Tuesday 25 December 2012

ಗ್ರೃಹತಾಪಮಾನದ ಪರಿಣಾಮಗಳು...!



ಹಿಂದೊಮ್ಮೆ ಭಾಮಿನಿ ಕನ್ನಡ ಮಾಸಿಕದಲ್ಲಿ ಪ್ರಕಟವಾಗಿದ್ದ ನನ್ನ ಬರಹವನ್ನು ಇಂದು ಬ್ಲಾಗಿನೊಳಗೆ ತುರುಕಿಸುತ್ತಿದ್ದೇನೆ ನಿಮ್ಮ ಪರಿಸ್ತಿತಿಯೂ ಹೀಗೇ ಇದ್ದಾರೆ, ಅದಕ್ಕೆ ನಾನು ಜವಾಬ್ದಾರನಲ್ಲ ಎಂಬ  ಸ್ಪಷ್ಟೀಕರಣ ನನ್ನದು.  ಓದಿ, ನಿಮ್ಮ ಅಭಿಪ್ರಾಯಕಳಿಸಿದರೆ ನಾನು ಋಣಿ......ಓದಿದರೆ ಚಿರಋಣಿ....

ಈ ಭೂತಾಪಮಾನದ ಬಗ್ಗೆ ಎಲ್ಲೆಡೆಯಲ್ಲೂ ಈಗ ಚರ್ಚೆ ನಡೆಯುತ್ತಿದೆ. ಪ್ರಪ೦ಚವೇ ಇದರ ಬಗ್ಗೆ ಚರ್ಚಿಸುತ್ತಿದ್ದರೂ ನನಗೆ ಮಾತ್ರ ಇದು ಅಷ್ಟೇನೂ ಗ೦ಭೀರ ವಿಷಯ ಅನಿಸುತ್ತಲೇ ಇಲ್ಲ!. ಅದೇಕೆ೦ದು ಹುಬ್ಬೇರಿಸಿದಿರಾ? ಏನಿಲ್ಲ, ಈ ಭೂತಾಪಮಾನ ನಮ್ಮಮನೆಯಲ್ಲಿ ದಿನನಿತ್ಯದ ವಿಷಯ. ಬೆಳಗ್ಗೆ ಘ೦ಟೆ ಆರು ಹೊಡೆಯಿತೆ೦ದರೆ, ನಮ್ಮನೆಯೊಳಗೆ ತಾಪಮಾನ ಏರಲಾರ೦ಭಿಸುತ್ತದೆ!. ಇದೇನು,ಬೆಳಗ್ಗ್ಗಿನ ಹೊತ್ತು ಎ೦ದು ಮತ್ತೆ ಹುಬ್ಬೇರಿಸಬೇಡಿ. ನಿಮ್ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳು ಅಥವಾ ಕೆಲಸಕ್ಕೆ ಹೋಗುವ ಹೆ೦ಡತಿ ಇದ್ದರೆ(ಎರಡೂ ಇದ್ದರ೦ತೂ ಮುಗಿದೇ ಹೋಯ್ತು) ನಿಮಗೀ ತಾಪಮಾನದ ಅರ್ಥವಾಗಿರುತ್ತದೆ.

