eXzlwpsynWiw_UbaU3zojvs80i41BFmRXKueLimY7JiJbkKMF2/s1600/lesson....png" imageanchor="1" style="clear: right; float: right; margin-bottom: 1em; margin-left: 1em;"><img border="0" src="https://blogger.googleusercontent.com/img/b/R29vZ2xl/AVvXsEg6vqRaEpIhfKHNCyH1vZNjlyqF3cLuQHJLhl5hbCAb8bziiZnbPDTxcU3lKiw_LVMupkVs9JdgqVZ1iH4AnC1Y1VRWW5eXzlwpsynWiw_UbaU3zojvs80i41BFmRXKueLimY7JiJbkKMF2/s1600/lesson....png" height="154" width="200" /></a>ಗೆದ್ದಿಲ್ಲವೆಂದಲ್ಲ,ಲೆಕ್ಕವಿಟ್ಟಿಲ್ಲ ಅಷ್ಟೇ!<br />
ಅದು ನನ್ನ ಸಾಧನೆ, ಮತ್ತೆ ಅಷ್ಟಕ್ಕಷ್ಟೇ!!<br />
ನನ್ನ ನೋವು ಮಾತ್ರ ಕಂಡವರ ಹಣೆಗೆ<br />
ನಲಿವೆಲ್ಲಾ ನನ್ನದೇ, ಇದು ನನ್ನ ಬಗೆ!!<br />
<br />
ನಿನ್ನ ಗೆಲುವಿಗೆ ಎಲ್ಲರೂ ವಾರೀಸುದಾರ<br />
ಸೋಲಿಗೆ ನಿನ್ನ ಹಣೆಬರಹವೇ ಗುರಿಕಾರ<br />
ಮರೆತು ಬಿಡು ಜಗ ಇರುವುದೇ ಹೀಗೆ<br />
ನಡೆದು ಬಿಡು, ನಿನ್ನ ದಾರಿ ಇರುವುದೇ ಹಾಗೆ!!<br />
<br />
<br />
<br />
<br />
<br />
<br />
<br />
<br />
<br />
<br />
<br />
<br /></div>
Anonymoushttp://www.blogger.com/profile/07026221826810784770noreply@blogger.com1tag:blogger.com,1999:blog-6634091388019397795.post-14819689997474050972014-05-01T20:52:00.003-07:002014-05-01T20:52:45.489-07:00ಫೇಸ್ ಬುಕ್, ಐಪಿಎಲ್.....ಅಯ್ಯೋ!!.<div dir="ltr" style="text-align: left;" trbidi="on">
<div style="text-align: justify;">
<b><span style="color: blue;">ನನಗೂ ಚೆನ್ನಾಗಿ ನೆನಪಿದೆ. ಬಾಲ್ಯದಲ್ಲಿ ಓದುವ ಗೀಳೂ ಇದೇ ರೀತಿ ಇತ್ತು. ನಾನೂ ಇದಕ್ಕೆ ಹೊರತಾಗಿಲ್ಲ. ಪಠ್ಯ ಪುಸ್ತಕದ ನಡುವೆ ಅನಕ್ರ, ತರಾಸು, ಕಾರಂತ ಮುಂತಾದವರ ಬರಹಗಳನ್ನು ಅಡಗಿಸಿಟ್ಟುಕೊಂಡು ಓದುತ್ತಿದ್ದೆ...</span><span style="color: #660000;">ಕಳೆದ ವಾರದ ಜನಪ್ರತಿನಿಧಿಯ ಪ್ರದಕ್ಷಿಣೆಯಲ್ಲಿ ನನ್ನ ಬರಹ. </span></b></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
ಇತ್ತೀಚೆಗೆ ಓದಿದ ಒಂದು ಕಿರು ಕಥೆ ಇಲ್ಲೆ ನೆನಪಾಗುತ್ತದೆ. ಅದರ ರೂಪಾಂತರ ಇಲ್ಲಿ ನೀಡುತ್ತಿದ್ದೇನೆ.</div>
<br />
<span style="text-align: justify;">ಒಂದು ಮನೆ. ಅಲ್ಲಿ ನೀರವ ಮೌನ ಆವರಿಸಿರುತ್ತದೆ. ಮನೆಯಲ್ಲಿನ ಸದಸ್ಯರೆಲ್ಲರೂ ಏನೋ ಅನಾಹುತ ಆದ ಹಾಗೆ ಒದ್ದಾಡುತ್ತಿದ್ದಾರೆ. ಎಲ್ಲರ ದೃಷ್ಟಿಯೂ ಒಂದೇ ಕಡೆ. ಕೊನೆಗೂ ಅಲ್ಲಿ ಲೈಟ್ ಹತ್ತಿಕೊಳ್ಳುತ್ತದೆ. ಓಹ್! ಬಂತು ಎಂದು ಒಬ್ಬ ಸದಸ್ಯ ಕೂಗುವುದಕ್ಕೂ, ಮನೆಯ ಎಲ್ಲಾ ಸದಸ್ಯರೂ ಓಡಿ ಬಂದು ಅದರ ಮುಂದೆ ಕುಳಿತುಕೊಳ್ಳುತ್ತಾರೆ. ಹೌದು, ಇಂಟರ್ ನೆಟ್ ಕನೆಕ್ಟ್ ಆಗಿತ್ತು!!.</span><br />
<div style="text-align: justify;">
<br /></div>
<div style="text-align: justify;">
ಇಂದು ಇಂಟರ್ ನೆಟ್ ಕನೆಕ್ಷನ್ ಸ್ವಲ್ಪ ಹೊತ್ತು ಹೋದರೆ ನಮ್ಮೊಳಗೆ ಏನೋ ಹೇಳ ತೀರದ ಕಸಿವಿಸಿ. ಅದೇ ರೀತಿ ಟಿ ವಿ ಚ್ಯಾನೆಲ್ ಸಹಾ ಅಷ್ಟೇ. ಕರೆಂಟ್ ಇಲ್ಲದೇ ಅಥವಾ ಯಾವುದಾದರೂ ತಾಂತ್ರಿಕ ಕಾರಣದಿಂದ ಟಿವಿ ಸಂಪರ್ಕ ಕಡಿತಗೊಂಡರೂ ಇದೇ ಅವಸ್ಥೆ.</div>
<div style="text-align: justify;">
<br /></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEj9lfsBLgkbcmcWcqIlx4P64mTJlpLKEJtR-YTM8C9yHbMKvFiHBiyBsDkL3I2gEYL6uZt3TMoAebn6L0iWiSWQHuuV98Lm4_t8hf0yoi8SRz2XtOqVIss6KFTVbwpf72A7l_bBTpSbok85/s1600/facebook-blackberry-10.jpg" imageanchor="1" style="clear: right; float: right; margin-bottom: 1em; margin-left: 1em;"><img border="0" src="https://blogger.googleusercontent.com/img/b/R29vZ2xl/AVvXsEj9lfsBLgkbcmcWcqIlx4P64mTJlpLKEJtR-YTM8C9yHbMKvFiHBiyBsDkL3I2gEYL6uZt3TMoAebn6L0iWiSWQHuuV98Lm4_t8hf0yoi8SRz2XtOqVIss6KFTVbwpf72A7l_bBTpSbok85/s1600/facebook-blackberry-10.jpg" height="109" width="200" /></a><a href="https://blogger.googleusercontent.com/img/b/R29vZ2xl/AVvXsEiRJz69tQSpU7XIpjNhquwJQ_mHi0nRsj8Al_EWGzjdpWTlThtsx2VPVghXJXQSRkdU6JLao-rRYjkijMNF-faSvK_Pr6ISWNZHheAB87lTm6CWZy7wDGn4goRF6t7NQczExyFkM0w2H4Uk/s1600/IPL.jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEiRJz69tQSpU7XIpjNhquwJQ_mHi0nRsj8Al_EWGzjdpWTlThtsx2VPVghXJXQSRkdU6JLao-rRYjkijMNF-faSvK_Pr6ISWNZHheAB87lTm6CWZy7wDGn4goRF6t7NQczExyFkM0w2H4Uk/s1600/IPL.jpg" height="118" width="200" /></a>ಒಮ್ಮೆ ಮನೆಗೆ ಬಂಧು ಒಬ್ಬರು ಬಂದಿದ್ದರು. ಟಿವಿಯಲ್ಲಿ ಯಾವುದೋ ಸುದ್ದಿ ನೋಡುತ್ತಿದ್ದೆ. ಅವರ ಮುಖದಲ್ಲಿ ಅದೇನೋ ಅಸಹನೆ. ನಾನು ಗಮನಿಸುತ್ತಲೇ ಇದ್ದೆ. ಕೊನೆಗೂ ತಡೆಯಲಾರದೇ ಅವರು ಕೇಳಿಯೇ ಬಿಟ್ಟರು. ಲಾವಣ್ಯಗೇನಾಯ್ತು ನೋಡಬೇಕು, ಸ್ವಲ್ಪ ಈಟಿವಿ ಹಾಕ್ತೀರಾ ಎಂದು. ನನಗೋ ಅಚ್ಚರಿ. ಯಾವ ಲಾವಣ್ಯ ಮತ್ತು ಏನಾಗಿತ್ತು ಎಂದರೆ ಅವರು ಈಟಿವಿಯ 'ಬದುಕು'ಧಾರಾವಾಹಿಯ ಬಗ್ಗೆ ಹೇಳಲು ಕುಳಿತರು. ನಾವೆಲ್ಲರೂ ಈ ಧಾರಾವಾಹಿಯ ಬಗ್ಗೆ ಟೀಕೆ ಮಾಡುತ್ತಲೇ ಇರುತ್ತೇವೆ. ಅನೇಕ ವರ್ಷಗಳಿಂದ ಬರುತ್ತಿರುವ ಧಾರಾವಾಹಿ ಮುಗಿಯುವುದೇ ಇಲ್ಲವೇನೋ ಎಂದು ಮುಖ ಸಿಂಡರಿಸುತ್ತೇವೆ. ಆದರೆ ಅದಕ್ಕಾಗಿಯೇ ಕಾಯುತ್ತಿರುವ ಮತ್ತು ಆ ಪಾತ್ರಗಳ ಬಗ್ಗೆ ಅನುಕಂಪ ತೋರುವ ಅದೆಷ್ಟೋ ಜನ ನಮ್ಮ ನಡುವೆ ಇರುತ್ತಾರೆ. ಹೀಗೆಯೇ ಲೋಕಾಭಿರಾಮವಾಗಿ ಮಾತಾಡುವಾಗ ಅವರೆಂದರು. ಅವರು ದಿನಾಲೂ ಮೂಡುಬಿದಿರೆಯಿಂದ ಕೆಲಸಕ್ಕಾಗಿ ಮಂಗಳೂರಿಗೆ ಬರುತ್ತಾರೆ. ಮರಳಿ ಸಂಜೆ ಮನೆಗೆ ಹೋಗುವಾಗ ಅವರ ಖಾಯಂ ಬಸ್ ಒಂದಿದೆ. ಅದು ಸಿಕ್ಕದೇ ಇದ್ದರೇ ಆ ದಿನ ಅವರ ಮೂಡ್ ಹಾಳಾಗಿರುತ್ತದೆ. ಬಸ್ ಇಳಿಯುತ್ತಲೇ, ಮನೆಗೆ ಓಡಿಯೇ ಹೋಗಿ, ಬಾಗಿಲು ತೆರೆದು ಒಳಗ ಹೊಕ್ಕು, ಮೊದಲು ಟಿವಿಯ ಸ್ವಿಚ್ ಆನ್ ಮಾಡಿ, ಮನೆಯೊಂದು ಮೂರು ಬಾಗಿಲು (ಆಗ) ಹಾಕಿದ ನಂತರವೇ ಅವರು ನಿರಾಳ!!. ಇದನ್ನು ಕೇಳಿದಾಗ ನಿಜಕ್ಕೂ ಅಚ್ಚರಿ ಅನಿಸಿತು. ನಾನೂ ಕೇಳಿದೆ. ಈ ಟಿವಿ ಮಾಧ್ಯಮ ಇಷ್ಟು ಹತ್ತಿರವಾಗುವ ಮೊದಲೂ ನೀವು ಇದ್ದಿರಿ. ಆಗೇನು ಮಾಡುತ್ತಿದ್ದಿರಿ ಎಂದು. ಅದಕ್ಕವರು ಆಗ ಪುಸ್ತಕ ಓದುತ್ತಿದ್ದೆ ಎಂದರು. ಈಗ...?? ಪುಸ್ತಕ ಓದದೇ ಯಾವ ಕಾಲವಾಯಿತೋ!!</div>
<div style="text-align: justify;">
<br /></div>
<div style="text-align: justify;">
ನನಗೂ ಚೆನ್ನಾಗಿ ನೆನಪಿದೆ. ಬಾಲ್ಯದಲ್ಲಿ ಓದುವ ಗೀಳೂ ಇದೇ ರೀತಿ ಇತ್ತು. ನಾನೂ ಇದಕ್ಕೆ ಹೊರತಾಗಿಲ್ಲ. ಪಠ್ಯ ಪುಸ್ತಕದ ನಡುವೆ ಅನಕ್ರ, ತರಾಸು, ಕಾರಂತ ಮುಂತಾದವರ ಬರಹಗಳನ್ನು ಅಡಗಿಸಿಟ್ಟುಕೊಂಡು ಓದುತ್ತಿದ್ದೆ. ನಮ್ಮ ಪಕ್ಕದ ಮನೆಯಲ್ಲಿದ್ದ ಅನಂತ ಪದ್ಮನಾಭ ನಾಯರಿ ದಂಪತಿಗಳು ನನಗೆ ಇದನ್ನು ಒದಗಿಸುತ್ತಿದ್ದರು. ಊರಿನಲ್ಲಿ ತರಂಗ, ಸುಧಾ, ಪ್ರಜಾಮತಗಳು ನಿಯಮಿತವಾಗಿ ಬರುತ್ತಿದ್ದುದು ಅವರ ಮನೆಯಲ್ಲಿ ಮಾತ್ರ. ತಪ್ಪದೇ ಆವುಗಳನ್ನು ಕಡ ತಂದು ಓದದಿದ್ದರೆ ಊಟ ಮಾಡಿದ್ದು ಜೀರ್ಣವಾಗದ ಪರಿಸ್ಥಿತಿ. ಆದರೆ ಈಗ..? ನಾನೇ ಮನೆಗೆ ತರಂಗ, ಸುಧಾಗಳನ್ನು ತರಿಸುತ್ತಿದ್ದರೂ, ಓದುವುದು ನಿಯಮಿತವಾಗಿದೆ ಎಂಬುದು ಪ್ರಾಮಾಣಿಕ ಅನಿಸಿಕೆ. ಯಾಕೆಂದುಕೊಂಡರೆ ಸಮಯ ಸಿಗದು ಎಂಬುದು ಪಿಳ್ಳೆ ನೆವ ಅಷ್ಟೇ. ಸಿಗುವ ಸಮಯವನ್ನು ಟಿವಿ, ಕಂಪ್ಯೂಟರ್ಗೆ ಕೊಟ್ಟು ಬಿಟ್ಟರೆ ಮತ್ತೆ ಸಮಯ ಸಿಗಬೇಕು ಎಲ್ಲಿಂದ?</div>
<div style="text-align: justify;">
<br /></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEiOaeau4__FsZKnMwQEgVJqTpa8T_sHk6qwjJpbw-a-FK9CEIZTKliN-Mn0tWR8mA2AyMUH3_vXV6JumgFWWEqFB_Q9PkISiXU8z4MzA8m8LU2HvyUim9LZOFx5vYib_tkgRN0T7E2Ofw6l/s1600/Television.jpg" imageanchor="1" style="margin-left: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEiOaeau4__FsZKnMwQEgVJqTpa8T_sHk6qwjJpbw-a-FK9CEIZTKliN-Mn0tWR8mA2AyMUH3_vXV6JumgFWWEqFB_Q9PkISiXU8z4MzA8m8LU2HvyUim9LZOFx5vYib_tkgRN0T7E2Ofw6l/s1600/Television.jpg" height="214" width="320" /></a></div>
<div style="text-align: justify;">
ನಾನು ಹೇಳ ಹೊರಟದ್ದು ಇಂದಿನ ಇಂತಹ ಗಜಿಬಿಜಿ ಬದುಕಿನ ಬಗ್ಗೆ. ಈಗ ನಮ್ಮ ಮಕ್ಕಳಿಗಂತೂ ಓದು ಬಲು ದೂರವಾಗಿಬಿಟ್ಟಿದೆ. ಕನ್ನಡ ಬರಹಗಾರರ ಬಗ್ಗೆ ಒಂದಾದರೂ ಪ್ರಶ್ನೆಗೆ ಅವರು ಉತ್ತರಿಸಿದರೆ, ಅದೇ ಬಹು ದೊಡ್ಡ ಸಮಾಧಾನ ಎಂಬಂತಾಗಿದೆ. ಟಿವಿ ಒಂದು ರೀತಿಯಲ್ಲಿ ನಿಯಮಿತವಾಗಿ ನಮ್ಮೊಳಗಿನ ಬದಲಾವಣೆಗೆ ಕಾರಣವಾಗಿದ್ದರೆ, ಇಂದು ಕಂಪ್ಯೂಟರ್ ಮತ್ತು ಆ ಮೂಲಕವಾಗಿ ಇಂಟರ್ ನೆಟ್, ಮತ್ತೂ ಮುಂದೆ ಯೋಚಿಸಿದರೆ ಫೇಸ್ ಬುಕ್ ಗಳು ಇನ್ನಿಲ್ಲದಂತೆ ನಮ್ಮ ಬದುಕಿನ ಅಮೂಲ್ಯ ಸಮಯವನ್ನು ತಿನ್ನುತ್ತಿವೆ. ನೀವು ಫೇಸ್ ಬುಕ್ನಲ್ಲಿರುವ ಹೆಚ್ಚಿನ ಸ್ನೇಹಿತರನ್ನು ಕಛೇರಿಯಲ್ಲಿ ಗಮನಿಸಿದರೆ, ಅವರ ಕಂಪ್ಯೂಟರ್ ನಲ್ಲಿ ಫೇಸ್ ಬುಕ್ ಯಾವಾಗಲೂ ತೆರೆದುಕೊಂಡಿರುತ್ತದೆ. ಒಮ್ಮೊಮ್ಮೆ ನೀವು ಫೆಸ್ ಬುಕ್ ತೆರೆದಿರಿ ಎಂದರೆ, ನಿಮಗಿಷ್ಟ ಇದ್ದೋ, ಇಲ್ಲದೆಯೋ ಚಾಟ್ ಆರಂಭವಾದರೆ ಅದು ಘಂಟೆಗಟ್ಟಲೇ ಮುಂದುವರಿಯುವ ಅಪಾಯವಿರುತ್ತದೆ. ಇಷ್ಟಕ್ಕೇ ಸೀಮಿತವಾಗದೇ, ಇದು ಅನೇಕ ಸಲ, ಸಂಬಂಧದ ದಿಕ್ಕನ್ನೇ ಬದಲಾಯಿಸಿ ಬಿಡುವ ದುರಂತವಿರುತ್ತದೆ. ಇತ್ತೀಚೆಗೆ ಓದಿದ ಘಟನೆ ಈ ಕ್ಷಣದಲ್ಲಿ ನೆನಾಪಾಗುತ್ತದೆ. ಓರ್ವ ಯುವಕ ಫೇಸ್ ಬುಕ್ನಲ್ಲಿ ಯುವತಿಯೋರ್ವಳೊಂದಿಗೆ ಸ್ನೇಹ ಗಳಿಸುತ್ತಾನೆ. ಅವರ ಚಾಟ್ ಇಬ್ಬರನ್ನೂ ಪ್ರೇಮಿಸುವ ತನಕ ಒಯ್ಯುತ್ತದೆ. ಫೆಸ್ ಬುಕ್ನ ಯುವತಿಯ ಫೋಟೋ ನೋಡಿದ ಯುವಕ ಆಕೆಯನ್ನೇ ಕಲ್ಪಿಸಿಕೊಂಡಡು, ಕೊನೆಗೂ ಒಂದು ದಿನ ಇಬ್ಬರೂ ಬೇಟಿಯ ತೀರ್ಮಾನ ಮಾಡುತ್ತಾರೆ. ಅಂತೆಯೇ ಒಬ್ಬರನ್ನೊಬ್ಬರು ಸಂಧಿಸಿದಾಗ ಯುವಕನಿಗೆ ಅಚ್ಚರಿ. ಆಕೆ ಫೇಸ್ಬುಕ್ ನಲ್ಲಿ ಹಾಕಿದ ಫೋಟೋ ಬೇರೆಯದೇ ಆಗಿದ್ದು, ನೋಡಲು ಅಷ್ಟೇನೂ ಸುಂದರಿ ಅಲ್ಲ ಎಂದು ತಿಳಿದ ಆತ ಆಕೆಯನ್ನು ಇರಿದು ಕೊಲ್ಲುತ್ತಾನೆ ಮತ್ತು ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ...! ಬೇಕಾ ಈ ದುರಂತ??</div>
<div style="text-align: justify;">
<br /></div>
<div style="text-align: justify;">
ಫೇಸ್ ಬುಕ್ ಕಮೆಂಟ್ ಗಳದ್ದೇ ಮತ್ತೊಂದು ಕಥೆ. ಸದ್ಯಕ್ಕೆ ಇಲ್ಲಿ ಯಾವುದೇ ನೀತಿ ಸಂಹಿತೆ ಇಲ್ಲ. ಯಾರು ಯಾರನ್ನು ಹೇಗೆ ಬೇಕಾದರೂ ಬಯ್ಯಬಹುದು ಎಂಬುದು ಅಘೋಷಿತ ನಿಯಮ. ಈಗ ಚುನಾವಣೆಯ ಪರ್ವ. ಅನೇಕ 'ಬುದ್ದಿಜೀವಿ'ಗಳು ಈ ಮಾಧ್ಯಮದ ಮೂಲಕ, ಅನೇಕ ನಾಯಕರಿಗೆ ಬಾಯಿಗೆ ಬಂದಂತೆ ಬಯ್ದು ಚಪಲ ತೀರಿಸಕೊಳ್ಳುತ್ತಿದ್ದಾರೆ. ತನ್ನ ಕಾಲ ಕೆಳಗಿನ ಹೇಸಿಗೆ ಇವರಿಗೆ ಕಾಣಿಸದೇ, ಬೇರೆಯರ ಹುಳುಕನ್ನು ಅದಕ್ಕೆ ಕೈಕಾಲು ಸೇರಿಸಿ ವರ್ಣಿಸಿ ಸಮಾಧಾನ ಪಟ್ಟುಕೊಳ್ಳುತ್ತಾರೆ.</div>
<div style="text-align: justify;">
<br /></div>
<div style="text-align: justify;">
ಒಂದು ಮನೆಯೊಳಗೆ ಕಾಲಿಟ್ಟರೆ, ಅಲ್ಲಿ ಈಗಷ್ಟೇ ಅ ಆ ಕಲಿಯುವ ಮಗುವಿನಿಂದ ಹಿಡಿದು ಅತೀ ಹಿರಿಯನ ತನಕೂ, ಕಂಪ್ಯೂಟರ್ ಮುಂದೆ ಅಥವಾ ಮೊಬೈಲ್ ಮುಂದೆ ಕೀಲಿಸಿಕೊಂಡಿರುತ್ತಾರೆ. ಎಲ್ಲರದ್ದೂ ಫೇಸ್ ಬುಕ್ ಪ್ರಪಂಚ. ಅದೊಂದು ಇಂದಿನ ವರ್ಣ ಮಯ ಬದುಕೇ ಆಗಿಬಿಟ್ಟಿದೆ. </div>
<div style="text-align: justify;">
<br /></div>
<div style="text-align: justify;">
ಹಾಗೆಂದು ಇದು ಹೀಗೆಯೇ ಕೆಟ್ಟದ್ದು ಎಂಬುದು ಖಂಡಿತ ನನ್ನ ವಾದವಲ್ಲ. ಇದೇ ಫೇಸ್ ಬುಕ್ ಮೂಲಕ ಅದೆಷ್ಟೋ ಒಳ್ಳೆಯ ಕೆಲಸಗಳಾಗಿದ್ದು ನಾನೂ ಗಮನಿಸಿದ್ದೇನೆ. ಅನೇಕ ಸಮಾನ ಮನಸ್ಕರು ಒಂದಾಗಿ, ಸಾಮಾಜಿಕ ಕಾಳಜಿ ಮೆರೆದ ಉದಾರಹರಣೆಗಳಿವೆ. ಅನೇಕ ಸೋಶಲ್ ನೆಟ್ ವರ್ಕ್ ತಂಡಗಳು ಸಮಾಜದ ಒಳಿತಿಗಾಗಿ, (ಉದಾ:- ಏಡ್ಸ್ ಜಾಗೃತಿ, ಅನಾಥ ಮಕ್ಕಳ ಕಲ್ಯಾಣ, ಸಾಹಿತ್ಯಿಕವಾಗಿ ಗುಂಪು ರಚನೆ) ಶ್ರಮಿಸಲೂ ಇದೇ ಫೇಸ್ ಬುಕ್ ಕಾರಣವಾಗಿದೆ. ಆದರೆ ಇಲ್ಲಿ ಒಳಿತು ಕೆಡುಕುಗಳ ವಿಮರ್ಶೆಗೊಳಗಾಗದೇ,ಅದನ್ನೇ ಒಂದು ಗೀಳಾಗಿ ಹಚ್ಚಿಕೊಂಡು ಹಾಳಾಗುವ ವರ್ಗ ದೊಡ್ಡದಿದೆ. ಅದು ಖೇದಕರ ಅಷ್ಟೇ.</div>
<div style="text-align: justify;">
<br /></div>
<div style="text-align: justify;">
ಇನ್ನು ಇತ್ತೀಚೆಗೆ ಮನೆಯೊಳ ಹೊಕ್ಕರೆ ರಾತ್ರಿ ೧೧ರ ತನಕ ಊಟ-ನೀರಿಲ್ಲದಂತೆ ಮಾಡುತ್ತಿರುವುದು ಐಪಿಎಲ್. ಇತ್ತೀಚೆಗೆ ಮಂಗಳೂರು ನಗರದ ಪುರಭವನದಲ್ಲಿ ಒಂದು ರಂಗ ಪ್ರವೇಶ ಇತ್ತು. ಅದಕ್ಕೆ ಬರುವಂತೆ ನಾನು ಓರ್ವ ಸ್ನೇಹಿತರಲ್ಲಿ ವಿನಂತಿ ಮಾಡಿದೆ. ಎಷ್ಟು ಘಂಟೆಗೆ ಅಂದರು. ಸಂಜೆ ೫.೩೦ಕ್ಕೆ ಅಂದೆ. ತಕ್ಷಣ ಅವರೆಂದರು, ಇಲ್ಲ ಬರಲಾಗದು, ಐಪಿಎಲ್ ಮ್ಯಾಚ್ ನೋಡಬೇಕು ಎಂದರು. ಇದು ಐಪಿಎಲ್ ಮಾಡಿದ ಪ್ರಭಾವ. ನಮ್ಮೊಳಗಿನ ಹುಚ್ಚನ್ನು ಇದು ಎಷ್ಟರ ಮಟ್ಟಿಗೆ ಮೂರ್ಖರನ್ನಾಗಿಸಿದೆ ಎಂದರೆ, ಮನೆಯೊಳಗೆ ಸಹಜವಾಗಿ ಆಗಬೇಕಾಗುವ ಊಟ-ತಿಂಡಿಗಳ ಸಮಯವನ್ನೂ ಇದು ತಿಂದು ಹಾಕುತ್ತಿದೆ. ಅಥವಾ ಮನೆಯೊಳಗೆ ಯಾವುದಾದರೂ ಬಂಧು ಬರಬೇಕೆಂದಿದ್ದರೆ ಮ್ಯಾಚ್ ಆರಂಭಕ್ಕಿಂತಲೂ ಮುಂಚೆ ಬಂದು ಹೋದರೆ ಸಾಕೆಂಬ ಮನ ಸ್ಥಿತಿಗೂ ನಮ್ಮನ್ನು ತಳ್ಳಿಬಿಟ್ಟಿದೆ. </div>
<div style="text-align: justify;">
<br /></div>
<div style="text-align: justify;">
ಇಂದು ನೀವು ಯಾರಲ್ಲೇ ಕೇಳಿ. ಅಯ್ಯೋ ಪುರುಸೊತ್ತೇ ಇಲ್ಲ ಎಂಬ ಉದ್ಘಾರ ಸಾಮಾನ್ಯವಾಗಿರುತ್ತದೆ. ದುರಂತವೆಂದರೆ ಇವರ ಹೆಚ್ಚಿನ ಸಮಯವನ್ನು ತಿನ್ನುವುದು ಫೆಸ್ ಬುಕ್, ವಾಟ್ಸ್ ಆಪ್, ಟಿವಿಯಂತಹ 'ಜೀವನ'ಗಳು!! ಈ ಮೂಲಕ ನಾವಿಂದು ಸ್ನೇಹಿತರನ್ನು, ಬಂಧುಗಳನ್ನು, ನೆರೆಹೊರೆಯವರನ್ನು......ಮನೆಯವರನ್ನೂ ಕಳೆದುಕೊಳ್ಳುತ್ತೇವೆ.</div>
<div style="text-align: justify;">
<br /></div>
<div style="text-align: justify;">
ನಾವು ಯೋಚಿಸಿ ಎಲ್ಲಕ್ಕೂ ಒಂದು ಮಿತಿ ಹಾಕಿಕೊಳ್ಳಬೇಡವೇ..??</div>
<div style="text-align: justify;">
<br /></div>
</div>
Anonymoushttp://www.blogger.com/profile/07026221826810784770noreply@blogger.com0tag:blogger.com,1999:blog-6634091388019397795.post-81400813452305992122014-04-21T22:10:00.002-07:002014-04-21T22:10:22.383-07:00ಚುನಾವಣೆ ಎಂಬ ಮಳೆ ನಿಂತ ಮೇಲೆ.....<div dir="ltr" style="text-align: left;" trbidi="on">
<div style="text-align: justify;">
<b><span style="color: blue;">ಆ ಮಹಿಳೆಗೂ ಚುನಾವಣೆಗೂ ಅಷ್ಟಕ್ಕಷ್ಟೇ. ರಾಜಕಾರಣವನ್ನು ಬಯ್ಯುವುದು, ಚುನಾವಣೆ ಬಹಿಷ್ಕಾರ ಹಾಕುತ್ತೇನೆಂದು ಪ್ರತೀ ಬಾರಿಯೂ ಕುಳಿತುಕೊಳ್ಳುವುದು ಆಕೆಯ ಹವ್ಯಾಸ. ಈ ಸಲವೂ ಸಿಕ್ಕಿದಾಗ ಅದನ್ನೇ ಹೇಳಿದ್ದರು. ಮತದಾನ ಪವಿತ್ರದಾನ, ಅದೂ ಇದೂ ಎಂಬ ನನ್ನ ಭಾಷಣ ಆಕೆಯನ್ನು ಬದಲಾಯಿಸಲೇ ಇಲ್ಲ. ...ಈ ಬಾರಿಯ ನನ್ನ </span><span style="color: #990000;">'ಪ್ರದಕ್ಷಿಣೆ'</span><span style="color: blue;">ಯ ಲೇಖನ.... </span></b></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
ಆರ್ಭಟದ ಮಳೆ ಇದೀಗ ನಿಂತ ಅನುಭವ-ನಮ್ಮ ಕರ್ನಾಟಕಕ್ಕೆ.</div>
<div style="text-align: justify;">
<br /></div>
<div style="text-align: justify;">
ಮಹಾ ಚುನಾವಣೆ ಮುಗಿದಿದೆ. ಅಭ್ಯರ್ಥಿಗಳ ಹಣೆ ಬರಹ ಮತಪೆಟ್ಟಗೆಯಲ್ಲಿ ಭದ್ರವಾಗಿದೆ ಎಂದು ಎಲ್ಲರೂ ಹೇಳುತ್ತಿದ್ದರೂ, ವಾಸ್ತವವಾಗಿ ಮತ ಪೆಟ್ಟಿಗೆಯಲ್ಲಿ ಭದ್ರವಾಗಿರುವುದು ಮತದಾರನ ಹಣೆ ಬರಹವೇ ಎನ್ನಬೇಕಾಗುತ್ತದೆ. ಮುಂದಿನ ಚುನಾವಣೆಯ ತನಕ ಇನ್ನು ಮತದಾರ ಕೇವಲ ಒಬ್ಬ ಮೂಕ ಪ್ರೇಕ್ಷಕ-ಅದಂತೂ ಸತ್ಯ.</div>
<div style="text-align: justify;">
<br /></div>
<div style="text-align: justify;">
ಈ ಸಲದ ಚುನಾವಣೆಯಲ್ಲಿ ಅತೀ ಹೆಚ್ಚು ಮತದಾನವಾಗಬೇಕು ಎಂಬುದು ಚುನಾವಣಾ ಆಯೋಗದ ಕಾಳಜಿಯಾಗಿತ್ತು. ಅದರ ದೃಷ್ಟಿ ಮುಖ್ಯವಾಗಿ ಮೂಲ ಭೂತ ಸೌಕರ್ಯ ವಂಚಿತ ಗ್ರಾಮೀಣ ಭಾಗದ ಜನರಾಗಿದ್ದರು. ಹಾಗೆಂದೇ ಚುನಾವಣಾ ಆಯೋಗ, ಮತದಾನ ಜಾಗೃತಿಯನ್ನು ಅಮೂಲಾಗ್ರವಾಗಿ ಮತ್ತು ಪರಿಣಾಮಕಾರಿಯಾಗಿ ಕೈಗೊಂಡಿತ್ತು. ಅಂತೂ ಚುನಾವಣೆ ಮುಗಿದು ನೋಡುವಾಗ, ಆಯೋಗಕ್ಕೆ ನಿಜಕ್ಕೂ ಸಾರ್ಥಕ್ಯದ ಭಾವ. ಹೆಚ್ಚಿನ ಮತದಾರ ಮತಗಟ್ಟೆಗೆ ಬಂದಿದ್ದ. ಆದರೆ...!!</div>
<div style="text-align: justify;">
<br /></div>
<div style="text-align: justify;">
