Thursday 6 March 2014

ನಾರಾಯಣ ಶಬರಾಯರಿಗೆ ೨೦೧೪ನೇ ಸಾಲಿನ 'ಸುಮ ಕ್ರಷ್ಣ 'ಯಕ್ಷಗಾನ ಪ್ರಶಸ್ತಿ.





ಅತ್ತೆ ಸುಮತಿ ಮತ್ತು ಮಾವ ಕೃ‍ಷ್ಣ ಮೂರ್ತಿ ಇಬ್ಬರೂ ಇನ್ನಿಲ್ಲ. ಮಂದಾರ್ತಿ ಮೇಳದಲ್ಲಿ ದೀರ್ಘ ಅವಧಿಗೆ ಅಡುಗೆ-ಪೂಜೆಯವರಾಗಿದ್ದ ಮಾವ ಯಕ್ಷಗಾನವನ್ನೇ ಜೀವನ ಎಂದುಕೊಂಡು ಬದುಕಿದವರು. ಅತ್ತೆ ಸುಮತಿ, ಯಕ್ಷಗಾನದ ವಿಶೇ‍ಷ ಒಲವುಳ್ಳವರು....ಈಗ ಇಬ್ಬರೂ ಕೇವಲ ನೆನಪು. ಅವರಿಗೆ ಗೌರವ ಪೂರ್ವಕವಾಗಿ ಇಬ್ಬರ ಸ್ಮರಣಾರ್ಥ ಈ ವರ್ಷದಿಂದ 'ಸುಮಕೃ‍ಷ್ಣ' ಯಕ್ಷಗಾನ ಪ್ರಶಸ್ತಿಯನ್ನು ಆರಂಭಿಸಿದ್ದೆವೆ. ಅವರ ಮಕ್ಕಳು-ಅಳಿಯಂದಿರು ಸೇರಿ ಕೊಡಮಾಡುವ ಈ ಪ್ರಶಸ್ತಿ ಐದು ಸಾವಿರ ರೂಪಾಯಿಯ ಗೌರವಧನ, ಪ್ರಶಸ್ತಿ ಪತ್ರ, ಫಲಕಗಳನ್ನು ಒಳಗೊಂಡಿರುತ್ತದೆ. ಇದನ್ನು ಅರೆಹೊಳೆ ಪ್ರತಿಷ್ಠಾನ (ರಿ) ಪ್ರತೀ ವರ್ಷ ಕೊಡಮಾಡುತ್ತದೆ. ಈ ವರ್ಷದ 'ಸುಮಕೃ‍ಷ್ಣ' ಯಕ್ಷಗಾನ ಪ್ರಶಸ್ತಿ ಗೆ ಬಡಗು-ತೆಂಕಿನ ಖ್ಯಾತ ಭಾಗವರ ಶ್ರೀ ನಾರಾಯಣ ಶಬರಾಯ ಅವರು ಆಯ್ಕೆಯಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ಏಪಿಲ್ 24 ರಂದು ಕೆಂಜೂರು ಸಮೀಪದ ಬಲ್ಲೆಬೈಲಿನಲ್ಲಿರುವ ನಮ್ಮ ಮನೆ 'ನಂದಗೋಕುಲ'ದ ಅಂಗಳದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನೆರವೆರಲಿದೆ. ಅದೇ ರಾತ್ರಿ ಮಂದಾರ್ತಿ ಮೇಳದವರಿಂದ ನಮ್ಮ ವಾರ್ಷಿಕ ಸೇವೆಯಾಗಿ ಯಕ್ಷಗಾನ ನಡೆಯಲಿದೆ.....ತಮಗೆಲ್ಲರಿಗೂ ಇದು ಅಕ್ಕರೆಯ ಸುದ್ದಿ....ಪ್ರೀತಿಯ ಆಹ್ವಾನ...ಆ ದಿನವನ್ನು ನಮಗಾಗಿ ಮೀಸಲಿಡಿ....
                                                 
ಸುಮ ಕ್ರಷ್ಣ ಯಕ್ಷಗಾನ ಪ್ರಶಸ್ತಿ ಗೆ ಆಯ್ಕೆಯಾದ 
ನಾರಾಯಣ ಶಬರಾಯರಿಗೆ ಅಭಿನಂದನೆಗಳು 

No comments:

Post a Comment