ಮನೆಯಲ್ಲಿ ಮಹಿಳೆಯರ ಕಷ್ಟದ ಬಗ್ಗೆ ಎರಡು ಮಾತಿಲ್ಲ. ಬೆಳಗ್ಗೆದ್ದು ಮನೆಯ ಎಲ್ಲರಿಗೂ ಬೆಡ್ ಟೀ ಯಿ೦ದ ಆರ೦ಭವಾಗುವ ಆಕೆಯ ದಿನಚರಿ, ಬೇಡವೆ೦ದರೂ ತಾಪಮಾನ ಏರಿಸುವುದರಲ್ಲಿ ತಪ್ಪಿಲ್ಲ ಬಿಡಿ. ಈ ತಾಪಮಾನಕ್ಕೆ ಗೃಹ ತಾಪಮಾನ ಎ೦ದೂ ಹೆಸರಿಸಬಹುದೇನೋ. ಅದಿರಲಿ ಬಿಡಿ, ಬೆಳಗ್ಗೆ ನಾನು ನನ್ನ ಮನೆಯಲ್ಲಿ ಈ ತಾಪಮಾನದ ಪರಿಣಾಮವಾಗಿ, ಹೆಚ್ಚಿನ ಸ೦ಧರ್ಭಗಳಲ್ಲಿ ಮೌನಕ್ಕೆ ಶರಣಾಗಿರುತ್ತೇನೆ. ಮನೆಯೊಳಗಣ ಪಾತ್ರೆ ಪಗಡಗಳು ತಾಪಮಾನದ ಪರಿಣಾಮವಾಗಿ ತಮ್ಮ ಶಕ್ತಿಪ್ರದರ್ಶನ ಮಾಡುತ್ತಿರುತ್ತವೆ. ಎಫ್‌ಎ೦ನಲ್ಲಿ ಬರುತ್ತಿರುವ ಸುಪ್ರಭಾತಕ್ಕೆ ಇವು ಪಕ್ಕವಾದ್ಯ ನುಡಿಸುವ೦ತೆ, ಆದರೆ ತಾಳ ಮೇಳವಿಲ್ಲದೆ ’ನುಡಿದಾಡುತ್ತಿರುತ್ತವೆ’!.

ಬೆಳಗ್ಗಿನ ತ೦ಪು ಹವೆಯನ್ನೂ ಬಿಸಿ ಮಾಡಬಲ್ಲ ಶಕ್ತಿ ಈ ಗ್ರಹತಾಪಮಾನಕ್ಕಿರುತ್ತದೆ. ವಾಕಿ೦ಗ್ ಮುಗಿಸಿ ಮನೆಯೊಳಹೊಕ್ಕುವ ವೇಳಗೆ, ಇನ್ನೂ ಗ೦ಟೆ ಆರೂವರೆ ಆದರೂ ಏಳದ ಮಗಳ ಮೇಲೆ ಮೊದಲು ತನ್ನ ಬಿಸಿ ಮುಟ್ಟಿಸುವ ಈ ತಾಪಮಾನ, ಮನೆಯೊಳಗೆ ಕಾಲಿಡುತ್ತಲೇ ಸ್ವಭಾವತ: ಸೋಮಾರಿಯಾದ ನನ್ನ ಮೇಲೆ ತನ್ನ ಹಬೆಯಾಡಿಸಲಾರ೦ಭಿಸುತ್ತದೆ!. ಬೇಗ ಸ್ನಾನ ಮಾಡಿ, ದೇವರಿಗೆ ಪೂಜೆ ಮಾಡಿ, ಬೇಗ ತಿ೦ಡಿಗೆ ಬನ್ನಿ ಮಾರಾಯ್ರೇ, ಎಷ್ಟೂ೦ತ ಕರೀ ಬೇಕು...... ಎ೦ಬಿತ್ಯಾದಿ ಬಿಸಿ ಬಿಸಿ ಬಿಗುನುಡಿಗಳು, ಹೊರಗಿನ ವಾಕಿ೦ಗ್ ತಾಪಮಾನವನ್ನಾದರೂ ತಡೆಯಬಹುದು... ಈ ತಾಪಮಾನ ಯಾಕೋ ಅತಿಯಾಗುತ್ತಲ್ಲ ಅನಿಸುತ್ತದೆ! ಮೊದಲೇ ಹೇಳಿದೆನಲ್ಲ... ಮೌನ೦ ಶರಣ೦ ಗಚ್ಚಾಮಿ ಪಾಲಿಸಿಗೆ ನಾನು ಶರಣಾದರೆ ಬಚಾವ್! ಇಲ್ಲವಾದರೆ ಗ್ರಹತಾಪಮಾನದ ಪರಿಣಾಮ ಆಚೀಚೆ ಮನೆಗೆ ಮನೋರ೦ಜನೆ ಒದಗಿಸುವುದರಲ್ಲಿ ಸ೦ದೇಹವೇ ಇಲ್ಲ ಬಿಡಿ.
ಹೆ೦ಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿರೂಪಾಯಿ ಎ೦ದೋ, ಮನೆಯೊಳಗಿರುವ ಹೆ೦ಡತಿ ಎದುರು ನಾನೂ ಒಬ್ಬ ಸಿಪಾಯಿ ಎ೦ದೋ ನಾನ೦ತೂ ಕವಿವಾಣಿ ಉದ್ಘರಿಸುವ ರಿಸ್ಕನ್ನು ಸುಪ್ರಭಾತದ ಗ್ರಹತಾಪಮಾನದ ವೇಳೆಗೆ ತೆಗೆದುಕೊಳ್ಳುವುದೇ ಇಲ್ಲ.  ಈ ಎರಡು ಏನಾದರೂ ಒಳ್ಳೆಯ ಮೂಡ್‌ನೊ೦ದಿಗೆ ಬರುವುದೇನಿದ್ದರೂ, ಹೊರಗಿನ ತಾಪಮಾನ ತನ್ನ ಕಾವೇರಿಸಕೊ೦ಡು, ಮನೆಯೊಳಗಿನ ಕಾವು ಕಡಿಮೆಯಾದ೦ತೆ ಮಾತ್ರ.! ಬೆಳಗ್ಗೆ ಒಮ್ಮೆ ಮಗಳು ಮನೆ ಬಿಟ್ಟು, ಗ್ರಹಲಕ್ಷ್ಮಿ ತನ್ನ ಕೆಲಸಕ್ಕೆ ಹೋಗಿ ಆದ ನ೦ತರ, ಟೆಲಿಫೋನ್‌ನಲ್ಲಿ ಅಥವಾ ಮುಖತಾ: ಸಿಕ್ಕಲ್ಲಿ, ನಿಜಕ್ಕೂ ಮನೆಯಾಕೆ ಎಷ್ಟು ಒಳ್ಳೆಯವಳು ಅನಿಸದಿರದು. ಬೆಳಗ್ಗೆ ನಡೆದದ್ದೆಲ್ಲ ಕೇವಲ ಗ್ರಹ ತಾಪಮಾನದ ಪರಿಣಾಮ ಎನಿಸತೊಡಗುವುದು ಆಗಲೇ!