ಕೂಲಂಕುಷವಾಗಿ ಗಮನಿಸಿದರೆ ಚುನಾವಣಾ ಆಯೋಗಕ್ಕೆ ಕೊಂಚ ನಿರಾಸೆಯಾಗಿದೆ. ಯಾವ ಗ್ರಾಮೀಣ ಪ್ರದೇಶದ ಬಗ್ಗೆ ಆಯೋಗ ಅಭಿಯಾನವನ್ನು ಕೈಗೊಂಡಿತ್ತೋ, ಅಲ್ಲಿ ಜನ ಮತ ಹಾಕಿದ್ದರು. ಆದರೆ ಸುಶಿಕ್ಷಿತರು, ಅನುಕೂಲಸ್ಥರು ಎಂದಿದ್ದರೂ ಮತ ಹಾಕುತ್ತಾರೆ ಎಂಬ ಆಯೋಗದ ನಂಬುಗೆಗೆ ಹೊಡೆತ ಬಿದ್ದಿದೆ. ದುರಂತವೆಂದರೆ ಬೆಂಗಳೂರಿನಂತ ನಗರ ಪ್ರದೇಶದ 'ಸುಶಿಕ್ಷಿತ'ರೆಂಬವರು ಮತ ಹಾಕಲೇ ಇಲ್ಲ. ಎರಡು ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಕೇವಲ ೫೫ಶೇಕಡಾವನ್ನೂ ದಾಟಲಿಲ್ಲ!!. ಮನೆಯ ಮುಂದೆ ಮತಗಟ್ಟೆ, ಮತದಾನದ ಮಹತ್ವದ ಅರಿವು, ಓಡಾಡಲು ವಾಹನ...ಎಲ್ಲವೂ ಇದ್ದು ನಗರದ ಮತದಾರ ಮನೆ ಬಿಟ್ಟು ಹೊರ ಬರಲೇ ಇಲ್ಲ. ಈ ಹಿನ್ನೆಲೆಯಲ್ಲಿ ಸುಶಿಕ್ಷಿತ ವರ್ಗದ ಒಂದೆರಡು ಮಾತುಗಳು ನೆನಪಾಗುತ್ತದೆ...</div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEjD4K89-fqYA9Ac8KB153Xmo3hpUSxVQfclniWc55FRF0EKitTHt-i8L2VnuhuyDFnUeif8eXBEeQI0NWTBZTw7IIkbxvz2Dbo634gcMx6cm8Vx6zbzeniQsbSt4qhjJyJHOIMgtWWz3_PT/s1600/vote-.jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEjD4K89-fqYA9Ac8KB153Xmo3hpUSxVQfclniWc55FRF0EKitTHt-i8L2VnuhuyDFnUeif8eXBEeQI0NWTBZTw7IIkbxvz2Dbo634gcMx6cm8Vx6zbzeniQsbSt4qhjJyJHOIMgtWWz3_PT/s1600/vote-.jpg" height="109" width="200" /></a></div>
<br />
<span style="text-align: justify;">ಆತ ಸರಕಾರಿ ಪೋಷಿತ ಸಂಸ್ಥೆಯೊಂದರ ಉನ್ನತ ವರ್ಗದ ನೌಕರ. ಮತದಾನದ ದಿನ ಅವರ ಮನೆಗೆ ಹೋಗಿದ್ದೆ. ಮಂಗಳೂರಿನಿಂದ ೧೨೫ ಕಿಮೀ ದೂರದ ನನ್ನೂರಿಗೆ ಹೋಗಿ, ಮತ ಚಲಾಯಿಸಿ ಬಂದೆ ಎಂದುದನ್ನು ಕೇಳಿದ ಆತ, ಅಚ್ಚರಿ ವ್ಯಕ್ತ ಪಡಿಸಿದರು. ನೀವು ಮತದಾನಕ್ಕೆ ಹೋಗುವುದಿಲ್ಲವೇ ಎಂದು ಕೇಳಿದೆ. 'ಬೇರೆ ಕೆಲಸ ಇಲ್ವಾ. ಯಾರಿಗೇ ಮತ ಹಾಕಿದರೂ ಅಷ್ಟೇ. ಎಲ್ಲರೂ ಕಳ್ಳರೇ' ಎಂಬುದು ಅವರ ಉತ್ತರವಾಗಿತ್ತು.!. ನೀವು ನಂಬಲಿಕ್ಕಿಲ್ಲ, ಅವರ ಮನೆ ಎದುರಿಗೇ ರಾಜಕೀಯ ಪಾರ್ಟಿಒಂದರ ಬೂತ್ ಇತ್ತು. ಹತ್ತು ಹೆಜ್ಜೆ ನಡೆದರೆ ಮತ ಗಟ್ಟೆ ಇತ್ತು. ನಿಮಗೆ ಯಾರೂ ಇಷ್ಟವಿಲ್ಲವೆಂದಾದರೆ 'ನೋಟಾ'ವನ್ನಾದರೂ ಒತ್ತಿ ಬನ್ನಿ ಎಂದೆ. ಒಂದಷ್ಟು ಹೇಳಿದ ನಂತರವೂ ಆ ವ್ಯಕ್ತಿ ಮತಗಟ್ಟೆ ಬಳಿ ಹೋಗಲೇ ಇಲ್ಲ!. ಮೊದಲೇ ಹೇಳಿದ್ದಂತೆ, ಆತ ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರ ನೌಕರ, ಸುಶಿಕ್ಷಿತ ಮತ್ತು ಅನುಕೂಲಸ್ಥ...ಆದರೂ ಹೀಗೆ.</span><br />
<div style="text-align: justify;">
<br /></div>
<div style="text-align: justify;">
ಇನ್ನೊಂದು ಉದಾಹರಣೆಯೂ ಸ್ವಾರಸ್ಯಕರವಾಗಿದೆ. ಆ ಮಹಿಳೆಗೂ ಚುನಾವಣೆಗೂ ಅಷ್ಟಕ್ಕಷ್ಟೇ. ರಾಜಕಾರಣವನ್ನು ಬಯ್ಯುವುದು, ಚುನಾವಣೆ ಬಹಿಷ್ಕಾರ ಹಾಕುತ್ತೇನೆಂದು ಪ್ರತೀ ಬಾರಿಯೂ ಕುಳಿತುಕೊಳ್ಳುವುದು ಆಕೆಯ ಹವ್ಯಾಸ. ಈ ಸಲವೂ ಸಿಕ್ಕಿದಾಗ ಅದನ್ನೇ ಹೇಳಿದ್ದರು. ಮತದಾನ ಪವಿತ್ರದಾನ, ಅದೂ ಇದೂ ಎಂಬ ನನ್ನ ಭಾಷಣ ಆಕೆಯನ್ನು ಬದಲಾಯಿಸಲೇ ಇಲ್ಲ. ಚುನಾವಣೆ ಮುಗಿದ ನಂತರ ಒಮ್ಮೆ ಸಿಕ್ಕಾಕೆ, ತನ್ನ ಬೆರಳ ಶಾಯಿಯ ಗುರುತು ತೋರಿಸಿದರು. ಸಂತಸ ಮತ್ತು ಅಚ್ಚರಿಗಳೆರಡೂ ಒಟ್ಟಿಗೇ ಆದುವು. ವೋಟ್ ಹಾಕಿದ್ದಕ್ಕೆ ಧನ್ಯವಾದ, ಆದರೆ ನೀವು ಬದಲಾದ್ದು.....? ಎಂದೆ. ಅದಕ್ಕಾಕೆ ಕೊಟ್ಟ ಉತ್ತರ ಗಮನಾರ್ಹವಾಗಿತ್ತು. 'ಬೆಳಗ್ಗೆಯಿಂದ ಟಿವಿ ಹಾಕಿಕೊಂಡು ರಜಾದ ಮಜಾ ಸವಿಯುತ್ತಿದ್ದೆ. ಸುದ್ದಿವಾಹಿನಿಗಳಲ್ಲಿ ವೋಟ್ ಹಾಕಿದವರನ್ನೆಲ್ಲಾ ತೋರಿಸುತ್ತಿದ್ದರು. ಕೈ ಕಾಲಿಲ್ಲದವು, ವಯಸ್ಸಾದವರು, ನಡೆಯಲೂ ಆಗದವರು ಕಷ್ಟ ಪಟ್ಟು ಮತಗಟ್ಟೆಗೆ ಬಂದು ಮತ ಚಲಾಯಿಸುವುದು ನೋಡಿ ಬೇಜಾರಾಯಿತು!. ಎಲ್ಲಾ ಸರಿ ಇದ್ದೂ, ನಮ್ಮಂತವರು ಮನೆಯಲ್ಲಿ ಕಾಲು ಚಾಚಿ ಕುಳಿತುಕೊಳ್ಳುವುದು ನಾಚಿಕೆ ತರಿಸಿತು. ಕೊನೆಗೂ ಕೊನೇ ಕ್ಷಣದಲ್ಲಿ ಮನಸ್ಸು ಬದಲಾಯಿಸಿ ಮತದಾನ ಮಾಡಿಬಿಟ್ಟೆ ಎಂದ ಮಹಿಳೆಯನ್ನೇ ಅಚ್ಚರಿಯಿಂದ ನೋಡಿದೆ!!. ಶಹಬ್ಬಾಸ್ ಅಂದೆ-ಆಕೆಗಲ್ಲ, ಆಕೆಯನ್ನು ಬದಲಾಯಿಸಿದ ನಮ್ಮ ಇಂದಿನ ವ್ಯವಸ್ಥೆಗೆ.</div>
<div style="text-align: justify;">
<br /></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhmRrchR0uDrpA0MyarUKpNG64wDl126IJLu_i5Y4I6Yq7Dl01X4wOOcZKcVI0zMoOQhNY33-fshSWHj-3DfbJU9rl-Vu_E442_gFI5g1qOmEBqPQAJ337m8PEkJAi7enq6i0TASa2tSshU/s1600/vote.jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEhmRrchR0uDrpA0MyarUKpNG64wDl126IJLu_i5Y4I6Yq7Dl01X4wOOcZKcVI0zMoOQhNY33-fshSWHj-3DfbJU9rl-Vu_E442_gFI5g1qOmEBqPQAJ337m8PEkJAi7enq6i0TASa2tSshU/s1600/vote.jpg" height="133" width="200" /></a></div>
<div style="text-align: justify;">
ಬಹುಷ: ನಮ್ಮ ನಗರ ಪ್ರದೇಶದ ಜನರನ್ನು ಮತ್ತು ಮೇಲೆ ನಾನು ಹೇಳಿದ ಮತದಾನ ವಿರೋಧಿ ವ್ಯಕ್ತಿಯಂತವರಿಗೆ ಇಂತಹ ವಿಷಯಗಳನ್ನು ಮನನ ಮಾಡಬೇಕಾದ ಜರೂರು ಇಂದು ಇದೆ. ಚುನಾವಣೆಯ ದಿನ ಬೆಂಗಳೂರಿನ ಬಂಧು ಒಬ್ಬರಿಗೆ ಫೋನ್ ಮಾಡಿದ್ದೆ. ಲೋಕಾಭಿರಾಮ ಮಾತಿನೊಂದಿಗೆ ನಾನು ಊರಿಗೆ ಹೋಗಿ ಮತ ಚಲಾಯಿಸಿ ಬಂದ ವಿಷಯ ಹೇಳಿದೆ. ಅದಕ್ಕವರು ನಮ್ಮ ಬೆಂಗಳೂರಿನ ಜನ ನೋಡಿ ಮಾರಾಯ್ರೇ, ನೀವು ೧೨೫ ಕಿ ಮೀ ದೂರ ಹೋಗಿ ಮತ ಹಾಕಿ ಬಂದಿರಿ, ಇವರು ಮನೆ ಎದುರಿನ ಮತಗಟ್ಟೆಗೇ ಹೋಗಲಿಲ್ಲ, ಎಷ್ಟು ನಾಚಿಕೆ ಗೇಡಿನ ವಿಷಯ ಎನ್ನುತ್ತಿದ್ದರು. ಮತದಾನದ ನಂತರ ಓದಿದ ಒಂದು ಸುದ್ದಿ ಎಂದರೆ, ಓರ್ವ ದಂಪತಿ, ದುಬೈನಿಂದ ಮತದಾನಕ್ಕಾಗಿ ಎರಡು ಲಕ್ಷ ರೂಪಾಯಿ ವ್ಯಯಿಸಿ, ಊರಿಗೆ ಒಂದು ದಿನದ ಮಟ್ಟಿಗೆ ಬಂದು ಮತ ಚಲಾಯಿಸಿ ಹೋಗಿದ್ದರು!. ಇಂತಹ ಘಟನೆಗಳು, 'ಮತದಾನ ವಿರೋಧಿ' ಮನಸ್ಸುಗಳಿಗೆ ಪಾಠ ಕಲಿಸಬೇಕು.</div>
<div style="text-align: justify;">
<br /></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgHfbBKEKdWsraNx8xLTPZ9DoL1BzPcDd8ir_aurJgs6YVaRFnGjH2-ZK1tX0UBa54kcF5sNt2S51e_OHqVXYGdx6xDkSO1VYlZfpS-0c_IsoxP0cVf5R0Tiw9dCePKnNls6Dv908u47pi2/s1600/vote-1.jpg" imageanchor="1" style="clear: right; float: right; margin-bottom: 1em; margin-left: 1em;"><img border="0" src="https://blogger.googleusercontent.com/img/b/R29vZ2xl/AVvXsEgHfbBKEKdWsraNx8xLTPZ9DoL1BzPcDd8ir_aurJgs6YVaRFnGjH2-ZK1tX0UBa54kcF5sNt2S51e_OHqVXYGdx6xDkSO1VYlZfpS-0c_IsoxP0cVf5R0Tiw9dCePKnNls6Dv908u47pi2/s1600/vote-1.jpg" height="128" width="200" /></a></div>
<div style="text-align: justify;">
ಕಳೆದ ಲೇಖನದಲ್ಲಿ ಚುನಾವಣೆಯ ವೇಳೆಗೆ ಬೈಗುಳಗಳ ಬಗ್ಗೆ ಬರೆದಿದ್ದೆ. ಫೇಸ್ ಬುಕ್ ಮತ್ತು ಅಂತರಜಾಲ ಮಾಧ್ಯಮ ಇಂದು ಬಹು ಪ್ರಭಾವಿ ಮಾಧ್ಯಮವಾಗಿದೆ. ಫೇಸ್ ಬುಕ್ ಮಾತ್ರ, ಎಷ್ಟು ಪ್ರಭಾವಿಯೋ ಅಷ್ಟೇ ಅಪಾಯಕಾರಿ ಕೂಡಾ. ಚುನಾವಣೆಯ ವಿಷಯಕ್ಕೆ ಬಂದರೆ ಕೆಲವರ 'ಪೋಸ್ಟ್'ಗಳನ್ನು ನಿಯಮಿತವಾಗಿ ಗಮನಿಸಿದ್ದೇನೆ. ಮೋದಿ, ರಾಹುಲ್ ಮುಂತಾದ ವ್ಯಕ್ತಿಗಳಿಗೆ ಬಯ್ಯುತ್ತಿರುವಾಗ, ಭಾಷೆ, ಸಂಸ್ಕೃತಿ ಎಲ್ಲವನ್ನೂ ತೂರಿ ಬಿಟ್ಟ ಬುದ್ದಿಜೀವಿಗಳನ್ನು ಗಮನಿಸಿದ್ದೇನೆ. ಅಸಭ್ಯ ಸಂಸ್ಕೃತಿಯನ್ನು ಫೇಸ್ ಬುಕ್ಮೂಲಕ ಬೆಳೆಸಿದ ಇಂತಹ ಬುದ್ದಿ ಜೀವಿಗಳು, ತಾವೇ ಭಾರತದ ಆಡಳಿತದ ನಿರ್ಮಾತೃರು ಎಂಬಂತೆ ಬರೆದುದನ್ನು ಗಮನಿಸಿದ್ದೇನೆ. ತಮ್ಮ ಬಾಯಿಗೆ ಬಂದಂತೆ ಬೈಗುಳದ ಮಳೆ ಸುರಿಸುವ ರಾಜಕಾರಣಿಗಳೂ ಇವರ ಮುಂದೆ ತೀರಾ ಕನಿಷ್ಠರಾಗಿ ಹೋಗಿದ್ದಾರೆ!!. ಆದರೆ ರಾಜಕಾರಣಿಗೆ ತೀರಾ ಕನಿಷ್ಠ ಮಟ್ಟಕ್ಕಿಳಿದರೆ ನೀತಿ ಸಂಹಿತೆಯ ಬಿಸಿ ಕಾದಿರುತ್ತದೆ. ಆದರೆ ಈ ಸಾಮಾಜಿಕ ಜಾಲತಾಣದ ಪೋಸ್ಟ್ ಗಳಿಗೆ ಯಾವುದೇ ನೀತಿ ಸಂಹಿತೆ ಈ ಚುನಾವಣೆಯಲ್ಲಿ ಜಾರಿಗೆ ಬಂದಿಲ್ಲ. ಹಾಗೆಂದೇ ಕೆಲವು ವ್ಯವಸ್ಥಿತ ವರ್ಗಗಳು ಇಲ್ಲಿ ಹೇಗೆ ಬೇಕೋ ಹಾಗೆ, ಏನು ಬೇಕೋ ಅದನ್ನು ಪೋಸ್ಟ್ ಮಾಡಿ, ತೀರಾ ಅಸಭ್ಯ ಮತ್ತು ಅಸಂಸ್ಕೃತರಂತೆ ವರ್ತಿಸುವ ಮೂಲಕ ತಮ್ಮ ಅನಾಗರೀಕತೆಯನ್ನು ಪ್ರದರ್ಶಿಸಿದ್ದಾರೆ. </div>
<div style="text-align: justify;">
<br /></div>
<div style="text-align: justify;">
ಬಹುಶ ಚುನಾವಣಾ ಆಯೋಗಕ್ಕೆ ಇನ್ನು ಮುಂದಿನ ಚುನಾವಣೆಗಳಲ್ಲಿ ಸಾಮಾಜಿಕ ಜಾಲತಾಣಗಳನ್ನೂ ಕಾಯುವುದು ಒಂದು ಮಹತ್ತರ ಜವಾಬ್ದಾರಿಯಾಗಬಹುದು. ನರಹಂತಕ, ರಾಕ್ಷಸ, ರಕ್ತ ದಾಹಿ, ಧೂರ್ತ...ಇಂತಹ ಮತ್ತು ಇದಕ್ಕಿಂತಲೂ ಕೆಳ ಮಟ್ಟದ ಬೈಗುಳಗಳು ಫೇಸ್ ಬುಕ್ ನಲ್ಲಿ ರಾರಾಜಿಸಿವೆ. ಇದನ್ನೆಲ್ಲಾ ಪೋಸ್ಟ್ ಮಾಡಿದವರು ಯಾರೆಂದು ಗಮನಿಸಿದರೆ ಅಚ್ಚರಿಯಾಗಿದ್ದಿದೆ. ಸಮಾಜದಲ್ಲಿ ಪೃತಿಷ್ಠಿತರೆನಿಸಿಕೊಂಡವರು, ಅದಕ್ಕೂ ಮುಖ್ಯವಾಗಿ ಬುದ್ದಿಜೀವಿಗಳೆನಿಸಿಕೊಂಡವರು, ಇನ್ನು ಮುಂದೆ ಯೋಚಿಸಿದರೆ ತಾವೂ ಅಂತಾದ್ದೇ ವರ್ಗದಲ್ಲಿದ್ದುಕೊಂಡು ಮುಖಕ್ಕೆ ಈಗ ಸಭ್ಯತೆಯ ಸೋಗು ಹಾಕಿಕೊಂಡವರು!!. ಇದನ್ನೆಲ್ಲಾ ಕಂಡಾಗ ನಿಜಕ್ಕೂ ಅಚ್ಚರಿಯಾಗಿದ್ದು ಸುಳ್ಳಲ್ಲ. ನಾನಿಲ್ಲಿ ಉದಾಹರಿಸಿದ ಕೆಲವು ಶಬ್ದಗಳು, ಅವರ ದೃಷ್ಟಿಯಲ್ಲಿ ಸುಸಂಸ್ಕೃತ ಅನಿಸಿಕೊಂಡಿದ್ದಿರಬಹುದು-ಯಾಕೆಂದರೆ ಇದಕ್ಕೂ ನಿಕೃಷ್ಟವಾದ ಪೋಸ್ಟ್ ಗಳನ್ನು ಅವರು ಮಾಡಿದ್ದರು. ಇಂತವರು ಮಾಡುವ ಪೋಸ್ಟ್ ಗಳಿಗೆ ತಮ್ಮ ಕಮೆಂಟ್ ಗಳ ಮೂಲಕ ಮತ್ತಷ್ಟು ಕೀಳು ಅಭಿರುಚಿಯನ್ನು ಪ್ರದರ್ಶಿಸುವ ಮತ್ತೊಂದು ವರ್ಗ. ಸ್ವಾರಸ್ಯವೆಂದರೆ ಹೀಗೆ ಪೋಸ್ಟ್ ಮಾಡುವ ಮತ್ತು ಕಮೆಂಟ್ ಹಾಕುವ ವ್ಯಕ್ತಿಗಳು ಪುನರಪಿ ಅದನ್ನೇ ಮಾಡುತ್ತಿದ್ದರು. </div>
<div style="text-align: justify;">
ಇದನ್ನೆಲ್ಲಾ ನಮ್ಮ ಸುಶಿಕ್ಷಿತ ಎಂದು ಕರೆಸಿಕೊಳ್ಳುವ ಜನರ ಮತ್ತು ಅವರ ಸಾಮಾಜಿಕ ಜವಾಬ್ದಾರಿಗಳನ್ನು ಎಚ್ಚರಿಸು ಉದ್ದೇಶದಿಂದ ಹೇಳುತ್ತಿದ್ದೇನೆ. ಇದನ್ನೇ ಅವರು ಮತ ಗಟ್ಟೆಗೆ ಜನರನ್ನು ತರಲು, ಮತದಾನದ ಜಾಗೃತಿ ಬೆಳೆಸಲು, ಉತ್ತಮ ಆಯ್ಕೆಗೆ ಸಭ್ಯಮಾರ್ಗ ಅನುಕರಿಸಲು, ಉಪಯೋಗಿಸಿಕೊಂಡಿದ್ದರೆ ಅವರೂ ಸಮಾಜದ ದೃಷ್ಟಿಯಲ್ಲಿ ಶ್ಲಾಘನಾರ್ಹರಾಗುತ್ತಿದ್ದರು. ಮುಂದೆ ಆ ಆಶಯದಲ್ಲಿರೋಣ.</div>
<div style="text-align: justify;">
<br /></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEhmsnSywmQA2grXBWfOcqbpDD4cntU0D_-kEmXFfh3pQTNoSwJyoRJ5PyguQHO3w7d_wBfdZM6PW238FF_5jrDacHszA3JYV9Rsd9odZtDm5az-8xwsSPsPH9veXdeZ9SjvhWOSwd9xFI_y/s1600/vote......jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEhmsnSywmQA2grXBWfOcqbpDD4cntU0D_-kEmXFfh3pQTNoSwJyoRJ5PyguQHO3w7d_wBfdZM6PW238FF_5jrDacHszA3JYV9Rsd9odZtDm5az-8xwsSPsPH9veXdeZ9SjvhWOSwd9xFI_y/s1600/vote......jpg" height="156" width="200" /></a>ಮಂಗಳೂರು ಸಮೀಪದ ಮತ ಗಟ್ಟೆಯೊಂದರಲ್ಲಿ ಮತದಾನ ಮಾಡಿದ ಬಳಿಕ ಮಹಿಳೆಯೊಬ್ಬಳು ಕುಸಿದು ಬಿದ್ದು, ಸತ್ತರು. ತಮ್ಮ ಅಮೂಲ್ಯ ಕರ್ತವ್ಯವನ್ನು ಮಾಡಿ ನಿಧನರಾದ ಆಕೆಯ ಮನೆಗೆ ಓರ್ವ ಅಭ್ಯರ್ಥಿ ಮರುದಿನವೇ ಭೇಟಿಕೊಟ್ಟು ಸಾಂತ್ವನ ಹೇಳಿದರು. ಇದು ರಾಜಕಾರಣಿಗೂ ಇರಬೇಕಾದ ಆದರ್ಶವನ್ನು ತೋರಿಸುತ್ತದೆ. ಚುನಾವಣೆಗೆ ಸಾವಿರಾರು ಸರಕಾರಿ ನೌಕರರು ಶ್ರಮಿಸುತ್ತಾರೆ. ಅನೇಕ ಕಡೆ ಮೂಲ ಭೂತ ಸೌಕರ್ಯಗಳೂ ಇಲ್ಲದಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ, ಇಲ್ಲೆಲ್ಲವೂ ನಿಸ್ವಾರ್ಥವಾಗಿ ಮಾಡುವ ಇವರ ಸೇವೆ ಮತ್ತು ಅವರ ಕಷ್ಟವನ್ನು ನಾವು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಈ ಸಲ, ಕರ್ನಾಟಕದಲ್ಲಿ ಚುನಾವಣಾ ಕರ್ತವ್ಯದ ವೇಳೆ ಹ್ರದಯಾಘಾತದಿಂದ ಸತ್ತವರು ಮೂರಕ್ಕೂ ಹೆಚ್ಚು ಮಂದಿ. ಈ ಬಿರು ಬೇಸಗೆ, ಸೆಖೆಯಲ್ಲಿ ಚುನಾವಣಾ ಕರ್ತವ್ಯದ ನಂತರ ಅನಾರೋಗ್ಯ ಪೀಡಿತರಾದವರ ವಿವರ ಎಲ್ಲೂ ಬರುವುದಿಲ್ಲ. ತಾವು ಗಮನಿಸಿರಬಹುದ, ಚುನಾವಣೆ ಘೋಷಣೆಯಾಗುತ್ತಲೇ, ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಮತ ಚಿಟಿ ನೀಡುವುದು, ಪಟ್ಟಿ ಪರಿಷ್ಕರಣೆ ಮಾಡುವುದು ನೋಡಿದ್ದೇವೆ. ಬೆವರು ಸುರಿಸಿ, ನಡೆಯಲೂ ಆಗದೇ, ಒದ್ದಾಡುತ್ತಾ ನಿಸ್ವಾರ್ಥ ಸೇವೆ ಮಾಡುವುದನ್ನೂ ಗಮನಿಸಿದ್ದೇವೆ. ಆದರೆ ಚುನಾವಣೆ ಮುಗಿಯುತ್ತಲೇ ಇವರೆಲ್ಲರೂ ಮರೆತು ಹೋಗುತ್ತಾರೆ. ಆಯ್ಕೆಯಾದ ಅಭ್ಯರ್ಥಿಯಾಗಲೀ, ಚುನಾವಣಾ ಆಯೋಗವೇ ಆಗಲಿ, ಮತದಾರನೇ ಆಗಲಿ ಅವರಿಗೆ ಕನಿಷ್ಠ ಒಂದು ಧನ್ಯವಾದವನ್ನು ಸಹಾ ಹೇಳದೇ ಕೃತಘ್ನರಾಗುತ್ತಾರೆ!!. ಹೋಗಲಿ ಎಂದರೆ ಸಾಮಾಜಿಕ ಜಾಲತಾಣದ, ಸಮಾಜದ ಸರ್ವವನ್ನೂ ಗ್ರಹಿಸುವ 'ಬುದ್ದಿ ಜೀವಿ'ಕಣ್ಣುಗಳಿಗೂ ಇದೊಂದೂ ಕಾಣುವುದೇ ಇಲ್ಲ!!</div>
<div style="text-align: justify;">
<br /></div>
<div style="text-align: justify;">
ಮತದಾನದಂತಹ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಂಡ ಇಂತಹ ಸಹಸ್ರಾರು ಮನಸುಗಳಿಗೆ ಇದೋ ನಮ್ಮ ಹ್ರದಯತುಂಬಿದ ನಮನ.</div>
<div style="text-align: justify;">
<br /></div>
</div>
Anonymoushttp://www.blogger.com/profile/07026221826810784770noreply@blogger.com1tag:blogger.com,1999:blog-6634091388019397795.post-26638463764795826852014-04-01T23:11:00.004-07:002014-04-01T23:13:04.396-07:00ಭಾರತಾಂಬೆಯೇ ನಿನ್ನ ಮಡಿಲಿಗೆ ಯಾವ ತಾಯಿಯ ಮಗನೋ!!??<div dir="ltr" style="text-align: left;" trbidi="on">
<div style="text-align: justify;">
<b><span style="color: blue;">ಭಾರತಾಂಬೆಯ ಮಡಿಲಿಗೆ ಯಾರ ಮಕ್ಕಳನ್ನು ನಾಯಕತ್ವ ಕೊಟ್ಟು ಕೂರಿಸುತ್ತಾನೋ ಈ ಪ್ರಬುದ್ಧ ಮತದಾರ ಎಂದು ತಿಳಿಯಲು ಮೇ ೧೭ರ ತನಕ ಕಾಯಬೇಕು. ಅಷ್ಟೇ!! </span><span style="background-color: white;"><span style="color: #660000;">ಜನಪ್ರತಿನಿಧಿಯಲ್ಲಿ ನನ್ನ ಈ ಬಾರಿಯ ಅಂಕಣ 'ಪ್ರದಕ್ಷಿಣೆ'ಯ ಬರಹ.... </span></span></b></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<b><span style="font-size: large;">ರ</span></b>ಣವೀಳ್ಯವನ್ನು ತೆಗೆದುಕೊಂಡ ರಾಜಕೀಯ ಪಕ್ಷಗಳು, ಅಜನ್ಮ ಶತ್ರುಗಳಂತೆ, ಇದ್ದ ಬದ್ದ ಕೆಸರನ್ನೆಲ್ಲಾ ಪರಸ್ಪರರಿಗೆರಚಿಕೊಳ್ಳುತ್ತಾ ದೆಹಲಿಯ ಗದ್ದುಗೆಗಾಗಿ ಹೋರಾಡುತ್ತಿವೆ. ಎಲ್ಲಿ ನೋಡಿದರೂ ಈಗ ಇದೇ ಮಾತು. ಸೋಲು-ಗಲುವಿನ 'ತಮ್ಮ ತಮ್ಮ'ದೇ ಲೆಕ್ಕಾಚಾರದಲ್ಲಿ ಮುಳುಗಿರುವ ನಾಯಕರು, ಅಧಿಕಾರವೊಂದನ್ನೇ ಅಜೆಂಡಾವನ್ನಾಗಿಸಿಕೊಂಡು ಹಗಲಿರುಳು ಒದ್ದಾಡುತ್ತಿದ್ದಾರೆ.</div>
<div style="text-align: justify;">
<br /></div>
<div style="text-align: justify;">
ಒಂದೆಡೆ ಮೈಸುಡುವ ಬಿಸಿಲು-ಸೆಖೆ-ಬೆವರಧಾರೆ. ಇನ್ನೊಂದೆಡೆ ಸಂಪೂರ್ಣ ಕಾವೇರಿಸಿಕೊಂಡಿರುವ ಚುನಾವಣೆ. ಈ ಎರಡರ ನಡುವೆ ಮಾಧ್ಯಮಗಳ ನಿರಂತರ ಬಿಸಿ-ಬಿಸಿ ಒಗ್ಗರಣೆ. ಹೌದು, ಅಖಾಡಾ ಸರ್ವ ಸನ್ನದ್ಧವಾಗಿವೆ, ಹಾಗಾದರೆ ಭಾರತ ಮಾತೆಯ ಮಡಿಲಿಗೆ ಈಗ ಹೊಸ ಪ್ರಧಾನಿಯಾಗಿ ಬರಲಿರುವ ನಾಯಕ, ಯಾವ ತಾಯಿಯ ಮಗ ಎಂಬ ಗೊಂದಲ ಎಲ್ಲರಲ್ಲೂ ಮನೆ ಮಾಡಿದ್ದರೂ, ಕಾಯಲೇ ಬೇಕು-ಮೇ-೧೭ರತನಕ.</div>
<div style="text-align: justify;">
<br /></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEicKcv3DbME7Fm5vjdy1Ewxv07hj4dxJPB_1hWUW7kTtU1eaVAr84iMYWLO6LsQLITjjl11CjXOLtpPBcfoey82IhIG2zWkL7suBm-dCf7jcSnhZviOR1iCO5daBdPcvzBqKtIQGc_rFCHk/s1600/logos.jpg" imageanchor="1" style="clear: left; float: left; margin-bottom: 1em; margin-right: 1em; text-align: justify;"><img border="0" src="https://blogger.googleusercontent.com/img/b/R29vZ2xl/AVvXsEicKcv3DbME7Fm5vjdy1Ewxv07hj4dxJPB_1hWUW7kTtU1eaVAr84iMYWLO6LsQLITjjl11CjXOLtpPBcfoey82IhIG2zWkL7suBm-dCf7jcSnhZviOR1iCO5daBdPcvzBqKtIQGc_rFCHk/s1600/logos.jpg" height="133" width="200" /></a></div>
<div style="text-align: justify;">
ದೇಶದಲ್ಲಿ ಇದು ಸಮ್ಮಿಶ್ರ ಸರಕಾರದ ಯುಗ. ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಸ್ಥಾಪಿಸುವ ಪರಂಪರೆ ಆರಂಭವಾದಾಗಿನಿಂದ, ದೆಹಲಿಯ ಗದ್ದುಗೆಗೆ ಏಕ ಪಕ್ಷದ ಅಧಿಪತ್ಯ ಕೊನೆಗೊಂಡಿತ್ತು. ಪ್ರತೀ ಚುನಾವಣೆಯಲ್ಲಿಯೂ ಬಹು ದೊಡ್ಡ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷಗಳು ತಾವೇ ಅಧಿಕಾರ ಹಿಡಿಯುತ್ತೇವೆ ಎಂದೇ ಆಖಾಡಕ್ಕಿಳಿದರೂ, ಎರಡೂ ಪಕ್ಷಗಳಲ್ಲೂ ಪ್ರಾದೇಶೀಕ ಪಕ್ಷಗಳ ಬಗೆಗೊಂದು 'ಭಯ' ಇದ್ದೇ ಇರುತ್ತದೆ. ಹಾಗೆಂದೇ ಕಾಂಗ್ರೆಸ್ ಹಾಗೂ ಭಾಜಪಗಳು, ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿಯೊಂದಿಗೇ ಚುನಾವಣೆ ಎದುರಿಸುತ್ತವೆ. ದೆಹಲಿಯ ಗದ್ದುಗೆಯ ಮೇಲೆ ಪ್ರಭಾವ ಬೀರುವಷ್ಟೂ ಪ್ರಾದೇಶಿಕ ಪಕ್ಷಗಳು ಪ್ರಭಾವಿಯಾಗಿವೆ. ಈ ಹಿನ್ನೆಲೆಯಲ್ಲಿ, ಹಿಂದೊಮ್ಮೆ ದೇವೇ ಗೌಡರು ಪ್ರಧಾನಿಯಾದ ಹಾಗೆಯೇ, ತಾವೂ 'ಅದ್ರಷ್ಟವಶಾತ್' ಪ್ರಧಾನಿಯಾಗಬಹುದೆಂಬ ಕನಸು ಕಾಣುವ ಅನೇಕ ನಾಯಕರೂ ಹುಟ್ಟಿಕೊಂಡಿದ್ದಾರೆ. ಆದರೂ ಈಗ ಚಾಲ್ತಿಯಲ್ಲಿರುವ ಎರಡು ಪ್ರಮುಖ ಹೆಸರುಗಳು-ರಾಹುಲ್ ಗಾಂಧಿ ಹಾಗೂ ನರೇಂದ್ರ ಮೋದಿ.</div>
<div style="text-align: justify;">
<br /></div>
<div style="text-align: justify;">
<span style="text-align: justify;">ಸೋನಿಯಾ ಗಾಂಧಿ!. ತನ್ನ ಮನೆಯಂಗಳಕ್ಕೆ ಬಂದಿದ್ದ ಪ್ರಧಾನಿ ಪಟ್ಟವನ್ನು ನಯವಾಗಿ ಹೊರಕಳುಹಿಸುವ ಮೂಲಕ, ಇಡೀ ದೇಶಕ್ಕೇ ಒಮ್ಮೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದವರು!. ಎರಡು ದಶಕದ ಹಿಂದಿನ ಲೋಕ ಸಭಾ ಚುನಾವಣೆಯಲ್ಲಿ, ಚುನಾವಣೆಗೆ ಮುನ್ನ ಎಂದೂ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವ ಪರಂಪರೆ ಇಲ್ಲದ ಕಾಂಗ್ರೆಸ್, ಅಲ್ಲಿಯೂ ಸೋನಿಯಾ ನೇತ್ರತ್ವದಲ್ಲಿಯೇ ಚುನಾವಣಾ ಅಖಾಡಕ್ಕಿಳಿದಿತ್ತು. ಎನ್ಡಿಎ ವಿರೋಧಿ ಅಲೆಯಿಂದ ಅಂದು ದೆಹಲಿಯ ಗದ್ದುಗೆಗೆ ಸ್ಪಷ್ಟ ಬಹುಮತ ದೊರಕದಾದಾಗ, ಸೋನಿಯಾ ನೇತ್ರತ್ವದ ಕಾಂಗ್ರೆಸ್, ಯುಪಿಎ ಮೂಲಕ ಅಧಿಕಾರ ಹಿಡಿದಾಗ, ಸೋನಿಯಾ ದೇಶದ ಪ್ರಧಾನಿ ಆದರು ಎಂದೇ ಕಾಂಗ್ರೆಸಿಗರು ಸಂತಸ ಪಟ್ಟಿದ್ದರು. ಆದರೆ ಆದದ್ದೇ ಬೇರೆ! ಪ್ರಧಾನಿ ಪದವಿಯನ್ನು ಒಲ್ಲೆ ಎಂದ ಸೋನಿಯಾ, ಅದನ್ನು ಮನ ಮೋಹನ ಸಿಂಗ್ ಅವರ ಮುಡಿಗೇರಿಸಿದರು. ದೇವೇಗೌಡರಿಗೆ ಅನಿರೀಕ್ಷಿತವಾಗಿ ಒದಗಿ ಬಂದಹಾಗೆ, ದೇಶದ ಪ್ರಧಾನಿ ಪಟ್ಟ ಅಂದು ಮನ ಮೋಹನರಿಗೆ ಒಲಿಯಿತು. ಮುಂದಿನದ್ದು ಇತಿಹಾಸ. ಎರಡು ಅವಧಿಗೆ ನಿರಂತರ ಪ್ರಧಾನಿಯಾದ ,ಮನಮೋಹನ ಸಿಂಗ್ರು ಮೌನವಾಗಿದ್ದುದೇ ಹೆಚ್ಚು. ಸೋನಿಯಾ ಅವರ ಕ್ರಪೆಯಿಂದ ತಮಗೊದಗಿದ ಪ್ರಧಾನಿ ಹುದ್ದೆಯನ್ನು ಅವರ ಪ್ರಸಾದವೆಂಬಂತೆ ಮೌನವಾಗಿಯೇ ಅನುಭವಿಸಿದ ಮನಮೋಹನ ಸಿಂಗ್, ಎಂದೂ ಸ್ವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳದೇ, ಪ್ರಧಾನಿ ಪದವಿಗೂ ರಬ್ಬರ್ ಸ್ಟಾಂಪ್ ಲೇಬಲ್ ಹಚ್ಚಿದರು!!. </span></div>
<div style="text-align: justify;">
<br /></div>
<div style="text-align: justify;">
ಇನ್ನೂ ಇದೇ ಯೋಚನೆಯಿಂದ ಮುನ್ನಡೆದರೆ ಈ ಸಲ ಕಷ್ಟ ಎಂಬ ಸತ್ಯ ಅರಿತ ಕಾಂಗ್ರೆಸ್, ಈ ಸಲ ಕಾಂಗ್ರೆಸಿಗರು ಕರೆಯುವ 'ಯುವರಾಜ'ನನ್ನು ಆಖಾಡಕ್ಕಿಳಿಸಿದೆ. ಒಂದೆಡೆ ವಿಧಾನ ಸಭಾ ಚುನಾವಣೆಗಳಲ್ಲಿ ಅಲ್ಲಲ್ಲಿ ಹೊರತು ಪಡಿಸಿದರೆ ಸಾಲು ಸಾಲು ಸೋಲುಗಳೂ ಕಾಂಗ್ರೆಸ್ನ್ನು ಹತಾಶೆಗೊಳಪಡಿಸಿದ್ದರೆ, ಮತ್ತೊಂದೆಡೆ ಬಹಳ ಹಿಂದಿನಿಂದಲೇ ಭಾಜಪ ಹಬ್ಬಿಸಿದ ಮೋದಿ ಅಲೆ, ಕಾಂಗ್ರಸ್ಸಿಗರಿಗೆ 'ಏನಾದರೂ', ಮಾಡಬೇಕೆಂಬ ಅನಿವಾರ್ಯತೆಯನ್ನು ಹುಟ್ಟು ಹಾಕಿತ್ತು. ಕೆಲವು ರಾಜ್ಯ ಮಟ್ಟದ ಭ್ರಷ್ಟಾಚಾರವನ್ನು ಎತ್ತಿ ತೋರಿಸುತ್ತಿದ್ದ ಕಾಂಗ್ರೆಸ್ಗೆ ತನ್ನ ನೇತ್ರತ್ವದ ಯುಪಿಎ ಕೇಂದ್ರದಲ್ಲಿ ಮಾಡಿದ ಭ್ರಷ್ಟಾಚಾರ ಬೆಟ್ಟದತ್ತೆರಕ್ಕೇರಿದಾಗ ಸಹಜವಾಗಿಯೇ ಇರಿಸು ಮುರುಸಾಗಿತ್ತು. ಅತ್ತ ಗುಜಾರಾತ್ನಲ್ಲಿ ಮಾದರಿ ಆಡಳಿತವನ್ನು ನೀಡಿ, ಕಾಂಗ್ರ್ರೆಸ್ ಅಥವಾ ಇತರ ರಾಜಕೀಯ ಪಕ್ಷಗಳು ಏನೇ ಕೆಸರೆರಚಿದರೂ, ಜನ ಮಾತ್ರ ಮೋದಿಯ ಕೈ ಬಿಡದಿದ್ದ ಸಂಕಟವೂ, ಅದನ್ನೇ ದೇಶಾದ್ಯಂತ ಹೈಟೆಕ್ ಪ್ರಚಾರದ ಮೂಲಕ ಪಸರಿಸಿದ ಭಾಜಪದ ಯೋಜನಾ ಬದ್ಧ ನಡೆಯೂ ಕಂಗ್ರೆಸ್ಸಿಗೆ ತಲೆನೋವಾಗಿದ್ದು ಸುಳ್ಳಲ್ಲ!</div>
<div style="text-align: justify;">
<br /></div>
<div style="text-align: justify;">
ಇದು ಒಂದೆಡೆಯಾದರೆ, ಮನ ಮೋಹನರಿಗೆ ಈ ಅವಧಿಯೇ ಕೊನೆಯದು, ಮುಂದೆ ಪಕ್ಷ ಗೆದ್ದರೂ ಅವರು ಪ್ರಧಾನಿಯಾಗುವುದಿಲ್ಲ ಎಂಬುದು ಪೂರ್ವ ನಿರ್ಣಯವಾದರೂ, ಮುಂದೆ ಯಾರು ಎಂಬುದನ್ನು ಕಾಂಗ್ರೆಸ್ ಎಲ್ಲಿಯೂ ಹೇಳಲಿಲ್ಲ!. ಈ ಸಲ ಅಧಿಕ್ರತವಾಗಿ ಪ್ರಧಾನಿ ಪದದ ಉಮೇದುವಾರರನ್ನು ಕಾಂಗ್ರೆಸ್ ಸಹಾ ತನ್ನ ಪರಂಪರೆ ಮುರಿದು ಘೋಷಿಸುವ ನಿರೀಕ್ಷೆ ಇತ್ತು. ಅದು ಆಗಲೇ ಇಲ್ಲ. ಹಾಗೆಂದ ಮಾತ್ರಕ್ಕೆ ಅಲ್ಲಿ ಬೇರೆ ಯಾವುದೋ ಉಮೇದುವಾರರಿದ್ದಾರೆ ಎಂಬುದು ಭಾವನೆಯಲ್ಲಿ. ಅಧಿಕೃತ ಘೋಷಣೆ ಆಗಿಲ್ಲ ಅಷ್ಟೇ! ಎಲ್ಲೆಡೆಯಲ್ಲಿಯೂ ಈಗ ರಾಹುಲ್ ನಾಯಕತ್ವದ್ದೇ ಮಾತು-ಅದೇ ಗಾಳಿ.</div>
<div style="text-align: justify;">
ರಾಹುಲ್ ಗಾಂಧಿ!. ರಾಜೀವ ಗಾಂಧಿ ದೇಶದ ಚುಕ್ಕಾಣಿ ಹಿಡಿಯುವ ವೇಳೆಯಲ್ಲಿ ಕಾಂಗ್ರೆಸ್ ಜಪಿಸಿದ್ದ ಮಂತ್ರ, ಯುವ ಜನರೇ ದೇಶದ ಆಸ್ತಿ ಎಂಬುದಾಗಿತ್ತು. ಅದಾದ ನಂತರ, ತನ್ನ ಪರಂಪರೆಯಂತೆ 'ವಯೋವೃದ್ದ' ಪರಂಪರೆಯನ್ನು ಮುಂದುವರಿಸಿಕೊಂಡು ಹೋಯಿತು. ಮುಖ್ಯವಾಗಿ ಸೋನಿಯಾ ಗಾಂಧಿಯವರ ಮಾತಿಗೆ ಎದುರಾಡದ ನಾಯಕರನ್ನು ಅದು ಬೆಳೆಸುತ್ತಾ ಹೋಯಿತು. ಇಂದಿನ ಕಾಂಗ್ರೆಸ್ನಲ್ಲಿ ಸೋನಿಯಾ ನಿಷ್ಠರು ಮಾತ್ರ ಆಯ ಕಟ್ಟಿನ ಜಾಗದಲ್ಲಿ ಉಳಿಯ ಬಹುದು ಮತ್ತು ಬೇರಾರಿಗೂ ಅಲ್ಲಿ ಸ್ಥಾನವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಎಲ್ಲರಿಗೂ ತಿಳಿದಿರುವ ಬಹಿರಂಗ ಸತ್ಯ. ಹಾಗೆಂದು ತನ್ನ ಮನೆ ಬಾಗಿಲಿಗೆ ಬಂದು, ತಾನೇ ತಿರಸ್ಕರಿಸಿದ್ದ ಪ್ರಧಾನಿ ಪದವಿ ಇನ್ನೂ ತನ್ನ ಮನೆಯಂಗಳದ ಹೊರಗೇ ಉಳಿಯುವುದು ಸೋನಿಯಾಗೆ ಈಗ ಇಷ್ಟವಿಲ್ಲ. ಹಾಗಾಗಿಯೇ ತಾನು ರಾಜಕೀಯವಾಗಿ ಮಗನನ್ನು 'ಸಂಪೂರ್ಣ' ಅಣಿಗೊಳಿಸಿದ್ದೇನೆ ಎಂಬ 'ಸ್ವಯಂತೀರ್ಮಾನ'ಕ್ಕೆ ಬಂದ ಸೋನಿಯಾ, ಅನಧಿಕೃತವಾಗಿ ರಾಹುಲ್ ಪಟ್ಟಾಭಿಷೇಕ ಘೋಷಿಸಿದ್ದಾರೆ!!-ಕಾಂಗ್ರೆಸ್(ಯುಪಿಎ) ಗೆದ್ದರೆ.</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEh5Gz2dU6EbO2ul605NDOirwhmcKlOI8hOL6AdYX6topHkUa91anaEFjMP6ZlmoObSOOH4o_0FvIUHgo7VctWCe3FKSucy-W5CedsbF7g5tFdH70KNU79yVomD1RWMu7roWUvNq8Ba3i5yA/s1600/Rahul.jpg" imageanchor="1" style="clear: right; float: right; margin-bottom: 1em; margin-left: 1em;"><img border="0" src="https://blogger.googleusercontent.com/img/b/R29vZ2xl/AVvXsEh5Gz2dU6EbO2ul605NDOirwhmcKlOI8hOL6AdYX6topHkUa91anaEFjMP6ZlmoObSOOH4o_0FvIUHgo7VctWCe3FKSucy-W5CedsbF7g5tFdH70KNU79yVomD1RWMu7roWUvNq8Ba3i5yA/s1600/Rahul.jpg" height="149" width="200" /></a></div>
<div style="text-align: justify;">
ರಾಹುಲ್ ಹೇಗೆ ಎಂಬ ಪ್ರಶ್ನೆಗೆ ಉತ್ತರ ಅಸ್ಪಷ್ಟ. ಕೇಂದ್ರ ಸರಕಾರದ ಆಯಕಟ್ಟಿನ ಜಾಗದಲ್ಲಿ ಯಾವುದೇ ಜವಾಬ್ದಾರಿಯುವ ಹುದ್ದೆಯನ್ನು ಇನ್ನೂ ಅನುಭವಿಸಿದ ಅನುಭವವಿಲ್ಲದ ರಾಹುಲ್ ನೇತ್ರತ್ವದಲ್ಲಿ ನಡೆದ ಚುನಾವಣೆಗಳು, ಕಾಂಗ್ರೆಸ್ಗೆ ಗೆಲುವಿಗಿಂತ ಹೆಚ್ಚು ಸೋಲನ್ನೇ ತಂದಿವೆ ಎಂಬುದು ಎಲ್ಲರೂ ಹೇಳುವ ಮತ್ತು ಒಪ್ಪುವ ಮಾತು. ಯಾವುದಕ್ಕೂ ಸಮರ್ಥವಾಗಿ ಉತ್ತರಿಸಲು ರಾಹುಲ್ ತಡಕಾಡುತ್ತಾರೆ. ಯಾರೋ ತಯಾರಿಸಿಕೊಟ್ಟ ಭಾಷಣವನ್ನು ಓದಿ, ಮುಜುಗುರಕ್ಕೊಳಗಾಗುತ್ತಾರೆ. ತಮ್ಮದೇ ಪಕ್ಷದ ಮನಮೋಹನರ ಕೆಲವು ನಿರ್ಣಯಗಳಿಗೆ ತಾವೇ ಎದುರಾಡಿ ಮುಜುಗುರದ ಅನೇಕ ಸನ್ನಿವೇಶಗಳಿಗೆ ಕಾರಣರಾಗಿದ್ದಾರೆ. ಸಂದರ್ಶನದ ವೇಳೆಯಲ್ಲಿ ಪೆದ್ದು ಪೆದ್ದಾಗಿ ಉತ್ತರಿಸುತ್ತಾ, ಕಾಂಗ್ರೆಸಿಗರೂ ಮೈ ಪರಚಿಕೊಳ್ಳುವಂತೆ ಮಾಡಿದ್ದಾರೆ. ತಾವು ಭೇಟಿ ಮಾಡಿದ ಕೊಳಚೆಗೇರಿ, ಅಥವಾ ಇತರ ಪ್ರದೇಶದ ಚಿತ್ರಣಗಳನ್ನು ಕೇವಲ ಚುನಾವಣಾ ಪ್ರಚಾರದ ಗಿಮಿಕ್ಗಳಿಗೆಂಬಂತೆ ಬಳಸಿಕೊಂಡಿದ್ದಾರೆ. ಎಲ್ಲಕ್ಕಿಂತಲೂ ಭಾಜಪ(ಎನ್ಡಿಎ) ದ ಪ್ರಧಾನಿ ಅಭ್ಯರ್ಥಿ 'ಎಸೆಯುವ' ಸವಾಲುಗಳಿಗೆ ನೇರ ಮತ್ತು ಶಕ್ತ ಮರುಸವಾಲೆಸೆಯುವಲ್ಲಿ ಸೋಲುತ್ತಿದ್ದಾರೆ. ತಮ್ಮ ಸುತ್ತಲೂ ಇರುವ ಆಪ್ತರ ಮಾತುಗಳನ್ನೇ ವೇದ ವಾಕ್ಯದಂತೆ ಪಾಲಿಸುತ್ತಾ, ಅನೇಕ ಹಿರಿಯ-ಕಿರಿಯ ನೆಹರೂ ಕುಟುಂಬಾಪ್ತರಲ್ಲದವರಿಗೆ ಮುಜುಗುರ ತರುತ್ತಿದ್ದಾರೆ. ವಿರೋಧಿಗಳು ಹೇಳುವಂತೆ ದೇಶದ ಉದ್ದಗಲದ ಸಮಸ್ಯೆಗಳು ಅಥವಾ ಇಂದಿನ ಅಗತ್ಯಗಳ ಪರಿಚಯಕ್ಕೆ ಹೊರತಾಗಿ, ಕೇವಲ 'ಯುವ ಭಾರತ'ದ ಕನವರಿಯಕೆಯಲ್ಲಿದ್ದಾರೆ. ಇದು ಪ್ರಧಾನಿ ಪದವಿಗೆ ಸಾಲದು ಎಂಬುದು ರಾಹುಲ್ ಬಗೆಗಿರುವ ಋಣಾತ್ಮಕ ಅಂಶಗಳು. ಈ ರಾಜೀವ್-ಸೋನಿಯಾ ಪುತ್ರ ಭಾರತ ಮಾತೆಯ ಮಡಿಲಿನಲ್ಲಿ ನವತಾರೆಯಾಗಬಹುದೇ..??.</div>
<div style="text-align: justify;">
<br /></div>
<div style="text-align: justify;">
ನರೇಂದ್ರ ಮೋದಿ!. ಗುಜರಾತ್ ಮಂತ್ರವನ್ನೇ ದೇಶದ ಉದ್ದಗಲಕ್ಕೂ ನಿರಂತರ ಜಪಿಸುತ್ತಿರುವ ಮೂಲಕ, ಪ್ರಧಾನಿ ಪದವಿಯ ಮೇಲೆ ಕಣ್ಣಿಟ್ಟಿರುವ ಮತ್ತೋರ್ವ ನಾಯಕ. ಯಾವ ಗುಜರಾತ್ ಅಭಿವೃದ್ಧಿ ಇವರಿಗೆ 'ಖಚಿತ'ಮಾನದಂಡವೋ, ಅದೇ ಗುಜರಾತ್ನಲ್ಲಿ ನಡೆದ ನರಮೇಧದ ರಕ್ತದ ಕಲೆಯನ್ನು ವಿರೋಧಿಗಳೂ ಇವರ ಮೈಗೆ ಹಚ್ಚಿ ಟೀಕಿಸುತ್ತಿದ್ದಾರೆ!. ಮೋದಿಯ ಮೋಡಿ ಏನೂ ಇಲ್ಲ, ಎಲ್ಲವೂ ಭಾಜಪ ನಿರ್ಮಿಸಿದ ನಾಟಕ ಕಂಪೆನಿಯೆಂಬುದು ವಿರೋಧಿಗಳ ಮಾತು. ಒಂದು ರೀತಿಯಲ್ಲಿ ನೋಡಿದರೆ, ಈ ನಾಯಕತ್ವಕ್ಕೆ ವಿರೋಧವಿರುವುದು ಕಾಂಗ್ರೆಸ್ ಅಥವಾ ವಿರೋಧ ಪಕ್ಷಗಳಲ್ಲಾದರೂ, ಕಂಡು ಕೇಳರಿಯದ ವಿರೋಧವನ್ನು ಇವರು ಎದುರಿಸುತ್ತಿರುವುದು ತಮ್ಮದೇ ಪಕ್ಷದ ಹಿರಿಯ ನಾಯಕರಾದ ಅಡ್ವಾಣಿ-ಸುಷ್ಮಾ ಅವರಂತಹ ನಾಯಕರಿಂದ!!. ದೇಶ ಮತ್ತು ಕಾಂಗ್ರೆಸ್ ಪಾಲಿಗೆ ರಾಹುಲ್ ಯುವ ನೇತಾರರಾದರೆ, ಪ್ರಧಾನಿ ಪದವಿಗಾಗಿ ದಶಕಗಳಿಂದ ಕಾಯುತ್ತಿರುವ ಭಾಜಪದ ಕೆಲವು ಹಿರಿಯ ತಲೆಗಳಿಗೆ, ಈ 'ಯುವ'ಮೋದಿ ತಲೆನೋವು!!. ಇನ್ನೂ ರಾಜಕೀಯದಲ್ಲಿ ಪ್ರಧಾನಿಯಾಗಲು 'ಮುಂದೆ'ಅವಕಾಶವಿರುವಾಗ ಮೋದಿಗೆ 'ಇಂದೇ' ಏಕೆ ಅವಸರ ಎಂಬುದು ಭಾಜಪದೊಳಗಿನ 'ಹಿರಿ'ತಲೆಗಳ ಕಿಚ್ಚು. ಇದೂ ಮೋದಿ ವಿರೋಧಿ ಅಲೆಯಾಗಿ ಪರೋಕ್ಷವಾಗಿ ಕೆಲಸ ಮಾಡುತ್ತಿದೆ.</div>
<div style="text-align: justify;">
<br /></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhvuOBODEcJEoBVJKQDaGmMLdGTZwefz9Zu1itOqd4GiMGQOM4wj8Qf9e4t-Fkon0lJoGZpnukIiAEPQ5XBh_JD0Z0mQKL0PAz9XlOCWcD0tT3gQh_zoASnFczDGyS9YgtozNAvA5Sd6-nT/s1600/modi+mother.jpg" imageanchor="1" style="clear: left; float: left; margin-bottom: 1em; margin-right: 1em; text-align: justify;"><img border="0" src="https://blogger.googleusercontent.com/img/b/R29vZ2xl/AVvXsEhvuOBODEcJEoBVJKQDaGmMLdGTZwefz9Zu1itOqd4GiMGQOM4wj8Qf9e4t-Fkon0lJoGZpnukIiAEPQ5XBh_JD0Z0mQKL0PAz9XlOCWcD0tT3gQh_zoASnFczDGyS9YgtozNAvA5Sd6-nT/s1600/modi+mother.jpg" height="132" width="200" /></a></div>
<div style="text-align: justify;">
ಮೋದಿಯವರನ್ನು ಭಾಜಪ ಸುಮಾರು ಒಂದು ವರ್ಷದಿಂದೀಚೆಗೆ ಆಖಾಡಕ್ಕೆ ಅಣಿಗೊಳಿಸುತ್ತಿತ್ತು. ವಿರೋಧಿಗಳ ಬಾಯಿ ಮುಚ್ಚಿಸಲು, ಹೊಸ ಹೊಸ ತಂತ್ರ-ಸೂತ್ರಗಳನ್ನು ಅಳವಡಿಸಿಕೊಳ್ಳುತ್ತಾ, ತನ್ನ ಪ್ರತೀ ರ್ಯಾಲಿಯಲ್ಲಿ ಹೊಸ ಹೊಸ 'ನುಡಿಬಾಂಬ್'ಗಳನ್ನೆಸೆಯುತ್ತಾ ಮೋದಿಯೂ ಆಕರ್ಷಿಸಿದ್ದು ಯುವಕರನ್ನೇ!!. ಯುವ ಭಾರತ ನಿರ್ಮಾಣದ ಮಾತಾಡುತ್ತಾ ಪೈಪೋಟಿ ನೀಡುತ್ತಿದ್ದ ಕಾಂಗ್ರೆಸ್ಗೆ, ಮೋದಿಗೆ ಯುವ ಜನತೆಯನ್ನು ಆಕರ್ಷಿಸುವ ಕಲೆ ಕರಗತವಾಗಿದ್ದು, ಪರಿಣಾಮವಾಗಿ ಈ ವಯಸ್ಸಿನಲ್ಲೂ ಯುವ ನೇತಾರನಾಗಿ ಕಾಣಿಸಿಕೊಳ್ಳುತ್ತಿರುವುದು ತಲೆನೋವಿನ ವಿಚಾರ. ಹಾಗೆಂದು ಮೋದಿ ಅಲೆಗೂ ವಿರೋಧವಿಲ್ಲ ಎಂದಲ್ಲ. 'ಮೋದಿ ಅಲೆ'ಎಂಬ ಅಲೆ ದೇಶದೆಲ್ಲೆಡೆ ಇದೆ ಎಂದು ಕೂಗೆಬ್ಬಿಸಿದ್ದು ಭಾಜಪ ಮತ್ತದರ (ಅವರನ್ನು ಒಪ್ಪಿಕೊಂಡಿರುವ) ಮಿತ್ರ ಪಕ್ಷಗಳೇ ಹೊರತು, ದೇಶದ ಜನತೆ ಅಲ್ಲ!. ಮೋದಿಯವರನ್ನು ಕೇವಲ ಒಂದು 'ಬ್ರಾಂಡ್' ಆಗಿ ಭಾಜಪ ನಿರೂಪಿಸುತ್ತಾ ಹೋಗಿದೆಯೇ ಹೊರತು, ತನ್ನೊಳಗಿನ ಹಿರಿಯ ನಾಯಕರದ್ದೇ ವಿಶ್ವಾಸ ಕಳೆದುಕೊಂಡಿದ್ದು ಸುಳ್ಳಲ್ಲ. ಎಲ್ಲರೂ ಆ ಬಿಸಿಯನ್ನು ಅನುಭವಿಸುತ್ತಲೇ ಇದ್ದರೆ, ಕೆಲವರು ಅದರಲ್ಲಿಯೇ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ. ಅಷ್ಟೆ. ಹೀರಾ ಬೆನ್-ದಾಮೋದರದಾಸ್ ಮೂಲ್ ಚಂದ್ ಮೋದಿ ದಂಪತಿಗಳ ಈ ೬೩ರ ವಯೋವೃದ್ದ 'ಯುವಕ' ಭಾರತಾಂಬೆಯ ಮಡಿಲ ನಾಯಕ ಮಣಿಯಾಗಿ ಹೊರ ಹೊಮ್ಮುತ್ತಾರೆಯೇ..??. ಸ್ವಲ್ಪ ಕಾಯ ಬೇಕು ಅಷ್ಟೇ.</div>
<div style="text-align: justify;">
<br /></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgS8cLpvJuz3uBbDSkIanw0B4WCanpWRQvknyn2Vvy5mQTsWPaM7wnfulACPVCc7RMJ3VXhKJTotssnx3_dUB8hYyg0LK7UgMSZw9BGArghtvuUJ0FkFxa0Ewt54GzrNllh8KpYcQSFkZ9v/s1600/prime.jpg" imageanchor="1" style="clear: right; float: right; margin-bottom: 1em; margin-left: 1em; text-align: justify;"><img border="0" src="https://blogger.googleusercontent.com/img/b/R29vZ2xl/AVvXsEgS8cLpvJuz3uBbDSkIanw0B4WCanpWRQvknyn2Vvy5mQTsWPaM7wnfulACPVCc7RMJ3VXhKJTotssnx3_dUB8hYyg0LK7UgMSZw9BGArghtvuUJ0FkFxa0Ewt54GzrNllh8KpYcQSFkZ9v/s1600/prime.jpg" height="155" width="320" /></a></div>
<div style="text-align: justify;">
ಇನ್ನು ತೃತೀಯ ರಂಗ ಎಂಬ ಚುನಾವಣಾ ವೇಳೆಯ 'ಶಿಶು'! ಇದು ದೇವೇ ಗೌಡ, ಜಯಲಲಿತಾಎಂಬ ಪ್ರಧಾನಿ ಪಟ್ಟದ ಆಕಾಂಕ್ಷಿಗಳ 'ಗರ್ಭ'ಧರಿಸಿದೆ!!. ಅತ್ತ ಮಮತಾ ಬ್ಯಾನರ್ಜಿ, ಇತ್ತ ಮುಲಾಯಂ ಸಿಂಗ್ ಯಾದವ್-ಮಾಯಾವತಿಗಳೂ ತಮ್ಮ ಅದ್ರಷ್ಟ ಚೀಟಿ ಹಿಡಿದು ಕುಳಿತಿದ್ದಾರೆ!!. ದೆಹಲಿಯಲ್ಲಿ'ಅಚಾತುರ್ಯ'ದಿಂದ ಗದ್ದುಗೆ ಹಿಡಿದ ಆಮ್ ಆದ್ಮಿಗಳು, ಪವಾಡದ ನಿರೀಕ್ಷೆಯಲ್ಲಿದ್ದಾರೆ ಮತ್ತು ದೇಶದ ಜನತೆಗೆ ಇವರಿಂದ ಪುಕ್ಕಟೆ ಮನೋರಂಜನೆ ಸಿಗುತ್ತಿದೆ. ಅವರ ದೃಷ್ಟಿಯಲ್ಲಿ ಕೇಜ್ರಿವಾಲ್ ಪ್ರಧಾನಿಯಾಗಿಯಾಗಿದೆ!!. ಅಂತೂ ಈ ಬಿಸಿಲ ಬೇಗೆ, ಕಾವೂ ಸಹ, ಚುನಾವಣೆಯ ಬಿಸಿ ಯಿಂದಾಗಿ, ತನ್ನತನ ಕಳೆದುಕೊಂಡಿದೆ. ದೇಶದ ಪ್ರಬುದ್ಧ ಮತದಾರ ಮಾತ್ರ, ಮೀಸೆಯ ಕೆಳಗೆ ನಗುತ್ತಾ ತುಂಟ ನಗೆ ಬೀರುತ್ತಿದ್ದಾನೆ. ಅವನಿಗೆ ತಾನು 'ತಾತ್ಕಾಲಿಕ' ಪ್ರಭುವಾದ ಬಗ್ಗೆ ನೋವಿದೆ, ಸಿಡುಕಿದೆ, ಕೋಪವಿದೆ. ಅಷ್ಟೇ ಮುಖ್ಯವಾಗಿ, ತನ್ನ 'ಹಕ್ಕಿನ' ಪರಿಧಿ ಚುನಾವಣೆಗೆ ಮಾತ್ರ ಸೀಮಿತ ಎಂಬ ಅರಿವಿದೆ!!.</div>
<div style="text-align: justify;">
<br /></div>
<div style="text-align: justify;">
ಭಾರತಾಂಬೆಯ ಮಡಿಲಿಗೆ ಯಾರ ಮಕ್ಕಳನ್ನು ನಾಯಕತ್ವ ಕೊಟ್ಟು ಕೂರಿಸುತ್ತಾನೋ ಈ ಪ್ರಬುದ್ಧ ಮತದಾರ ಎಂದು ತಿಳಿಯಲು ಮೇ ೧೭ರ ತನಕ ಕಾಯಬೇಕು. ಅಷ್ಟೇ!!</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
</div>
Anonymoushttp://www.blogger.com/profile/07026221826810784770noreply@blogger.com0tag:blogger.com,1999:blog-6634091388019397795.post-4170151949049947382014-03-25T21:02:00.002-07:002014-03-25T21:02:14.415-07:00'ಕೊಲೆ'ಯ ಹಿಂದೆ-ಮುಂದೆ...!<div dir="ltr" style="text-align: left;" trbidi="on">
<div style="text-align: justify;">
<b><span style="color: blue;">ಸಹಜವಾಗಿಯೇ ಮನುಷ್ಯ ಭಾವನಾ ಜೀವಿ. ಅವನ ಭಾವನೆಗಳು ಅವನ ನಿಯಂತ್ರಣ ತಪ್ಪಿ ಹೋದಾಗ ಅನಾಹುತಗಳು ಆಗುತ್ತವೆ. ಈ ಕೊಲೆ ಎಂಬುದಕ್ಕೆ ಇಂತಾದ್ದೇ ಎಂಬ ಕಾರಣಗಳಿರುವುದಿಲ್ಲ. ಹತಾಶೆ, ಕೋಪ, ಹಠಮಾರಿತನ, ದ್ವೇಷ, ನಿರಾಸೆ...</span><span style="color: red;">ಜನಪ್ರತಿನಿಧಿ</span><span style="color: blue;"> ಯಲ್ಲಿ ನನ್ನ ಇಂದಿನ ಲೇಖನ... </span></b></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
ಒಂದು ಕ್ಷಣ ಬೆಚ್ಚಿ ಬೀಳಿಸುವ ಘಟನೆ ಆಗಿತ್ತದು!</div>
<div style="text-align: justify;">
<br /></div>
<div style="text-align: justify;">
ಅದೊಂದು ಪುಟ್ಟ ಸಂಸಾರ. ಕಿರಣ್ ಎಂಬ ಗಂಡ, ಸೌಮ್ಯಾ ಎಂಬ ಹೆಂಡತಿ ಮತ್ತು ನಾಲ್ಕರ ಹರೆಯದ ಮುದ್ದಾದ ಮಗುವಿದ್ದ ಆ ಸಂಸಾರ ನೆಮ್ಮದಿಯಿಂದಿತ್ತು. ಆತ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಮೆನೇಜರ್. ಆಂಧ್ರ ಮೂಲದ ಅವರು ಮಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. </div>
<div style="text-align: justify;">
<br /></div>
<div style="text-align: justify;">
ಕಿರಣನ ಕೈಕೆಳಗೆ ಶ್ರದ್ಧಾ ಎಂಬ ಆಕೆ ಕೆಲಸ ಮಾಡುತ್ತಿದ್ದಳು. ಅವಳು ತನ್ನ ಪತಿಗೆ ವಿಚ್ಛೇದನ ನೀಡಿದ್ದಳು. ಶ್ರದ್ಧಾ ಮತ್ತು ಕಿರಣ್ ಮಧ್ಯೆ ಇದ್ದ ಸಂಬಂಧ ನಿಧಾನವಾಗಿ ಪ್ರೀತಿಗೆ, ನಂತರ ಪ್ರೇಮಕ್ಕೆ ತಿರುಗಿತು. ಎಂಟು ತಿಂಗಳಾಗುವಷ್ಟರಲ್ಲಿ ಆ ಇಬ್ಬರೂ ಬಹಳ ಹತ್ತಿರ ಬಂದರು. ಆದರೆ ಅದೇ ಸಂದರ್ಭದಲ್ಲಿ ಕಿರಣನಿಗೆ ಬೆಂಗಳೂರಿಗೆ ವರ್ಗವಾಯಿತು. ಶ್ರದ್ಧಾಳಿಗೆ ಬಹಳ ನೋವಾಯಿತು. ಕಿರಣ್ನನ್ನು ಬಿಟ್ಟಿರಲಾರದೇ ಶ್ರದ್ಧಾ ಒದ್ದಾಡಿದಳು. ಅದೇ ಸಂದರ್ಭದಲ್ಲಿ ಬೆಂಗಳೂರಿಗೆ ಹೋದ ಕಿರಣ್, ಸೌಮ್ಯಾ ಮತ್ತು ಮಗುವನ್ನು ಅಲ್ಲಿಗೆ ಕರೆದೊಯ್ಯಲು ಒಂದು ಮನೆಯನ್ನೂ ನೋಡುತ್ತಾನೆ. ಇದು ಶ್ರದ್ಧಾಳಿಗೆ ಮತ್ತಷ್ಟು ನೋವು ನೀಡಿತು. ಪರಿಣಾಮ, ಒಂದು ಬೆಳಿಗ್ಗೆ ಆಕೆ ಕಿರಣನ ಮಂಗಳೂರಿನ ಬಾಡಿಗೆ ಮನೆಗೆ ಬರುತ್ತಾಳೆ. ಅನಾರೋಗ್ಯದಿಂದ ಬಳಲುತ್ತಿದ್ದ ಸೌಮ್ಯಾಗೆ ನಿದ್ದೆ ಮಾತ್ರೆ ನೀಡುತ್ತಾಳೆ. ಮಗುವನ್ನು ಎತ್ತಿಕೊಂಡು ಹೋಗುವ ಮುನ್ನ, ನಿದ್ದೆಯಲ್ಲಿದ್ದ ಸೌಮ್ಯಾಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಾಳೆ. ಕೊಲೆ ಮಾಡುತ್ತಾಳೆ.</div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEiX4-ybXDYFh5DJhC_dKumJ5rAM0FiRG5dXLwKOH-ezCDMV_sx7IvgWlPoV7IH4MmOHlroDOgCQ1Wm9heh7GUUJFv4sMYun5_zGVu9rwiT0hGRh-k3Dn93q7MnOIiWTzXR7rFsc4cw53Slw/s1600/suicide-1.jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEiX4-ybXDYFh5DJhC_dKumJ5rAM0FiRG5dXLwKOH-ezCDMV_sx7IvgWlPoV7IH4MmOHlroDOgCQ1Wm9heh7GUUJFv4sMYun5_zGVu9rwiT0hGRh-k3Dn93q7MnOIiWTzXR7rFsc4cw53Slw/s1600/suicide-1.jpg" height="200" width="132" /></a></div>