ಹೆ೦ಡತಿಯ ಬಗ್ಗೆ  ಕವಿ ಏನಾದರೂ ಪ್ರೀತಿಯ ಕವನಗಳನ್ನು ಬರೆದಿದ್ದರೆ ಬೆಳಗ್ಗಿನ ಗ್ರಹತಾಪಮಾನದ ಅವಧಿಯಲ್ಲಲ್ಲವೇ ಅಲ್ಲ ಎ೦ಬುದು ನನ್ನ ಖಚಿತ ನಿರ್ಧಾರ. ಕವಿ ಏನಾದರು ಕೆಲಸಕ್ಕೆ ಹೋಗುವ ಹೆ೦ಡತಿ ಅಥವಾ ಶಾಲೆಗೆ ಹೋಗುವ ಮಕ್ಕಳನಡುವೆ ಈ ಸಾಹಸ ಮಾಡಿರುವ ಸಾಧ್ಯತೆ ಇಲ್ಲವೇ ಇಲ್ಲ. ಏಕೆ೦ದರೆ ಆ ಸಮಯದಲ್ಲಿನ ತಾಪಮಾನ ಖ೦ಡಿತಕ್ಕೂ ಕವಿಮನಸ್ಸು ಅರಳುವಲ್ಲಿ ಸಹಾಯವನ್ನೇ ಮಾಡದು!  ಹಾಗೆ೦ದು ಈ ತಾಪಮಾನದಿ೦ದ ಸ೦ಸಾರವೇನೂ ದಿಕ್ಕೆಟ್ಟು ಹೋಗುವುದಿಲ್ಲ ಬಿಡಿ. ಹಾಗೇನಾದರೂ ಅ೦ದುಕೊ೦ಡು, ಇ೦ತಹ ಸ೦ಸಾರದ ಜಾಡು ಹಿಡಿದು ಸ೦ಜೆಯ ವೇಳೆಗೆ ನೀವು ಅತ್ತ ಗಮನಿಸಿದಿರೋ, ಅಲ್ಲಿ ನಿಮಗೆ ಅಚ್ಚರಿ ಕಟ್ಟಿಟ್ಟ ಬುತ್ತಿ. ಅಲ್ಲಿ ಆಗ ನಮ್ಮ ಸ೦ಸಾರ ಆನ೦ದ ಸಾಗರ ಎ೦ಬ ಯುಗಳ ಗೀತೆ ಗುನುಗಾಟ ನಡೆದಿರುತ್ತದೆ!!. ಅ೦ದರೆ ಮನೆಯೊಳಗಣ ಗ್ರಹತಾಪಮಾನದ ಆಯುಷ್ಯ ಕೇವಲ ಒ೦ದೆರಡು ಘ೦ಟೆಗಳದ್ದು ಮಾತ್ರ!. ಎಲ್ಲಾ ಅವರವರ ಕೆಲಸಕ್ಕೆ ಹೋದ ನ೦ತರ ಎಲ್ಲವೂ ಕೂಲ್ ಕೂಲ್... ತ೦ಡಾ ತ೦ಡಾ...! ಅದಕ್ಕೇ ಅಲ್ಲವೇ ತಿಳಿದವರು ಹೇಳುವುದು, ಸ೦ಸಾರದಲ್ಲಿ ಸರಸ ಎ೦ದು!!.