<br />
ಮ<span style="text-align: justify;">ರುದಿನ ಬೆಳಿಗ್ಗೆ ಕಿರಣ ಬೆಂಗಳೂರಿನಿಂದ ಬರುತ್ತಾನೆ. ಕೊಲೆಯಾದ ಬಗ್ಗೆ ಆತನಿಗೆ ಪೂರ್ವಮಾಹಿತಿ ಇತ್ತೆಂಬ ಅನುಮಾನವೂ ಇದೆ. ಆತ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸುತ್ತಾನೆ. ಈಗ ಇಬ್ಬರೂ ಪೋಲಿಸರ ಅತಿಥಿಗಳು. ಇದು ಕೇವಲ ಒಂದು ವಾರದ ಕೆಳಗೆ ಮಂಗಳೂರಿನಲ್ಲಿ ನಡೆದ ಒಂದು ಕೊಲೆಯ ಘಟನೆ.</span><br />
<div style="text-align: justify;">
<br /></div>
<div style="text-align: justify;">
ಇಂತಹ ಹತ್ತು ಹಲವಾರು ಘಟನೆಗಳನ್ನು ನಾವು ದಿನ ನಿತ್ಯವೂ ನೋಡುತ್ತಿರುತ್ತೇವೆ. ಪತ್ರಿಕೆಗಳಲ್ಲಿ ಈ ತರದ ಘಟನೆಗಳು ಒಂದಿಲ್ಲೊಂದು ಕಡೆ ನಡೆಯುತ್ತಲೇ ಇರುತ್ತವೆ. ಸುಮಾರು ಒಂದೂವರೆ ತಿಂಗಳ ಹಿಂದೆ, ಇದೇ ಮಂಗಳೂರಿನಲ್ಲಿ, ಹಳೆಯ ಪೇಪರ್ ವ್ಯಾಪಾರಿಯೊಬ್ಬನ ಕೊಲೆಯಾಗುತ್ತದೆ. ಪೊದೆಯೊಂದರ ಬಳಿ ಸತ್ತು ಬಿದ್ದಿದ್ದ ಆ ನತದ್ರಷ್ಟನ ಅಸಹಜ ಸಾವಿನ ಬೆನ್ನು ಹತ್ತಿ ಹೋದ ಪೋಲಿಸರು, ಆತನ ಪತ್ನಿಯನ್ನು ಬಂಧಿಸುತ್ತಾರೆ. ಆಗ ಆಕೆ ಬಾಯ್ಬಿಟ್ಟ ಸತ್ಯ ಎಂದರೆ, ಆಕೆ ಮತ್ತು ಇತ್ತೀಚೆಗೆ ಪರಿಚಯವಾದ ಆಕೆಯ ಪ್ರಿಯಕರ ಸೇರಿ, ಆತನನ್ನು ಮುಗಿಸಿರುತ್ತಾರೆ.</div>
<div style="text-align: justify;">
<br /></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgDgTOkyTn-cmJl-0-jtL2pgM00TfrFDx6cS7L4ZIn-4IKMTyyWNwxpiTIWsr9p5rrtAjWz13czv0cscTN1MY-MyL-eimMbCbdMDyrqCJXwXAe2XkRMsVmOuAaYEernbHy-xUECTREVsvjH/s1600/suicide.jpg" imageanchor="1" style="clear: right; float: right; margin-bottom: 1em; margin-left: 1em;"><img border="0" src="https://blogger.googleusercontent.com/img/b/R29vZ2xl/AVvXsEgDgTOkyTn-cmJl-0-jtL2pgM00TfrFDx6cS7L4ZIn-4IKMTyyWNwxpiTIWsr9p5rrtAjWz13czv0cscTN1MY-MyL-eimMbCbdMDyrqCJXwXAe2XkRMsVmOuAaYEernbHy-xUECTREVsvjH/s1600/suicide.jpg" height="200" width="190" /></a></div>
<div style="text-align: justify;">
ಈ ಎಲ್ಲಾ ಘಟನೆಗಳನ್ನು ಓದುತ್ತಿರುವಂತೆ, ಮನುಷ್ಯ-ಮನುಷ್ಯನ ನಡುವಿನ ಸಂಬಂಧ ಇಂದು ಯಾವ ಮಟ್ಟದಲ್ಲಿದೆ ಎಂಬ ನೋವು ಮತ್ತು ಹತಾಶೆಗಳೆರಡೂ ಕಾಣುತ್ತವೆ. ಈ ರೀತಿಯ ಘಟನೆಗಳು ಸಾಮಾನ್ಯವೆಂಬಂತೆ ಇಂದು ನಮ್ಮ ಸುತ್ತ ಮುತ್ತಲೇ ನಡೆಯುತ್ತಿದ್ದರೆ, ಸಾಮಾಜಿಕವಾಗಿ ನಾವು ಯಾವ ಪರಿ ಅಧ:ಪತನಕ್ಕಿಳಿಯುತ್ತಿದ್ದೇವೆ ಎಂಬುದೇ ತಿಳಿಯುತ್ತಿಲ್ಲ. </div>
<div style="text-align: justify;">
<br /></div>
<div style="text-align: justify;">
ಒಂದರ್ಥದಲ್ಲಿ ಬದುಕೇ ಹಾಗೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ಮತ್ತು ಹೊಸದಕ್ಕೆ ಹಾತೊರೆಯುವ ಮನ. ಪ್ರತಿಯೊಬ್ಬನ ಬದುಕಿನಲ್ಲೂ ಸಹಜವಾಗಿ ಕೆಲವು ವಿಷಯಗಳಲ್ಲಿ ಅತೃಪ್ತಿ ಇರುತ್ತದೆ. ಆ ಕೊರತೆಯ ನಿವಾರಣೆಗಾಗಿ ಹಲವು ದಾರಿಗಳೂ ಇರುತ್ತವೆ. ಆದರೆ ಕಾನೂನು ತನ್ನ ಚೌಕಟ್ಟಿನಡಿ ಅನೇಕ ಕಟ್ಟುಪಾಡುಗಳನ್ನು ನಿರ್ಮಿಸಿಟ್ಟಿದ್ದು, ಇದನ್ನು ಅರಿತು ಮುನ್ನಡೆಯಬೇಕಾದ ಅನಿವಾರ್ಯತೆ, ಆರೋಗ್ಯಪೂರ್ಣ ಸಮಾಜದ ಹಿನ್ನೆಲೆಯಲ್ಲಿ ಇಂದಿನ ಅಗತ್ಯವಾಗಿದೆ.</div>
<div style="text-align: justify;">
<br /></div>
<div style="text-align: justify;">
ಮೇಲಿನೆರಡೂ ಘಟನೆಗಳಲ್ಲಿ ಅನೇಕ ಸಂಶಯಗಳು ಹುಟ್ಟಿಕೊಳ್ಳುತ್ತವೆ. ನಮಗೆ ತೀರಾ ಬೇಕು ಎನಿಸಿದಾಗ, ಮನಸ್ಸು ಬೇರಾವುದನ್ನೂ ಯೋಚಿಸದೇ, ಮುಂದೆ ಆಗಲಿರುವ ಯಾವುದೇ ಅನಾಹುತಗಳನ್ನೂ ಲೆಕ್ಕಿಸದೇ, ಇಂದು, ಈ ಕ್ಷಣಕ್ಕೆ ನನಗೆ ಬೇಕಾದ್ದನ್ನು ಪಡೆಯುವಲ್ಲಿ ಹಾತೊರೆಯುತ್ತದೆ. ಅದಕ್ಕಾಗಿ ಬೇರೆ ಜೀವದ ಬಲಿಯಾದರೂ ಆಗಬಹುದು, ನಾನು ಪಾತ್ರ ನೆಮ್ಮದಿಯಿಂದಿರಬೇಕೆಂದು ಮನ ಹಾತೊರೆಯುತ್ತದೆ.</div>
<div style="text-align: justify;">
<br /></div>
<div style="text-align: justify;">
ದುರಂತವೆಂದರೆ ನಮ್ಮ ಸುತ್ತ ಮುತ್ತಲೂ ಇಂತಹ ಹತ್ತು ಹಲವಾರು ಘಟನೆಗಳು ಮರುಕಳಿಸುತ್ತಿದ್ದು, ಹೆಚ್ಚಿನ ಸಂದರ್ಭಗಳಲ್ಲಿ ಅಪರಾಧ ಮಾಡಿದವರು ಸಿಕ್ಕಿ ಬೀಳುತ್ತಾರೆ. ಜೀವನ ಪರ್ಯಂತ ಇದಕ್ಕಾಗಿ ಪರಿತಪಿಸುತ್ತಾ ಶಿಕ್ಷೆ ಅನುಭವಿಸುತ್ತಾರೆ. ಇದನ್ನು ನೋಡುತ್ತಲೇ, ಮತ್ತೆ ಮತ್ತೆ ಆ ತಪ್ಪು ಸಮಾಜದಲ್ಲಿ ಮರುಕಳಿಸುತ್ತಿದೆ ಎಂದಾದರೆ, ಜೀವನ ಶೈಲಿಯಲ್ಲಿ ನಾವು ತಪ್ಪಿದ್ದೆಲ್ಲಿ ಎಂಬ ಪ್ರಶ್ನೆ ಕಾಡುತ್ತದೆ.</div>
<div style="text-align: justify;">
<br /></div>
<div style="text-align: justify;">
ಈ ರೀತಿಯ ಅಪರಾಧಗಳಿಂದಾಗಿ, ಅತ್ತ ಬಯಸಿದ್ದೂ ಸಿಗದೇ, ಇತ್ತ ಇದ್ದುದನ್ನೂ ಕಳೆದುಕೊಂಡು, ಜೈಲಿನಲ್ಲಿ ಕಾಲ ಕಳೆಯುವ ಪರಿಸ್ಥಿತಿ ಬರುತ್ತದೆ. </div>
<div style="text-align: justify;">
<br /></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEjpBdv3MRfF8hDTLWyH6vbWh93zftnucXar4hEUXDihameI8piSaGAIqo0QeknuUk2v8Wt_raIfgP7m3kCKYh4dNCEH7BRyvSsWduPWxfzx1yR700PY-Ghib0_eagLH_ggQ35OPb9yUL1op/s1600/suicide-2.jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEjpBdv3MRfF8hDTLWyH6vbWh93zftnucXar4hEUXDihameI8piSaGAIqo0QeknuUk2v8Wt_raIfgP7m3kCKYh4dNCEH7BRyvSsWduPWxfzx1yR700PY-Ghib0_eagLH_ggQ35OPb9yUL1op/s1600/suicide-2.jpg" height="200" width="133" /></a>ಸಹಜವಾಗಿಯೇ ಮನುಷ್ಯ ಭಾವನಾ ಜೀವಿ. ಅವನ ಭಾವನೆಗಳು ಅವನ ನಿಯಂತ್ರಣ ತಪ್ಪಿ ಹೋದಾಗ ಅನಾಹುತಗಳು ಆಗುತ್ತವೆ. ಈ ಕೊಲೆ ಎಂಬುದಕ್ಕೆ ಇಂತಾದ್ದೇ ಎಂಬ ಕಾರಣಗಳಿರುವುದಿಲ್ಲ. ಹತಾಶೆ, ಕೋಪ, ಹಠಮಾರಿತನ, ದ್ವೇಷ, ನಿರಾಸೆ...ಇಂತಹ ಭಾವನೆಗಳು ಹೆಚ್ಚಿನ ಸಂದರ್ಭದಲ್ಲಿ ನಮ್ಮನ್ನು ನಿಯಂತ್ರಿಸುತ್ತವೆ. ಹೀಗೆ ಈ ರೀತಿ, ನಮ್ಮೊಳಗಿನ ಭಾವನೆಗಳೇ ನಮ್ಮನ್ನು ನಿಯಂತ್ರಿಸಲಾರಂಭಿಸಿದಾಗ, (ಅವುಗಳನ್ನು ನಾವು ನಿಯಂತ್ರಿಸುವ ಬದಲು), ಅನಾಹುತಗಳು ಘಟಿಸುತ್ತವೆ. ನಾವು ಓದಿರುತ್ತೇವೆ, ರಜೆ ಕೊಡದ ಮೇಲಧಿಕಾರಿಯನ್ನು ಕೊಂದ ಘಟನೆ, ಪ್ರೇಮ ನಿರಾಕರಣೆಯನ್ನು ಮಾಡಿದಾಗ ಕೊಲೆ ನಡೆದದ್ದು, ಆಸಿಡ್ ದಾಳಿಯಾದದ್ದು...ಸಂದರ್ಭಗಳು ಬೇರೆ ಬೇರೆಯಾಗಿದ್ದರೂ, ಪರಿಣಾಮ ಮತ್ತು ಅದಕ್ಕೆ ಕಾರಣವಾಗುವುದು ನಮ್ಮ ಮಾನಸಿಕ ದೌರ್ಬಲ್ಯ. ಇದನ್ನೇ ಮನ:ಶಾಸ್ರಜ್ಞರು ಮನೋ ವೈಕಲ್ಯ ಎಂದು ಕರೆದದ್ದು. ಹೆಚ್ಚಿನ ಅಪರಾಧ ಪ್ರಕರಣಗಳಲ್ಲಿ, ಕ್ಷಣಿಕ ದೌರ್ಬಲ್ಯ ಕೆಲಸ ಮಾಡುತ್ತವೆ. ಅನೇಕ ಕೊಲೆಗಳು, ಪೂರ್ವ ಯೋಜಿತವಾಗಿರುತ್ತವಾದರೂ, ಇದರ ಹಿನ್ನೆಲೆ, ಕ್ಷಣಿಕವಾಗಿ ಏನನ್ನೋ ತನ್ನ ಕೈವಶ ಮಾಡಿಕೊಳ್ಳುವ ಅಥವಾ ದ್ವೇಷದ ಪರಮಾವಧಿಯದ್ದಾಗಿರುತ್ತದೆ.</div>
<div style="text-align: justify;">
<br /></div>
<div style="text-align: justify;">
ಆತ್ಮಹತ್ಯೆಯೂ ಒಂದು ರೀತಿಯ ಕೊಲೆಯೇ ಆಗಿರುತ್ತದೆ. ಬೇರೊಂದು ಜೀವಿಯನ್ನು ಕೊಲ್ಲವುದಕ್ಕೆ ಭಿನ್ನವಾಗಿ ತನ್ನನ್ನೇ ತಾನು ಕೊಂದುಕೊಳ್ಳುವ ಸ್ಥಿತಿಯೇ ಆತ್ಮಹತ್ಯೆ. ಇದಕ್ಕೂ ಕಾರಣಗಳನ್ನು ಹುಡುಕುತ್ತಾ ಹೋದಂತೆ, ಅನೇಕ ಸಂದರ್ಭಗಳಲ್ಲಿ ಕ್ಷುಲ್ಲಕ ಕಾರಣಗಳೇ, ಜೀವಾಂತ್ಯಕ್ಕೆ ಕಾರಣವಾಗಿರುತ್ತವೆ. ತನ್ನ ಇಷ್ಟದ ಚ್ಯಾನೆಲ್ ನೋಡಲು ಮನೆಯವರು ಬಿಡಲಿಲ್ಲ ಎಂಬ ಕಾರಣ, ಪರೀಕ್ಷೆಯಲ್ಲಿ ಫೇಲ್ ಆಗಿ ಜೀವನವೇ ಮುಗಿಯಿತು ಎಂಬ ಭಾವನೆ...ಹೀಗೆ ಅನೇಕ ಸಂದರ್ಭಗಳಲ್ಲಿ ಆತ್ಮಹತ್ಯೆಗಳು ನಡೆದದ್ದನ್ನು ಕೇಳೀದ್ದೇವೆ, ಕಂಡಿದ್ದೇವೆ.</div>
<div style="text-align: justify;">
<br /></div>
<div style="text-align: justify;">
ಸಾಮಾಜಿಕ ಸ್ವಾಸ್ಥ್ಯಗಳು ಈ ರೀತಿ ಕೆಡುತ್ತಿದ್ದರೆ, ನಮ್ಮ ಸುತ್ತಲಿನ ಪ್ರಪಂಚವೇ ಭೀಬತ್ಸವಾಗುತ್ತಾ ಹೋಗುತ್ತದೆ. ಈ ರೀತಿಯ ಮನೋ ವೈಕಲ್ಯ ಅಥವಾ ಹತಾಶೆಗೊಳಗಾಗುವುದನ್ನು ತಪ್ಪಿಸಲು ಅನೇಕ ಸಂದರ್ಭಗಳಲ್ಲಿ ಮನಸ್ಸನ್ನು ನಿಯಂತ್ರಣದಲ್ಲಿಡುವ ಕಲೆ, ಸಾಂಸ್ಕೃತಿಕ ಅಥವಾ ಧಾರ್ಮಿಕತೆಗೆ ನಮ್ಮನ್ನು ತೆರೆದುಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಒಂದು ಕ್ಷಣದ ಹತಾಶಾ ಭಾವನೆಯಿಂದ ನಾವು ಸೀದಾ ಸಾವಿನ ಮನೆಯ ಬಾಗಿಲಿಗೆ ಹೋಗುವ ಅಥವಾ ಬೇರೊಬ್ಬರನ್ನು ದೂಡುವ ಬದಲಿಗೆ, ಯಾವುದೋ ಒಂದು ಮಂದಿರದಲ್ಲೋ, ಅಥವಾ ಸಮಾರಂಭದಲ್ಲೋ ಒಂದಷ್ಟು ಹೊತ್ತು ಕಳೆದು ಬರುವ ಯೋಚನೆಯಿಂದ ಅತ್ತ ಹೋದರೆ...ಬರುವುದರಲ್ಲಿ ಮನಸ್ಸು ಪ್ರಫುಲ್ಲವಾಗಿರದಿದ್ದರೆ ಕೇಳಿ!! ಆಗ ಯಾವುದೇ ಅವಘಡಗಳಿಗೂ ಕಾರಣವೇ ಇರುವುದಿಲ್ಲ.</div>
<div style="text-align: justify;">
<br /></div>
<div style="text-align: justify;">
ಇದೀಗ ಪರೀಕ್ಷೆಯ ಸಮಯ-ಫಲಿತಾಂಶದ ಸಮಯ. ಎಲ್ಲಾ ವಿದ್ಯಾರ್ಥಿಗಳಲ್ಲೂ ಒಂದು ರೀತಿಯ ಅವ್ಯಕ್ತ ಭಯ ಇರುತ್ತದೆ. ಇದೇ ಮುಂದೆ ಫಲಿತಾಂಶ ಬಂದಾಗ, ಹತಾಶೆಯಾಗಿ ಮಾರ್ಪಟ್ಟು ಆತ್ಮ ಹತ್ಯೆಗೆ ಶರಣಾಗುವ ಅಪಾಯವಿರುವುದರಿಂದ, ನಿಜಕ್ಕೆಂದರೆ ಈ ಸಮಯಗಳಲ್ಲಿ ಪತ್ರಿಕೆ ನೋಡುವುದೇ ಹೆದರಿಕೆ ಹುಟ್ಟಿಸುವ ಹಾಗಿರುತ್ತದೆ. ಎಲ್ಲಿಯ ತನಕ ಎಂದರೆ ಫೆಲಾದವರು ಮತ್ತು ಅನೇಕ ಸಂದರ್ಭಗಳಲ್ಲಿ ನಿರೀಕ್ಷಿತ ಶೆಕಡಾವಾರು ಫಲಿತಾಂಶ ಬರದ ಕಾರಣವನ್ನೂ ಮುಂದೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಕಾಣುತ್ತವೆ!!. ದುರಂತವಲ್ಲವೇ??</div>
<div style="text-align: justify;">
<br /></div>
<div style="text-align: justify;">
ಮೇಲೆ ತಿಳಿಸಿದ ಎಲ್ಲಾ ಸೂಚ್ಯ ಘಟನೆಗಳು ನಮ್ಮ ಇಂದಿನ ದುರಂತಮಯ ಸನ್ನಿವೇಶಗಳನ್ನು ತೆರೆದಿಡುತ್ತಿವೆ. ಪ್ರಜ್ಞಾವಂತರಾದ ನಾವು ಯೋಚಿಸಿ, ದುಡುಕಿನ ಕೈಗೆ ಬುದ್ದಿ ಕೊಡದೇ, ಬದುಕನ್ನು ಹಸನು ಮಾಡಿಕೊಳ್ಳಬಹುದು...ಅಲ್ಲವೇ..!!</div>
<div style="text-align: justify;">
<br /></div>
</div>
Anonymoushttp://www.blogger.com/profile/07026221826810784770noreply@blogger.com0tag:blogger.com,1999:blog-6634091388019397795.post-59326108515713442652014-03-18T22:39:00.003-07:002014-03-18T22:40:03.872-07:00ಗಂಡಸರೇಕೆ ಅಳ ಬಾರದು...???<div dir="ltr" style="text-align: left;" trbidi="on">
<div style="text-align: justify;">
<span style="color: purple;"><b>ಭಾವುಕತೆ ಎಂಬುದು ಪ್ರತೀ ಜೀವಿಗೂ ಇರುವ ಒಂದು ಗುಣ. ನರನಿರಲಿ-ನಾರಾಯಣನಿರಲಿ-ಪ್ರಾಣಿ ಇರಲಿ-ಪಕ್ಷಿ ಇರಲಿ-ಇದು ಒಂದೊಂದು ರೀತಿ ವ್ಯಕ್ತವಾಗುತ್ತಿರುತ್ತದೆ. ಇಂತಹ ಭಾವುಕತೆ ಅತೀ ಸಂತಸ, ಅತೀ ದು:ಖವಾಗಿ ಮಾರ್ಪಟ್ಟಾಗ, ಅದು ಅಳುವಾಗಿ ಬದಲಾಗುತ್ತದೆ. ಇದಕ್ಕೆ ಕಾರಣಗಳು ಹಲವಿರಬಹುದು, ಆದರೆ ಇದರ ಒಟ್ಟಾರೆ ಆಶಯ, ಮಾನಸಿಕವಾದ ಒಂದು ಅನುಭವ, ತಾನೇ ತಾನಾಗಿ ಹೊರ ಬರುವ ಕ್ರಿಯೆ ಎಂಬುದು ಎಲ್ಲರಿಗೂ ತಿಳಿದ ವಿಷಯ.<span style="font-size: x-small;"> </span></b></span><b style="color: blue;">ಜನಪ್ರತಿನಿಧಿ ಯಲ್ಲಿ ನನ್ನ ಇಂದಿನ 'ಪ್ರದಕ್ಷಿಣೆ'ಯ ಬರಹ... </b></div>
<div style="text-align: justify;">
<br /></div>
<div style="text-align: justify;">
<b><span style="font-size: x-large;">ಮ</span></b>ನುಷ್ಯ ಹುಟ್ಟಿದಾಕ್ಷಣ ಮೊದಲು ಅಳುತ್ತಾನೆ-ಅಯ್ಯೋ, ಈ ನೀರಸ ಪ್ರಪಂಚದಲ್ಲಿ ಇನ್ನು ನನ್ನ ಅಭಿಯಾನ ಆರಂಭವಾಯಿತು ಎಂಬ ಕೊರಗೋ-ಗೊತ್ತಿಲ್ಲ. ಹುಟ್ಟಿದ ಮಗು ಅಳದಿದ್ದರೆ, ಅದರ ಆರೋಗ್ಯದಲ್ಲಿ ಏನೋ ಏರು ಪೇರಿದೆ ಎಂದೇ ಅರ್ಥ. ಅದಿಲ್ಲವಾದರೆ ಆ ಗಳಿಗೆ ಕೆಟ್ಟದ್ದು ಎಂದು ನಂಬುವುದೂ ಇದೆ...ಅದು ನಂಬಿಕೆಯೋ ಮೂಡ ನಂಬಿಕೆಯೋ ಗೊತ್ತಿಲ್ಲ.</div>
<div style="text-align: justify;">
ಇನ್ನು ನಮ್ಮ ಲೇಖನದ ಶೀರ್ಷಿಕೆಯ ವಿಚಾರಕ್ಕೆ ಬರೋಣ. ಗಂಡಸರು ಅಳ ಬಾರದು!!. ಇದು ಒಂದು ರೀತಿಯ ಅಘೋಷಿತ ಶಾಸನದಂತೆ ಆಗಾಗ ಹೇಳಲಾಗುತ್ತದೆ. ಮೊದಲಾಗಿ ಅಳು ಎಂಬುದೇ ಒಂದು ವೈಜ್ಞಾನಿಕ ಕ್ರಿಯೆ. ಅಳುವುದರಿಂದ ಮನುಷ್ಯನ ಆರೋಗ್ಯದ ಮೇಲೆ ಅನೇಕ ಒಳ್ಳೆಯ ಪರಿಣಾಮಗಳೂ ಬೀರುತ್ತವೆ ಎಂದು ಮನ ಶಾಸ್ತ್ರ ಹೇಳುತ್ತದೆ. ಇಂತಾದ್ದರಲ್ಲಿ ಗಂಡಸು ಅಳಬಾರದು ಎಂದರೆ...??</div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgjoUU0FxYGoB7IZEi5ymCZxgUh4C1ojJVq5oxmQbpklTmreXSanXc1lBqLUcVWKy9IF8llyMA5v3JvZNnxSayeezg4GcG6CkD43i8VlMWlsATjFgMpfwsBRNlLEONudehyphenhyphentA8gK8dDcB93/s1600/man+crying.jpg" imageanchor="1" style="clear: right; float: right; margin-bottom: 1em; margin-left: 1em;"><img border="0" src="https://blogger.googleusercontent.com/img/b/R29vZ2xl/AVvXsEgjoUU0FxYGoB7IZEi5ymCZxgUh4C1ojJVq5oxmQbpklTmreXSanXc1lBqLUcVWKy9IF8llyMA5v3JvZNnxSayeezg4GcG6CkD43i8VlMWlsATjFgMpfwsBRNlLEONudehyphenhyphentA8gK8dDcB93/s1600/man+crying.jpg" height="182" width="200" /></a></div>
<br />
<div style="text-align: justify;">
ಈ ಮಾತನ್ನು ಯಾರು ಹುಟ್ಟು ಹಾಕಿದರೋ ಗೊತ್ತಿಲ್ಲ. ಅಳುವ ಗಂಡಸನ್ನು ಮತ್ತು ನಗುವ ಹೆಂಗಸನ್ನು ನಂಬ ಬಾರದು ಎಂಬುದು.!. ನನಗಿನ್ನೂ ಚೆನ್ನಾಗಿ ನೆನಪಿದೆ. ರಜೆಯಲ್ಲಿ ನಾವು ಅಜ್ಜನ ಮನೆಗೋ, ಯಾವುದೋ ಸಂಬಂಧಿಯ ಮನೆಗೋ ಹೋಗುತ್ತಿದ್ದೆವು. ಅಲ್ಲಿಂದ ರಜೆ ಮುಗಿಸಿ ಮರಳುವಾಗ ಸಹಜವೆಂಬಂತೆ ಅಳುತ್ತಿದ್ದೆವು. ತಮಾಷೆಯ ವಿಷಯವೆಂದರೆ, ಮನೆಯಿಂದ ಹೊರಡುವಾಗ ಮತ್ತು ಮನೆಗೆ ಮರಳುವಾಗ-ಸಾಮಾನ್ಯವೆಂಬಂತೆ ಅಳುತ್ತಿದ್ದೆವು. ಆಗ ನನ್ನಲ್ಲಿ ಒಬ್ಬರು, ಅಯ್ಯೋ, ನೀನು ಗಂಡಸಾಗಿ ಅಳುವುದಾ ಮಾರಾಯ ಎಂದು ಕೇಳಿದ್ದು ನೆನಪಾಗುತ್ತದೆ!. ಹಾಗೆಂದು ಅಳುವನ್ನು ನಿಲ್ಲಿಸಬೇಕು ಎಂದು ಕೊಂಡರೆ ಅದೂ ಅಷ್ಟು ಸುಲಭ ಸಾಧುವಲ್ಲ ಎಂಬುದು ಹಲವು ಪ್ರಯತ್ನಗಳ ನಂತರ ನನಗೆ ಅನಿಸಿದ್ದುಂಟು...!</div>
<div style="text-align: justify;">
<br /></div>
<div style="text-align: justify;">
ಅದಿರಲಿ, ಭಾವುಕತೆ ಎಂಬುದು ಪ್ರತೀ ಜೀವಿಗೂ ಇರುವ ಒಂದು ಗುಣ. ನರನಿರಲಿ-ನಾರಾಯಣನಿರಲಿ-ಪ್ರಾಣಿ ಇರಲಿ-ಪಕ್ಷಿ ಇರಲಿ-ಇದು ಒಂದೊಂದು ರೀತಿ ವ್ಯಕ್ತವಾಗುತ್ತಿರುತ್ತದೆ. ಇಂತಹ ಭಾವುಕತೆ ಅತೀ ಸಂತಸ, ಅತೀ ದು:ಖವಾಗಿ ಮಾರ್ಪಟ್ಟಾಗ, ಅದು ಅಳುವಾಗಿ ಬದಲಾಗುತ್ತದೆ. ಇದಕ್ಕೆ ಕಾರಣಗಳು ಹಲವಿರಬಹುದು, ಆದರೆ ಇದರ ಒಟ್ಟಾರೆ ಆಶಯ, ಮಾನಸಿಕವಾದ ಒಂದು ಅನುಭವ, ತಾನೇ ತಾನಾಗಿ ಹೊರ ಬರುವ ಕ್ರಿಯೆ ಎಂಬುದು ಎಲ್ಲರಿಗೂ ತಿಳಿದ ವಿಷಯ.</div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgYulsGX9CSjPhm5AjeJmXzIPQnew3cHXTbIpq3dYK4ihrRK0ZjQC1i-GeQ3UWl_mwBMg6CZd-SVXI1XY2qpidz8YH9m4aG2Vtu2p0kBe_t39ztmo1WagXnKhwYleew5iyRr3NwAbZcwkyh/s1600/man....jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEgYulsGX9CSjPhm5AjeJmXzIPQnew3cHXTbIpq3dYK4ihrRK0ZjQC1i-GeQ3UWl_mwBMg6CZd-SVXI1XY2qpidz8YH9m4aG2Vtu2p0kBe_t39ztmo1WagXnKhwYleew5iyRr3NwAbZcwkyh/s1600/man....jpg" height="133" width="200" /></a></div>
<div style="text-align: justify;">
<br /></div>
<div style="text-align: justify;">
ಹೆಣ್ಣನ್ನು ಭಾವನಾತ್ಮಕವಾಗಿ ಹೆಚ್ಚು ಅವಲಂಬಿತಳು ಎನ್ನುತ್ತಾರೆ. ಹೆಣ್ಣಿಗೆ ಹೋಲಿಸಿದರೆ, ಗಂಡು ತನ್ನನ್ನು ತಾನು ಭಾವನೆಯ ಕಟ್ಟುಪಾಡಿನಿಂದ ತಡೆದುಕೊಳ್ಳಬಲ್ಲ ಎಂಬುದೂ ನಂಬಿಕೆ. ಮತ್ತೆ ಯಾವುದೇ ಸನ್ನಿವೇಶದಲ್ಲಿಯೂ ಗಂಡು-ಹೆಣ್ಣು ಇಬ್ಬರೂ ಅತ್ತರೆ, ಬಹುಶ: ಅಲ್ಲಿ ಸಮಾಧಾನಿಸಲು ಯಾರೂ ಇಲ್ಲವೆಂಬ ಭಾವವೋ ಏನೋ, ಹಿರಿಯರು ಗಂಡು ಅಳಬಾರದು-ಹೆಣ್ಣು ನಗಬಾರದು ಎಂಬ ಗಾದೆ ಮಾಡಿಟ್ಟಿರಬಹುದು.</div>
<div style="text-align: justify;">
<br /></div>
<div style="text-align: justify;">
ಶತ ಶತಮಾನಗಳಿಂದ ಹೆಣ್ಣನ್ನು ಒಂದು ಕಟ್ಟು ಪಾಡಿಲ್ಲಿ ಬೆಳೆಸಿದ ಬಗ್ಗೆ ಕೇಳುತ್ತೇವೆ. ಹೆಣ್ಣು ನಕ್ಕರೆ ಅದೇ ಅಪರಾಧವೆಂಬಂತೆ ಬಿಂಬಿಸುವ ದುರಂತ, ಇಂದಿಗೂ ಕೆಲವು ಮೂಲಭೂತವಾದಿರಾಷ್ಟ್ರಗಳಲ್ಲಿ ಜ್ಯಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಗಂಡು ಅಳಲೇ ಬಾರದೇ ಎಂಬುದಕ್ಕೆ ಉತ್ತರ ಕಂಡುಕೊಂಡರೆ ಬಹುಶ: ಹೆಣ್ಣೂ ನಗಬಹುದು ಎಂಬ ನಂಬಿಕೆ ಬಲಗೊಳ್ಳಬಹುದು.</div>