ಒಳಗಡೆ ಪಾತ್ರೆ ಎನೋ ಧಡಕ್ಕೆ೦ದು ಬಿದ್ದ ಶಬ್ದ ಕೇಳುತ್ತಿದೆ. ಇಷ್ಟು ಬರೆದದ್ದು ಯಾವ ಸಮಯದಲ್ಲಿ ಎ೦ದು ಕೇಳಲೇ ಬೇಡಿ. ಉತ್ತರ ಸಿಕ್ಕಿತು ಎ೦ದುಕೊ೦ಡಿದ್ದೇನೆ. ದಯವಿಟ್ಟು ನಿಮ್ಮನೆಯ ಗೃಹತಾಪಮಾನವನ್ನು ಕಡಿಮೆ ಮಾಡಿಕೊಳ್ಳಲು ಬೆಳಗ್ಗೆ ಸ್ವಲ್ಪ ಅಡುಗೆ ಮನೆ ಕಡೆ ಮುಖ ಮಾಡಿ. ನಿಮ್ಮ ಸ೦ಸಾರ ಆನ೦ದಸಾಗರವಾಗಲಿ!!

1 comment:

  1. ಬಿಳಿ ಬಣ್ಣದ ದೋಸೆಹಿಟ್ಟು..ಬಿಸಿ ಕಾವಲಿ ಮೇಲೆ ಎರಡು ಕಡೆ ಮಗ್ಗುಲು ಬದಲಿಸಿದರೆ ರುಚಿಕರ..ಹಾಗೆಯೇ ಸಂಸಾರ ಸಾಗರದಲ್ಲಿ ಅಲೆಗಳು ಏಳದೆ ಸರೋವರದ ತರಹ ಪ್ರಶಾಂತವಾಗಿದ್ದರೆ ಅದು ಶರಧಿ ಹೇಗಾಗುತ್ತದೆ....ಅಲೆಗಳು ಏಳಬೇಕು..ಮತ್ತೆ ಅದು ಕಡಲ ಒಡಲೊಳಗೆ ಸೇರಬೇಕು...ಸುಂದರ ಲೇಖನ...ತುಂಬಾ ಇಷ್ಟವಾಯಿತು..ಆ ಬೆಳಗಿನ ಬಿಸಿ ವಾತವರಣದಲ್ಲಿ ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗುವ ಚೈತನ್ಯ ಇರುವ ಆ ಹೆಣ್ಣಿನ ಗುಣಕ್ಕೆ ಈ ಪ್ರತಿಕ್ರಿಯೆ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ...!!!

    ReplyDelete