<div style="text-align: justify;">
<br /></div>
<div style="text-align: justify;">
ಬದುಕಿನ ಅನೇಕ ಸಂಕಷ್ಟಗಳು ಮನುಷ್ಯನನ್ನು ಹಣ್ಣು ಹಣ್ಣು ಮಾಡುತ್ತವ. ಬಹಳ ಹಿಂದಿನ, ಘಟನೆಯೊಂದು ನೆನಪಾಗುತ್ತದೆ. ಕೆಲಸ ಮಾಡುತ್ತಿದ್ದ ಕಂಪೆನಿಯೊಂದರಲ್ಲಿ ಕೆಲವು ಹಿತ ಶತ್ರುಗಳ ರಾಜಕೀಯದಿಂದ ನನ್ನನ್ನು ಓರ್ವ ಭ್ರಷ್ಟನಂತೆ ಗುರುತಿಸಲಾಯಿತು. ಒಂದು ಗಳಿಗೆಯಲ್ಲಿ ಕೆಲಸ ಕಳೆದುಕೊಳ್ಳಬೇಕಾದ ಅನಿವಾರ್ಯತೆ. ಇದ್ದುದು ದೂರದ ಕೊಚ್ಚಿನ್ ನಲ್ಲಿ. ಕೂಡಿಟ್ಟದ್ದು ಏನೂ ಇಲ್ಲ. ಕೆಲಸದಿಂದ ಬಿಡಿಸಿದರೆ ಬಸ್ ಚಾರ್ಚ್ಗೂ ಹಣ ಇಲ್ಲದ ಪರಿಸ್ಥಿತಿ. ಎಲ್ಲಾ ವ್ಯವಸ್ಥೆಗಳೂ ನನ್ನ ವಿರುದ್ಧವೇ. ಇನ್ನುಳಿದದ್ದು ಆತ್ಮ ಹತ್ಯೆ ಮಾತ್ರ ಎಂಬ ಭಾವನೆ. ಸರಿ, ಕೆಲಸಕ್ಕೆ ಸಂಬಂಧಿಸಿದ ಎಲ್ಲವನ್ನು ಹಸ್ತಾಂತರಿಸಿಯಾಯಿತು. ಒಂದು ರೀತಿಯ ನಿರ್ಲಿಪ್ತತೆ ಮನದಲ್ಲಿತ್ತು. ಇನ್ನೂ ಒಂದು ವರ್ಷದ ಮಗು ಮತ್ತು ಮಡದಿ ಮನೆಯಲ್ಲಿ ಕಾಯುತ್ತಿದ್ದರು. ಏನಾಗಿದೆ ಎಂಬುದರ ಪರಿವೆಯೇ ಅವರಿಗಿರಲಿಲ್ಲ. ನನ್ನ ಮನಸ್ಸು ಸಂಪೂರ್ಣ ಖಿನ್ನತೆಗೊಳಗಾಗಿತ್ತು. ಇನ್ನೂ ಮನೆಗೆ ಹೋಗುವುದಕ್ಕಿಂತಲೂ, ಆತ್ಮಹತ್ಯೆಯೇ ಸೂಕ್ತ ಎಂದು ಕೊಂಡವನು, ಒಂದು ಕ್ಷಣ ಮನೆಯಲ್ಲಿ ಇಬ್ಬರನ್ನೂ ನೋಡಿ ಬರಲೇ ಎಂದುಕೊಂಡು ಅತ್ತ ಹೋದೆ. ಮನೆಯೊಳಗೆ ಕಾಲಿಡುತ್ತಲೇ, ಎಲ್ಲಿತ್ತೋ ಗೊತ್ತಿಲ್ಲ, ಅಳು ಭೋರ್ಗರೆದು ಬಂತು!!. ಗಟ್ಟಿಯಾಗಿ ನಾಲ್ಕೂ ಗೋಡೆಗಳು ಕೇಳುವಂತೆ ಅತ್ತೂ ಅತ್ತೂ ಹಗುರಾದಾಗ ಮನಸ್ಸಿಗೇನೋ ಬಿಡುಗಡೆಯ ಭಾವ!!. ನನ್ನ ಆತ್ಮ ಹತ್ಯೆಯ ಆಲೋಚನೆ ಆ ಕ್ಷಣಕ್ಕೆ ಮಾಯವಾಯಿತು. ಕಳೆದ ವಾರ ಮರಳಿ ಕೊಚ್ಚಿನ್ಗೆ ಹೋದಾಗ ಇದೆಲ್ಲವೂ ನೆನಪಾಯಿತು. ಇಂದು ನನಗನಿಸುತ್ತಿರುವುದೇನೆಂದರೆ, ಅಳು ಒಮ್ಮೊಮ್ಮೆ ಮನಸ್ಸನ್ನು ಹಗುರ ಮಾಡಿ, ಆಗಬಹುದಾದ ದುರಂತವನ್ನೂ ತಪ್ಪಿಸುತ್ತದೆ ಎಂದು!.</div>
<div style="text-align: justify;">
<br /></div>
<div style="text-align: justify;">
ಗಂಡಸು ಅಳಬಾರದು ಎಂಬುದಕ್ಕೆ ನನ್ನ ವಿರೋಧವಿರುವುದಕ್ಕೆ ಸ್ವಾನುಭವ ಅನೇಕ ಬಾರಿ ಕಾರಣವಾಗಿದ್ದಿದೆ. ಭಾವ ಪರವಶತೆ ಯಾರೊಬ್ಬರ ಸ್ವತ್ತೂ ಅಲ್ಲ. ಅದು ಮನುಜ ಜೀವಿತದ ಸಹಜ ಸ್ವಭಾವ. ಆದರೆ ಅಳು ಮೊಸಳೆ ಕಣ್ಣೀರಾಗಬಾರದು ಅಷ್ಟೇ. ಬಹುಶ: ಸಮಯ ಸಾಧಕತನದ ಕೆಲವು ಅಳುಗಳನ್ನು ನೋಡಿ, ಹಿರಿಯರು ಈ ಮಾತನ್ನು ಹುಟ್ಟು ಹಾಕಿರಬಹುದು. ಆದರೆ ಅಳುವನ್ನು ಯಾರೊಬ್ಬನ ಸ್ವತ್ತನ್ನಾಗಿ ಪರಿಗಣಿಸಬಾರದು.</div>
<div style="text-align: justify;">
<br /></div>
<div style="text-align: justify;">
ನಾನಂತೂ ಅಳುವನ್ನು ಬಹಳ ಇಷ್ಟ ಪಡುತ್ತೇನೆ!. ಇದನ್ನು ನಾವು ಧನಾತ್ಮಕವಾಗಿ ಚಿಂತಿಸಬೇಕು..ಅಷ್ಟೇ. ಅದೆಷ್ಟೋ ಸಂದರ್ಭಗಳಲ್ಲಿ ಮಾನಸಿಕವಾಗಿ ಇನ್ನಿಲ್ಲದಂತೆ ಕುಗ್ಗಿಹೋದಾಗ ಅಳು ಸಂಜೀವಿನಿ ಎಂದೇ ನನ್ನ ಭಾವನೆ. ಬಹುಶ: ಯಾರಿಗೂ ತಿಳಿದಿರದ ಗುಟ್ಟು ಎಂದರೆ, ಅದೆಷ್ಟೋ ಸಂದರ್ಭಗಳಲ್ಲಿ ನಾನು ಈಗಲೂ ಒಂಟಿಯಾಗಿ ಅತ್ತು ಹಗುರಾಗುವ ಅಭ್ಯಾಸ ಇಟ್ಟುಕೊಂಡಿದ್ದ ಕಾರಣದಿಂದಲೇ ಬದುಕನ್ನು ಸಮಚಿತ್ತದಿಂದ ಎದುರಿಸಲಾಗುತ್ತಿದೆ ಅನಿಸುತ್ತಿದೆ. ಯಾವುದೋ ಒಂದು ಸದರ್ಭದಲ್ಲಿ ಇದನ್ನು ಒಬ್ಬರಲ್ಲಿ ಹೇಳಿದಾಗ, ಅತ್ಯಂತ ಆಪ್ತರಾಗಿದ್ದ ಅವರು ಹೇಳಿದರು-ನನಗೆ ಅದೆಲ್ಲಾ ಗೊತ್ತಿಲ್ಲ, ನೀನು ಅಳಬಾರದು ಅಷ್ಟೇ! ಏಕೆ ಎಂದರೆ ಅವರ ಬಳಿ ಇದ್ದುದೂ ಅದೇ ಸೂತ್ರ, ನೀನು ಗಂಡಸು, ಅಳಬಾರದು !!</div>
<div style="text-align: justify;">
<br /></div>
<div style="text-align: justify;">
ಇನ್ನು ಇತ್ತೀಚಿನ ರಾಜಕಾರಣಕ್ಕೆ ಬಂದರೆ, ಅಲ್ಲಿ ಅಳು ಸರ್ವ ವ್ಯಾಪಿ. ಬಹುಶ: ದೇವೇ ಗೌಡರು, ಯಡ್ಯೂರಪ್ಪನವರು ರಾಜ್ಯ ಮಟ್ಟದಲ್ಲಿ ಅತ್ತಷ್ಟು ಬೇರಾರೂ ಅತ್ತಿರಲಿಕ್ಕಿಲ್ಲ. ಹಾಗೆಯೇ ರಾಷ್ಟ್ರ ಮಟ್ಟದಲ್ಲಿ ಅಡ್ವಾಣಿಯವರನ್ನು ಈ ವಿಷಯದಲ್ಲಿ ಯಾರೂ ಗೆದ್ದಿಲ್ಲ. ಅಮೇರಿಕದ ಅಧ್ಯಕ್ಷ ಒಬಾಮಾ ಸಹಾ ಆಗಾಗ ಈ ರೀತಯ ಭಾವ ಪರವಶತೆಗೊಳಗಾಗಿ ಗದ್ಗದರಾದ ಬಗ್ಗೆ ಓದಿದ್ದೇವೆ. ಕೆಲವನ್ನು ಇಲ್ಲಿ 'ಮೊಸಳೆ ಕಣ್ಣೀರು' ಅನ್ನ ಬಹುದಾದರೂ, ಅತ್ತವರೆಲ್ಲರೂ ಗಂಡಸರು ಎಂಬ ಹಿನ್ನೆಲೆಯಲ್ಲಿ ಅಳು ಸರ್ವ ವ್ಯಾಪಿ ಎನ್ನಲಡ್ಡಿ ಇಲ್ಲ. ಇದನ್ನೇ ಇನ್ನು ಮತ್ತೊಂದು ದ್ರಷ್ಟಿಯಲ್ಲಿ ಯೋಚಿಸಿದರೆ...ಬಹಿರಂಗವಾಗಿ ಸೋನಿಯಾ ಗಾಂಧಿ ಅತ್ತದ್ದು ಕಡಿಮೆ. ದೂರದ ಮಾತು ಬಿಡಿ, ಯಾವಾಗಲೂ ನಗುತ್ತಲೇ ಇರುವ ನಮ್ಮ ಶೋಭಕ್ಕ...ಅತ್ತದ್ದು ಕಡಿಮೆ.! ಅಳುವ ಗಂಡಸರ ಮತ್ತು ಹೆಂಗಸರ ವಿಷಯದಲ್ಲಿ ನಾವು ಅದೇ ಸೂತ್ರ ಅಳವಡಿಸಿಕೊಂಡರೆ, ಇವರೆಲ್ಲಾ ಏನು ಎಂಬ ಪ್ರಶ್ನೆ ಕಾಡುತ್ತದೆ. </div>
<div style="text-align: justify;">
<br /></div>
<div style="text-align: justify;">
ಜೆಫ್ರಿ ಪ್ಲಾಟ್ಸ್ ಎಂಬೊಬ್ಬ ವ್ಯಕ್ತಿತ್ವ ವಿಕಸನದ ಗುರುವಿನ ಪ್ರಕಾರ ಗಂಡಸು ಹೆಚ್ಚು ಅಳಬೇಕು. ಅದಕ್ಕೆ ಆತ ಐದು ಕಾರಣಗಳನ್ನೂ ಕೊಡುತ್ತಾನೆ. ಮೊದಲೆಯದಾಗಿ ಭಾವನಗೆಳು ನಮ್ಮ ಇಡೀ ದೇಹದಲ್ಲಿ ಪ್ರವಹಿಸುತ್ತಿರುವ, ಯಾವತ್ತೂ ಹೊರ ಬರುವ ಮೂಲಕ ಮಾನಸಿಕ ಗಟ್ಟಿತನವನ್ನು ಹೆಚ್ಚಸುವ ಸಹಜ ಸ್ವಭಾವ. ಅದರ ಹರಿವು ನಿರಾತಂಕವಾಗಿರಬೇಕಾದರೆ, ಅಳುವಿನ ಮೂಲಕ ಅದು ಹೊರ ಬರಬೇಕು. ಒಂದು ರೀತಿಯ್ಲಲಿ ನಮ್ಮ ಜೀವನದ ಪೈಪ್ ಲೈನ್ ನಿರಾತಂಕವಾಗಿರಬೇಕಾದರೆ ಅಳಬೇಕು. ಎರಡನೆಯ ಕಾರಣ ನಿಮ್ಮ ಅಳು ಹೊರ ಪ್ರಪಂಚದ ಜನರಿಗೆ, ನಿಮ್ಮೊಳಗಿನ ಭಾವನೆಯ ಪರಿಚಯವನ್ನು ಮಾಡಿಕೊಡುತ್ತದೆ. ಆ ಮೂಲಕ, ಜನರಿಗೆ ನಾವು ಹತ್ತಿರವಾಗಲು, ಅವರು ನಮ್ಮನ್ನು ಅರ್ಥ ಮಾಡಿಕೊಳ್ಳು ಈ ಅಳು ಸೇತುವಾಗುತ್ತದೆ. ಮೂರನೆಯದಾಗಿ ಅಳುವಿನ ಮೂಲಕ ನಿಮ್ಮ ಭಾವುಕತೆಯನ್ನು ಮತ್ತೆ ಮತ್ತೆ ನಿಯಂತ್ರಿಸಿಕೊಳ್ಳ ಬಹುದು. ಅದಿಲ್ಲವಾದರೆ ಮನದೊಳಗೇ ಹೆಪ್ಪುಗಟ್ಟಿಕೊಂಡಿರುವ ನೋವು, ಭಾವಗಳು ಮುಂದೆ ಮನಸ್ಸನ್ನು ಕೇವಲ ಸಂಕುಚಿತಗೊಳಿಸಿ, ಆತ್ಮಹತ್ಯೆಯೋ, ಮಾನಸಿಕ ವೈಕಲ್ಯಕ್ಕೋ ಕಾರಣವಾಗಬಹುದು. ನಾಲ್ಕನೆಯ ಕಾರಣ ಅಳುವಿನ ಮೂಲಕ ನಿಮ್ಮ ಭಾವನಾತ್ಮಕವಾಗಿ ಸ್ಪಂದಿಸುವ ನರ ನಾಡಿಗಳ ಶಕ್ತಿ ವೃದ್ಧಿಸುತ್ತದೆ!. ಈ ಮೂಲಕ ನಿಮ್ಮ ಉತ್ತಮ ಆರೋಗ್ಯಕ್ಕೂ ಇದು ಸಹಕಾರಿಯಾಗುತ್ತದೆ;ಕಾರಣವಾಗುತ್ತದೆ. ಮತ್ತು ಐದನೆಯ ಕಾರಣವೆಂದರೆ ನಮ್ಮ ಭಾವನೆಗಳು ಮತ್ತು ಮನಸ್ಸಿನಲ್ಲಿರುವ ವಿಚಾರ ಈ ಹಂತದಲ್ಲಿ ಹೆಚ್ಚು ಹೊರ ಬರುತ್ತದೆ ಮತ್ತು ಆ ಮೂಲಕ ಸಮಾಜಕ್ಕೆ ನಾವು ಏನು ಎಂಬುದರ ಪರಿಚಯವಾಗುತ್ತದೆ. ಹೀಗೆ ಅಳುವನ್ನು ನಾವು ಯಾರಿಗೂ, ಹೀಗೆಯೇ ಎಂದು ಸೀಮಿತಗೊಳಿಸಬಾರದು. ಎಂಬುದ ಆ ಮನ;ಶಾಸ್ತ್ರಜ್ಞನ ಅಭಿಮತ. </div>
<div style="text-align: justify;">
<br /></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEh8fpAYEyDdgQYtDvTS52vfCDCjWZfgEIKNBTSIYnb44ZNQ9hDT5LN2ZeEEEh6tdeFobt442fFai90f-Z9N0ZLkTQ0eZDUVqrE6UO5iQJrJ-d188ac9Nc7HA5s9l7ZVbz8kWfi7qvtKm_pA/s1600/cry.jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEh8fpAYEyDdgQYtDvTS52vfCDCjWZfgEIKNBTSIYnb44ZNQ9hDT5LN2ZeEEEh6tdeFobt442fFai90f-Z9N0ZLkTQ0eZDUVqrE6UO5iQJrJ-d188ac9Nc7HA5s9l7ZVbz8kWfi7qvtKm_pA/s1600/cry.jpg" height="320" width="287" /></a></div>
<div style="text-align: justify;">
ಗಂಡಸರು ಅಳಲೇ ಬಾರದು ಎಂಬುದನ್ನು ಆತ್ಮೀಯರೂ, ಹಿತೈಷಿಗಳೂ ಆಗಾಗ ಹೇಳುವುದನ್ನು ಕೇಳಿ, ಇದೇಕೆ ಎಂದು ವಿಶ್ಲೇಷಣೆಗೆ ಕುಳಿತಾಗ ಈ ಎಲ್ಲಾ ವಿಚಾರಗಳು ಹೊಳೆದುವು. ಹುಡುಕುತ್ತಾ ಹೋದಾಗ, ಅನೇಕ ವಿಚಾರಗಳು ತೆರೆದುಕೊಳ್ಳುತ್ತಾ ಹೋದುವು. ನಾವೆಲ್ಲರೂ ನಗು ನಗುತ್ತಿರೋಣ ಎಂಬ ಮಾತನ್ನು ಹೇಳಬೇಕಾದ ಈ ಹೊತ್ತಿನಲ್ಲಿ ಗಂಡಸೇಕೆ ಅಳ ಬಾರದು ಎಂದು ಪ್ರಶ್ನಿಸಿ ನಿಮ್ಮನ್ನೆಲ್ಲಾ ಅಳಿಸುತ್ತಿದ್ದೇನೆ ಎಂದು ಕೊಳ್ಳಬೇಡಿ. ನೋವು-ನಲಿವಿನ ಅಭಿವ್ಯಕ್ತಿಯಲ್ಲಿ ಮನುಷ್ಯ ಮನುಷ್ಯನಂತಾಗುತ್ತಾನೆ ಎಂಬುದು ನನ್ನ ಅನಿಸಿಕೆ. ಈ ಲೇಖನವನ್ನು ಓದುತ್ತಿರುವ ಗಂಡಸು ನೀವಾಗಿದ್ದಲ್ಲಿ, ಇನ್ನು ಸಂಕೋಚ ಬೇಡ, ನಿಮ್ಮ ಭಾವನೆಯನ್ನು ಅದುಮಿಟ್ಟುಕೊಳ್ಳುವ ಪ್ರಯತ್ನದಿಂದ ದಿನವೂ ಹಣ್ಣಾಗದೇ, ಅತ್ತು ಅದನ್ನು ಹೊರಗೆಡವಿಬಿಡಿ!!. ಇದನ್ನು ಓದುತ್ತಿರುವ ಮಹಿಳೆಯರೇ...ಅಳುವ ಗಂಡಸನ್ನು ನೀವು ಖಂಡಿತಕ್ಕೂ ನಂಬಬಹುದು ಮತ್ತು ನೀವು ಅವರ ಬಗ್ಗೆ ಹೆಮ್ಮೆಯನ್ನೂ ಪಟ್ಟುಕೊಳ್ಳಬಹುದು-ಯಾಕೆಂದರೆ ಅವರ ಭಾವುಕತೆ ಎಂದೆಮದಿಗೂ ತೀವ್ರವಾಗಿರುತ್ತದೆ ಮತ್ತು ಸಮಾಜ ಸ್ನೇಹಿಯಾಗಿರುತ್ತೆ. ಅವರೂ ಅಳಲಿ ಬಿಡಿ!!.</div>
<div style="text-align: justify;">
<br /></div>
<div style="text-align: justify;">
ನಗು ನಗುತ್ತಾ ಬದುಕೋಣ, ನೋವನ್ನು ಅತ್ತು ಹೊರ ಹಾಕಿಕೊಳ್ಳುವ ಮೂಲಕ...</div>
<div style="text-align: justify;">
<br /></div>
<div style="text-align: justify;">
<br /></div>
</div>
Anonymoushttp://www.blogger.com/profile/07026221826810784770noreply@blogger.com0tag:blogger.com,1999:blog-6634091388019397795.post-37935932017726501662014-03-13T23:29:00.003-07:002014-03-13T23:29:28.684-07:00ಶೋಷಣೆಯ ಎರಡು ವ್ಯಾಖ್ಯೆಗಳು...<div dir="ltr" style="text-align: left;" trbidi="on">
<div style="text-align: justify;">
<b><span style="color: blue;">ಜನಪ್ರತಿನಿಧಿ ಯ ಅಂಕಣ ಪ್ರದಕ್ಷಿಣೆ ಯಲ್ಲಿ ನನ್ನ ಈ ವಾರದ ಬರಹ </span></b></div>
<div style="text-align: justify;">
<br /></div>
<div style="text-align: justify;">
ಇತ್ತೀಚೆಗೆ ಕಾಲೇಜೊಂದರ ಭಾಷಣ ಸ್ಪರ್ಧೆಯೊಂದರಲ್ಲಿ ತೀರ್ಪುಗಾರನಾಗಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಅದನ್ನು ಒಂದು ಸುವರ್ಣಾವಕಾಶ ಎಂದೇ ಭಾವಿಸಿದ್ದೇನೆ. ಬೆಳಿಗ್ಗೆ ಸಮಯಕ್ಕೆ ಸ್ವಲ್ಪ ಮುಂಚೆಯೇ ಕಾಲೇಜಿಗೆ ಹೋಗಿ, ಸಹ ತೀರ್ಪುಗಾರರಾಗಿದ್ದ ಖ್ಯಾತ ಲೇಖಕಿ ಸತ್ಯಮೂರ್ತಿ ಸುರತ್ಕಲ್ ಅವರ ಜೊತೆ ಮಾತಾಡುತ್ತಾ ನಿಂತಿದ್ದಾಗ, ಅಲ್ಲಿನ ಮಕ್ಕಳ ಕಲರವ ಕಂಡು ಮುದಗೊಂಡ ಅವರು ಒಂದು ಮಾತು ಹೇಳಿದರು. ಈ ಶಾಲೆ-ಕಾಲೇಜಿನ ಅಧ್ಯಾಪಕ-ಉಪನ್ಯಾಸಕರ ಮನಸ್ಸಿಗೆ ವಯಸ್ಸೇ ಆಗುವುದಿಲ್ಲ, ಯಾಕೆಂದರೆ ಅವರ ಸುತ್ತಲೂ ದಿನ ನಿತ್ಯವೂ ಎಳೆಯ ಮನಸ್ಸುಗಳೇ ತುಂಬಿಕೊಂಡು ಅವರನ್ನು ಸದಾ ಉಲ್ಲಸಿತರನ್ನಾಗಿಸಿರುತ್ತದೆ. ಆ ಮಟ್ಟಿಗೆ ಅವರು ಪುಣ್ಯವಂತರು ಎಂದು ಹೇಳುತ್ತಿದ್ದರು. ಅಲ್ಲಿ ಕೆಲವೇ ಕೆಲವು ಹೊತ್ತು ಕಳೆದ ನನಗೂ ಅವರ ಮಾತು ಸತ್ಯವೆನಿಸಿತು.</div>
<div style="text-align: justify;">
<br /></div>
<div style="text-align: justify;">
ಇಲ್ಲಿ ನಾನು ಹೇಳ ಹೊರಟಿರುವ ವಿಷಯ ಬೇರೆ. ಅಂದು ಕಾಲೇಜಿನಲ್ಲಿ ಕನ್ನಡ ಭಾಷಣಕ್ಕೆ ಕೊಟ್ಟಿದ್ದ ವಿಷಯ, ಭಾರತದಲ್ಲಿ ಮಹಿಳೆಯ ಸಮಸ್ಯೆ ಮತ್ತು ರಕ್ಷಣೆ. ೧೭ ವಿದ್ಯಾರ್ಥಿಗಳು ಈ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎಳೆಯ ಮಕ್ಕಳ ಮನಸ್ಸು ಎಂದೆಂದಿಗೂ ಪ್ರಸ್ತುತ ಸಮಸ್ಯೆಯ ಸುತ್ತ ಸುತ್ತುತ್ತಿರುವಾಗ ಅವರು ಅದನ್ನು ವಿಶ್ಲೇಷಣೆಗೆ ಒಡ್ಡಿಕೊಳ್ಳುವ ಪರಿ ಕಂಡು ನಿಜಕ್ಕೂ ಮನ ಒಮ್ಮೆ ಭಾವುಕವಾದರೆ, ಮತ್ತೊಮ್ಮೆ ಈ ಮನ:ಸ್ಥಿತಿಯನ್ನು ನಮ್ಮ ಮಕ್ಕಳಿಗೆ ಒದಗಿಸಿದರೆ ಮುಂದಿನ ಜನಾಂಗ, ಭಾರತ ಹೇಗಾದೀತು ಎಂಬ ನಿರಾಶಾ ಭಾವನೆ ನನ್ನದಾಗಿತ್ತು.</div>
<div style="text-align: justify;">
<br /></div>
<div style="text-align: justify;">
ಅಲ್ಲಿ ಮಾತಾಡಿದ ೧೭ಮಕ್ಕಳುಗಳಲ್ಲಿ, ಕೇವಲ ಇಬ್ಬರು ಮಾತ್ರ ಹುಡುಗರಾಗಿದ್ದರು. ಇದು ಮೊದಲ ನೋಟಕ್ಕೇ ಮಹಿಳೆಯ ಸುರಕ್ಷೆ ಮತ್ತು ಸಮಸ್ಯೆಯ ಬಗ್ಗೆ ಮಾತಾಡಬೇಕಿರುವುದು ಕೇವಲ ಮಹಿಳೆ/ಹುಡುಗಿಯೇ ಆಗಿರಲಿ ಎಂಬ ಸಾಮಾನ್ಯ ಭಾವನೆಯೋ ಎಂಬ ಅನುಮಾನ ಕಾಡಿದಾಗ, ಅದಕ್ಕೆ ಪರಿಹಾರವನ್ನೂ ಸಂಘಟಕರು ಹೇಳಿದಂತೆ ,ಇಂದು ಭಾಷಣ ಅಥವಾ ಇಂತಹಾ ಯಾವುದೇ ಸ್ಪರ್ಧೆಗೆ ಹುಡುಗಿಯರು ಮಾತ್ರ ಅಧಿಕ ಸಂಖ್ಯೆಯಲ್ಲಿರುತ್ತಾರೆ ಎಂದರು. ಅದು ಒತ್ತಟ್ಟಿಗಿಡೋಣ. ಮಾತಾಡಲು ವೇದಿಕೆ ಹತ್ತಿದ ಮಕ್ಕಳ(ಯುವ ಮನಸ್ಸುಗಳು) ಮುಖ್ಯ ಗಮನ ತಮ್ಮ ಶೈಲಿಯತ್ತ ಮತ್ತು ಕಡ ತಂದ ಸಂಸ್ಕೃತ ಶ್ಲೋಕಗಳನ್ನುದ್ಧರಿಸುವತ್ತ ನೆಟ್ಟಿತ್ತು. ಯತ್ರ ನಾರೀ.....ಎಂಬ ಶ್ಲೋಕವನ್ನು ಮತ್ತು ಗಾಂಧೀಜಿಯವರು ಮಧ್ಯ ರಾತ್ರಿ ಹುಡುಗಿಯೊಬ್ಬಳು ನಿರ್ಭಯವಾಗಿ ಮನೆ ಹೊರಗೆ ಹೋದಾಗಲೇ ಭಾರತ ಸ್ವತಂತ್ರ ಎಂಬ ಉಕ್ತಿಯನ್ನು ೧೭ರಲ್ಲಿ ೧೪ ಮಕ್ಕಳು ಪುನರಪಿ ಹೇಳಿದರು!! ಇದನ್ನು ನಾನೂ ತೀರ್ಪುಗಾರನಾಗಿ ನನ್ನ ಮಾತುಗಳಲ್ಲಿ ಹೇಳಿದೆ ಮತ್ತು ಉಳಿದ ಇಬ್ಬರು ತಿರ್ಪುಗಾರರೂ ಇದನ್ನು ಅನುಮೋದಿಸಿದರು. ಉಳಿದಂತೆ ಎಲ್ಲಾ ಮಕ್ಕಳು ಮಾತಾಡಿಕೊಂಡು ಬಂದಿದ್ದಂತೆ ಉಜಿರೆಯ ಸೌಜನ್ಯಾ ಪ್ರಕರಣ, ದೆಹಲಿ-ಮಣಿಪಾಲಗಳ ಗ್ಯಾಂಗ್ ರೇಪ್ ವಿಷಯಗಳನ್ನು ಮತ್ತೆ ಮತ್ತೆ ಹೇಳಿದರು. ಅದನ್ನು ಹೇಳುವಾಗ ಒಂದು ರೀತಿಯ ಕ್ರಾಂತಿಕಾರಿ ಮನೋಭಾವ ಅವರಲ್ಲಿ ಎದ್ದು ಕಾಣುತ್ತಿತ್ತು. </div>
<div style="text-align: justify;">
<br /></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEhaT1jgxESGX0oMuVOVkF_JTgJVozbee0kGah3B4BBlmcC2tZABDQZahh9YdS_B7Qg-ZMtqjNOWCyiGWbeD-b3S6gVLLYbQBk4_11_1Y9UTXTSicFnBqSO-5-z60cpDS2qmnh0YawVzjHFm/s1600/speech.gif" imageanchor="1" style="clear: right; float: right; margin-bottom: 1em; margin-left: 1em;"><img border="0" src="https://blogger.googleusercontent.com/img/b/R29vZ2xl/AVvXsEhaT1jgxESGX0oMuVOVkF_JTgJVozbee0kGah3B4BBlmcC2tZABDQZahh9YdS_B7Qg-ZMtqjNOWCyiGWbeD-b3S6gVLLYbQBk4_11_1Y9UTXTSicFnBqSO-5-z60cpDS2qmnh0YawVzjHFm/s1600/speech.gif" height="200" width="90" /></a>ಅಲ್ಲಿ ನಾವು ಗಮನಿಸಿದ್ದೆಂದರೆ ಎಲ್ಲಾ ಮಕ್ಕಳು ಪ್ರಸ್ತುತ ಘಟನೆಗಳ ಬಗ್ಗೆ ತೆರೆದ ಕಣ್ಣಾಗಿದ್ದಾರೆ ಮತ್ತು ಅದನ್ನು ವಿರೋಧಿಸುವ ಮನೋಭಾವ ಎಲ್ಲರಲ್ಲೂ ಇದೆ. ಆದರೆ ಅಲ್ಲಿ ರೋಷದಿಂದ ವ್ಯವಸ್ಥೆ ಪೂರ್ತಿ ಕೆಟ್ಟುಹೋಗಿದೆ ಎಂಬ ಹತಾಶೆ, ಇನ್ನು ಇಲ್ಲಿ ಏನೂ ಸರಿಯಾಗದೇನೋ ಎಂಬ ನಿರಾಶೆ, ವಿರೋಧಿಸುವುದರಿಂದ ನಮಗೇನಾದೀತೋ ಎಂಬ ಅಳುಕು ಎದ್ದು ಕಾಣುತ್ತಿತ್ತು. ಇನ್ನು ಅಲ್ಲಿ ಮಾತಾಡಿದ ಹೆಚ್ಚಿನ ಹುಡುಗಿಯರು ಪುರುಷರಿರುವುದೇ ಮಹಿಳೆಯ ಶೋಷಣೆ ಮಾಡುವುದು ಮತ್ತು ಪುರುಷ ವರ್ಗಕ್ಕೆ ನಮ್ಮ ಧಿಕ್ಕಾರ ಎಂಬರ್ಥದ ಮಾತುಗಳನ್ನು ಒತ್ತಿ ಒತ್ತಿ ಹೇಳಿದರು. ಮತ್ತೂ ಒಂದು ತಮಾಷೆಯ ಅಥವಾ ಯೋಚಿಸಬೇಕಾದ ವಿಷಯವೆಂದರೆ, ಎಲ್ಲಾ ಹುಡುಗಿಯರೂ ಪ್ರಪಂಚದಲ್ಲಿನ ಪುರುಷರು ಶೋಷಣೆ ಮಾಡುತ್ತಲೇ ಇದ್ದಾರೆ ಎಂದು ಹೇಳಿದರು ಮತ್ತು ಹೆಣ್ಣು ಹೆಣ್ಣೆಂದು ಹೀಗಳೆಯುವಿರೇಕೆ ಎಂದು ಕೂಗಿದರೇ ಹೊರತು, ತಮ್ಮದೇ ಮನೆಯಲ್ಲಿರುವ ಅಣ್ಣ, ತಮ್ಮ, ಅಪ್ಪ...ಹೀಗೆ ಪುರುಷರಿಂದ ಸಿಗುವ ರಕ್ಷಣೆಯ ಬಗ್ಗೆ (ಸಿಗುತ್ತಿರುವ ಅಥವಾ ಸಿಗದಿರುವ!) ಚಕಾರವನ್ನೂ ಎತ್ತಲಿಲ್ಲ!!. ಅಂದರೆ ಇಂದಿನ ಒಟ್ಟೂ ಸಮಾಜ ಮಹಿಳಾ ವಿರೋಧಿಯೇ ಎಂಬಂತೆ ಕಂಡು ಬಂತು!. ಮಹಿಳೆ ಏನನ್ನೂ ಸಾಧಿಸ ಬಲ್ಲಳು ಮತ್ತು ಅದಕ್ಕೆ ಪುರುಷ ವಿರೋಧಿ ಎಂಬಂತೆ ಮಾತುಗಳು ಕೇಳಿಬಂದುವು.</div>
<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEiidUtTQasraTS4cB98UwRlekGexKJLblHLz_YG1234ECOnIzUlbTCKuUjZbmfrZMAfkkgWVXuLs19GqiloPGRCGskRqcIrE_XawKpTp3D81lrr5v_GTIaWpUcGtbWkF_b5k6-RgF8FrE6d/s1600/woman++hh.jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEiidUtTQasraTS4cB98UwRlekGexKJLblHLz_YG1234ECOnIzUlbTCKuUjZbmfrZMAfkkgWVXuLs19GqiloPGRCGskRqcIrE_XawKpTp3D81lrr5v_GTIaWpUcGtbWkF_b5k6-RgF8FrE6d/s1600/woman++hh.jpg" height="200" width="200" /></a></div>
<div style="text-align: justify;">
ಇದು ಒಂದು ಭಾಗವಾದರೆ ಮತ್ತೊಂದು ಭಾಗ ಸ್ವಾರಸ್ಯಕರವಾಗಿದೆ. ಅದೇ ಕಾಲೇಜಿನಲ್ಲಿ ಅದೇ ಮಧ್ಯಾಹ್ನ, ಕರ್ನಾಟಕದ ಇಂದಿನ ಲೋಕಾಯುಕ್ತ ವೈ ಭಾಸ್ಕರ ರಾವ್ ಅವರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮವಿತ್ತು. ಸಂಘಟಕರು ಬಹುಶ: ನಿರೀಕ್ಷಿಸಿದ್ದು ಲೋಕಾಯುಕ್ತರೆನ್ನುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರ, ಪ್ರಜಾಪ್ರಭುತ್ವದ ವಿಚಾರಗಳು ಹೆಚ್ಚು ಚರ್ಚಿತವಾಗಬಹುದು ಎಂದಿದ್ದಿರಬಹುದು. ಆದರೆ ೯೦ಶೇಕಡಾ ವಿದ್ಯಾರ್ಥಿಗಳೇ ತುಂಬಿದ್ದ ಆ ಸಭಾಂಗಣದಲ್ಲಿ ಲೋಕಾಯುಕ್ತರಿಗೆ ಅನೇಕ ಪ್ರಶ್ನೆಗಳು ಬಂದುವು. ಅದರಲ್ಲೂ ಮುಖ್ಯವಾಗಿ ಕೆಲವು ಹುಡುಗರೇ ಇಲ್ಲಿ ಪ್ರಶ್ನೇ ಕೇಳುವುದರಲ್ಲಿ ಮುಂದಿದ್ದರು. ಇಬ್ಬರು ಕೇಳಿದ ಪ್ರಶ್ನೆಗಳ ಸ್ವರೂಪ ಒಂದೇ ಆಗಿತ್ತು ಓರ್ವ ವಿದ್ಯಾರ್ಥಿ, ಇಂದಿನ ಹೆಚ್ಚಿನ ಕೇಸುಗಳಲ್ಲಿ ಮಹಿಳೆ ತನಗಿರುವ ಕಾನೂನಿನ ಸಹಾನುಭೂತಿಯನ್ನು ದುರುಪಯೋಗಪಡಿಸಿಕೊಂಡು ಪುರುಷನನ್ನು ಪೀಡಿಸುವ ಸಂಸ್ಕೃತಿ ಹೆಚ್ಚುತ್ತಿರುವ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಕೇಳಿದಾಗ ಲೋಕಾಯುಕ್ತರು ಇದು ಅತ್ಯಂತ ವಿರಳ ಪ್ರಸಂಗಗಳಲ್ಲಿ ಮಾತ್ರ ಕಂಡು ಬರುತ್ತದೆ ಎಂದರು. ತಕ್ಷಣವೇ, ಮತ್ತೋರ್ವ ಸಾರ್ವಜನಿಕರು ಎದ್ದು ನಿಂತು, ಲೋಕಾಯುಕ್ತರ ಮಾತನ್ನು ಖಂಡಿಸಿ, ಇದು ಹೆಚ್ಚಿನ ಸಂದರ್ಭಗಳಲ್ಲಿ ಆಗುತ್ತದೆ. ಓರ್ವ ಮಹಿಳೆ ವರದಕ್ಷಿಣೆಯ ವಿರುದ್ದ, ಗಂಡನ ಮನೆಯವರ ಮೇಲೆ ಕೇಸು ಹಾಕಿದಾಗ, ಯುಕ್ತಾಯುಕ್ತತೆ, ಸತ್ಯ ಯಾವುದನ್ನೂ ವಿಶ್ಲೇಷಿಸದೇ ಗಂಡನ ಮನೆಯ ಎಲ್ಲರನ್ನೂ ಜೈಲಿಗಟ್ಟಿ ವಿಚಾರಿಸುವ ಪರಿಸ್ಥಿತಿ ಇದೆ. ಇದಕ್ಕೂ ಮಿಗಿಲಾಗಿ, ಕೋರ್ಟ್ನಲ್ಲಿ ವಿಚಾರಣೆ ಆರಂಭವಾಗುವಷ್ಟರಲ್ಲಿಯೇ ಗಂಡ ಮತ್ತು ಮನೆಯವರಿಗೆ ಸಾಕಷ್ಟು ಮಾನಸಿಕ ಹಿಂಸೆ ಆಗಿರುತ್ತದೆ ಎಂದು ಏರು ದನಿಯಲ್ಲಿ ಹೇಳಿದಾಗ ಇಡೀ ಸಭಾಂಗಣ ಸ್ತಬ್ಧವಾಗಿತ್ತು!!. ಕೊನೆಗೆ ಲೋಕಾಯುಕ್ತರೂ ಈ ವಿಚಾರವನ್ನು ಅಲ್ಲಗಳೆಯಲಾಗದು ಎಂದಾಗ ಸಭಾಂಗಣದ ಎಲ್ಲರೂ ಚಪ್ಪಾಳೆ ಹೊಡೆದರು. ಇಂದಿನ ಕಾನೂನಿನಲ್ಲಿ ಮಹಿಳೆಗೆ ನೆರವಾಗುವ ರೀತಿಯ ವಿಶೇಷ ಅನುಕಂಪ ವನ್ನು ೯೫% ಕೇಸುಗಳಲ್ಲಿ ದುರುಪಯೋಗಪಡಿಸಿಕೊಳ್ಳಲಾಗುತ್ತದೆ ಎಂದು ಸಭಾಂಗಣದಲ್ಲಿ ಅನೇಕರು ಹೇಳಿದಾಗ, ಒಂದು ರೀತಿಯ ಆಶ್ಚರ್ಯದ ಚಹರೆ ಅಲ್ಲಿ ನೆಲೆಸಿತ್ತು. </div>
<div style="text-align: justify;">
<br /></div>
<div style="text-align: justify;">
ಎಲ್ಲವೂ ಮುಗಿಸಿ ಹೊರಬಂದಾಗ ಮನಸ್ಸು ಒಂದು ರೀತಿಯ ಗೊಂದಲದಿಂದ ಕೂಡಿತ್ತು. ಎರಡೂ ವಿಚಾರಗಳನ್ನು ಒಮ್ಮೆ ಅವಲೋಕಿಸಿದರೆ ಅನೇಕ ಪ್ರಶ್ನೆಗಳು ಎದುರಾಗುತ್ತವೆ. ಒಂದನೆಯದಾಗಿ ಎಲ್ಲಾ ಮಹಿಳೆಯರೂ ತಮ್ಮನ್ನು ಶೋಷಣೆ ಮಾಡುತ್ತಾರೆ ಎಂದು ಭಾಷಣದಲ್ಲಿ ಖಂಡಿಸಿ, ಇದರ ವಿರುದ್ಧದ ಕೂಗನ್ನು ಗಟ್ಟಿಯಾಗಿ ಹೇಳಿದ್ದರೆ, ಮಧ್ಯಾಹ್ನದ ವೇಳೆಗೆ ಅವರೂ ಇದ್ದ ಸಭಾಂಗಣದಲ್ಲಿನ ಚಿತ್ರಣವೇ ಬೇರೆಯಾಗಿತ್ತು. ಇಲ್ಲಿ ಸಮಸ್ಯೆ ಇದ್ದುದು ಎಲ್ಲಿ ಎಂಬುದಕ್ಕೆ ಸ್ಪಷ್ಟ ಉತ್ತರವೇ ಸಿಗಲಿಲ್ಲ.</div>
<div style="text-align: justify;">
ಸರಿ, ಇಂದು ಮಹಿಳೆಯ ಮೇಲೆ ದೌರ್ಜನ್ಯ, ಶೋಷಣೆ ಹಿಂದಿನಂತೆಯೇ ನಡೆದಿದೆ. ಇದು ಎಲ್ಲೆಡೆಯಲ್ಲಿಯೂ ಕಂಡು ಬರುತ್ತದೆ. ಕೊನೆಗೆ ಎರಡೂ ಕಾರ್ಯಕ್ರಮಗಳ ಬಳಿಕ, ಸ್ನೇಹಿತರಲ್ಲಿ ಲೋಕಾಭಿರಾಮವಾಗಿ ಮಾತಾಡುವಾಗ ಬಂದ ಅಭಿಪ್ರಾಯವೇ ಬೇರೆ. ಅದೆಂದರೆ ಬೆಳಿಗ್ಗೆ ಮಕ್ಕಳು ಹೇಳಿದ್ದೂ, ಮಧ್ಯಾಹ್ನದ ವೇಳೆಗೆ ಚರ್ಚೆಯ ವೇಳೆ ಹೊರ ಬಂದ ವಿಚಾರ ಎರಡೂ ಸರಿಯೇ!!. ಮಕ್ಕಳು ಹೇಳಿದಂತೆ ಮಹಿಳೆಯ ಮೇಲಿನ ದೌರ್ಜನ್ಯ ಮಿತಿ ಮೀರಿದ್ದು ಸರಿ. ಅದನ್ನು ಖಂಡಿಸಿ ಅವರಿಂದು ಮಾತಾಡುತ್ತಿರುವುದೂ ಸರಿ. ಮಹಿಳೆಯರ ಮೇಲಿನ ಕಾನೂನಿನ ಅನುಕಂಪದಿಂದ ಪುರುಷ ಪೀಡೆಯಾಗುತ್ತಿರುವುದೂ ಸರಿಯೇ. ಇಲ್ಲಿ ಸಮಸ್ಯೆ ಏನೆಂದರೆ, ಎರಡೂ ಕಡೆಗಳಲ್ಲಿ ಒಂದು ವಿರೋಧಾಭಾಸ ಇದೆ. ಅದೆಂದರೆ ಮೊದಲ ವಿಷಯದಲ್ಲಿ ಇಂದು 'ನಿಜವಾಗಿಯೂ' ಶೊಷಣೆ, ಪೀಡೆಗೊಳಗಾಗುವ ಮಹಿಳೆ ದೂರನ್ನೇ ಕೊಡುವುದಿಲ್ಲ!. ಅದಕ್ಕೆ ಮತ್ತೆ ಅನೇಕ ಕಾರಣಗಳು ಹುಟ್ಟಿಕೊಳ್ಳುತ್ತವೆ. ಹಾಗೆ ದೂರನ್ನು ಕೊಡಲೇ ಬೇಕಾದರೆ ಆಕೆಗೆ ಮತ್ತೆ ಅನೇಕ ಪ್ರಭಾವಗಳು ಬೇಕಾಗುತ್ತದೆ. ರಾಜಕೀಯ, ಆರ್ಥಿಕ ಬೆಂಬಲ, ಕುಟುಂಬದ ಬೆಂಬಲ...ಹೀಗೆ ಅನೇಕ ವಿಷಯಗಳನ್ನು ಅವಲೋಕಿಸಿ, ಸೂಕ್ಷ್ಮವಾಗಿ ವಿಮರ್ಶಿಸಿಕೊಂಡು ಆಕೆ ದೂರನ್ನು ಕೊಡಬೇಕಾಗುತ್ತದೆ. ಅದು ಆಗುವುದಿಲ್ಲ ಎಂದಾಗ ಆಕೆ ಆ ಶೋಷಣೆಯನ್ನು ಮೌನವಾಗಿ ನುಂಗಿಕೊಳ್ಳುತ್ತಾಳೆ. ಅದೇ ಎರಡನೆಯ ವಿಷಯದಲ್ಲಿ (ಹೆಚ್ಚಿನ ಸಂದರ್ಭಗಳಲ್ಲಿ) ಬೇರೆಯಾಗಿರುತ್ತದೆ. ಈ ಮೇಲೆ ಹೇಳಿದ ಎಲ್ಲಾ ಅನುಕೂಲ ಇರುವ ಮಹಿಳೆಯನ್ನು ಮೇಲಿನ ಪ್ರಭಾವಗಳು 'ಬಳಸಿಕೊಳ್ಳುತ್ತವೆ'. ಇದರ ಪರಿಣಾಮವಾಗಿ ಆಕೆ ದೂರು ಕೊಡುತ್ತಾಳೆ...ಪರಿಸ್ಥಿತಿಯ ವಿಕೋಪಕ್ಕೆ ಸಿಲುಕಿ ಪುರುಷನೂ ಪೀಡನೆಗೊಳಗಾಗುತ್ತಾನೆ!!. ಇದು ಇಂದು ಎಷ್ಟೋ ಕಡೆಗಳಲ್ಲಿ ನಡೆಯುತ್ತಿರುವ, ಆದರೆ ಬಹಿರಂಗವಾಗಿ ಯಾರೂ ಒಪ್ಪಿಕೊಳ್ಳಿದಿರುವ ಸತ್ಯ. ಮತ್ತು ನಮ್ಮ ಸಮಾಜದ ಮಟ್ಟಿಗೆ ದುರಂತವೂ!!</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEjba_tZ90vJe3kfqsPBD9p4Yfeh1Sc7dDLS_DHb2zR9ZekSi5mXNhMxk8bN8EkysxBqi6y605qSPYrzZefduDEk33WkG0pJwDrygHnkr_be9ktLejxvv0rWC99AqzHBz7OweiQ7zlTD6jEm/s1600/woman.jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEjba_tZ90vJe3kfqsPBD9p4Yfeh1Sc7dDLS_DHb2zR9ZekSi5mXNhMxk8bN8EkysxBqi6y605qSPYrzZefduDEk33WkG0pJwDrygHnkr_be9ktLejxvv0rWC99AqzHBz7OweiQ7zlTD6jEm/s1600/woman.jpg" height="200" width="183" /></a></div>
<div style="text-align: justify;">
ಈ ಎಲ್ಲಾ ಅವಲೋಕನದ ನಂತರ, ಓರ್ವ ಮಹಿಳೆಯಲ್ಲಿಯೇ ಈ ಬಗ್ಗೆ ಕೇಳಿದಾಗ ನನ್ನ ಮಾತಿಗೆ ಆಕೆಯ ಸಹಮತವೂ ಇತ್ತು!. ಆಕೆಯ ಅಭಿಪ್ರಾಯದಂತೆ ಇಂದು ಹೆಚ್ಚಿನ ಕುಟುಂಬಗಳಲ್ಲಿ ಆಗುತ್ತಿರುವ ಸಮಸ್ಯೆ ಎಂದರೆ ಮನೆಯಲ್ಲಿ ಗಂಡು ಮಗು ಹುಟ್ಟಿದಾಗ ಅದನ್ನು ಬೆಳೆಸುತ್ತಾರೆ.....ಒಂದು ಮಗುವಿನಂತೆ!. ಅದು ತನ್ನ ಪರಿಸ್ಥಿತಿಗೆ ಹೊಂದಿಕೊಂಡು ಬೆಳೆಯುತ್ತದೆ. ಆದರೆ ಅದೇ ಆ ಮಗು ಹೆಣ್ಣಾಗಿದ್ದರೆ, ಅದನ್ನು 'ಹೆಣ್ಣು ಮಗು'ವಿನಂತೆ ಸಾಕಲಾಗುತ್ತದೆ!! ಹೆಜ್ಜೆ ಹೆಜ್ಜೆಗೂ ಅದನ್ನು ಹೆಣ್ಣು..ಹೆಣ್ಣೆಂಬ ಎಚ್ಚರಿಕೆಯ ನಡುವೆ ಬೆಳೆಸಲಾಗುತ್ತದೆ. ಪರಿಣಾಮವೆಂದರೆ ಆ ಮಗುವಿಗೆ ಸ್ವಲ್ಪ ಬುದ್ದಿ ಬಂತೆಂದರೆ ತಾನು ಪುರುಷನಿಗಿಂತ ಕೆಳಗಿನವಳು, ತನಗೆ ಅವನಿಗಿಂತ ಇತಿ ಮಿತಿಗಳು ಹೆಚ್ಚು ಎಂಬ ಭಾವನೆ ಬೆಳೆಯುತ್ತಾ ಹೋಗುತ್ತದೆ. ಪ್ರಾಥಮಿಕ ವಿದ್ಯಾಭ್ಯಾಸದ ಹಂತದಿಂದಲೂ ಅದನ್ನೇ ಆಕೆಯ ಮನಸ್ಸಿನಲ್ಲಿ ಗಟ್ಟಿ ಮಾಡಲಾಗುತ್ತದೆ. ಕೊನೆಗೆ ಆಕೆಗೆ ತಾನೂ ಎಲ್ಲರಂತೆ ಸ್ವತಂತ್ರಳು ಎಂಬ ಭಾವ ಬರುವಷ್ಟರಲ್ಲಿ, ತನ್ನದೇ ಬುದ್ದಿ ಮತ್ತೆಯಲ್ಲಿ ಅದನ್ನು ವಿಶ್ಲೇಷಿಸುವ ಹಂತದಲ್ಲಿ ಆಕೆಗೆ ಇಡೀ ಪುರುಷ ವ್ಯವಸ್ಥೆ, ತನ್ನನ್ನು ಈ ಕೂಪಕ್ಕೆ ತಳ್ಳಿದೆ ಎಂಬ ಹತಾಶಾ ಹಾಗೂ ವಿರೋಧಿ ಭಾವನೆ ಬಲಿತಿರುತ್ತದೆ. ಆಗ ಈ ಸಂಘರ್ಷಗಳು ಆರಂಭವಾಗುತ್ತವೆ!!. </div>
<div style="text-align: justify;">
<br /></div>
<div style="text-align: justify;">
ಈ ಮಾತನ್ನೂ ಒಪ್ಪಲೇ ಬೇಕು. ಮತ್ತು ಒಂದು ಹಂತದ ತನಕ ಅದು ಸತ್ಯವೂ ಅನಿಸುತ್ತದೆ. ಹೀಗೆ ಮಹಿಳಾ ಶೋಷಣೆ, ಪುರುಷ ಪೀಡೆ...ಅದರದ್ದೇ ಆದ ವ್ಯಾಪ್ತಿಯಲ್ಲಿ ನಡೆಯುತ್ತಲೇ ಇರುತ್ತದೆ. ಈ ಕೂಗು ನಿರಂತರವಾಗಿರುತ್ತದೆ. ಇಲ್ಲಿ ಯೋಚಿಸಬೇಕಾದ ಮತ್ತೊಂದು ವಿಚಾರವೆಂದರೆ, ಗಂಡು ಮಗು ಕೇವಲ ಮನೆಯ ಸದಸ್ಯನಾಗಿ ಬೆಳೆಯುತ್ತಾ, ಮಹಿಳೆ ಎಂದರೆ ಹೀಗೇ ಎಂಬ ಪೂರ್ವಾಗ್ರಹದಿಂದ ಬೆಳೆದಾಗ, ಮುಂದಿನ ಸಾಮಾಜಿಕ ಅನಾಹುತಗಳಿಗೆ ಕಾರಣನಾಗುತ್ತಾನೆ!!. ಇದೂ ಮನೋ ವಿಜ್ಞಾನಕ್ಕೆ ಬರುವ ವಿಷಯವಾದರೂ ಸಾಮಾನ್ಯ ಜ್ಞಾನದಿಂದಲೂ ಅಥೈಸಿಕೊಳ್ಳಬಹುದಾದ ಸತ್ಯ. ಹೇಗೆ ಹೆಣ್ಣು ತನ್ನ 'ತಿಳುವಳಿಕೆ'ಯಿಂದ ತಾನೂ ಪುರುಷನಷ್ಟೇ ಸಮಾನಳು ಎಂದು ಕೊಳ್ಳುತ್ತಾಳೋ, ಹಾಗೆಯೇ ಪುರುಷನೂ ಅಂದುಕೊಂಡರೆ ಅದು ಸಹಜ. ಹಾಗಾದಾಗ ಆತ ಸುಸಂಸ್ಕೃತನೆನಿಸೊಕೊಳ್ಳುತ್ತಾನೆ.</div>
<div style="text-align: justify;">
<br /></div>
<div style="text-align: justify;">
ಆದರೆ ಎರಡೂ ಕಡೆ ವಿರುದ್ದದ ಪರಿಸ್ಥಿತಿಯನ್ನೂ ಅಲ್ಲಗಳೆಯಲಾಗದು. ಹಾಗಾದಾಗ ಈ ರೀತಿಯ ವೈಪರೀತ್ಯಗಳುಉ ನಡೆಯುತ್ತದೆ. ಒಟ್ಟಾರೆಯಾಗಿ ವಿಷಯವನ್ನು ಚಿಂತನೆಯ ಒರೆಗೆ ಹಚ್ಚಿ ಯೋಚಿಸಿದರೆ, ಮಹಿಳೆ-ಪುರುಷ ಇಬ್ಬರೂ ಒಂದಿಲ್ಲೊಂದು ರೀತಿಯ ಶೋಷಣೆಯನ್ನು ಅನುಭವಿಸುತ್ತಿರುತ್ತಾರೆ. ಅಂಕಿ ಸಂಖ್ಯೆಯಲ್ಲಿ ವ್ಯತ್ಯಾಸವಿರಬಹುದಷ್ಟೇ!!</div>
<div style="text-align: justify;">
ಕೊನೆಗೂ ನನಗೆ ಬಹಳ ದೊಡ್ಡ ಪ್ರಶ್ನೆಯಾಗಿ ಕಾಡಿದ್ದು ಮೇಲಿನ ಭಾಷಣ ಸ್ಪರ್ಧೆಯ ವಿಚಾರದಲ್ಲಿ ಯಾವ ಭಾಷಣ ಸ್ಪರ್ಧಿಯೂ ಮಹಿಳೆಯ ಸಮಸ್ಯೆಯ ಪರಿಧಿಯಿಂದ ಹೊರಬಂದು ಆಕೆಯ ರಕ್ಷಣೆಯ ಬಗ್ಗೆ ಮಾತಾಡಲಿಲ್ಲ. ಮಧ್ಯಾಹ್ನವೂ ಲೋಕಾಯುಕ್ತರಿಗೆ ಕೇಳಿದ ಕಾನೂನಿನ ಅನುಕಂಪದಿಂದಾಗುವ ಪುರುಷ ಪೀಡನೆಯ ವಿಷಯದಲ್ಲಿ ಯಾವ ಮಹಿಳೆಯೂ ಮಾತಾಡಲಿಲ್ಲ. ಒಂದು ರೀತಿಯ ದ್ವಂದ್ವ, ಇಂದು ಸಾಮಾಜಿಕವಾಗಿಯೂ ಬೆಳೆದಿದೆ ಅನ್ನಬಹುದು. </div>
<div style="text-align: justify;">
<br /></div>
<div style="text-align: justify;">
<br /></div>
</div>
Anonymoushttp://www.blogger.com/profile/07026221826810784770noreply@blogger.com2tag:blogger.com,1999:blog-6634091388019397795.post-57706248294388966792014-03-06T01:59:00.003-08:002014-03-06T01:59:34.332-08:00 ನಾರಾಯಣ ಶಬರಾಯರಿಗೆ ೨೦೧೪ನೇ ಸಾಲಿನ 'ಸುಮ ಕ್ರಷ್ಣ 'ಯಕ್ಷಗಾನ ಪ್ರಶಸ್ತಿ. <div dir="ltr" style="text-align: left;" trbidi="on">
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
ಅತ್ತೆ ಸುಮತಿ ಮತ್ತು ಮಾವ ಕೃಷ್ಣ ಮೂರ್ತಿ ಇಬ್ಬರೂ ಇನ್ನಿಲ್ಲ. ಮಂದಾರ್ತಿ ಮೇಳದಲ್ಲಿ ದೀರ್ಘ ಅವಧಿಗೆ ಅಡುಗೆ-ಪೂಜೆಯವರಾಗಿದ್ದ ಮಾವ ಯಕ್ಷಗಾನವನ್ನೇ ಜೀವನ ಎಂದುಕೊಂಡು ಬದುಕಿದವರು. ಅತ್ತೆ ಸುಮತಿ, ಯಕ್ಷಗಾನದ ವಿಶೇಷ ಒಲವುಳ್ಳವರು....ಈಗ ಇಬ್ಬರೂ ಕೇವಲ ನೆನಪು. ಅವರಿಗೆ ಗೌರವ ಪೂರ್ವಕವಾಗಿ ಇಬ್ಬರ ಸ್ಮರಣಾರ್ಥ ಈ ವರ್ಷದಿಂದ 'ಸುಮಕೃಷ್ಣ' ಯಕ್ಷಗಾನ ಪ್ರಶಸ್ತಿಯನ್ನು ಆರಂಭಿಸಿದ್ದೆವೆ. ಅವರ ಮಕ್ಕಳು-ಅಳಿಯಂದಿರು ಸೇರಿ ಕೊಡಮಾಡುವ ಈ ಪ್ರಶಸ್ತಿ ಐದು ಸಾವಿರ ರೂಪಾಯಿಯ ಗೌರವಧನ, ಪ್ರಶಸ್ತಿ ಪತ್ರ, ಫಲ<span class="text_exposed_show" style="display: inline;">ಕಗಳನ್ನು ಒಳಗೊಂಡಿರುತ್ತದೆ. ಇದನ್ನು ಅರೆಹೊಳೆ ಪ್ರತಿಷ್ಠಾನ (ರಿ) ಪ್ರತೀ ವರ್ಷ ಕೊಡಮಾಡುತ್ತದೆ. ಈ ವರ್ಷದ 'ಸುಮಕೃಷ್ಣ' ಯಕ್ಷಗಾನ ಪ್ರಶಸ್ತಿ ಗೆ ಬಡಗು-ತೆಂಕಿನ ಖ್ಯಾತ ಭಾಗವರ ಶ್ರೀ ನಾರಾಯಣ ಶಬರಾಯ ಅವರು ಆಯ್ಕೆಯಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ಏಪಿಲ್ 24 ರಂದು ಕೆಂಜೂರು ಸಮೀಪದ ಬಲ್ಲೆಬೈಲಿನಲ್ಲಿರುವ ನಮ್ಮ ಮನೆ 'ನಂದಗೋಕುಲ'ದ ಅಂಗಳದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನೆರವೆರಲಿದೆ. ಅದೇ ರಾತ್ರಿ ಮಂದಾರ್ತಿ ಮೇಳದವರಿಂದ ನಮ್ಮ ವಾರ್ಷಿಕ ಸೇವೆಯಾಗಿ ಯಕ್ಷಗಾನ ನಡೆಯಲಿದೆ.....ತಮಗೆಲ್ಲರಿಗೂ ಇದು ಅಕ್ಕರೆಯ ಸುದ್ದಿ....ಪ್ರೀತಿಯ ಆಹ್ವಾನ...ಆ ದಿನವನ್ನು ನಮಗಾಗಿ ಮೀಸಲಿಡಿ....<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEjOTNi4lgI2h5osEP1-dlWAyC0lKgFUQXp9FJg3vxurxuxPOh2UTVUV2qDi8T9acHqn02OrxyC-KIQuC-nGlbB7pB1EGT9hmCMzuKOURux58H41UZTEvvrDC1bRMU1A6hOUa-ZV3K-ByUnL/s1600/shabaraya.jpg" imageanchor="1" style="margin-left: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEjOTNi4lgI2h5osEP1-dlWAyC0lKgFUQXp9FJg3vxurxuxPOh2UTVUV2qDi8T9acHqn02OrxyC-KIQuC-nGlbB7pB1EGT9hmCMzuKOURux58H41UZTEvvrDC1bRMU1A6hOUa-ZV3K-ByUnL/s1600/shabaraya.jpg" height="320" width="212" /></a></div>
</span></div>
<div class="text_exposed_root text_exposed" id="id_5318456c852bb7e71214552" style="display: inline;">
<div style="text-align: justify;">
</div>
<div style="text-align: center;">
ಸುಮ ಕ್ರಷ್ಣ ಯಕ್ಷಗಾನ ಪ್ರಶಸ್ತಿ ಗೆ ಆಯ್ಕೆಯಾದ </div>
<div style="text-align: center;">
ನಾರಾಯಣ ಶಬರಾಯರಿಗೆ ಅಭಿನಂದನೆಗಳು </div>
<div style="text-align: justify;">
<br /></div>
<div style="text-align: justify;">
</div>
</div>
</div>
Anonymoushttp://www.blogger.com/profile/07026221826810784770noreply@blogger.com0tag:blogger.com,1999:blog-6634091388019397795.post-36034009042770156722014-03-04T20:36:00.002-08:002014-03-04T20:38:15.500-08:00'ಆಕೆ'ಯ ಕಷ್ಟಕ್ಕೆ ಅನೇಕ ಮುಖಗಳು!!<div dir="ltr" style="text-align: left;" trbidi="on">
<div style="text-align: justify;">
<b><span style="color: blue;">ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ನಾನು ಈ ವಾರ ಬರೆದ ಜನಪ್ರತಿನಿಧಿ ಅಂಕಣ, 'ಪ್ರದಕ್ಷಿಣೆ' ಬರಹ..... </span></b></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
ಹೆಣ್ಣು ಹೆಣ್ಣೆಂದು ಹೀಗಳೆಯುವಿರೇಕೆ ನೀವು ಹೆಣ್ಣಲ್ಲವೇ ನಮ್ಮ ಹೆತ್ತ ತಾಯಿ!....ಈ ಕವಿವಾಣಿಯೊಂದೇ ಸಾಕು, ಹೆಣ್ಣು ಎಂದರೇನೆಂದು ವರ್ಣಿಸಲು.</div>
<div style="text-align: justify;">
<br /></div>
<div style="text-align: justify;">
ಮಾರ್ಚ್ ೮ನ್ನು ನಾವು ಅಂತಾರಾಷ್ರೀಯ ಮಹಿಳಾ ದಿನವನ್ನಾಗಿ ಆಚರಿಸಿಕೊಳ್ಳುತ್ತಿದ್ದೇವೆ. ಎಲ್ಲಾ ವಿಶೇಷ ದಿನಗಳಲ್ಲಿ ಮಾಡುವಂತೆ ಈ ದಿನ ನಾವು ಮಹಿಳೆಯ ಗುಣ ಗಾನ ಮಾಡಿ, ಮರುದಿನದಿಂದ ನಮ್ಮ ಸಹಜ ಜೀವನದತ್ತ ತೆರಳಿ ಬಿಡುತ್ತೇವೆ. ಪ್ರೀತಿಗೆ, ಧರ್ಯಕ್ಕೆ, ಸ್ಥೈರ್ಯಕ್ಕೆ, ವಿಶಾಲ ಮನೋಭಾವಕ್ಕೆ, ತ್ಯಾಗಕ್ಕೆ, ಸ್ನೇಹಕ್ಕೆ, ಬಾಂಧವ್ಯಕ್ಕೆ, ಆತ್ಮೀಯತೆಗೆ, ಸಹೋದರತೆಗೆ, ವಾತ್ಸಲ್ಯಕ್ಕೆ...ಹೀಗೆ ಸುಸಂಸ್ಕೃತ ಜೀವನದ ಪ್ರತೀ ಮಗ್ಗುಲಿಗೂ ನಾವು ಉದಾಹರಣೆಯಾಗಿ ಕೊಡುವುದು ಮಹಿಳೆಯನ್ನು. ಓರ್ವ ಮಹಿಳೆಯಲ್ಲಿ ದೈವ ಸ್ವರೂಪವನ್ನೇ ಕಾಣುವುದು ನಮ್ಮ ಭಾರತೀಯ ಸಂಸ್ಕಾರ. ಇದೆಲ್ಲವೂ ಸರಿ.</div>
<div style="text-align: justify;">
ಬಹುಶ: ಗಾಂಧೀಜಿ ಹೇಳಿದ್ದರು ಎನ್ನುವ ಮಾತೊಂದು ಮಹಿಳಾ ದಿನಾಚರಣೆಯಲ್ಲಿ ಮಾತ್ರ 'ಬಳಕೆ'ಯಾಗುತ್ತದೆ. ಓರ್ವ ಮಹಿಳೆ ಮಧ್ಯರಾತ್ರಿ ಸುರಕ್ಷಿತವಾಗಿ ಮನೆ ಸೇರುತ್ತಾಳೆ ಎಂದರೆ ಆಗ ಅದು ನಿಜವಾದ ಸ್ವಾತಂತ್ರ್ಯ ಎಂದವರು ಹೇಳಿದ್ದರಂತೆ. ಆ ಹಿನ್ನೆಲೆಯಲ್ಲಿ ಹೇಳ ಹೊರಟರೆ,ಎದುರು ಕಾಣುವ ನಮ್ಮ ಪ್ರಪಂಚದಲ್ಲಿ ಇಂದು ಹೇಳಿಕೆಯನ್ನು ಬದಲಾಯಿಸಲೇ ಬೇಕು. ಇಂದು ಮಹಿಳೆ ಒಂದೊಮ್ಮೆ ಮಧ್ಯರಾತ್ರಿಯಾದರೂ ಸುರಕ್ಷಿತವಾಗಿ ಮನೆ ತಲುಪಬಹುದು, ಮನೆಯೊಳಗೇ ಆಕೆ ಸುರಕ್ಷಿತಳಾಗಿದ್ದರೆ ಸಾಕು!!.</div>
<div style="text-align: justify;">
<br /></div>
<div style="text-align: justify;">
ಆಶ್ಚರ್ಯವಾಗಬಹುದು ನಿಮಗೆ. ಇಲ್ಲಿ ಮನೆ ಎನ್ನುವುದನ್ನು ನಾನು ಕೇವಲ ಒಂದು ಸಂಕೇತವಾಗಿ ಬಳಸಿಕೊಂಡಿದ್ದೇನೆ. ಮಹಿಳೆ ಎನ್ನುವುದನ್ನು ಕೇವಲ ಇಡೀ ಸ್ತ್ರೀ ಸಮೂಹವಾಗಿ ಕಂಡಿದ್ದೇನೆ. ಮನೆ ಎಂಬಲ್ಲಿ ನೀವು ಕಛೇರಿ, ಮನೆ, ವಿದ್ಯಾಕ್ಷೇತ್ರ, ಕಾರ್ಖಾನೆ, ರಸ್ತೆ.....ಹೀಗೆ ಸಮಾಜದ ಒಟ್ಟೂ ವ್ಯವಸ್ಥೆಯ ಎಲ್ಲಾ ಆಯಗಳನ್ನೂ ಸೇರಿಸಿಕೊಳ್ಳಬಹುದು. ಮಹಿಳೆ ಎಂದರೆ ಅದು ಇಂದು ಹುಟ್ಟಿದ ಹೆಣ್ಣು ಮಗುವಿನಿಂದ ಹಿಡಿದು, ಅತ್ಯಂತ ಹಿರಿಯ ಮಹಿಳೆಯ ತನಕವೂ ಆಗಿರಬಹುದು. ಆಕೆ, ಬೇರಾರೋ ಕಣ್ಣಿಗೆ ಕಾಣದ ಸ್ತ್ರೀಯಿಂದ ಹಿಡಿದು, ನಮ್ಮದೇ ಮನೆಯ ಅಕ್ಕ ತಂಗಿಯರ ತನಕವೂ ಆಗಿರಬಹುದು, ಆಕೆಯನ್ನು ನಾವು ಕಣ್ಣಿಗೆ ಕಾಣದಂತೆ, ಅನೇಕ ರೀತಿಯ ಶೋಷಣೆಗೊಳಪಡಿಸುತ್ತಿರುತ್ತೇವೆ-ನಮ್ಮರಿವಿಗೂ ಬರದಂತೆ!!</div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEh5yoOBsNfg0CSeGyqiEkKfq2Xed5XNnYSY7dMVX7Wqvo42Fi26AjClioR5KgUYcTij1XxH2pGu9KFpfeoXgk-GlCqrHT3ZbIsvtN9YoXSyQfmNZxhZEslljIBOj523D56xeTAqIwrZ8ub_/s1600/woman.1.jpg" imageanchor="1" style="clear: right; float: right; margin-bottom: 1em; margin-left: 1em;"><img border="0" src="https://blogger.googleusercontent.com/img/b/R29vZ2xl/AVvXsEh5yoOBsNfg0CSeGyqiEkKfq2Xed5XNnYSY7dMVX7Wqvo42Fi26AjClioR5KgUYcTij1XxH2pGu9KFpfeoXgk-GlCqrHT3ZbIsvtN9YoXSyQfmNZxhZEslljIBOj523D56xeTAqIwrZ8ub_/s1600/woman.1.jpg" height="166" width="200" /></a></div>
<br />
<div style="text-align: justify;">
<br /></div>
<div style="text-align: justify;">
ಅತ್ಯಂತ ಆತ್ಮೀಯ ಮಹಿಳೆಯಲ್ಲಿ ಒಮ್ಮೆ ಕೇಳಿ ನೋಡಿ-ನಿನಗೆ ಅತೀ ಇಷ್ಟ ಎನಿಸುವ ಭಾವನೆಯನ್ನು ಈ ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳು ಎಂದು. ಆಕೆಯ ಉತ್ತರ ದಲ್ಲಿ ಬಹುಪಾಲು ಈ ಎರಡು ಅಂಶಗಳದ್ದಾಗಿರುತ್ತದೆ. ಒಂದು ಇಡೀ ಸಮಾಜದಲ್ಲಿ ನಿರ್ಭೀತವಾಗಿ ಓಡಾಡಿಕೊಂಡು, ಒಂದೂ ಕೆಟ್ಟ ದೃಷ್ಟಿ ಬೀಳದಂತೆ ಓಡಾಡುವ ವಾತಾವರಣ ಇದ್ದರೆ ಅದೇ ತನಗೆ ಬದುಕು. ಎರಡನೆಯದು- ಓರ್ವ ಮಹಿಳೆ ಸಂಪೂರ್ಣ ಸಂತಸ ಪಡುವುದು ಆಕೆ ಅತ್ಯಂತ ಕಷ್ಟದಲ್ಲಿದ್ದಾಗ, ತನ್ನ ಪ್ರೀತಿ ಪಾತ್ರರು ನಿಜಾರ್ಥದಲ್ಲಿ ನಿಸ್ವಾರ್ಥದಿಂದ ಬೆಂಬಲಿಸಿದಾಗ, ಬೆಂಗಾವಲಾಗಿ ನಿಂತಾಗ!</div>
<div style="text-align: justify;">
<br /></div>
<div style="text-align: justify;">
ಇಂದು ನಾವು ಅನೇಕ ಕಡೆಗಳಲ್ಲಿ ಕಾಣುತ್ತೇವೆ. ಎಷ್ಟೋ ಕಡೆ ವಾಸ್ತವವಾಗಿ ಮಹಿಳಾ ಹೋರಾಟದ ಮಾತಾಡುತ್ತಾ, ತಮ್ಮದೆ ನಾಲ್ಕು ಗೋಡೆಯ ನಡುವೆ ಮಹಿಳೆಯನ್ನು ಹೀನಾಯವಾಗಿ ಕಾಣುವ ಪ್ರವ್ರತ್ತಿ ಇದೆ. ಅದು ಎಷ್ಟು ಭೀಕರವೆಂದರೆ ಕೇವಲ ಊಹಿಸಲೂ ಆಗದಷ್ಟು!!. ಬಹುಶ: ನಂಬಲೂ ಆಗದ ಕಥೆಗಳು ನಿತ್ಯ ನಮ್ಮ ಸಮಾಜದಲ್ಲಿ ಆಗುತ್ತಿರುತ್ತವೆ. ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದೊಂದು ಮಾತಿದೆ. ಇದನ್ನು ತಮಾಷೆಯಾಗಿ ಎಷ್ಟೋ ಕಡೆ ಹೇಳುತ್ತೇವಾದರೂ, ಇದೇ ಸತ್ಯವಾದ ಅದೆಷ್ಟೋ ಉದಾಹರಣೆಗಳು ನಾವು ಒಮ್ಮೆ ತೆರೆದ ಕಣ್ಣಿನಿಂದ ಪ್ರಪಂಚವನ್ನು ನೋಡಿದರೆ ಕಾಣ ಸಿಗುತ್ತದೆ. ಓರ್ವ ಮಹಿಳಾ ಪರ ಹೋರಾಟಗಾರ್ತಿ ಎಂದು ಹೇಳಿಕೊಳ್ಳುತ್ತಾ, ವೇದಿಕೆಯಲ್ಲಿ ಭಾಷಣ ಬಿಗಿಯುತ್ತಾ, ಪತ್ರಿಕೆಗಳಲ್ಲಿ ಲೇಖನ ಬರೆಯುತ್ತಾ...ಪ್ರಸಿದ್ದರಾದ ಮಹಿಳೆಯ ಬಗ್ಗೆ ಆಕೆಯ ವಿದ್ಯಾರ್ಥಿನಿಯೋರ್ವರಲ್ಲಿ ಕೇಳಿದೆ. ಅದಕ್ಕವರು ನೀಡಿದ ಉತ್ತರ ನನ್ನನ್ನು ಬೆಚ್ಚಿ ಬೀಳಿಸಿತು-ಅವರೆಂದರು, ಈ ಶೋಷಣೆ ಎನ್ನುವುದು ಲೈಂಗಿಕವಾಗಿ ಮಾತ್ರ ಎಂದು ನೀವಂದುಕೊಂಡಿದ್ದರೆ ಅದು ತಪ್ಪು, ನಿಜವಾದ ಶೋಷಣೆ ಎಂದರೆ ಏನೆಂದು ಈ ಮೇಡಂ ಹತ್ತಿರ ನೀವು ಕೆಲವು ಸಮಯ ವಿದ್ಯಾರ್ಥಿಯಾಗಿದ್ದುಕೊಂಡರೆ ತಿಳಿಯುತ್ತದೆ!!. ಅದೆಷ್ಟೋ ಸಂದರ್ಭಗಳಲ್ಲಿ ಈ ಮಹಿಳೆಯಿಂದ ನನ್ನನ್ನು ಓರ್ವ ಸರ್ ರಕ್ಷಿಸಿದ್ದರು!! ಎಂಬುದು ಆಕೆಯ ಉತ್ತರವಾಗಿತ್ತು, ಇದರ ವಿರುದ್ದ ನಿಮಗೇಕೆ ದೂರು ಕೊಡಲಾಗುವುದಿಲ್ಲ ಎಂದರೆ ಆಕೆ ಹೇಳುತ್ತಾರೆ, ಹಾಗೇನಾದರೂ ದೂರು ಕೊಡುವುದಕ್ಕಿಂತ ಮೊದಲು ಎರಡು ವಿಷಯ ಯೋಚಿಸಬೇಕಾಗುತ್ತದೆ. ಮೊದಲನೆಯದು ನಾನಲ್ಲಿ ಮುಂದುವರಿಯಬೇಕೇ ಬೇಡವೇ ಎಂಬುದಾದರೆ, ಎರಡನೆಯದು ಈ ದೂರಿನ ನಂತರದ 'ಪ್ರಚಾರ'ವನ್ನು ಎದುರಿಸಿ ಇಡೀ ಬದುಕಿನಲ್ಲಿ ಹೋರಾಡಬಲ್ಲೆನೇ ಎಂಬುದು ಎಂದು ಆಕೆ ಹೇಳುವಾಗ ಆಕೆಯ ಕಣ್ಣಿನಲ್ಲಿ ನೀರು!!</div>
<div style="text-align: justify;">
<br /></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEgl5afdQiZNeyJrXMlnR1Smkk6VKf-2tbmcoHNNDiCOyVUJTLqvYIY1vBqa1Ttn0qn8gHzN64cTxuo-iBthlOhCRBYC4gqB4FR_a7mUbgcYUHtuXCGfyCTJqDrBfNAIAOPK169ZHRSitYgU/s1600/woman.jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEgl5afdQiZNeyJrXMlnR1Smkk6VKf-2tbmcoHNNDiCOyVUJTLqvYIY1vBqa1Ttn0qn8gHzN64cTxuo-iBthlOhCRBYC4gqB4FR_a7mUbgcYUHtuXCGfyCTJqDrBfNAIAOPK169ZHRSitYgU/s1600/woman.jpg" height="200" width="142" /></a>ಇತ್ತೀಚೆಗೆ ನಾವು ದಿನ ಪತ್ರಿಕೆಗಳಲ್ಲಿ ದಿನವೂ ಓದುತ್ತಿರುತ್ತೇವೆ. ಅದೆಷ್ಟೋ ಕಡೆ ತಂದೆಯಿಂದಾಗಿ, ಸಹೋರನಿಂದಾಗಿ, ಚಿಕ್ಕಪ್ಪನಿಂದಾಗಿ.....ಹೀಗೆ ತೀರಾ ಭಾವನಾತ್ಮಕವಾಗಿ ರಕ್ಷಣೆ ಕೊಡಬೇಕಾದವರಿಂದಾಗಿಯೇ ಹೆಣ್ಣು ಗರ್ಭಿಣಿಯಾದ ಬಗ್ಗೆ, ಅತ್ಯಾಚಾರಕ್ಕೊಳಗಾದ ಬಗ್ಗೆ ಓದುತ್ತಿರುತ್ತೇವೆ. ಆಕೆಯ ಮನ:ಸ್ಥಿತಿಯನ್ನು ಒಮ್ಮೆ ಯೋಚಿಸೋಣ. ಇಡೀ ಸಮಾಜ ಆಕೆಯನ್ನು ಮತ್ತು ಆಕೆಯನ್ನು ಮಾತ್ರ ತಪ್ಪಿತಸ್ಥಳನ್ನಾಗಿ ಕಾಣುತ್ತದೆ. ಅದೆಂದಿಗೂ ಅದಕ್ಕೆ ಕಾರಣ ಆಕೆ ಮಾತ್ರ ಎಂಬ 'ನಿರ್ಧಾರ'ದಿಂದ ಹೊರ ಬರುವುದೇ ಇಲ್ಲ. ಇದಕ್ಕೆ ನಿಜವಾಗಿಯೂ ಆಕೆಯನ್ನು ಪರಿಸ್ಥಿತಿಯ ಕೈಗೊಂಬೆಯಾಗಿ ಮಾಡಿ ಬಳಸಿಕೊಂಡ ವ್ಯವಸ್ಥೆಯ ಬಗ್ಗೆ ಅದು 'ಚ'ಕಾರವನ್ನೂ ಎತ್ತದೇ, ಆಕೆಯನ್ನು ಮಾತ್ರ ಕಂಡ ಕಂಡಲ್ಲಿ ಬೆರಳಿಟ್ಟು ತೋರಿಸುತ್ತದೆ. ಇದು ಆಮಾನವೀಯತೆಯ ಅತಿರೇಖ. </div>
<div style="text-align: justify;">
<br /></div>
<div style="text-align: justify;">
ಇನ್ನು ಕೆಲಸ ಮಾಡುವಲ್ಲಿ ಮಹಿಳೆ ಪಡುವ ಬವಣೆ ಯಾರಿಗೂ ಬೇಡ. ಅದೆಷ್ಟೋ ಕಛೇರಿಗಳಲ್ಲಿ ಇಂದಿಗೂ 'ಬಾಸ್' ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕಾದ ದುರವಸ್ಥೆ ಮಹಿಳೆಯದ್ದು. ಮುಖ್ಯವಾಗಿ ಪ್ರಮೋಶನ್, ವರ್ಗಾವಣೆ ಇಂತಾದ್ದು ಅನಿವಾರ್ಯವಾಗಿರುವ ಕಛೇರಿಗಳಲ್ಲಿ ಅದೆಷ್ಟೋ ಮಹಿಳೆ, ಹೇಳಲೂ ಆಗದೇ, ಅನುಭವಿಸಲೂ ಆಗದೇ ಕೊರಗುತ್ತಿರುತ್ತಾಳೆ, ಕಾನೂನು, ಸಮಾಜ, ವ್ಯವಸ್ಥೆ ಎಂದೇನಾದರೂ ವಿಷಯ ಹೊರ ಹಾಕಿದರೆ ಅದೆಲ್ಲವನ್ನೂ ಕೇವಲ ತಮ್ಮ ತಮ್ಮ ಮೂಗಿನ ನೇರದಲ್ಲಿ 'ಬಳಸಿ'ಕೊಳ್ಳುವವರೇ ಹೆಚ್ಚೇ ಹೊರತು, ಅದರಿಂದಾಗಿ ನಿಜವಾದ ನ್ಯಾಯ ಮರೀಚಿಕೆ ಎಂಬುದು ಅನೇಕ ಮಹಿಳೆಯರ ಅಭಿಮತ. ಆಶ್ಚರ್ಯವೆಂದರೆ, ಮಹಿಳಾ ಶೋಷಣೆಯ ವಿರುದ್ಧ ಹೊರಾಡುವ ಘಟಕವೊಂದರ ಸಕ್ರಿಯ ಸದಸ್ಯೆಯೋರ್ವರೇ ಈ ರೀತಿಯ ಶೋಷಣೆಗೊಳಗಾಗಿದ್ದು, ಅದರ ವಿರುದ್ಧ ಹೋರಾಡಲಾರದೇ ಪರಿತಪಿಸಿದ್ದನ್ನು ನಾನು ಓದಿದ್ದೇನೆ!!. ಇನ್ನು ಮಹಿಳೆಯನ್ನು ಯಾರು ರಕ್ಷಿಸಬೇಕು, ಹೇಗೆ ರಕ್ಷಿಸಬೇಕು!!</div>
<div style="text-align: justify;">
<br /></div>
<div style="text-align: justify;">
ಬಹುಶ: ಮಹಿಳಾ ಜೀವನದ ಒಂದೇ ಮಗ್ಗುಲಿನ ಬಗ್ಗೆ ಹೇಳುತ್ತೇನೆ ಎಂದು ಭಾವಿಸಬೇಡಿ. ಆದರೆ ಒಂದಂತೂ ಸತ್ಯವೆಂದು ನಾನು ಮನಗಂಡಿದ್ದೇನೆ, ಅದೆಂದರೆ ಸಮಾಜದ ಯಾವುದೇ ಉನ್ನತ ಸ್ತರದಲ್ಲಿರಲಿ, ಮಹಿಳೆ ಈ ಶೋಷಣೆಯ ಒಂದಾದರೂ ಅನುಭವವನ್ನು ಅಪ್ಪಿಕೊಂಡೇ ಬದುಕ ಬೇಕಾದ ಅನಿವಾರ್ಯತೆ ಇದೆ. ಈ ಲೇಖನದ ತಯಾರಿಯ ದೃಷ್ಟಿಯಲ್ಲಿ ಕೆಲವರನ್ನು ಸಹಜವಾಗಿಯೇ ಕೇಳಿದರೆ, ಶೋಷಣೆಯ ವಿಷಯ ಬಂದಾಗ ಒಬ್ಬೊಬ್ಬರದ್ದೂ ಒಂದೊಂದು ಅನುಭವ ಮತ್ತು ಯಾರೂ ಇದರಿಂದ ಹೊರತಾಗಿಲ್ಲ ಎಂದು ತಿಳಿದಾಗ ಮಾತ್ರ ಆಶ್ಚರ್ಯವಾಯಿತು!!. ಇದು ನಮ್ಮ ದುರಂತ.</div>
<div style="text-align: justify;">
ಇತ್ತೀಚೆಗೆ ಮಂಗಳೂರಿನ ಒಂಟಿ ಮನೆಯಲ್ಲಿದ್ದ ೬೦ರ ಮಹಿಳೆಯನ್ನು ಯಾರೋ ಕೊಂದು ಆಭರಣ ದೋಚಿದ್ದರು. ಮೊದಲಿನ ದಿನದ ಸುದ್ದಿ ಪ್ರಕಾರ ಆಕೆಯ ಆಭರಣ ದೋಚಿದ್ದು ಮಾತ್ರವಲ್ಲದೇ ಆಕೆಯ ಮೇಲೆ ಅತ್ಯಾಚಾರವನ್ನೂ ಮಾಡಿದ್ದರು!!. ನಾಲ್ಕೈದು ದಿನದ ಹಿಂದೆ ಮಂಗಳೂರು ಹೊರವಲಯದಲ್ಲಿ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ೩೫-೪೦ವಯೋಮಾನದ ಮಹಿಳೆಯೋರ್ವಳ ಶವ ಸಿಕ್ಕಿತ್ತು. ಆಕೆ ಎಲ್ಲಿಯವಳು ಯಾರು ಎಂಬುದೇ ತಿಳಿದಿಲ್ಲ, ಆಕೆಯ ಮೇಲೂ ಅತ್ಯಾಚಾರವಾಗಿತ್ತು. ದಕ್ಷಿಣ ಕನ್ನಡವೊಂದರಲ್ಲೇ ಸಾವಿರಾರು ಮಹಿಳೆಯರು ನಾಪತ್ತೆಯಾಗಿ ಎಲ್ಲಿದ್ದಾರೆಂದೇ ತಿಳಿಯುತ್ತಿಲ್ಲ. ಉಜಿರೆಯ ಲಾಡ್ಜ್ ಒಂದರಲ್ಲಿ ಓರ್ವ ಮಹಿಳೆಯನ್ನು ಪ್ರೇಮದ ಹೆಸರಲ್ಲಿ ಮೋಸ ಮಾಡಿ, ಕೊನೆಗೆ ಕೊಲೆ ಮಾಡಿದ ವರದಿಯನ್ನು ನಾವು ಓದಿದ್ದೇವೆ.....ಗಮನಿಸುತ್ತಾ ಹೋದರೆ ದಿನ ನಿತ್ಯ ಇಂತಹ ಅನಾಚಾರಗಳು, ಅತ್ಯಾಚಾರಗಳು ಲೆಕ್ಕವಿಲ್ಲದಷ್ಟೂ ಸಿಗುತ್ತವೆ. ಮಹಿಳೆ ಎಲ್ಲಿ ಸುರಕ್ಷಿತಳು??</div>
<div style="text-align: justify;">
<br /></div>
<div style="text-align: justify;">
ಒಂದೆರಡು ಸ್ವಾನುಭವದೊಂದಿಗೆ ಮುಗಿಸುತ್ತೇನೆ. ಅದೊಂದು ವೇದಿಕೆ. ಅಲ್ಲಿ ಓರ್ವ ಯುವತಿ ಹಾಡು ಹೇಳುತ್ತಿದ್ದಳು. ಆಕೆಯ ಜೊತೆಗೆ ಓರ್ವ ಹುಡುಗನೂ ಹಾಡು ಹೇಳುತ್ತಿದ್ದ. ಅದು 'ಬಾರೇ ಇಲ್ಲಿ ಪಂಕಜ' ಎಂಬ ಸಾಲಿದ್ದ ಹಾಡಾಗಿತ್ತು. ಆಕೆ ಆ ಹಾಡನ್ನು ಹಾಡಿ ವೇದಿಕೆ ಇಳಿದು ಹೋಗುತ್ತಾಳೆ. ಕೆಲವು ಕಾರ್ಯಕ್ರಮಗಳ ಬಳಿಕ, ಆಕೆ ಮತ್ತೆ ಹಾಡಿಗಾಗಿ ವೇದಿಕೆಗೆ ಬರುತ್ತಾಳೆ, ಆಗ ಜನ ಸಂದಣಿಯಿಂದ ಅನೇಕ ಧ್ವನಿಗಳು ಒಟ್ಟಾಗಿ 'ಬಾರೇ ಇಲ್ಲಿ ಪಂಕಜ' ಎಂದು ಜೋರಾಗಿ ಕೇಳಿಬರುತ್ತವೆ!!. ಆಕೆಗಾದರೋ ಭೂಮಿ ಕುಸಿದ ಅನುಭವ. ಆದರೂ ಸಮಾಧಾನ ಚಿತ್ತದಿಂದ ಆಕೆ ಹಾಡನ್ನು ಮುಂದುವರಿಸುತ್ತಾಳೆ. ಆಕೆ ಹಾಡುತ್ತಿರವಾಗೆಲ್ಲಾ ಈ ಕೂಗು ಜನಸಂದಣಿಯ ಅನೇಕರಿಂದ ಕೇಳಿ ಬರುತ್ತಲೇ ಇರುತ್ತದೆ. ಆಕೆಗೆ ಹಾಡು, ಲಯ ಎಲ್ಲವೂ ತಪ್ಪುತ್ತದೆ. ಅಂತೂ ಆಕೆ ವೇದಿಕಯಿಂದ ಹಿಂದೆ ಸರಿದರೆ ಸಾಕೆಂದು ಮುಗಿಸಿ ಹೋಗುತ್ತಾಳೆ. ಕೊನೆಗೆ ಮೊದಲು ಹಾಡಿದ ಹುಡುಗನ ಸರದಿ. ಆತ ವೇದಿಕೆಗೆ ಬರುತ್ತಲೇ ಮತ್ತೆ ಸಭೆಯ ಮಧ್ಯದಿಂದ ಕೂಗು ಕೇಳಿ ಬರುತ್ತದೆ, 'ಪಂಕಜನ್ನ ಕರ್ಕೊಂಡ್ಪಾರೋ'!!</div>
<div style="text-align: justify;">
<br /></div>
<div style="text-align: justify;">
ಇದು ಒಂದು ಸಾಧಾರಣ ವಿಷಯವಾಗಿ ಕಾಣ ಬಹುದು. ಮತ್ತು ಇಂದು ಇಂತಹ ಘಟನೆಗಳು ಸಾಧಾರಣ, ಸಮಾನ್ಯ ಎಂದು ನಾವು ಪರಿಗಣಿಸಿಬಿಡುತ್ತೇವೆ. ಆದರೆ ಅಲ್ಲಿ ಹಾಡುವ ಹುಡುಗಿ ನಮ್ಮ ಅಕ್ಕ-ತಂಗಿಯೋ ಆಗಿದ್ದರೆ ಒಮ್ಮೆ ಮನೆಯಲ್ಲಿ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳೋಣ!!. ಎದೆಗೆ ಭರ್ಚಿ ಚುಚ್ಚಿದ ಅನುಭವವಾಗುತ್ತದೆ!!. ಇಂತಹ ವಿಷಯಗಳಲ್ಲಿ ಪುರುಷ ಯಾವತ್ತೂ ಸುರಕ್ಷಿತ ಎಂಬುದು ನನ್ನ ಭಾವನೆ.</div>
<div style="text-align: justify;">
<br /></div>
<div style="text-align: justify;">
ಒಂದು ಕಡೆ ಇಂತಾದ್ದೇ ಒಂದು ಕಾರ್ಯಕ್ರಮ ನಡೆಯುತ್ತಿತ್ತು. ಓರ್ವ ಕಲಾವಿದೆ ಸಹೋದರಿ, ಕಾರ್ಯಕ್ರಮಕ್ಕೆಂದು ಬಂದಿದ್ದವಳು, ತನ್ನ ಕಾರ್ಯಕ್ರಮಕ್ಕೆ ಸ್ವಲ್ಪ ಸಮಯ ಇದೆ ಎಂದು ನನ್ನ ನಿಲ್ಲಿಸಿದ್ದ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದಳು. ನಾನು ಹೊರಗೆ ನಿಂತಿದ್ದೆ, ಕೆಲವೇ ನಿಮಿಷಗಳ ನಂತರ ನಾನು ಗಮನಿಸಿದ್ದೆಂದರೆ, ನನ್ನ ಕಾರಿನ ಮುಂದೆ ಅನೇಕ ಪಡ್ಡೆ ಹುಡುಗರು ಜಮಾಯಿಸಿ, ಆಕೆಯನ್ನು ನೋಡುತ್ತಾ ಅದೇನೇನೋ ತಮಾಷೆಯಲ್ಲಿ ನಿರತರಾಗಿದ್ದರು. ಆಕೆಯನ್ನು ಕಾರಿನಿಂದಿಳಿಯುವಂತೆ ಹೇಳಿದೆ, ಕೊನೆಗೆ ಆ ಹುಡುಗರ ಪಕ್ಕಕ್ಕೆ ನಾನು ಹೋಗಿ ನಿಂತು ಇಲ್ಲೇನು ಮಾಡುತ್ತೀರೆಂದು ಕೇಳಿದರೆ ಅವಾಚ್ಯ ಶಬ್ದದಿಂದ ಇದು ನಿನ್ನ ಜಾಗವಲ್ಲ, ನಾವೆಲ್ಲಿ ಬೇಕಾದರೂ ನಿಲ್ಲುತ್ತೇವೆ ಎಂಬ ಉತ್ತರ ಬಂತು. ಸಂಬಂಧಿಸಿದವರಲ್ಲಿ ಈ ಬಗ್ಗೆ ಹೇಳಿದರೆ ಆ ಹುಡುಗಿಯನ್ನು ಒಳಗೆ ಕುಳಿತುಕೊಳ್ಳಲು ಹೇಳಿ ಎಂಬ 'ಸಲಹೆ'ನನಗೆ. ಹೀಗಾದರೆ ಯಾರು ಯಾರನ್ನು ತಿದ್ದಬೇಕು, ಸಮಾಜದಲ್ಲಿನ ಓರೆ ಕೋರೆಗೆ ಯಾರು ಕನ್ನಡಿ ಹಿಡಿಯಬೇಕು, ಬೆಕ್ಕಿನ ಕುತ್ತಿಗೆಗೆ ಯಾರು ಘಂಟೆ ಕಟ್ಟಬೇಕು......ಈ ಮಹಿಳಾ ದಿನಾಚರಣೆಯಲ್ಲಿ ಇದೇ ಪ್ರಶ್ನೆ.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
</div>
Anonymoushttp://www.blogger.com/profile/07026221826810784770noreply@blogger.com0tag:blogger.com,1999:blog-6634091388019397795.post-29938806266261524742014-02-26T02:51:00.002-08:002014-02-26T02:51:14.942-08:00ನೇತ್ರಾವತಿ ಬರಿದಾಗುತ್ತಿದ್ದಾಳೆ!!!<div dir="ltr" style="text-align: left;" trbidi="on">
<div style="text-align: justify;">
<b><span style="color: blue;">ಜನಪ್ರತಿನಿಧಿಯ 'ಪ್ರದಕ್ಷಿಣೆ' ಯಲ್ಲಿ ನನ್ನ ಇಂದಿನ ಬರಹ.... </span></b></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
ಮಂಡ್ಯ, ಮೈಸೂರು, ಬೆಂಗಳೂರು ಮತ್ತು ಸುತ್ತ ಮುತ್ತಲಿನ ಜಿಲ್ಲೆಗಳಲ್ಲಿ ಕಾವೇರಿ ನದಿ ನೀರು ಹಂಚಿಕೆಯ ವಿವಾದದ ಬಿಸಿ ಎಲ್ಲರಿಗೂ ಗೊತ್ತು. ಪ್ರತೀ ವರ್ಷ ಇಲ್ಲಿನ ಜನರು, ಕಾವೇರಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುತ್ತಾರೆ. ಅಲ್ಲಿಂದ ಒಂದು ಹನಿ ನೀರು ಹೊರಟಿತು ಎಂದಾದರೆ ಆ ಪ್ರದೇಶಗಳಲ್ಲಿ ಬೆಂಕಿ ಬೀಳುತ್ತದೆ. ಇಲ್ಲಿ ಆಗುವುದು ಕೇವಲ ನದಿ ನೀರಿನ 'ಹಂಚಿಕೆ'ಯೇ ಹೊರತು, ನದಿ 'ತಿರು'ವಲ್ಲ!.</div>
<div style="text-align: justify;">
<br /></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEgKoX-BimGz9ob74od9htSTDT7MpgF8E5oYFyCeIDn7jR5qoAVrp9Sy7WviG_FmI0v11kBCTHEZqyr60rDACTAAbh-Z7gUOEcHoAD-8WSj9VNUPRi3WoH9DN3fS4V95-hotpgoZmLr0eoIA/s1600/netravati1.jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEgKoX-BimGz9ob74od9htSTDT7MpgF8E5oYFyCeIDn7jR5qoAVrp9Sy7WviG_FmI0v11kBCTHEZqyr60rDACTAAbh-Z7gUOEcHoAD-8WSj9VNUPRi3WoH9DN3fS4V95-hotpgoZmLr0eoIA/s1600/netravati1.jpg" height="133" width="200" /></a>ನಾವು ಕರಾವಳಿಯು ಜನತೆ ಶಾಂತಿಪ್ರಿಯರು. ನಮ್ಮಲ್ಲಿದ್ದುದನ್ನು ಹಂಚಿ ತಿನ್ನುವ ಉದಾರ ಮನೋಭಾವದವರು. ಇದು ನಮ್ಮನ್ನು ಇಂದು ದುರಂತದ ಬಾಗಿಲಲ್ಲಿ ನಿಲ್ಲಿಸಿದೆ. ನಮ್ಮ ಜೀವನದಿ ನೇತ್ರಾವತಿ, ನಮ್ಮ ಜಿಲ್ಲೆಯಿಂದ ರಾಜಕಾರಣಿಗಳ ದುರಾಸೆ, ಸ್ವಾರ್ಥ, ದ್ವೇಷ ರಾಜಕಾರಣದಿಂದ ಬೇರೆ ಜಿಲ್ಲೆಗಳಿಗೆ ಹೊರಟಿದ್ದಾಳೆ-ಶಾಶ್ವತವಾಗಿ.</div>
<br />
<span style="text-align: justify;">ಇಂದು ದಕ್ಷಿಣ ಕನ್ನಡದ ಪಾಲಿಗೆ ದುಸ್ವಪ್ನವಾಗಿ ಕಾಡುತ್ತಿರುವುದು ನೇತ್ರಾವತಿ ನದಿ ತಿರುವು ಯೋಜನೆ. ಇದಕ್ಕೆ ಹೆಸರು ಬದಲಾಯೀಸಿ ಎತ್ತಿನಹೊಳೆ ಯೋಜನೆ ಎಂದು ಕರೆದು, ರಾಜ್ಯ ಸರಕಾರ ಜನತೆಯ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಸಕಲೇಶಪುರದ ಎತ್ತಿನಹೊಳೆಯಲ್ಲಿ ನೇತ್ರಾವತಿಯನ್ನು ತಿರುಗಿಸಿ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಿಗೆ ಸುಮಾರು ೨೪ಟಿಎಂಸಿ ನೀರನ್ನು ಒದಗಿಸುವುದು ಈ ಯೋಜನೆಯ ಉದ್ದೇಶ. ಇಂದು ದಕ್ಷಿಣ ಕನ್ನಡಿಗನ ಪಾಲಿಗೆ ಜೀವ ಸೆಲೆಯಾಗಿರುವ ಈ ನೇತ್ರಾವತಿಯನ್ನು ಈ ಮೂಲಕ, ತಿರುಗಿಸಿ, ಇಲ್ಲಿನ ಜನತೆಯ ಪಾಲಿಗೆ ಬರಿದುಗೊಳಿಸಿ, ಅದನ್ನು ಬೇರೆ ಜಿಲ್ಲೆಗಳಿಗೆ ಒದಗಿಸುವ ವ್ಯವಸ್ಥಿತ ಹುನ್ನಾರು ಇದು ಎಂದೇ ಪರಿಗಣಿಸಬೇಕಾಗುತ್ತದೆ. </span><br />
<div style="text-align: justify;">
<br /></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhEvWtFBmYBEOOmAQGKyy7Jz2I1QvIy8_V5QgOewnSdRPg-qcNng0N7ogqlujyBdtkDqL7WwNWv3bUcQwYeu3OB5Ogmz4CR2xfppLzWae41PlqR8APiqxD_QehJRLY4cTrEtf7Y7SxW2f6K/s1600/netravati+3.jpg" imageanchor="1" style="clear: right; float: right; margin-bottom: 1em; margin-left: 1em;"><img border="0" src="https://blogger.googleusercontent.com/img/b/R29vZ2xl/AVvXsEhEvWtFBmYBEOOmAQGKyy7Jz2I1QvIy8_V5QgOewnSdRPg-qcNng0N7ogqlujyBdtkDqL7WwNWv3bUcQwYeu3OB5Ogmz4CR2xfppLzWae41PlqR8APiqxD_QehJRLY4cTrEtf7Y7SxW2f6K/s1600/netravati+3.jpg" height="58" width="200" /></a></div>
<div style="text-align: justify;">
ಅಕ್ಟೋಬರ್ ೨೦೧೩ರಲ್ಲಿ ಬೆಂಗಳೂರು ಮೂಲದ ಅರ್ಘ್ಯಂ ಎಂಬ ಸೇವಾ ಸಂಸ್ಥೆ, ದಕ್ಷಿಣ ಕನ್ನಡ-ಉಡುಪಿ ಭಾಗಕ್ಕೆ ನೀರಿನ ನಿರ್ವಹಣೆಯಲ್ಲಿ ಪರಿಣತ ಸಂಸ್ಥೆಯೊಂದನ್ನು ಕಳುಹಿಸಿ, ಈ ಯೋಜನೆಯ ಸಾಧಕ-ಭಾಧಕದ ಬಗ್ಗೆ ಅಧ್ಯಯನ ಕೈಗೊಂಡಿತ್ತು. ಅಂದು ೮೦೦೦ಕೋಟಿಯ ಈ ಯೋಜನೆಯನ್ನು ಅಧ್ಯಯನ ತಂಡ ತಲೆ ಬುಡವಿಲ್ಲದ ಯೋಜನೆ ಎಂದು ಕರೆದಿತ್ತು. ಅದಕ್ಕೆ ಆ ತಂಡ ರಾಜಸ್ಥಾನದ ಒಂದು ನದಿ ತಿರುವಿನ ಕಥೆಯನ್ನು ಉದಾಹರಣೆಯಾಗಿ ಹೇಳಿತ್ತು. ರಾಜಸ್ಥಾನದ ಆಳಾವಾರ ಜಿಲ್ಲೆಯಲ್ಲಿ ನಂದುವಾಲಿ ಎಂಬ ನದಿಯನ್ನು ೨೨ಕಿಮೀ ಉದ್ದದ ನದಿ ತಿರುವಿನಿಂದಾಗಿ ಮೂರು ದಶಕಗಳಲ್ಲಿ ಆ ನದಿ ಸಂಪೂರ್ಣವಾಗಿ ಬತ್ತಿ ಹೋಗಿತ್ತು!. ಈ ತಿರುವಿನ ಪರಿಣಾಮವಾಗಿ, ಜಿಲ್ಲೆಯ ಸುಮಾರು ೨೮೫ ಬಾವಿಗಳು ಸಂಪೂರ್ಣವಾಗಿ ಬತ್ತಿಹೋಗಿದ್ದುವು. ಜಿಲ್ಲೆಯ ಹಳ್ಳಿ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ೩೫೦ಮಿಮಿ ನಿಂದ ೪೫೦ಮಿಮಿ ತನಕ ಕಡಿಮೆಯಾಯಿತು!. ಇದು ಈ ನಂದುವಲಿ ನದಿ ತಿರುವಿನ ಯೋಜನೆಯ ದುಷ್ಪರಿಣಾಮ. ಪರಿಣಾಮವಾಗಿ ಆಳ್ವಾರ್ ಜಿಲ್ಲೆಯು ಜನರಿಗೂ ಈ ನದಿಯ ನೀರಿಲ್ಲ, ಅದನ್ನು ತಿರುವಿನಿಂದಾಗಿ ಕರೆದುಕೊಂಡು ಹೋದ ಜಿಲ್ಲೆಯ ಜನರಿಗೂ ನೀರಿಲ್ಲ!! ಇದನ್ನು ಉದಾಹರಣೆಯಾಗಿ ನೀಡುತ್ತಾ, ಆ ಅಧ್ಯಯನ ತಂಡ, ನದಿ ತಿರುವು ಯೋಜನೆ ನಿಜಕ್ಕೂ ಅವೈಜ್ಞಾನಿಕ ಎಂದು ಕರೆದಿದೆ. </div>
<div style="text-align: justify;">
<br /></div>
<div style="text-align: justify;">
ಈ ದುರಂತಕ್ಕೆ ಪರಿಹಾರವನ್ನೂ ಈ ತಂಡ ನೀಡಿತ್ತು. ಇಂದು ನಮ್ಮ ರಾಜ್ಯದಲ್ಲಿ ಬೀಳುವ ಮಳೆ ನೀರು ವ್ಯರ್ಥವಾಗಿ ಸಮುದ್ರ ಸೇರಿಯೋ, ಭೂಮಿಯಲ್ಲಿ ಇಂಗಿಯೋ ಹಾಳಾಗುತ್ತಿದ್ದರೆ ಅದನ್ನು ಮಳೆ ನೀರಿನ ಕೊಯ್ಲು ಮುಖಾಂತರ ಉಪಯೋಗಿಸಬಹುದು ಎಂಬುದು ಆ ತಜ್ಷ ತಂಡದ ಅಭಿಮತ. ಥಾರ್ ಜಿಲ್ಲೆಯಲ್ಲಿ ಕೇವಲ ವರ್ಷಕ್ಕೆ ೧೦೦ಮಿಮಿ ಮಳೆ ಬೀಳುವ ಪ್ರದೇಶದಲ್ಲಿ ಈ ರೀತಿಯ ಮಳೆ ನೀರು ಕೊಯ್ಲಿನಿಂದಾಗಿ ನೀರಿನ ಸಮಸ್ಯೆ ಪರಹಾರವಾಗಿರುವ ಉದಾಹರಣೆಗಳನ್ನೂ ಇವರು ನೀಡುತ್ತಾರೆ. ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳಲ್ಲಿ ಸುಮಾರು ೪೦೦೦ಮಿಮಿ ಮಳೆ ಬೀಳುತ್ತಿದ್ದು, ಈ ರೀತಿಯ ಯೋಜನೆಯನ್ನು ಕಾರ್ಯಗತಗೊಳಿಸಿದರೆ, ನೀರಿನ ಸಮಸ್ಯೆಯೇ ಉದ್ಭವಿಸದು ಎಂಬುದು ಅವರ ವಾದ. ಈ ಆಧುನಿಕ ಯೋಜನೆಗಳನ್ನು ರಾಜ್ಯಾದ್ಯಂತ ಜಾರಿಗೆ ತರುವ ಬದಲು, ಸರಕಾರ ಕೈಗೊಂಡಿರುವ ಈ ಯೋಜನೆ, ಕೇವಲ ಸ್ವಾರ್ಥ ರಾಜಕಾರಣದ ಪರಮಾವಧಿ ಎಂಬುದು ಮೇಲ್ನೋಟಕ್ಕೇ ಕಾಣುತ್ತದೆ.</div>
<div style="text-align: justify;">
<br /></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEih5mJ3YdPKg67Hlj6s06GntgmVe3LxMKn8NmTUO9OF2YyorPiKZ1sziFdFXOwMIdz2RsTRNNsgpKzOrV1Sbv1mvQgR9tZ9tNPKB040H794MSiIP5VujYyiJhGjhv2jg-gyzkHzxUJg6fz-/s1600/Netravati+2.jpg" imageanchor="1" style="clear: right; float: right; margin-bottom: 1em; margin-left: 1em;"><img border="0" src="https://blogger.googleusercontent.com/img/b/R29vZ2xl/AVvXsEih5mJ3YdPKg67Hlj6s06GntgmVe3LxMKn8NmTUO9OF2YyorPiKZ1sziFdFXOwMIdz2RsTRNNsgpKzOrV1Sbv1mvQgR9tZ9tNPKB040H794MSiIP5VujYyiJhGjhv2jg-gyzkHzxUJg6fz-/s1600/Netravati+2.jpg" height="132" width="200" /></a>ಇಂದು ಜಿಲ್ಲೆಯಾದ್ಯಂತ ನೇತ್ರಾವತಿ ವಿಷಯದಲ್ಲಿ ಹೋರಾಟ ನಡೆಯುತ್ತಿದೆ. ಈ ಹೋರಾಟವನ್ನು ಕ್ಯಾರೇ ಎನ್ನದ ರಾಜ್ಯ ಸರಕಾರ, ಮಾರ್ಚ್ ಮೂರರಂದು ಚಿಕ್ಕಬಳ್ಳಾಪುರದಲ್ಲಿ ಎತ್ತಿನಹೊಳೆ ಯೋಜನೆಗೆ ಶಿಲಾನ್ಯಾಸ ಹಮ್ಮಿಕೊಂಡಿದೆ. ವಿಪರ್ಯಾಸವೆಂದರೆ ದಕ್ಷಿಣ ಕನ್ನಡದಿಂದ, ಸಕಲೇಶಪುರದ ಮೂಲಕ ಈ ಭಾಗದ ಜನತೆಗೆ ವ್ಯವಸ್ಥಿತವಾಗಿ ವಿಷ ಉಣ್ಣಿಸುವ ಈ ಯೋಜನೆಯ ಫಲ ಪಡೆಯುವ ಚಿಕ್ಕಬಳ್ಳಾಪುರದಲ್ಲಿ ಇದಕ್ಕೆ ಶಿಲಾನ್ಯಾಸ. ಏಕೆಂದರೆ ಇಲ್ಲಿನ ವಿರೋಧಕ್ಕಿಂತ ಮಿಗಿಲಾಗಿ, ನಮ್ಮ ಜಿಲ್ಲೆಯ ರಾಜಕಾರಣಿಗಳಿಗೆ ಅಲ್ಲಿನ ಜನರ ವಿಶ್ವಾಸ ಗಳಿಸಿ, ಮುಂದಿನ ಚುನಾವಣೆಯಲ್ಲಿ ಗೆಲ್ಲುವ ತವಕ. ಶೀಘ್ರವೇ ಘೋಷಣೆಯಾಗುವ ಚುನಾವಣೆ ಮತ್ತು ಅದನ್ನು ಹಿಂಬಾಲಿಸುವ ನೀತಿ ಸಂಹಿತೆಯನ್ನು ಗಮನಿಸಿ, ರಾಜಕಾರಣಿಗಳು ತರಾತುರಿಯಲ್ಲಿ ಈ ಕೆಲಸಕ್ಕೆ ಹೊರಟಿದ್ದಾರೆ. ಇಲ್ಲಿ ಮಹಾ ದುರಂತ ಎಂದರೆ, ಇದನ್ನು ನೇತ್ರತ್ವ ವಹಿಸಿ, ವಿಶೇಷ ಕಾಳಜಿ ವಹಿಸಿ ಮಾಡುತ್ತಿರುವವರು,, ದಕ್ಷಿಣ ಕನ್ನಡದ ಜನತೆಯ ಮೂಲಕ ಆಯ್ಕೆಯಾಗಿ, ಮುಂದೆ ರಾಜ್ಯದ ಮುಖ್ಯಮಂತ್ರಿಯೂ ಆಗಿ, ಬುದ್ದಿಜೀವಿ ರಾಜಕಾರಣಿ ಎಂಬ ಹಣೆ ಪಟ್ಟಿ ಕಟ್ಟಿಕೊಂಡು, ಇಂದು ಕೇಂದ್ರದಲ್ಲಿ ಸಚಿವರಾಗಿರುವ ವೀರಪ್ಪ ಮೊಲಿಯವರು. ಕರ್ನಾಟಕದ ರಾಜ್ಯ ಸರಕಾರ ಈ ಯೋಜನೆಯನ್ನು ಕೈಗೆತ್ತಿಕೊಳ್ಳವಲ್ಲಿ ವಿಶೇಷ ಆಸ್ಥೆ ವಹಿಸಿದ್ದು ಈ ಮೊಲಿಯವರು. ಇಂದಿಗೂ ಈ ಯೋಜನೆಯನ್ನು ಬಲವಾಗಿ ಸಮರ್ಥಿಸಿ, ತಮ್ಮ 'ರಾಜಕೀಯ' ಜೀವನಕ್ಕೆ ನೆರವಾಗುವಂತೆ ಚಿಕ್ಕಬಳ್ಳಾಪುರದ ಜನತೆಯ ಖುಷಿಗಾಗಿ ಹೋರಾಡುತ್ತಿರುವ ಈ ಮೊಲಿಯವರು, ತಾವು ಇನ್ನೊಂದು ಬದಿಯಲ್ಲಿ ದಕ್ಷಿಣ ಕನ್ನಡದ ಜನತೆಗೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಯೋಚಿಸುತ್ತಲೇ ಇಲ್ಲ.</div>
<div style="text-align: justify;">
<br /></div>
<div style="text-align: justify;">
ಇನ್ನು ಉಳಿದ ರಾಜಕಾರಣಿಗಳು. ರಾಜ್ಯ ಸರಕಾರದಲ್ಲಿ ಈ ಭಾಗದ ಸಚಿವರಿದ್ದಾರೆ, ಶಾಸಕರಿದ್ದಾರೆ. ವಿಶೇಷವೆಂದರೆ ಅವರೆಲ್ಲರೂ ಆಳುವ ಪಕ್ಷದ ಶಾಸಕರೇ ಆಗಿದ್ದಾರೆ. ಈ ಭಾಗದ ಜನತೆಯ ಹಿತ ಕಾಯಬೇಕಾದ ಈ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಯೋಜನೆಯ ದುರಂತವನ್ನು ವಿವರವಾಗಿ ತಿಳಿದುಕೊಂಡೂ, ಎಲ್ಲಿ ತಮ್ಮ ರಾಜಕೀಯ ಜೀವನಕ್ಕೆ ಈ ವಿರೋಧ ಸಂಚಕಾರ ತಂದಿತೋ ಎಂಬ ಭಯದಿಂದ ನರಸತ್ತಂತಿದ್ದಾರೆ!. ಇದು ನಮ್ಮ ದುರಂತದ ಮತ್ತೊಂದು ಮುಖ. ಇನ್ನು ಪಕ್ಷಾತೀತವಾಗಿ ಯೋಚಿಸಿದರೆ, ಈ ದುರಂತಕ್ಕೆ ಭಾಜಪದ ನಾಯಕಮಣಿಗಳೂ ಕಾಣಿಕೆ ಕೊಟ್ಟಿದ್ದಾರೆ. ರಾಜ್ಯಕ್ಕೆ ಮುಖ್ಯಮಂತ್ರಿಯಾಗಿದ್ದ ಸದಾನಂದ ಗೌಡರು ಯಾವ ಹೋರಾಟವನ್ನೂ ತೋರಲಿಲ್ಲ ಮತ್ತು ಅವರ ಅವಧಿಯಲ್ಲೇ ಈ ಯೋಜನೆಯ ನೀಲಿ ನಕ್ಷೆ ಸಿದ್ದವಾಗಿತ್ತು ಎಂಬುದು ಮಾತು. ನಳಿನ್ ಕುಮಾರ್ ಕಟೀಲ್ ಎಲ್ಲೂ ಈ ಯೋಜನೆಯ ವಿರುದ್ದ ಗಟ್ಟಿ ದನಿಯಲ್ಲಿ ಮಾತಾಡಿದ್ದೇ ಇಲ್ಲ. ಇಂದಿನ ಸ್ತಿತ್ಯಂತರದಲ್ಲಿ ರಾಜಕಾರಣದ ಬೆಂಬಲವಿಲ್ಲದಿದ್ದರೆ, ಇಂತಹ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಇರುವಾಗ, ನಮ್ಮ ದುರಂತವೆಂದರೆ ಪಕ್ಷಾತೀತವಾಗಿ ಎಲ್ಲಾ ರಾಜಕಾರಣಿಗಳು ಸ್ವಾರ್ಥ ಸಾಧನೆಯಲ್ಲಿ ನಿರತರಾಗಿದ್ದಾರೆ.</div>
<div style="text-align: justify;">
<br /></div>
<div style="text-align: justify;">
ವೀರಪ್ಪ ಮೊಲಿಯವರಂತೂ ಈ ಯೋಜನೆಯನ್ನು ಶತಾಯ ಗತಾಯ ಮಾಡಿಯೇ ಸಿದ್ದ ಎಂದು ಹೇಳಿಕೆ ನೀಡುತ್ತಾ, ಓಡಾಡುತ್ತಿದ್ದಾರೆ. ಇಂತಹ ರಾಜಕಾರಣಿಗಳು, ಜಿಲ್ಲೆಯ ಜನತೆಯ ಪಾಲಿಗೆ ವರದಾನವಾಗುವ ಬದಲು, ದುರಂತವಾಗಿ ಪರಿಣಮಿಸಿದ್ದಾರೆ. ಹೋದೆಡೆಯಲ್ಲಿ, ಬಂದೆಡೆಯಲ್ಲಿ ಇವರ ಮಾತು ಒಂದೇ, ನೇತ್ರಾವತಿ ತಿರುವನ್ನು ಕೈ ಬಿಡುವುದಿಲ್ಲ ಎಂಬುದು. ಇದಕ್ಕೆ ಅವರು ಹಿಂದಿನ ಚುನಾವಣೆಯಲ್ಲಿ ಇಲ್ಲಿ ಸೋತು, ನಂತರ ಚಿಕ್ಕಬಳ್ಳಾಪುರದಲ್ಲಿ ಗೆದ್ದುದಕ್ಕೆ, ಇಲ್ಲಿನ ಜನರ ಮೇಲೆ ಅಘೋಷಿತ ಪ್ರತೀಕಾರಕ್ಕೆ ಮುಂದಾಗಿದ್ದಾರೆ ಎಂಬುದು ಒಂದು ಕಾರಣವಾದರೆ, ಮಗ ಹರ್ಷ ಮೊಲಿಗೆ ಮಂಗಳೂರಿನಲ್ಲಿ ಟಿಕೆಟ್ ಕೊಡಿಸಲು ಕಾಂಗ್ರೆಸ್ ಹೈಕಮಾಂಡ್ಗೆ ಖುಷಿ ಕೊಡುವ ಯತ್ನ ಎಂದೂ ಹೇಳಲಾಗುತ್ತದೆ. ಗಮನಿಸಿ, ಇವರಿಗೆ ಸ್ವಾರ್ಥ ರಾಜಕಾರಣದ ಮುಂದೆ ಜಿಲ್ಲೆ, ರಾಜ್ಯ, ದೇಶ ಏನೂ ಆಲ್ಲ. ಇದಕ್ಕೆ ವೀರಪ್ಪ ಮೊಲಿಯವರು ಇಂದು ತಾಜಾ ಉದಾಹರಣೆಯಾಗಿದ್ದಾರೆ.</div>
<div style="text-align: justify;">
<br /></div>
<div style="text-align: justify;">
ಏನೇ ಇರಲಿ. ಇದು ಒಂದು ಮುಖವಾದರೆ, ಮತ್ತೊಂದು ಮುಖವೂ ಕಳವಳ ಹುಟ್ಟಿಸುತ್ತದೆ. ಈ ಯೋಜನೆಯ ವಿರುದ್ಧದ ಆರಂಭದ ಧ್ವನಿಯಲ್ಲಿ ಶಕ್ತಿಯೇ ಇರಲಿಲ್ಲ. ಜನತೆ ಎಚ್ಚೆತ್ತುಕೊಂಡು ವಿರೋಧ ಆರಂಭಿಸುವಲ್ಲಿ ಕೆಲಸ ಬಹಳ ಮುಂದುವರಿದಿತ್ತು. ದಿನೇಶ್ ಹೊಳ್ಳ, ವಿಜಯಕುಮಾರ ಶೆಟ್ಟಿ, ಮಾಧವ ಉಳ್ಳಾಲ್, ಎಂ ಜಿ ಹೆಗಡೆಯಂತವರು ಆರಂಭದಲ್ಲಿಯೇ ಹೋರಾಟಕ್ಕಿಳಿದರೂ, ಜಿಲ್ಲೆಯ ಜನತೆಯನ್ನು ಸರಕಾರ ಮತ್ತು ಈ ಸ್ವಾರ್ಥ ರಾಜಕಾರಣಿಗಳು ಸಂಪೂರ್ಣ ದಾರಿ ತಪ್ಪಿಸಿದ್ದ ಪರಿಣಾಮ, ಆರಂಭದಲ್ಲಿ ಹೋರಾಟ ಕಾವು ಪಡೆಯಲೇ ಇಲ್ಲ. ಆರಂಭದಿಂದಲೂ ಹೋರಾಟಕ್ಕಿಳಿದಿದ್ದ ನಾಯಕರ ಸತತ ಪರಿಶ್ರಮವಾಗಿ ಇಂದು ಜನತೆ ಇದರ ಘೋರ ದುರಂತದ ಚಿತ್ರಣವನ್ನು ಅರ್ಥ ಮಾಡಿಕೊಂಡಿದ್ದಾರೆ, ಹೋರಾಟಕ್ಕಿಳಿದಿದ್ದಾರೆ. ಇನ್ನೂ ದುರಂತವೆಂದರೆ, ಸಮಾಜದ ಕಣ್ಣಿನಂತಿರುವ ಅನೇಕ ಬುದ್ದಿ ಜೀವಿಗಳು, ಧಾರ್ಮಿಕ ನಾಯಕರು, ಸಹಕಾರಿ ಧುರೀಣರು, ಸಂಘಟನೆಗಳ ಮುಖ್ಯಸ್ಥರು ಕಣಮುಚ್ಚಿ ಕುಳಿತಿದ್ದಾರೆ. ಹೊಳ್ಳರಂತ ನಾಯಕರು, ಕೇವಲ ನಿಸ್ವಾರ್ಥತೆಯಿಂದ ಹೋರಾಡುತ್ತಾ ಅಕ್ಷರಶ: ಅನ್ನ ನೀರು ಬಿಟ್ಟು ಬೀದಿಗಿಳಿದಿದ್ದಾರೆ. ಆದರೆ ಪ್ರಭಾವಿ ನಾಯಕರು ಕುರುಡಾಗಿದ್ದಾರೆ. ನಮಗೇಕೆ ಎಂಬ ಈ ಪರಿಯ ತಾತ್ಸಾರ ಹೀಗೇ ಮುಂದುವರಿದಲ್ಲಿ ಖಂಡಿತಕ್ಕೂ ದಕ್ಷಿಣ ಕನ್ನಡ ಜಿಲ್ಲೆಯ ಮುಂದಿನ ನಾಗರಿಕರು, ಉತ್ತರ ಕರ್ನಾಟಕದ ಜಿಲ್ಲೆಯ ಜನರಂತೆ ಮೈಲಿಗಟ್ಟಲೆ ದೂರದಿಂದ ನೀರನ್ನು ಹೊತ್ತು ತರುವ ದಿನಕ್ಕೆ ದೂರವಿಲ್ಲ!!.</div>
<div style="text-align: justify;">
<br /></div>
<div style="text-align: justify;">
ಈ ನಡುವೆ ಚುನಾವಣೆ ಬಂದಿದೆ. ಲಜ್ಜೆ ಗೆಟ್ಟ ರಾಜಕಾರಣಿಗಳು ಮತ್ತೆ ಮನೆ ಮನೆಗ ಅದೇ ಮುಖ ಹೊತ್ತು ಬರುತ್ತಾರೆ. ಮೊಲಿಯವರು ತಮ್ಮ ಮಗನನ್ನೇ ಕಣಕ್ಕಿಳಿಸುವ ಪ್ರಯತ್ನದಲ್ಲಿದ್ದಾರೆ. ಈ ಯೋಜನೆಯನ್ನು ವಿರೋಧಿಸುವ ಜನಾರ್ದನ ಪೂಜಾರಿಯವರನ್ನು ಹೊರಗಿಡುವ ಯತ್ನದ ಭಾಗವಾಗಿ ಹರ್ಷ ಮೊಲಿಯೂ ಯೋಜನೆಯ ಪರವಾಗಿ ಭಾಷಣ ಬಿಗಿಯುತ್ತಿದ್ದಾರೆ. ಭಾಜಪದಿಂದ ನಳಿನ್ ಕುಮಾರ್ ಕಟೀಲ್ ಮತ್ತೆ ಮನೆ ಬಾಗಿಲಿಗೆ ಬರುತ್ತಿದ್ದಾರೆ. ಆದರೆ ಇಲ್ಲಿನ ಜನತೆ, ಹೋರಾಟಗಾರು, ಯಾವ ನಾಯಕರೂ ಬಹಿರಂಗವಾಗಿ ನೇತ್ರಾವತಿ ಉಳಿಸುವ ಪರ ಮಾತಾಡದಿದ್ದರೆ ಚುನಾವಣೆ ಬಹಿಷ್ಕಾರದ ಬಗ್ಗೆ ಯೋಚಿಸುತ್ತಿದ್ದಾರೆ. ಹೋರಾಟಗಾರರು ಈ ಹಿನ್ನೆಲೆಯಲ್ಲಿ ಜನಾಭಿಯಾನಕ್ಕೂ ಅಣಿಯಾಗಿದ್ದಾರೆ. ನೇತ್ರಾವತಿಯನ್ನು ನಮ್ಮಲ್ಲೇ ಉಳಿಸಿಕೊಳ್ಳುವ ಹೋರಾಟದ ಎಲ್ಲಾ ಯತ್ನಕ್ಕೂ ಬೆಂಬಲ ಬೇಕಾಗಿದೆ. ಮುಖ್ಯವಾಗಿ ಜನತೆ ಬೆಂಬಲಿಸಬೇಕಾಗಿದೆ, ಈ ಬಾಗದ ನಾಯಕರು ಸ್ವಾರ್ಥ ಬದಿಗಿಟ್ಟು ಹೋರಾಡವೇಕಾಗಿದೆ.</div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEicio5gR0fZfvse0PmSsvXQEWeFpAhx9nTNsmj2cWDcSdAdahFnchAyygjbDB_rnmahkCTkjogfusDDf2WVG-IGLKUCmEmeHuj7Rn-0mrkPB8IE-fQvN-G5e2WW5Omf5PvRdlYt0NKDK7ld/s1600/DSC05544.JPG" imageanchor="1" style="clear: left; float: left; margin-bottom: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEicio5gR0fZfvse0PmSsvXQEWeFpAhx9nTNsmj2cWDcSdAdahFnchAyygjbDB_rnmahkCTkjogfusDDf2WVG-IGLKUCmEmeHuj7Rn-0mrkPB8IE-fQvN-G5e2WW5Omf5PvRdlYt0NKDK7ld/s1600/DSC05544.JPG" height="114" width="200" /></a></div>
<div style="text-align: justify;">
<br /></div>
<div style="text-align: justify;">
ಒಂದೇ ಒಂದು ಟಿಪ್ಪಣಿಯೊಂದಿಗೆ ಮುಗಿಸುತ್ತೇನೆ. ಮುಖ್ಯವಾಗಿ ನಮ್ಮ ಭಾಗದಲ್ಲಿ ಅನೇಕ ಪ್ರಭಾವಿ ವ್ಯಕ್ತಿಗಳಿದ್ದಾರೆ. ಧಾರ್ಮಿಕವಾಗಿ, ವ್ಯವಾಹಾರಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ.....ಹೀಗೆ ಎಲ್ಲಾ ರಂಗಗಳಲ್ಲಿಯೂ ಬಹು ಪ್ರಭಾವಿಗಳಿದ್ದಾರೆ. ಮನಸ್ಸು ಮಾಡಿದರೆ ಈ ಸ್ವಾರ್ಥ ರಾಜಕಾರಣಿಗಳನ್ನು ನಿಲ್ಲಿಸಿ, ಈ ಯೋಜನೆಯನ್ನು ನಿಲ್ಲಿಸುವ ಮುಚ್ಚಳಿಕೆ ಬರೆಸಿಕೊಳ್ಳುವ ಶಕ್ತರೂ, ಪ್ರಭಾವಿಗಳೂ ಇಲ್ಲಿದ್ದಾರೆ. ಇಲ್ಲಿ ನೀರು ಕುಡಿದು, ಇಲ್ಲಿನ ಗಾಳಿಯನ್ನು ಉಸಿರಾಡಿ, ಇಲ್ಲಿಂದಲೇ ತಮ್ಮ ನೆಲೆ ಕಂಡುಕೊಂಡು ಇಂದು ಸಾಮಾಜಿಕ ಸ್ಥಾನ ಮಾನಗಳನ್ನು ಅನುಭವಿಸುತ್ತಿದ್ದಾರೆ. ಇವರೆಲ್ಲರಿಗೂ ಈ ಹೋರಾಟದಲ್ಲಿ ನೈತಿಕ ಬಲ ನೀಡಲು ಇರುವ ಅಡ್ಡಿ ಏನು ಎಂಬುದೇ ಪ್ರಶ್ನೆ. ಬಹುಶ: ನೇತ್ರಾವತಿ ಬರಡಾಗುವ ತನಕವೂ ಉತ್ತರಕ್ಕಾಗಿ ಕಾಯಬೇಕೇನೋ!!!.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
</div>
Anonymoushttp://www.blogger.com/profile/07026221826810784770noreply@blogger.com0tag:blogger.com,1999:blog-6634091388019397795.post-88856525827011560852014-02-25T01:49:00.002-08:002014-02-26T21:15:42.187-08:00ಗ್ರಹತಾಪಮಾನದ ಪರಿಣಾಮಗಳು...!<div dir="ltr" style="text-align: left;" trbidi="on">
<div style="text-align: justify;">
<b><span style="color: blue;">ಎಂದೋ ಬರೆದಿಟ್ಟಿದ್ದ ಗ್ರಹತಾಪಮಾನ ಎಂಬ ನಗೆ ಬರಹವನ್ನು ಇಲ್ಲಿ ನೀಡುತ್ತಿದ್ದೇನೆ...ನಿಮಗೂ ಈ ಅನುಭವ ಏನಾದರೂ..??</span></b></div>
<div style="text-align: justify;">
<br /></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEgOj6tN6OEVVHAukRCpo_7jOvKqqN-1u3Q_SgyuJ5TQA39FS1vehtOZIy_9rTVRxsk3k0O77DEFWUyqywO8escFxZKBosl1vRPvbrvPIzquBUEPqLAdhF_Cb7M9_qiFb-tzwrXj3TVd9vSR/s1600/angry-2.jpg" imageanchor="1" style="clear: right; float: right; margin-bottom: 1em; margin-left: 1em;"><img border="0" src="https://blogger.googleusercontent.com/img/b/R29vZ2xl/AVvXsEgOj6tN6OEVVHAukRCpo_7jOvKqqN-1u3Q_SgyuJ5TQA39FS1vehtOZIy_9rTVRxsk3k0O77DEFWUyqywO8escFxZKBosl1vRPvbrvPIzquBUEPqLAdhF_Cb7M9_qiFb-tzwrXj3TVd9vSR/s1600/angry-2.jpg" /></a>ಈ ಭೂತಾಪಮಾನದ ಬಗ್ಗೆ ಎಲ್ಲೆಡೆಯಲ್ಲೂ ಈಗ ಚರ್ಚೆ ನಡೆಯುತ್ತಿದೆ. ಪ್ರಪ೦ಚವೇ ಇದರ ಬಗ್ಗೆ ಚರ್ಚಿಸುತ್ತಿದ್ದರೂ ನನಗೆ ಮಾತ್ರ ಇದು ಅಷ್ಟೇನೂ ಗ೦ಭೀರ ವಿಷಯ ಅನಿಸುತ್ತಲೇ ಇಲ್ಲ!. ಅದೇಕೆ೦ದು ಹುಬ್ಬೇರಿಸಿದಿರಾ? ಏನಿಲ್ಲ, ಈ ಭೂತಾಪಮಾನ ನಮ್ಮಮನೆಯಲ್ಲಿ ದಿನನಿತ್ಯದ ವಿಷಯ. ಬೆಳಗ್ಗೆ ಘ೦ಟೆ ಆರು ಹೊಡೆಯಿತೆ೦ದರೆ, ನಮ್ಮನೆಯೊಳಗೆ ತಾಪಮಾನ ಏರಲಾರ೦ಭಿಸುತ್ತದೆ!. ಇದೇನು,ಬೆಳಗ್ಗ್ಗಿನ ಹೊತ್ತು ಎ೦ದು ಮತ್ತೆ ಹುಬ್ಬೇರಿಸಬೇಡಿ. ನಿಮ್ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳು ಅಥವಾ ಕೆಲಸಕ್ಕೆ ಹೋಗುವ ಹೆ೦ಡತಿ ಇದ್ದರೆ(ಎರಡೂ ಇದ್ದರ೦ತೂ ಮುಗಿದೇ ಹೋಯ್ತು) ನಿಮಗೀ ತಾಪಮಾನದ ಅರ್ಥವಾಗಿರುತ್ತದೆ.</div>
<div style="text-align: justify;">
<br /></div>
<div style="text-align: justify;">
ಮನೆಯಲ್ಲಿ ಮಹಿಳೆಯರ ಕಷ್ಟದ ಬಗ್ಗೆ ಎರಡು ಮಾತಿಲ್ಲ. ಬೆಳಗ್ಗೆದ್ದು ಮನೆಯ ಎಲ್ಲರಿಗೂ ಬೆಡ್ ಟೀ ಯಿ೦ದ ಆರ೦ಭವಾಗುವ ಆಕೆಯ ದಿನಚರಿ, ಬೇಡವೆ೦ದರೂ ತಾಪಮಾನ ಏರಿಸುವುದರಲ್ಲಿ ತಪ್ಪಿಲ್ಲ ಬಿಡಿ. ಈ ತಾಪಮಾನಕ್ಕೆ ಗೃಹ ತಾಪಮಾನ ಎ೦ದೂ ಹೆಸರಿಸಬಹುದೇನೋ. ಅದಿರಲಿ ಬಿಡಿ, ಬೆಳಗ್ಗೆ ನಾನು ನನ್ನ ಮನೆಯಲ್ಲಿ ಈ ತಾಪಮಾನದ ಪರಿಣಾಮವಾಗಿ, ಹೆಚ್ಚಿನ ಸ೦ಧರ್ಭಗಳಲ್ಲಿ ಮೌನಕ್ಕೆ ಶರಣಾಗಿರುತ್ತೇನೆ. ಮನೆಯೊಳಗಣ ಪಾತ್ರೆ ಪಗಡಗಳು ತಾಪಮಾನದ ಪರಿಣಾಮವಾಗಿ ತಮ್ಮ ಶಕ್ತಿಪ್ರದರ್ಶನ ಮಾಡುತ್ತಿರುತ್ತವೆ. ಎಫ್ಎ೦ನಲ್ಲಿ ಬರುತ್ತಿರುವ ಸುಪ್ರಭಾತಕ್ಕೆ ಇವು ಪಕ್ಕವಾದ್ಯ ನುಡಿಸುವ೦ತೆ, ಆದರೆ ತಾಳ ಮೇಳವಿಲ್ಲದೆ 'ನುಡಿದಾಡುತ್ತಿರುತ್ತವೆ'!. </div>
<br />
<div style="text-align: justify;">
<br /></div>
<div style="text-align: justify;">
ಬೆಳಗ್ಗಿನ ತ೦ಪು ಹವೆಯನ್ನೂ ಬಿಸಿ ಮಾಡಬಲ್ಲ ಶಕ್ತಿ ಈ ಗ್ರಹತಾಪಮಾನಕ್ಕಿರುತ್ತದೆ. ವಾಕಿ೦ಗ್ ಮುಗಿಸಿ ಮನೆಯೊಳಹೊಕ್ಕುವ ವೇಳಗೆ, ಇನ್ನೂ ಗ೦ಟೆ ಆರೂವರೆ ಆದರೂ ಏಳದ ಮಗಳ ಮೇಲೆ ಮೊದಲು ತನ್ನ ಬಿಸಿ ಮುಟ್ಟಿಸುವ ಈ ತಾಪಮಾನ, ಮನೆಯೊಳಗೆ ಕಾಲಿಡುತ್ತಲೇ ಸ್ವಭಾವತ: ಸೋಮಾರಿಯಾದ ನನ್ನ ಮೇಲೆ ತನ್ನ ಹಬೆಯಾಡಿಸಲಾರ೦ಭಿಸುತ್ತದೆ!. ಬೇಗ ಸ್ನಾನ ಮಾಡಿ, ದೇವರಿಗೆ ಪೂಜೆ ಮಾಡಿ, ಬೇಗ ತಿ೦ಡಿಗೆ ಬನ್ನಿ ಮಾರಾಯ್ರೇ, ಎಷ್ಟೂ೦ತ ಕರೀ ಬೇಕು...... ಎ೦ಬಿತ್ಯಾದಿ ಬಿಸಿ ಬಿಸಿ ಬಿಗುನುಡಿಗಳು, ಹೊರಗಿನ ವಾಕಿ೦ಗ್ ತಾಪಮಾನವನ್ನಾದರೂ ತಡೆಯಬಹುದು... ಈ ತಾಪಮಾನ ಯಾಕೋ ಅತಿಯಾಗುತ್ತಲ್ಲ ಅನಿಸುತ್ತದೆ! ಮೊದಲೇ ಹೇಳಿದೆನಲ್ಲ... ಮೌನ೦ ಶರಣ೦ ಗಚ್ಚಾಮಿ ಪಾಲಿಸಿಗೆ ನಾನು ಶರಣಾದರೆ ಬಚಾವ್! ಇಲ್ಲವಾದರೆ ಗ್ರಹತಾಪಮಾನದ ಪರಿಣಾಮ ಆಚೀಚೆ ಮನೆಗೆ ಮನೋರ೦ಜನೆ ಒದಗಿಸುವುದರಲ್ಲಿ ಸ೦ದೇಹವೇ ಇಲ್ಲ ಬಿಡಿ.</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEisZeMEr2JlQdeJ4eT1oq97LCbDfNEZZEYAVZq96afwzfCBLJaO4v0BvgBkwSolZvSpoFrKG55QVvXLnPyMdayQGkzJ9zJq6jxCXtY81JeEYCJGzc7DO52MNF9aLPxzzP9bZZ_D04W7Z6RF/s1600/Angry.jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEisZeMEr2JlQdeJ4eT1oq97LCbDfNEZZEYAVZq96afwzfCBLJaO4v0BvgBkwSolZvSpoFrKG55QVvXLnPyMdayQGkzJ9zJq6jxCXtY81JeEYCJGzc7DO52MNF9aLPxzzP9bZZ_D04W7Z6RF/s1600/Angry.jpg" height="175" width="200" /></a></div>
<div style="text-align: justify;">
ಹೆ೦ಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿರೂಪಾಯಿ ಎ೦ದೋ, ಮನೆಯೊಳಗಿರುವ ಹೆ೦ಡತಿ ಎದುರು ನಾನೂ ಒಬ್ಬ ಸಿಪಾಯಿ ಎ೦ದೋ ನಾನ೦ತೂ ಕವಿವಾಣಿ ಉದ್ಘರಿಸುವ ರಿಸ್ಕನ್ನು ಸುಪ್ರಭಾತದ ಗ್ರಹತಾಪಮಾನದ ವೇಳೆಗೆ ತೆಗೆದುಕೊಳ್ಳುವುದೇ ಇಲ್ಲ. ಈ ಎರಡು ಏನಾದರೂ ಒಳ್ಳೆಯ ಮೂಡ್ನೊ೦ದಿಗೆ ಬರುವುದೇನಿದ್ದರೂ, ಹೊರಗಿನ ತಾಪಮಾನ ತನ್ನ ಕಾವೇರಿಸಕೊ೦ಡು, ಮನೆಯೊಳಗಿನ ಕಾವು ಕಡಿಮೆಯಾದ೦ತೆ ಮಾತ್ರ.! ಬೆಳಗ್ಗೆ ಒಮ್ಮೆ ಮಗಳು ಮನೆ ಬಿಟ್ಟು, ಗ್ರಹಲಕ್ಷ್ಮಿ ತನ್ನ ಕೆಲಸಕ್ಕೆ ಹೋಗಿ ಆದ ನ೦ತರ, ಟೆಲಿಫೋನ್ನಲ್ಲಿ ಅಥವಾ ಮುಖತಾ: ಸಿಕ್ಕಲ್ಲಿ, ನಿಜಕ್ಕೂ ಮನೆಯಾಕೆ ಎಷ್ಟು ಒಳ್ಳೆಯವಳು ಅನಿಸದಿರದು. ಬೆಳಗ್ಗೆ ನಡೆದದ್ದೆಲ್ಲ ಕೇವಲ ಗ್ರಹ ತಾಪಮಾನದ ಪರಿಣಾಮ ಎನಿಸತೊಡಗುವುದು ಆಗಲೇ!</div>
<div style="text-align: justify;">
<br /></div>
<div style="text-align: justify;">
ಹೆ೦ಡತಿಯ ಬಗ್ಗೆ ಕವಿ ಏನಾದರೂ ಪ್ರೀತಿಯ ಕವನಗಳನ್ನು ಬರೆದಿದ್ದರೆ ಬೆಳಗ್ಗಿನ ಗ್ರಹತಾಪಮಾನದ ಅವಧಿಯಲ್ಲಲ್ಲವೇ ಅಲ್ಲ ಎ೦ಬುದು ನನ್ನ ಖಚಿತ ನಿರ್ಧಾರ. ಕವಿ ಏನಾದರು ಕೆಲಸಕ್ಕೆ ಹೋಗುವ ಹೆ೦ಡತಿ ಅಥವಾ ಶಾಲೆಗೆ ಹೋಗುವ ಮಕ್ಕಳನಡುವೆ ಈ ಸಾಹಸ ಮಾಡಿರುವ ಸಾಧ್ಯತೆ ಇಲ್ಲವೇ ಇಲ್ಲ. ಏಕೆ೦ದರೆ ಆ ಸಮಯದಲ್ಲಿನ ತಾಪಮಾನ ಖ೦ಡಿತಕ್ಕೂ ಕವಿಮನಸ್ಸು ಅರಳುವಲ್ಲಿ ಸಹಾಯವನ್ನೇ ಮಾಡದು! ಹಾಗೆ೦ದು ಈ ತಾಪಮಾನದಿ೦ದ ಸ೦ಸಾರವೇನೂ ದಿಕ್ಕೆಟ್ಟು ಹೋಗುವುದಿಲ್ಲ ಬಿಡಿ. ಹಾಗೇನಾದರೂ ಅ೦ದುಕೊ೦ಡು, ಇ೦ತಹ ಸ೦ಸಾರದ ಜಾಡು ಹಿಡಿದು ಸ೦ಜೆಯ ವೇಳೆಗೆ ನೀವು ಅತ್ತ ಗಮನಿಸಿದಿರೋ, ಅಲ್ಲಿ ನಿಮಗೆ ಅಚ್ಚರಿ ಕಟ್ಟಿಟ್ಟ ಬುತ್ತಿ. ಅಲ್ಲಿ ಆಗ ನಮ್ಮ ಸ೦ಸಾರ ಆನ೦ದ ಸಾಗರ ಎ೦ಬ ಯುಗಳ ಗೀತೆ ಗುನುಗಾಟ ನಡೆದಿರುತ್ತದೆ!!. ಅ೦ದರೆ ಮನೆಯೊಳಗಣ ಗ್ರಹತಾಪಮಾನದ ಆಯುಷ್ಯ ಕೇವಲ ಒ೦ದೆರಡು ಘ೦ಟೆಗಳದ್ದು ಮಾತ್ರ!. ಎಲ್ಲಾ ಅವರವರ ಕೆಲಸಕ್ಕೆ ಹೋದ ನ೦ತರ ಎಲ್ಲವೂ ಕೂಲ್ ಕೂಲ್... ತ೦ಡಾ ತ೦ಡಾ...! ಅದಕ್ಕೇ ಅಲ್ಲವೇ ತಿಳಿದವರು ಹೇಳುವುದು, ಸ೦ಸಾರದಲ್ಲಿ ಸರಸ ಎ೦ದು!!. </div>
<div style="text-align: justify;">
<br /></div>
<div style="text-align: justify;">
ಒಳಗಡೆ ಪಾತ್ರೆ ಎನೋ ಧಡಕ್ಕೆ೦ದು ಬಿದ್ದ ಶಬ್ದ ಕೇಳುತ್ತಿದೆ. ಇಷ್ಟು ಬರೆದದ್ದು ಯಾವ ಸಮಯದಲ್ಲಿ ಎ೦ದು ಕೇಳಲೇ ಬೇಡಿ. ಉತ್ತರ ಸಿಕ್ಕಿತು ಎ೦ದುಕೊ೦ಡಿದ್ದೇನೆ. ದಯವಿಟ್ಟು ನಿಮ್ಮನೆಯ ಗೃಹತಾಪಮಾನವನ್ನು ಕಡಿಮೆ ಮಾಡಿಕೊಳ್ಳಲು ಬೆಳಗ್ಗೆ ಸ್ವಲ್ಪ ಅಡುಗೆ ಮನೆ ಕಡೆ ಮುಖ ಮಾಡಿ. ನಿಮ್ಮ ಸ೦ಸಾರ ಆನ೦ದಸಾಗರವಾಗಲಿ!!</div>
<div style="text-align: justify;">
<br /></div>
<div style="text-align: justify;">
<br /></div>
</div>
Anonymoushttp://www.blogger.com/profile/07026221826810784770noreply@blogger.com0